ETV Bharat / state

ಕೋಲಾರದಲ್ಲಿ ಬಸ್​ ಮೇಲೆ ಕಲ್ಲು ತೂರಾಟ

author img

By

Published : Apr 8, 2021, 7:43 PM IST

ಸಾರಿಗೆ ನೌಕರರ ಮುಷ್ಕರದ ನಡುವೆಯೂ ಜನರಿಗೆ ಸೇವೆ ಒದಗಿಸುತ್ತಿರುವ ಕೆಎಸ್​ಆರ್​ಟಿಸಿ ಬಸ್​ ಮೇಲೆ ಕೋಲಾರದಲ್ಲಿ ಕಲ್ಲು ತೂರಾಟ ಮಾಡಲಾಗಿದೆ.

stone pelting on KSRTC Bus in Kolar
ಕೋಲಾರದಲ್ಲಿ ಬಸ್​ ಮೇಲೆ ಕಲ್ಲು ತೂರಾಟ

ಕೋಲಾರ : ಸಾರಿಗೆ ಬಸ್​ಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ತಾಲೂಕಿನ ಚಲುವನಹಳ್ಳಿ ಗೇಟ್ ಬಳಿ ನಡೆದಿದೆ.

ಮಾಲೂರಿನಿಂದ ಕೋಲಾರಕ್ಕೆ ಬಸ್​ ಬರುತ್ತಿದ್ದಾಗ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬೈಕ್‌ನಲ್ಲಿ ಬಂದಂತಹ ಇಬ್ಬರು ವ್ಯಕ್ತಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಿಂದ ಬಸ್ ಮುಂಭಾಗದ ಗಾಜಿಗೆ ಹಾನಿಯಾಗಿದೆ.

ಓದಿ : ಮುಷ್ಕರಲ್ಲಿದ್ದ ಸಾರಿಗೆ ನೌಕರರಿಗೆ ಶಾಕ್: 96 ತರಬೇತಿನಿರತ ನೌಕರರು ವಜಾ

ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ, ಪೊಲೀಸ್​ ಭದ್ರತೆಯಲ್ಲಿ ಕೆಲ ಬಸ್​ಗಳು ಓಡಾಡುತ್ತಿವೆ.

ಕೋಲಾರ : ಸಾರಿಗೆ ಬಸ್​ಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ತಾಲೂಕಿನ ಚಲುವನಹಳ್ಳಿ ಗೇಟ್ ಬಳಿ ನಡೆದಿದೆ.

ಮಾಲೂರಿನಿಂದ ಕೋಲಾರಕ್ಕೆ ಬಸ್​ ಬರುತ್ತಿದ್ದಾಗ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬೈಕ್‌ನಲ್ಲಿ ಬಂದಂತಹ ಇಬ್ಬರು ವ್ಯಕ್ತಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಿಂದ ಬಸ್ ಮುಂಭಾಗದ ಗಾಜಿಗೆ ಹಾನಿಯಾಗಿದೆ.

ಓದಿ : ಮುಷ್ಕರಲ್ಲಿದ್ದ ಸಾರಿಗೆ ನೌಕರರಿಗೆ ಶಾಕ್: 96 ತರಬೇತಿನಿರತ ನೌಕರರು ವಜಾ

ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ, ಪೊಲೀಸ್​ ಭದ್ರತೆಯಲ್ಲಿ ಕೆಲ ಬಸ್​ಗಳು ಓಡಾಡುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.