ಕೊಪ್ಪಳ: ಜಿಲ್ಲೆಯ ಕುಷ್ಟಗಿ ಪಟ್ಟಣದ ಕರೋಕೆ ಸ್ಟುಡಿಯೋವೊಂದರಲ್ಲಿ ನಟ ಆರುಮುಗಂ ರವಿಶಂಕರ್ ಹಾಡಿರುವ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಚಲನಚಿತ್ರವೊಂದರ ಚಿತ್ರೀಕರಣಕ್ಕಾಗಿ ಇತ್ತೀಚಿಗೆ ಗಜೇಂದ್ರಗಡಕ್ಕೆ ಆಗಮಿಸಿದ್ದ ನಟ ರವಿಶಂಕರ್ ಅವರು ಕುಷ್ಟಗಿ ಪಟ್ಟಣದ ಸಂಘಟಕ ವಜೀರ್ ಅಲಿ ಗೋನಾಳ ಅಚರ ಮನೆಗೆ ಭೇಟಿ ನೀಡಿದ್ದರು. ಬಳಿಕ ವಜೀರ ಅವರ ಕರೋಕೆ ಸ್ಟುಡಿಯೋದಲ್ಲಿ "ಆಕಾಶದಿಂದ ಧರೆಗಿಳಿದ ರಂಭೆ.. ಇವಳೇ ಇವಳೇ ಚಂದನದ ಗೊಂಬೆ" ಎಂಬ ಹಾಡನ್ನು ಹಾಡಿದ್ದಾರೆ.
ರವಿಶಂಕರ್ ಹಾಡಿರುವ ಈ ಹಾಡಿನ ದೃಶ್ಯವೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.