ETV Bharat / state

ಅಷ್ಟಕ್ಕೂ ಈ ಬಾಲಕ ಮಾಡಿದ ತಪ್ಪು ಎಂತಹದ್ದು, ಹೀಗೆಲ್ಲ ಥಳಿಸೋದಾ?

ಹಣ ಕದ್ದ ಆರೋಪದಡಿ ರಸ್ತೆ ಬದಿ ಚಪ್ಪಲಿ ಹೊಲೆದುಕೊಂಡು ಜೀವನ ಸಾಗಿಸುತ್ತಿದ್ದ ಬಾಲಕನೋರ್ವನನ್ನ ಚಿಲ್ಲರೆ ಅಂಗಡಿ ಮಾಲಿಕ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ಜರುಗಿದೆ.

author img

By

Published : Nov 8, 2019, 1:52 PM IST

Updated : Nov 8, 2019, 3:19 PM IST

ಕಳ್ಳತನದ ಆರೋಪ

ಕೋಲಾರ: ಹಣ ಕದ್ದ ಆರೋಪದಡಿ ರಸ್ತೆ ಬದಿ ಚಪ್ಪಲಿ ಹೊಲೆದುಕೊಂಡು ಜೀವನ ಸಾಗಿಸುತ್ತಿದ್ದ ಬಾಲಕನೊಬ್ಬನನ್ನು ಚಿಲ್ಲರೆ ಅಂಗಡಿ ಮಾಲಿಕ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ಜರುಗಿದೆ.

ಕಳ್ಳತನದ ಆರೋಪ

ಬಂಗಾರಪೇಟೆ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಚಪ್ಪಲಿ ಹೊಲೆಯುತ್ತಿದ್ದ ಬಾಲಕನ ಮೇಲೆ ಕಳ್ಳತನದ ಆರೋಪ ಹೊರೆಸಿ ಚಿಲ್ಲರೆ ಅಂಗಡಿ ಮಾಲೀಕ ಉಮೇಶ್ ಹಾಗೂ ಆತನ ಸ್ನೇಹಿತ, ಬಾಲಕನನ್ನ ಊಟ ಕೊಡಿಸುವ ನೆಪದಲ್ಲಿ ಕೆರೆಯೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವೈಯರ್ ಹಾಗೂ ಹಗ್ಗದಿಂದ ಬಾಸುಂಡೆ ಬರುವಂತೆ ಹೊಡೆದಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಾಲಕನ ವಿಡಿಯೋ ಮತ್ತು ಫೋಟೊ ವೈರಲ್​ ಆಗಿದ್ದು, ಮಾಲಿಕ ಉಮೇಶ್ ವಿರುದ್ದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಲಾರ: ಹಣ ಕದ್ದ ಆರೋಪದಡಿ ರಸ್ತೆ ಬದಿ ಚಪ್ಪಲಿ ಹೊಲೆದುಕೊಂಡು ಜೀವನ ಸಾಗಿಸುತ್ತಿದ್ದ ಬಾಲಕನೊಬ್ಬನನ್ನು ಚಿಲ್ಲರೆ ಅಂಗಡಿ ಮಾಲಿಕ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ಜರುಗಿದೆ.

ಕಳ್ಳತನದ ಆರೋಪ

ಬಂಗಾರಪೇಟೆ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಚಪ್ಪಲಿ ಹೊಲೆಯುತ್ತಿದ್ದ ಬಾಲಕನ ಮೇಲೆ ಕಳ್ಳತನದ ಆರೋಪ ಹೊರೆಸಿ ಚಿಲ್ಲರೆ ಅಂಗಡಿ ಮಾಲೀಕ ಉಮೇಶ್ ಹಾಗೂ ಆತನ ಸ್ನೇಹಿತ, ಬಾಲಕನನ್ನ ಊಟ ಕೊಡಿಸುವ ನೆಪದಲ್ಲಿ ಕೆರೆಯೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವೈಯರ್ ಹಾಗೂ ಹಗ್ಗದಿಂದ ಬಾಸುಂಡೆ ಬರುವಂತೆ ಹೊಡೆದಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಾಲಕನ ವಿಡಿಯೋ ಮತ್ತು ಫೋಟೊ ವೈರಲ್​ ಆಗಿದ್ದು, ಮಾಲಿಕ ಉಮೇಶ್ ವಿರುದ್ದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ಕೋಲಾರ
ದಿನಾಂಕ - 08-11-19
ಸ್ಲಗ್ - ಬಾಲಕನಿಗೆ ಥಳಿತ
ಫಾರ್ಮೆಟ್ - ಎವಿ

ಆಂಕರ್: ಹಣ ಕದ್ದ ಆರೋಪದಡಿ ರಸ್ತೆ ಬದಿ ಚಪ್ಪಲಿ ಹೊಲೆದುಕೊಂಡು ಜೀವನ ಸಾಗಿಸುತ್ತಿದ್ದ ಬಾಲಕನೋರ್ವನನ್ನ ಚಿಲ್ಲರೆ ಅಂಗಡಿ ಮಾಲಿಕನೋರ್ವ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕೋಲಾರದಲ್ಲಿ ಜರುಗಿದೆ.

Body:ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ಈ ಘಟನೆ ಜರುಗಿದ್ದು, ಸಧ್ಯ ಬಾಲಕನ ಸ್ಥಿತಿ ಕಂಡು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ‌. ಬಂಗಾರಪೇಟೆ ರೈಲ್ವೇ ನಿಲ್ದಾಣದ ಮುಂಭಾಗದಲ್ಲಿ ಚಪ್ಪಲಿ ಹೊಲೆದುಕೊಂಡು ಜೀವನ ಸಾಗಿಸುತ್ತಿದ್ದ ಬಾಲಕನ ಮೇಲೆ ನಡೆದಿರುವ ಈ ಅಮಾನವೀಯ ಕೃತ್ಯವನ್ನು ಖಂಡಿಸಿ ನೆಟ್ಟಿಗರು ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ. ಕಳ್ಳತನದ ಆರೋಪದಡಿ ಚಿಲ್ಲರೆ ಅಂಗಡಿ ಮಾಲೀಕ ಉಮೇಶ್ ಹಾಗೂ ಆತನ ಸ್ನೇಹಿತ, ಬಾಲಕನನ್ನ ಊಟ ಕೊಡಿಸುವ ನೆಪದಲ್ಲಿ ಕೆರೆಯೊಂದಕ್ಕೆ ಕರೆದುಕೊಂಡು ಹೋಗಿ, ವೈಯರ್ ಹಾಗೂ ಹಗ್ಗದಿಂದ ಬಾಸುಂಡೆ ಬರುವಂತೆ ಹೊಡೆದು ಚಿತ್ರ ಹಿಂಸೆ ನೀಡಿದ್ದಾರೆ. ಅಲ್ಲದೆ ಬಾಲಕನೊಂದಿಗೆ ಅಸಭ್ಯವಾಗಿ ವರ್ತಿಸಲಾಗಿದೆ ಎಂದು ಬಾಲಕ ಆರೋಪಿಸಿದ್ದು, ಇನ್ನು ಈ ಕುರಿತು ಸ್ಥಳೀಯರೊಂದಿಗೆ ಅಳಲು ತೋಡಿಕೊಂಡಿದ್ದಾನೆ. ಸಧ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಾಲಕನ ವಿಡಿಯೋ ಮತ್ತು ಫೋಟೊಗಳನ್ನ ಹಾಕಿದ್ದು, ಮಾಲಿಕ ಉಮೇಶ್ ವಿರುದ್ದ ನೆಟ್ಟಿಗರು ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮಾಲಿಕನ ಬಂಧನ ಯಾವಾಗ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ಸ್ ಮಾಡಿದ್ದಾರೆ.

Conclusion:ಸಧ್ಯ ಸ್ಥಳೀಯರು ಬಾಲಕನ ಮೇಲೆ ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸುತ್ತಿದ್ದು, ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟ‌ನೆ ಜರುಗಿದೆ.
Last Updated : Nov 8, 2019, 3:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.