ETV Bharat / state

ಉಜಿರೆ ಬಾಲಕನ ಕಿಡ್ನಾಪ್ ಕೇಸ್​ ಸುಖಾಂತ್ಯ: ಮಗನನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ ತಾಯಿ

author img

By

Published : Dec 19, 2020, 1:26 PM IST

Updated : Dec 19, 2020, 2:30 PM IST

ಪಾಲಕರ ಮಡಿಲು ಸೇರಿದ ಅಭಿನವ್
ಪಾಲಕರ ಮಡಿಲು ಸೇರಿದ ಅಭಿನವ್

13:20 December 19

ಉಜಿರೆಯ ಉದ್ಯಮಿ ಬಿಜೋಯ್ ಅವರ ಪುತ್ರ 8 ವರ್ಷದ ಅನುಭವ್ ಕಿಡ್ನಾಪ್ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ.

ಮಂಗಳೂರು: ಗುರುವಾರ ಸಂಜೆ ಬೆಳ್ತಂಗಡಿಯ ಉಜಿರೆ ರಥಬೀದಿಯಿಂದ ಬಾಲಕನನ್ನು ಅಪಹರಣ ಮಾಡಿದ್ದ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದ್ದು, ಬಾಲಕ ಪಾಲಕರ ಮಡಿಲು ಸೇರಿದ್ದಾನೆ.

ಮಂಗಳೂರಿನಲ್ಲಿ ಕಿಡ್ನಾಪ್ ಆಗಿದ್ದ ಬಾಲಕನನ್ನು ಕೋಲಾರದಲ್ಲಿ ಪೊಲೀಸರು ರಕ್ಷಣೆ ಮಾಡಿದ್ದು, ಬಾಲಕ ಸುರಕ್ಷಿತವಾಗಿ ತಾಯಿಯ ಮಡಿಲು ಸೇರಿದ್ದಾನೆ. ಮಾಲೂರು ತಾಲೂಕಿನ ಮಾಸ್ತಿ ಪೊಲೀಸ್ ಠಾಣೆಯಲ್ಲಿ 8 ವರ್ಷದ ಬಾಲಕನ್ನು ಪೊಲೀಸರು ತಂದೆ-ತಾಯಿಗೆ ಒಪ್ಪಿಸಿದರು. ಈ ವೇಳೆ ಮಗ ಅಭಿನವ್ ನನ್ನು ಅಪ್ಪಿಕೊಂಡು ಪೋಷಕರು ಭಾವೋದ್ವೇಗಕ್ಕೆ ಒಳಗಾದ ದೃಶ್ಯ ಕಂಡುಬಂದಿತು.

ಕೋಲಾರದ ಎಸ್​​ಪಿ ಕಾರ್ತಿಕ್ ರೆಡ್ಡಿ‌ ನೆರವಿನಿಂದ ಮಂಗಳೂರು ಪೊಲೀಸ್ ವಿಶೇಷ ತಂಡ ಈ ಪ್ರಕರಣವನ್ನು ಬೇಧಿಸಿದ್ದು, ಕಿಡ್ನಾಪರ್ಸ್​ಗಳನ್ನು ಬಂಧಿಸಲಾಗಿದೆ. ಕೂರ್ನಹೊಸಳ್ಳಿ ಗ್ರಾಮದ ಮಂಜುನಾಥ್ ಎಂಬುವರ ಮನೆಯಲ್ಲಿ ಮಗುವನ್ನು ಇರಿಸಿದ್ದ ಅಪಹರಣಕಾರರು, ಮಗುವಿನ ಪೋಷಕರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.  

ಓದಿ: ಉಜಿರೆ ಬಾಲಕನ ಅಪಹರಣ ಕೇಸ್; 17 ಕೋಟಿಗೆ ಬೇಡಿಕೆ ಇಟ್ರಾ ಕಿಡ್ನಾಪರ್ಸ್‌?

13:20 December 19

ಉಜಿರೆಯ ಉದ್ಯಮಿ ಬಿಜೋಯ್ ಅವರ ಪುತ್ರ 8 ವರ್ಷದ ಅನುಭವ್ ಕಿಡ್ನಾಪ್ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ.

ಮಂಗಳೂರು: ಗುರುವಾರ ಸಂಜೆ ಬೆಳ್ತಂಗಡಿಯ ಉಜಿರೆ ರಥಬೀದಿಯಿಂದ ಬಾಲಕನನ್ನು ಅಪಹರಣ ಮಾಡಿದ್ದ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದ್ದು, ಬಾಲಕ ಪಾಲಕರ ಮಡಿಲು ಸೇರಿದ್ದಾನೆ.

ಮಂಗಳೂರಿನಲ್ಲಿ ಕಿಡ್ನಾಪ್ ಆಗಿದ್ದ ಬಾಲಕನನ್ನು ಕೋಲಾರದಲ್ಲಿ ಪೊಲೀಸರು ರಕ್ಷಣೆ ಮಾಡಿದ್ದು, ಬಾಲಕ ಸುರಕ್ಷಿತವಾಗಿ ತಾಯಿಯ ಮಡಿಲು ಸೇರಿದ್ದಾನೆ. ಮಾಲೂರು ತಾಲೂಕಿನ ಮಾಸ್ತಿ ಪೊಲೀಸ್ ಠಾಣೆಯಲ್ಲಿ 8 ವರ್ಷದ ಬಾಲಕನ್ನು ಪೊಲೀಸರು ತಂದೆ-ತಾಯಿಗೆ ಒಪ್ಪಿಸಿದರು. ಈ ವೇಳೆ ಮಗ ಅಭಿನವ್ ನನ್ನು ಅಪ್ಪಿಕೊಂಡು ಪೋಷಕರು ಭಾವೋದ್ವೇಗಕ್ಕೆ ಒಳಗಾದ ದೃಶ್ಯ ಕಂಡುಬಂದಿತು.

ಕೋಲಾರದ ಎಸ್​​ಪಿ ಕಾರ್ತಿಕ್ ರೆಡ್ಡಿ‌ ನೆರವಿನಿಂದ ಮಂಗಳೂರು ಪೊಲೀಸ್ ವಿಶೇಷ ತಂಡ ಈ ಪ್ರಕರಣವನ್ನು ಬೇಧಿಸಿದ್ದು, ಕಿಡ್ನಾಪರ್ಸ್​ಗಳನ್ನು ಬಂಧಿಸಲಾಗಿದೆ. ಕೂರ್ನಹೊಸಳ್ಳಿ ಗ್ರಾಮದ ಮಂಜುನಾಥ್ ಎಂಬುವರ ಮನೆಯಲ್ಲಿ ಮಗುವನ್ನು ಇರಿಸಿದ್ದ ಅಪಹರಣಕಾರರು, ಮಗುವಿನ ಪೋಷಕರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.  

ಓದಿ: ಉಜಿರೆ ಬಾಲಕನ ಅಪಹರಣ ಕೇಸ್; 17 ಕೋಟಿಗೆ ಬೇಡಿಕೆ ಇಟ್ರಾ ಕಿಡ್ನಾಪರ್ಸ್‌?

Last Updated : Dec 19, 2020, 2:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.