ETV Bharat / bharat

ಕಾಂಗ್ರೆಸ್​ ಜಾತಿವಾದಿ, ಇಬ್ಬಗೆ ನೀತಿಯ ಪಕ್ಷ; ಅದರ ಜೊತೆ ಮೈತ್ರಿ ಮಾರಕ: ಮಾಯಾವತಿ - MAYAWATI ON CONGRESS ALLIANCE

ಬಿಎಸ್​​ಪಿ ಇಂಡಿಯಾ ಕೂಟ ಸೇರಬೇಕಿತ್ತು ಎಂಬ ರಾಹುಲ್​ ಗಾಂಧಿ ಹೇಳಿಕೆಯನ್ನು ಮಾಯಾವತಿ ಟೀಕಿಸಿದ್ದಾರೆ. ಕಾಂಗ್ರೆಸ್​​ ಜಾತಿವಾಗಿ, ಇಬ್ಬಗೆ ನೀತಿಯ ಪಕ್ಷ ಎಂದು ಜರಿದಿದ್ದಾರೆ.

ರಾಹುಲ್​ ಗಾಂಧಿ, ಮಾಯಾವತಿ
ರಾಹುಲ್​ ಗಾಂಧಿ, ಮಾಯಾವತಿ (ETV Bharat)
author img

By ETV Bharat Karnataka Team

Published : Feb 20, 2025, 9:17 PM IST

ಲಖನೌ(ಉತ್ತರ ಪ್ರದೇಶ): "ಕಾಂಗ್ರೆಸ್​ ಜೊತೆ ಮೈತ್ರಿ ಮಾಡಿಕೊಳ್ಳುವುದು ಯಾವುದೇ ಪಕ್ಷಗಳಿಗೆ ಮಾರಕ. ಆ ಪಕ್ಷವು ಇಬ್ಬಗೆ ನೀತಿ ಮತ್ತು ಜಾತಿವಾದಿಯಾಗಿದೆ" ಎಂದು ಬಹುಜನ ಸಮಾಜ ಪಕ್ಷದ (ಬಿಎಸ್​ಪಿ) ಮುಖ್ಯಸ್ಥೆ ಮಾಯಾವತಿ ಆರೋಪಿಸಿದ್ದಾರೆ.

"ಕಾಂಗ್ರೆಸ್​​ ಪ್ರಬಲವಿರುವ ಮತ್ತು ತಾನು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಬಿಎಸ್​ಪಿ, ಅದರ ಕಾರ್ಯಕರ್ತರ ಮೇಲೆ ದ್ವೇಷ, ಜಾತಿವಾದಿ ಮನೋಭಾವ ಹೊಂದಿದೆ. ಅದು ದುರ್ಬಲವಾಗಿರುವ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಮಾತ್ರ ಬಿಎಸ್​ಪಿಯ ಬೆಂಬಲ ಪಡೆಯಲು ಬಯಸುತ್ತದೆ" ಎಂದು ಅವರು ಟೀಕಿಸಿದ್ದಾರೆ.

ಈ ಬಗ್ಗೆ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಮಾಯಾವತಿ, "ಕಾಂಗ್ರೆಸ್​ ತನ್ನ ಅನುಕೂಲಕ್ಕಾಗಿ ಬಿಎಸ್​ಪಿ ಜೊತೆ ಕೈಜೋಡಿಸುವ ಹೇಳಿಕೆಯು, ಜನರ ದಾರಿ ತಪ್ಪಿಸಲು ಪ್ರಯತ್ನವಾಗಿದೆ. ಒಂದೆಡೆ, ಮೈತ್ರಿ ಎನ್ನುತ್ತಾ ಇನ್ನೊಂದೆಡೆ, ದ್ವಂದ್ವ ನಿಲುವು, ಜಾತಿವಾದಿತನ ಅನುಸರಿಸುವುದು ಅದರ ಬೂಟಾಟಿಕೆ ಅಲ್ಲದೇ ಇನ್ನೇನು?" ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್​ ಜೊತೆ ಮೈತ್ರಿ ಹಾನಿಕಾರಕ: "ಕಾಂಗ್ರೆಸ್ ಜೊತೆಗಿನ ಹಿಂದಿನ ಮೈತ್ರಿಗಳು ಬಿಎಸ್​​ಪಿಗೆ ಹಾನಿ ಉಂಟುಮಾಡಿವೆ. ಅದರ ಜೊತೆ ಕೈ ಜೋಡಿಸಿದ್ದರಿಂದ ನಮ್ಮ ಮೂಲ ಮತಗಳು ಅವರೆಡೆ ವರ್ಗವಾದವೇ ಹೊರತು, ಅದರ ಮತಗಳು ನಮಗೆ ಬರಲಿಲ್ಲ. ಇದರ ಪರಿಣಾಮ, ನಮ್ಮ ಪಕ್ಷವು ನಷ್ಟ ಅನುಭವಿಸಿತು" ಎಂದು ದೂರಿದ್ದಾರೆ.

ಬಿಜೆಪಿ ವಿರುದ್ಧವೂ ಟೀಕಿಸಿರುವ ಮಾಯಾವತಿ, "ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು, ಡಾ.ಬಿ.ಆರ್.ಅಂಬೇಡ್ಕರ್, ಬಿಎಸ್​​ಪಿ, ಅದರ ನಾಯಕತ್ವ, ದಲಿತ- ಬಹುಜನರು ಮತ್ತು ಮೀಸಲಾತಿ ವ್ಯವಸ್ಥೆಯನ್ನು ವಿರೋಧಿಸುತ್ತಾ ಬಂದಿದ್ದಾರೆ. ಇವರ ನೀತಿಗಳು ದೇಶದ ಸಾಂವಿಧಾನಿಕ ಗುರಿಯಾದ ಸಮಾನತೆ ಮತ್ತು ಅಭಿವೃದ್ಧಿಗೆ ಅಡ್ಡಿಯಾಗಿವೆ. ಇದು ಕಳವಳಕಾರಿ ಸಂಗತಿ" ಎಂದು ಆಪಾದಿಸಿದ್ದಾರೆ.

ಮಾಯಾವತಿ ಹೊಗಳಿದ್ದ ರಾಹುಲ್​ ಗಾಂಧಿ: ರಾಯ್​ಬರೇಲಿಗೆ ಇತ್ತೀಚೆಗೆ ಭೇಟಿ ನೀಡಿದ್ದ ವಿಪಕ್ಷ ನಾಯಕ ರಾಹುಲ್​ ಗಾಂಧಿ ದಲಿತ ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ, ಲೋಕಸಭೆ ಚುನಾವಣೆಯಲ್ಲಿ ಬಿಎಸ್​​ಪಿ ಜೊತೆ ಮೈತ್ರಿ ಮಾಡಿಕೊಳ್ಳಬೇಕಿತ್ತು ಎಂದು ಪ್ರಸ್ತಾಪಿಸಿದ್ದರು.

"ಭಾರತದ ರಾಜಕೀಯದಲ್ಲಿ ಬಿಎಸ್​ಪಿ ಸಂಸ್ಥಾಪಕ ಕಾನ್ಶಿ ರಾಮ್ ಅವರ ಪಾತ್ರ ದೊಡ್ಡದಿದೆ. ಅವರು ಹಾಕಿಕೊಟ್ಟ ಅಡಿಪಾಯದ ಮೇಲೆ ಮಾಯಾವತಿ ಅವರು ದೊಡ್ಡ ಸೌಧ ನಿರ್ಮಿಸಿದರು. ಬಿಜೆಪಿ ವಿರುದ್ಧದ ಹೋರಾಟದಲ್ಲಿ ಬಿಎಸ್​​ಪಿ ಇಂಡಿಯಾ ಕೂಟ ಸೇರಬೇಕಿತ್ತು. ಹಾಗಾಗಿದ್ದಲ್ಲಿ, ಲೋಕಸಭೆ ಚುನಾವಣೆಯಲ್ಲಿ ಕೇಸರಿ ಪಡೆಯನ್ನು ಕಟ್ಟಿಹಾಕಬಹುದಾಗಿತ್ತು" ಎಂದು ಹೇಳಿದ್ದರು.

ಇದಕ್ಕೆ ವಿರುದ್ಧ ಮಾಯಾವತಿ ಅವರು ಎಕ್ಸ್​ ಖಾತೆಯಲ್ಲಿ ಟೀಕಿಸಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಎನ್​ಡಿಎ ಮುಖ್ಯಮಂತ್ರಿಗಳ ಸಭೆ; ಪ್ರಧಾನಿ ಮೋದಿ, ಅಮಿತ್​ ಶಾ ಭಾಗಿ

ಲಖನೌ(ಉತ್ತರ ಪ್ರದೇಶ): "ಕಾಂಗ್ರೆಸ್​ ಜೊತೆ ಮೈತ್ರಿ ಮಾಡಿಕೊಳ್ಳುವುದು ಯಾವುದೇ ಪಕ್ಷಗಳಿಗೆ ಮಾರಕ. ಆ ಪಕ್ಷವು ಇಬ್ಬಗೆ ನೀತಿ ಮತ್ತು ಜಾತಿವಾದಿಯಾಗಿದೆ" ಎಂದು ಬಹುಜನ ಸಮಾಜ ಪಕ್ಷದ (ಬಿಎಸ್​ಪಿ) ಮುಖ್ಯಸ್ಥೆ ಮಾಯಾವತಿ ಆರೋಪಿಸಿದ್ದಾರೆ.

"ಕಾಂಗ್ರೆಸ್​​ ಪ್ರಬಲವಿರುವ ಮತ್ತು ತಾನು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಬಿಎಸ್​ಪಿ, ಅದರ ಕಾರ್ಯಕರ್ತರ ಮೇಲೆ ದ್ವೇಷ, ಜಾತಿವಾದಿ ಮನೋಭಾವ ಹೊಂದಿದೆ. ಅದು ದುರ್ಬಲವಾಗಿರುವ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಮಾತ್ರ ಬಿಎಸ್​ಪಿಯ ಬೆಂಬಲ ಪಡೆಯಲು ಬಯಸುತ್ತದೆ" ಎಂದು ಅವರು ಟೀಕಿಸಿದ್ದಾರೆ.

ಈ ಬಗ್ಗೆ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಮಾಯಾವತಿ, "ಕಾಂಗ್ರೆಸ್​ ತನ್ನ ಅನುಕೂಲಕ್ಕಾಗಿ ಬಿಎಸ್​ಪಿ ಜೊತೆ ಕೈಜೋಡಿಸುವ ಹೇಳಿಕೆಯು, ಜನರ ದಾರಿ ತಪ್ಪಿಸಲು ಪ್ರಯತ್ನವಾಗಿದೆ. ಒಂದೆಡೆ, ಮೈತ್ರಿ ಎನ್ನುತ್ತಾ ಇನ್ನೊಂದೆಡೆ, ದ್ವಂದ್ವ ನಿಲುವು, ಜಾತಿವಾದಿತನ ಅನುಸರಿಸುವುದು ಅದರ ಬೂಟಾಟಿಕೆ ಅಲ್ಲದೇ ಇನ್ನೇನು?" ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್​ ಜೊತೆ ಮೈತ್ರಿ ಹಾನಿಕಾರಕ: "ಕಾಂಗ್ರೆಸ್ ಜೊತೆಗಿನ ಹಿಂದಿನ ಮೈತ್ರಿಗಳು ಬಿಎಸ್​​ಪಿಗೆ ಹಾನಿ ಉಂಟುಮಾಡಿವೆ. ಅದರ ಜೊತೆ ಕೈ ಜೋಡಿಸಿದ್ದರಿಂದ ನಮ್ಮ ಮೂಲ ಮತಗಳು ಅವರೆಡೆ ವರ್ಗವಾದವೇ ಹೊರತು, ಅದರ ಮತಗಳು ನಮಗೆ ಬರಲಿಲ್ಲ. ಇದರ ಪರಿಣಾಮ, ನಮ್ಮ ಪಕ್ಷವು ನಷ್ಟ ಅನುಭವಿಸಿತು" ಎಂದು ದೂರಿದ್ದಾರೆ.

ಬಿಜೆಪಿ ವಿರುದ್ಧವೂ ಟೀಕಿಸಿರುವ ಮಾಯಾವತಿ, "ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು, ಡಾ.ಬಿ.ಆರ್.ಅಂಬೇಡ್ಕರ್, ಬಿಎಸ್​​ಪಿ, ಅದರ ನಾಯಕತ್ವ, ದಲಿತ- ಬಹುಜನರು ಮತ್ತು ಮೀಸಲಾತಿ ವ್ಯವಸ್ಥೆಯನ್ನು ವಿರೋಧಿಸುತ್ತಾ ಬಂದಿದ್ದಾರೆ. ಇವರ ನೀತಿಗಳು ದೇಶದ ಸಾಂವಿಧಾನಿಕ ಗುರಿಯಾದ ಸಮಾನತೆ ಮತ್ತು ಅಭಿವೃದ್ಧಿಗೆ ಅಡ್ಡಿಯಾಗಿವೆ. ಇದು ಕಳವಳಕಾರಿ ಸಂಗತಿ" ಎಂದು ಆಪಾದಿಸಿದ್ದಾರೆ.

ಮಾಯಾವತಿ ಹೊಗಳಿದ್ದ ರಾಹುಲ್​ ಗಾಂಧಿ: ರಾಯ್​ಬರೇಲಿಗೆ ಇತ್ತೀಚೆಗೆ ಭೇಟಿ ನೀಡಿದ್ದ ವಿಪಕ್ಷ ನಾಯಕ ರಾಹುಲ್​ ಗಾಂಧಿ ದಲಿತ ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ, ಲೋಕಸಭೆ ಚುನಾವಣೆಯಲ್ಲಿ ಬಿಎಸ್​​ಪಿ ಜೊತೆ ಮೈತ್ರಿ ಮಾಡಿಕೊಳ್ಳಬೇಕಿತ್ತು ಎಂದು ಪ್ರಸ್ತಾಪಿಸಿದ್ದರು.

"ಭಾರತದ ರಾಜಕೀಯದಲ್ಲಿ ಬಿಎಸ್​ಪಿ ಸಂಸ್ಥಾಪಕ ಕಾನ್ಶಿ ರಾಮ್ ಅವರ ಪಾತ್ರ ದೊಡ್ಡದಿದೆ. ಅವರು ಹಾಕಿಕೊಟ್ಟ ಅಡಿಪಾಯದ ಮೇಲೆ ಮಾಯಾವತಿ ಅವರು ದೊಡ್ಡ ಸೌಧ ನಿರ್ಮಿಸಿದರು. ಬಿಜೆಪಿ ವಿರುದ್ಧದ ಹೋರಾಟದಲ್ಲಿ ಬಿಎಸ್​​ಪಿ ಇಂಡಿಯಾ ಕೂಟ ಸೇರಬೇಕಿತ್ತು. ಹಾಗಾಗಿದ್ದಲ್ಲಿ, ಲೋಕಸಭೆ ಚುನಾವಣೆಯಲ್ಲಿ ಕೇಸರಿ ಪಡೆಯನ್ನು ಕಟ್ಟಿಹಾಕಬಹುದಾಗಿತ್ತು" ಎಂದು ಹೇಳಿದ್ದರು.

ಇದಕ್ಕೆ ವಿರುದ್ಧ ಮಾಯಾವತಿ ಅವರು ಎಕ್ಸ್​ ಖಾತೆಯಲ್ಲಿ ಟೀಕಿಸಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಎನ್​ಡಿಎ ಮುಖ್ಯಮಂತ್ರಿಗಳ ಸಭೆ; ಪ್ರಧಾನಿ ಮೋದಿ, ಅಮಿತ್​ ಶಾ ಭಾಗಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.