ETV Bharat / state

ಮಡಿಕೇರಿಯಲ್ಲಿ ದಂಪತಿ ಆತ್ಮಹತ್ಯೆಗೆ ಶರಣು... ಅನಾಥವಾಯ್ತು ಕಂದಮ್ಮ - undefined

ಮಡಿಕೇರಿಯ ಹೊರವಲಯದಲ್ಲಿರುವ ಮನೆಯಲ್ಲಿ ದಂಪತಿ ಅನುಮಾನಾಸ್ಪದ ರೀತಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆತ್ಮಹತ್ಯೆಗೆ ಶರಣಾದ ದಂಪತಿಗಳು
author img

By

Published : Apr 1, 2019, 9:54 PM IST

ಮಡಿಕೇರಿ: ಪುಟ್ಟ ಕಂದಮ್ಮನನ್ನು ಅನಾಥವಾಗಿಸಿ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ನಗರ ಹೊರವಲಯದ ಪಂಪ್ ಹೌಸ್ ಬಳಿ ನಡೆದಿದೆ.

ಚೇತನ್ (34), ಪತ್ನಿ ವಾಣಿ (28) ಮೃತ ದಂಪತಿ. ಚೇತನ್​ ಮಡಿಕೇರಿ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಸಲ ಮಾಡುತ್ತಿದ್ದರು. ಕೆಲಸ ಮುಗಿಸಿ ಚೇತನ್ ಊಟಕ್ಕೆಂದು ಮನೆಗೆ ಬಂದಿದ್ದ ವೇಳೆ ಮನೆ ಒಳಗಿನಿಂದ ಮಗು ಅಳುವ ಶಬ್ದ ಕೇಳಿಬಂದಿತ್ತು. ತಕ್ಷಣ ಚೇತನ್​ ಬಾಗಿಲು ಒಡೆದು ಒಳನುಗ್ಗಿದಾಗ ವಾಣಿ ನೇಣಿಗೆ ಶರಣಾಗಿದ್ದರು.

ಆತ್ಮಹತ್ಯೆಗೆ ಶರಣಾದ ದಂಪತಿ

ಇದನ್ನು ಕಂಡ ಚೇತನ್​ ಪತ್ನಿ ಮೃತದೇಹ ಇಳಿಸಿ ಸ್ವತಃ ಪೊಲೀಸ್ ಠಾಣೆಗೆ ಕರೆ ಮಾಡಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು, ತಾನೂ ಆತ್ಮಹತ್ಯೆ ಮಾಡಿಕೊಂಡು ಸಾಯುವುದಾಗಿ ತಿಳಿಸಿದ್ದಾನೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕಾಗಮಿಸುವ ವೇಳೆಗಾಗಲೇ ಚೇತನ್​ ಕೂಡ ಹೆಣವಾಗಿ ಬಿದ್ದಿದ್ದ.

ಇನ್ನು ದಂಪತಿಗಳ ಆತ್ಮಹತ್ಯೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಪ್ರಕರಣ ಕುರಿತು ಮಡಿಕೇರಿ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದಂಪತಿ ಮಗುವನ್ನು ಅನಾಐವಾಗಿಸಿ ಆತ್ಮಹತ್ಯೆಗೆ ಶರಣಾಗಿರುವ ದೃಶ್ಯ ಮನಕಲಕುವಂತಿದೆ.

ಮಡಿಕೇರಿ: ಪುಟ್ಟ ಕಂದಮ್ಮನನ್ನು ಅನಾಥವಾಗಿಸಿ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ನಗರ ಹೊರವಲಯದ ಪಂಪ್ ಹೌಸ್ ಬಳಿ ನಡೆದಿದೆ.

ಚೇತನ್ (34), ಪತ್ನಿ ವಾಣಿ (28) ಮೃತ ದಂಪತಿ. ಚೇತನ್​ ಮಡಿಕೇರಿ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಸಲ ಮಾಡುತ್ತಿದ್ದರು. ಕೆಲಸ ಮುಗಿಸಿ ಚೇತನ್ ಊಟಕ್ಕೆಂದು ಮನೆಗೆ ಬಂದಿದ್ದ ವೇಳೆ ಮನೆ ಒಳಗಿನಿಂದ ಮಗು ಅಳುವ ಶಬ್ದ ಕೇಳಿಬಂದಿತ್ತು. ತಕ್ಷಣ ಚೇತನ್​ ಬಾಗಿಲು ಒಡೆದು ಒಳನುಗ್ಗಿದಾಗ ವಾಣಿ ನೇಣಿಗೆ ಶರಣಾಗಿದ್ದರು.

ಆತ್ಮಹತ್ಯೆಗೆ ಶರಣಾದ ದಂಪತಿ

ಇದನ್ನು ಕಂಡ ಚೇತನ್​ ಪತ್ನಿ ಮೃತದೇಹ ಇಳಿಸಿ ಸ್ವತಃ ಪೊಲೀಸ್ ಠಾಣೆಗೆ ಕರೆ ಮಾಡಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು, ತಾನೂ ಆತ್ಮಹತ್ಯೆ ಮಾಡಿಕೊಂಡು ಸಾಯುವುದಾಗಿ ತಿಳಿಸಿದ್ದಾನೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕಾಗಮಿಸುವ ವೇಳೆಗಾಗಲೇ ಚೇತನ್​ ಕೂಡ ಹೆಣವಾಗಿ ಬಿದ್ದಿದ್ದ.

ಇನ್ನು ದಂಪತಿಗಳ ಆತ್ಮಹತ್ಯೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಪ್ರಕರಣ ಕುರಿತು ಮಡಿಕೇರಿ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದಂಪತಿ ಮಗುವನ್ನು ಅನಾಐವಾಗಿಸಿ ಆತ್ಮಹತ್ಯೆಗೆ ಶರಣಾಗಿರುವ ದೃಶ್ಯ ಮನಕಲಕುವಂತಿದೆ.

Intro:ಕೊಡಗು: ಜಿಲ್ಲೆಯ ವಿವಿಧ ಕಡೆ ನಡೆದ ಘಟನೆಯಲ್ಲಿ ಬರೋಬ್ಬರಿ 8 ಮಂದಿ ಮೃತಪಟ್ಟಿದ್ದು ಇಂದು ಸಂಜೆ ಪುಟಾಣಿ ಕಂದಮ್ಮ ಬಿಟ್ಟು ದಂಪತಿ ಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಡಿಕೇರಿ ಹೊರವಲಯದಲ್ಲಿ ಘಟನೆ ನಡೆದಿದ್ದು ಆತ್ಮಹತ್ಯೆ ಹಿಂದೆ ಹಲವು ಸಂಶಯ ವ್ಯಕ್ತವಾಗಿದೆ. Body:ಮಡಿಕೇರಿ ಹೊರವಲಯದಲ್ಲಿ ಇರುವ ಪಂಪ್ ಹೌಸ್ ಬಳಿ ಈ ಘಟನೆ ನಡೆದದ್ದು, ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿದ್ದ ಚೇತನ್ 34, ಪತ್ನಿ ವಾಣಿ 28 ಮೃತಪಟ್ಟಿದ್ದಾರೆ.
ಕೆಲಸ ಮುಗಿಸಿ ಊಟಕ್ಕೆಂದು ಮನೆಗೆ ಆಗಮಿಸಿದ ಚೇತನ್ ಒಂದೂವರೆ ವರ್ಷದ ಕಂದಮ್ಮ ಅಳುವುದನ್ನು ಮಗುವಿನ ಶಬ್ದ ಕೇಳಿ ಬಾಗಿಲು ಒಡೆದು ಒಳನುಗ್ಗಿದ ಸಂದರ್ಭದಲ್ಲಿ ಮಲಗುವ ಕೋಣೆಯ ಲ್ಲಿ ವಾಣಿ ನೇಣಿಗೆ ಶರಣಾಗಿದ್ದರು. ಇದನ್ನು ನೋಡಿ ಪತ್ನಿ ಮೃತದೇಹ ಇಳಿಸಿ ಸ್ವತಃ ಪೋಲಿಸ್ ಠಾಣೆಗೆ ಕರೆ ಮಾಡಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು ತಾನೂ ಆತ್ಮಹತ್ಯೆ ಮಾಡಿಕೊಂಡು ಸಾಯುವುದಾಗಿ ತಿಳಿಸಿದ ಚೇತನ್ ಸ್ಥಳಕ್ಕೆ ಪೋಲೀಸರು ಆಗಮಿಸುವ ವೇಳೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. Conclusion:ದಂಪತಿಗಳ ಆತ್ಮಹತ್ಯೆ ಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ, ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಾಗಿದ್ದು, ಮಡಿಕೇರಿ ನಗರ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.