ETV Bharat / state

ಶಾಲೆಗೆ ಗೈರು...ಬಾರ್ ಗೆ ಹಾಜರು...ಶಿಕ್ಷಕನ ಕರ್ತವ್ಯಲೋಪ

ಕುಡಿದು ತೂರಾಡಿಕೊಂಡು ಹೋಗುವಾಗ ಎಡವಿ ಬಿದ್ದು ಶಿಕ್ಷಕನ ತಲೆಗೆ ಗಾಯ - ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಘಟನೆ - ಚಿಕ್ಕನಂದಿಹಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕನ ಅವಾಂತರ

author img

By

Published : Jan 4, 2023, 11:12 PM IST

a-drunken-teacher-got-the-head-injury-in-koppala
ಶಾಲೆಗೆ ಗೈರು...ಬಾರ್ ಗೆ ಹಾಜರು...ಶಿಕ್ಷಕನ ಕರ್ತವ್ಯ
ಶಾಲೆಗೆ ಗೈರು...ಬಾರ್ ಗೆ ಹಾಜರು...ಶಿಕ್ಷಕನ ಕರ್ತವ್ಯಲೋಪ

ಕುಷ್ಟಗಿ(ಕೊಪ್ಪಳ) : ಮಕ್ಕಳಿಗೆ ಪಾಠ ಮಾಡಬೇಕಾದ ಶಿಕ್ಷಕನೋರ್ವ ಶಾಲೆಗೆ ಗೈರಾಗಿ ಕಂಠಪೂರ್ತಿ ಕುಡಿದು ಬಿದ್ದು ತಲೆಗೆ ಗಾಯ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದಿದೆ. ತಾಲೂಕಿನ ಚಿಕ್ಕನಂದಿಹಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೃಷ್ಣೇಗೌಡ ಕುಡಿದು ತೂರಾಡಿದ ಶಿಕ್ಷಕ ಎಂದು ಗುರುತಿಸಲಾಗಿದೆ.

ಮೂಲತಃ ಹಾಸನ ಜಿಲ್ಲೆಯವರಾದ ಕೃಷ್ಣೇಗೌಡ, ವರ್ಷದ ಹಿಂದೆ ಚಿಕ್ಕನಂದಿಹಾಳ ಶಾಲೆಗೆ ವರ್ಗಾವಣೆಗೊಂಡಿದ್ದರು. ಕಳೆದ ಒಂದು ವರ್ಷದಿಂದ ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದಿದೆ.

ಇಂದು ಮಧ್ಯಾಹ್ನ ಕುಷ್ಟಗಿ ಬಸ್ ನಿಲ್ದಾಣದ ಬಳಿ ಶಿಕ್ಷಕ ಕೃಷ್ಣೆಗೌಡ ಕಂಠಪೂರ್ತಿ ಕುಡಿದು ತೂರಾಡಿಕೊಂಡು ಹೋಗುವಾಗ ಎಡವಿ ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದಾನೆ. ಈ ವೇಳೆ ಸ್ಥಳೀಯರು ಕೂಡಲೇ 108 ಆ್ಯಂಬ್ಯುಲೆನ್ಸ್​ಗೆ ಕರೆ ಮಾಡಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಸ್ಪತ್ರೆಯಲ್ಲಿ ಆರೋಗ್ಯ ಸಹಾಯಕರು ತಲೆಯ ಗಾಯದ ಚಿಕಿತ್ಸೆಗೆ ಬೆಡ್ ಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಶಿಕ್ಷಕ ಚಿಕಿತ್ಸೆಗೆ ನಿರಾಕರಿಸಿದ್ದು, ಆದರೂ ಆರೋಗ್ಯ ಸಹಾಯಕರು ಗಾಯಕ್ಕೆ ಚಿಕಿತ್ಸೆ ನೀಡಿದ್ದಾರೆ. ಈ ವೇಳೆ ಶಿಕ್ಷಕ ನನ್ನ ಮೂರು ಲಕ್ಷ ರೂ. ಎಂದು ಹಲುಬಿಕೊಂಡು ಹೊರ ನಡೆದಿದ್ದರಿಂದ ಆರೋಗ್ಯ ಸಹಾಯಕರು ಅಸಹಾಯಕರಾಗಿದ್ದು ಕಂಡು ಬಂತು.

ಈ ಕುರಿತು ಪ್ರತಿಕ್ರಿಯಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳೆ, ಚಿಕ್ಕನಂದಿಹಾಳ ಶಾಲೆಗೆ ಪರಸ್ಪರ ವರ್ಗಾವಣೆ ಮೇರೆಗೆ ಶಿಕ್ಷಕ ಕೃಷ್ಣೇಗೌಡ ಸೇವೆಯಲ್ಲಿದ್ದರು. ಕರ್ತವ್ಯಕ್ಕೆ ಪದೇ ಪದೇ ಗೈರಾದ ಹಿನ್ನೆಲೆಯಲ್ಲಿ ನೊಟೀಸ್​ ನೀಡಿ ಶಿಕ್ಷಕನ ವೇತನವನ್ನು ತಡೆಹಿಡಿಯಲಾಗಿತ್ತು. ಈ ಸಂಬಂಧ ಶಾಲೆಗೆ ಸ್ಥಾನಿಕರಿಗೆ ಭೇಟಿ ನೀಡಿ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಸೂಚಿಸಿರುವುದಾಗಿ ತಿಳಿಸಿದರು.

ಇದನ್ನೂ ಓದಿ : ಕುಮಟಾ: ಕಂಠಪೂರ್ತಿ ಕುಡಿದು ಶಿಕ್ಷಕನ ರಂಪಾಟ, ಸಾರ್ವಜನಿಕರ ಆಕ್ರೋಶ

ಶಾಲೆಗೆ ಗೈರು...ಬಾರ್ ಗೆ ಹಾಜರು...ಶಿಕ್ಷಕನ ಕರ್ತವ್ಯಲೋಪ

ಕುಷ್ಟಗಿ(ಕೊಪ್ಪಳ) : ಮಕ್ಕಳಿಗೆ ಪಾಠ ಮಾಡಬೇಕಾದ ಶಿಕ್ಷಕನೋರ್ವ ಶಾಲೆಗೆ ಗೈರಾಗಿ ಕಂಠಪೂರ್ತಿ ಕುಡಿದು ಬಿದ್ದು ತಲೆಗೆ ಗಾಯ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದಿದೆ. ತಾಲೂಕಿನ ಚಿಕ್ಕನಂದಿಹಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೃಷ್ಣೇಗೌಡ ಕುಡಿದು ತೂರಾಡಿದ ಶಿಕ್ಷಕ ಎಂದು ಗುರುತಿಸಲಾಗಿದೆ.

ಮೂಲತಃ ಹಾಸನ ಜಿಲ್ಲೆಯವರಾದ ಕೃಷ್ಣೇಗೌಡ, ವರ್ಷದ ಹಿಂದೆ ಚಿಕ್ಕನಂದಿಹಾಳ ಶಾಲೆಗೆ ವರ್ಗಾವಣೆಗೊಂಡಿದ್ದರು. ಕಳೆದ ಒಂದು ವರ್ಷದಿಂದ ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದಿದೆ.

ಇಂದು ಮಧ್ಯಾಹ್ನ ಕುಷ್ಟಗಿ ಬಸ್ ನಿಲ್ದಾಣದ ಬಳಿ ಶಿಕ್ಷಕ ಕೃಷ್ಣೆಗೌಡ ಕಂಠಪೂರ್ತಿ ಕುಡಿದು ತೂರಾಡಿಕೊಂಡು ಹೋಗುವಾಗ ಎಡವಿ ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದಾನೆ. ಈ ವೇಳೆ ಸ್ಥಳೀಯರು ಕೂಡಲೇ 108 ಆ್ಯಂಬ್ಯುಲೆನ್ಸ್​ಗೆ ಕರೆ ಮಾಡಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಸ್ಪತ್ರೆಯಲ್ಲಿ ಆರೋಗ್ಯ ಸಹಾಯಕರು ತಲೆಯ ಗಾಯದ ಚಿಕಿತ್ಸೆಗೆ ಬೆಡ್ ಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಶಿಕ್ಷಕ ಚಿಕಿತ್ಸೆಗೆ ನಿರಾಕರಿಸಿದ್ದು, ಆದರೂ ಆರೋಗ್ಯ ಸಹಾಯಕರು ಗಾಯಕ್ಕೆ ಚಿಕಿತ್ಸೆ ನೀಡಿದ್ದಾರೆ. ಈ ವೇಳೆ ಶಿಕ್ಷಕ ನನ್ನ ಮೂರು ಲಕ್ಷ ರೂ. ಎಂದು ಹಲುಬಿಕೊಂಡು ಹೊರ ನಡೆದಿದ್ದರಿಂದ ಆರೋಗ್ಯ ಸಹಾಯಕರು ಅಸಹಾಯಕರಾಗಿದ್ದು ಕಂಡು ಬಂತು.

ಈ ಕುರಿತು ಪ್ರತಿಕ್ರಿಯಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳೆ, ಚಿಕ್ಕನಂದಿಹಾಳ ಶಾಲೆಗೆ ಪರಸ್ಪರ ವರ್ಗಾವಣೆ ಮೇರೆಗೆ ಶಿಕ್ಷಕ ಕೃಷ್ಣೇಗೌಡ ಸೇವೆಯಲ್ಲಿದ್ದರು. ಕರ್ತವ್ಯಕ್ಕೆ ಪದೇ ಪದೇ ಗೈರಾದ ಹಿನ್ನೆಲೆಯಲ್ಲಿ ನೊಟೀಸ್​ ನೀಡಿ ಶಿಕ್ಷಕನ ವೇತನವನ್ನು ತಡೆಹಿಡಿಯಲಾಗಿತ್ತು. ಈ ಸಂಬಂಧ ಶಾಲೆಗೆ ಸ್ಥಾನಿಕರಿಗೆ ಭೇಟಿ ನೀಡಿ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಸೂಚಿಸಿರುವುದಾಗಿ ತಿಳಿಸಿದರು.

ಇದನ್ನೂ ಓದಿ : ಕುಮಟಾ: ಕಂಠಪೂರ್ತಿ ಕುಡಿದು ಶಿಕ್ಷಕನ ರಂಪಾಟ, ಸಾರ್ವಜನಿಕರ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.