ಕರುನಾಡ ಕ್ರಶ್ ರಶ್ಮಿಕಾ ಮಂದಣ್ಣ ಈಗ ಕರ್ನಾಟಕದ ಕ್ರಶ್ ಮಾತ್ರವಲ್ಲ, ತೆಲುಗು, ತಮಿಳು ಚಿತ್ರರಂಗಗಳಲ್ಲೂ ಸಾಕಷ್ಟು ಫ್ಯಾನ್ ಫಾಲೋಯಿಂಗ್ ಹೊಂದಿರುವ ಈ ಮುದ್ದು ಹುಡುಗಿ ಅಲ್ಲಿನ ಯುವ ಅಭಿಮಾನಿಗಳ ಮನಸ್ಸು ಕದ್ದಿದ್ದಾರೆ.
-
One of the most basic necessities is a hospital and in Coorg we don't have it. For a good hospital we have to travel distances. It would be really helpful for the people of Kodagu if this could be done to us
— Rashmika Mandanna (@iamRashmika) June 13, 2019 " class="align-text-top noRightClick twitterSection" data="
ದಯವಿಟ್ಟು ಸ್ಪಂದಿಸಿ 🙏@CMofKarnataka#WeNeedEmergencyHospitalInKodagu
">One of the most basic necessities is a hospital and in Coorg we don't have it. For a good hospital we have to travel distances. It would be really helpful for the people of Kodagu if this could be done to us
— Rashmika Mandanna (@iamRashmika) June 13, 2019
ದಯವಿಟ್ಟು ಸ್ಪಂದಿಸಿ 🙏@CMofKarnataka#WeNeedEmergencyHospitalInKodaguOne of the most basic necessities is a hospital and in Coorg we don't have it. For a good hospital we have to travel distances. It would be really helpful for the people of Kodagu if this could be done to us
— Rashmika Mandanna (@iamRashmika) June 13, 2019
ದಯವಿಟ್ಟು ಸ್ಪಂದಿಸಿ 🙏@CMofKarnataka#WeNeedEmergencyHospitalInKodagu
ಕೊಡಗಿನಲ್ಲಿ ಹುಟ್ಟಿ ಬೆಳೆದ ರಶ್ಮಿಕಾ, ಸ್ವಲ್ಪ ಬಿಡುವು ಸಿಕ್ಕರೆ ಸಾಕು ಕೊಡಗಿಗೆ ತೆರಳಿ ಅಲ್ಲಿ ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಸುಂದರ ಪ್ರಕೃತಿಯಲ್ಲಿ ಕಾಲ ಕಳೆಯುತ್ತಾರೆ. ತನ್ನ ಹುಟ್ಟೂರಿನ ಬಗ್ಗೆ ಸದಾ ಅಭಿಮಾನ ಹೊಂದಿರುವ ರಶ್ಮಿಕಾ ಕೊಡಗಿಗೆ ಸೂಕ್ತ ಆಸ್ಪತ್ರೆ ಕಲ್ಪಿಸಿಕೊಡುವಂತೆ ಸಿಎಂ ಕುಮಾರಸ್ವಾಮಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸಿಎಂ ಅಫಿಶಿಯಲ್ ಟ್ವಿಟರ್ಗೆ ಟ್ವೀಟ್ ಮಾಡಿರುವ ರಶ್ಮಿಕಾ 'ಕೊಡಗಿನಲ್ಲಿ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ಆಸ್ಪತ್ರೆಯ ಸೌಕರ್ಯ ಇಲ್ಲ. ಒಳ್ಳೆಯ ಚಿಕಿತ್ಸೆ ಬೇಕೆಂದರೆ ನಾವು ಕಿಲೋ ಮೀಟರ್ ಗಟ್ಟಲೆ ಹೋಗಬೇಕು. ಆಸ್ಪತ್ರೆ ದೊರೆತರೆ ನಮ್ಮ ಜನರಿಗೆ ಬಹಳ ಉಪಯೋಗವಾಗುತ್ತದೆ. ದಯವಿಟ್ಟು ಸ್ಪಂದಿಸಿ ' ಎಂದು ಟ್ವೀಟ್ ಮಾಡಿದ್ದಾರೆ. ರಶ್ಮಿಕಾ ಸಾಮಾಜಿಕ ಕಳಕಳಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಶ್ಮಿಕಾ ಸದ್ಯಕ್ಕೆ ತೆಲುಗಿನಲ್ಲಿ ಮಹೇಶ್ ಬಾಬು ಜೊತೆ 'ಸರಿಲೇರು ನೀಕೆವರು', ನಿತಿನ್ ಜೊತೆ 'ಭೀಷ್ಮ' ಚಿತ್ರದಲ್ಲಿ ಬ್ಯುಸಿಯಿದ್ದಾರೆ. ಇದರೊಂದಿಗೆ ಕನ್ನಡದ 'ಪೊಗರು' ಸಿನಿಮಾದಲ್ಲಿ ಧ್ರುವಾ ಸರ್ಜಾ ಜೊತೆ ಡ್ಯೂಯೆಟ್ ಹಾಡಲಿದ್ದಾರೆ. ತಮಿಳಿನಲ್ಲಿ ಕಾರ್ತಿಕ್ ಜೊತೆ ಕೂಡಾ ಒಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ವಿಜಯ್ ದೇವರಕೊಂಡ ಜೊತೆ ನಟಿಸಿರುವ 'ಡಿಯರ್ ಕಾಮ್ರೇಡ್' ಸಿನಿಮಾ ಜುಲೈ 26 ರಂದು ಬಿಡುಗಡೆಯಾಗಲಿದೆ.