ETV Bharat / state

ಅಂತರ್ಜಲಮಟ್ಟ ಹೆಚ್ಚಳಕ್ಕೆ ವಾಟರ್​​​​​​​ ರೀಫಿಲ್ಲಿಂಗ್​​ ಶಾಪ್​​​ ಅಗತ್ಯ - undefined

ಕೊಳವೆ ಬಾವಿಗಳ ಮೂಲಕ ಭೂಮಿಯಿಂದ ನೀರು ಹೊರ ತೆಗೆದ ರೀತಿಯಲ್ಲಿಯೇ ಭೂಮಿಗೆ ನೀರನ್ನು ರೀಫಿಲ್ ಮಾಡುವ ಅವಶ್ಯಕತೆ ಇದೆ ಎಂದು ತೆಲಂಗಾಣ ರಾಜ್ಯ ನೀರಾವರಿ ಹಾಗೂ ಅಂತರ್ಜಲ ಮಂಡಳಿ ಅಧ್ಯಕ್ಷ ಪ್ರಕಾಶ್ ರಾವ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಕಾಶ್ ರಾವ್
author img

By

Published : Jul 8, 2019, 6:05 PM IST

ಕಲಬುರಗಿ: ಕೊಳವೆ ಬಾವಿಗಳ ಮೂಲಕ ಭೂಮಿಯಿಂದ ನೀರು ಹೊರತೆಗೆದ ರೀತಿಯಲ್ಲಿಯೇ ಭೂಮಿಗೆ ನೀರನ್ನು ರೀಫಿಲ್ ಮಾಡುವ ಅವಶ್ಯಕತೆ ಇದೆ ಎಂದು ತೆಲಂಗಾಣ ರಾಜ್ಯ ನೀರಾವರಿ ಹಾಗೂ ಅಂತರ್ಜಲ ಮಂಡಳಿ ಅಧ್ಯಕ್ಷ ಪ್ರಕಾಶ್ ರಾವ್ ಅಭಿಪ್ರಾಯಪಟ್ಟಿದ್ದಾರೆ.

ಕಲಬುರಗಿಗೆ ಆಗಮಿಸಿದ ಸಂದರ್ಭ ಮಾತನಾಡಿದ ಪ್ರಕಾಶ್ ರಾವ್, ತೀವ್ರ ಬರದಿಂದಾಗಿ ಎಲ್ಲೆಡೆ ನೀರಿನ ತತ್ವಾರ ಉಂಟಾಗಿದೆ. ನಾವು ಕೊಳವೆ ಬಾವಿ ಹಾಕಿ ನೀರು ಹೊರ ತೆಗೆಯುವುದರ ಕಡೆಗಷ್ಟೇ ಗಮನ ಹರಿಸುತ್ತಿದ್ದೇವೆ. ಆದರೆ ತೆಗೆದ ಮಾದರಿಯಲ್ಲಿ ಭೂಮಿಗೆ ನೀರುಣಿಸುವ ಕೆಲಸ ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ತೆಲಂಗಾಣ ರಾಜ್ಯದಲ್ಲಿ ಕೊಳವೆ ಬಾವಿ ಕೊರೆದು ರೀಫಿಲ್ಲಿಂಗ್ ಶಾಪ್​​ಗಳನ್ನು ಮಾಡುತ್ತಿದ್ದೇವೆ. ರೀಫಿಲ್ಲಿಂಗ್ ಶಾಪ್​​ಗಳು ಅತ್ಯಂತ ಯಶಸ್ವಿಯಾಗಿವೆ. ಅಂತರ್ಜಲಮಟ್ಟ ಹೆಚ್ಚಳಕ್ಕೂ ನಾಂದಿ ಹಾಡಿವೆ. ಕರ್ನಾಟಕದಲ್ಲಿಯೂ ಈ ಪ್ರಯೋಗ ಮಾಡಿದ್ದಲ್ಲಿ ಅಂತರ್ಜಲಮಟ್ಟ ಹೆಚ್ಚಳವಾಗುವುದು ನಿಶ್ಚಿತ ಎಂದರು.

ಪ್ರಕಾಶ್​ ರಾವ್​, ತೆಲಂಗಾಣ ರಾಜ್ಯ ನೀರಾವರಿ ಹಾಗೂ ಅಂತರ್ಜಲ ಮಂಡಳಿ ಅಧ್ಯಕ್ಷ

ತೆಲಂಗಾಣದಲ್ಲಿ 1,600 ಹಳ್ಳಿಗಳಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ರೀಫಿಲ್ಲಿಂಗ್ ಶಾಪ್ ಮಾಡಲಾಗುತ್ತಿದೆ. ಚೆಕ್ ಡ್ಯಾಂಗಳ ನಿರ್ಮಾಣಕ್ಕೆ 4 ಸಾವಿರ ಕೋಟಿ ರೂ. ವ್ಯಯಿಸಲಾಗುತ್ತಿದೆ. ಕರ್ನಾಟಕದಲ್ಲಿಯೂ ಜಾಗೃತಿ ಮೂಡಿಸಲು ಪ್ರಯತ್ನ ನಡೆಸಿರುವುದಾಗಿ ಅವರು ತಿಳಿಸಿದ್ದಾರೆ.

ಇನ್ನು ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ಬಿ.ಆರ್.ಪಾಟೀಲ್, ದೇಶದಲ್ಲಿ ನೀರು ಮಾರಾಟದ ದೊಡ್ಡ ಲಾಬಿ ನಡೆದಿದೆ. ದೇಶದಲ್ಲಿ 50 ಸಾವಿರ ಕೋಟಿ ರೂ. ನೀರಿನ ವ್ಯವಹಾರ ನಡೀತಿದೆ. ಮಾನ್ಯತೆ ಇಲ್ಲದ ಅದೆಷ್ಟೋ ಕಂಪನಿಗಳು ಕಾನೂನು ಬಾಹಿರವಾಗಿ ನೀರು ಮಾರಾಟ ಮಾಡುತ್ತಿವೆ. ನೀರಿನ ಹಾಹಾಕಾರ ಸೃಷ್ಟಿಯಾಗಿದೆ. ಇದಕ್ಕೆ ಕಡಿವಾಣ ಹಾಕಲು ನೀರು ಭದ್ರತಾ ಕಾಯ್ದೆ ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಕಲಬುರಗಿ: ಕೊಳವೆ ಬಾವಿಗಳ ಮೂಲಕ ಭೂಮಿಯಿಂದ ನೀರು ಹೊರತೆಗೆದ ರೀತಿಯಲ್ಲಿಯೇ ಭೂಮಿಗೆ ನೀರನ್ನು ರೀಫಿಲ್ ಮಾಡುವ ಅವಶ್ಯಕತೆ ಇದೆ ಎಂದು ತೆಲಂಗಾಣ ರಾಜ್ಯ ನೀರಾವರಿ ಹಾಗೂ ಅಂತರ್ಜಲ ಮಂಡಳಿ ಅಧ್ಯಕ್ಷ ಪ್ರಕಾಶ್ ರಾವ್ ಅಭಿಪ್ರಾಯಪಟ್ಟಿದ್ದಾರೆ.

ಕಲಬುರಗಿಗೆ ಆಗಮಿಸಿದ ಸಂದರ್ಭ ಮಾತನಾಡಿದ ಪ್ರಕಾಶ್ ರಾವ್, ತೀವ್ರ ಬರದಿಂದಾಗಿ ಎಲ್ಲೆಡೆ ನೀರಿನ ತತ್ವಾರ ಉಂಟಾಗಿದೆ. ನಾವು ಕೊಳವೆ ಬಾವಿ ಹಾಕಿ ನೀರು ಹೊರ ತೆಗೆಯುವುದರ ಕಡೆಗಷ್ಟೇ ಗಮನ ಹರಿಸುತ್ತಿದ್ದೇವೆ. ಆದರೆ ತೆಗೆದ ಮಾದರಿಯಲ್ಲಿ ಭೂಮಿಗೆ ನೀರುಣಿಸುವ ಕೆಲಸ ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ತೆಲಂಗಾಣ ರಾಜ್ಯದಲ್ಲಿ ಕೊಳವೆ ಬಾವಿ ಕೊರೆದು ರೀಫಿಲ್ಲಿಂಗ್ ಶಾಪ್​​ಗಳನ್ನು ಮಾಡುತ್ತಿದ್ದೇವೆ. ರೀಫಿಲ್ಲಿಂಗ್ ಶಾಪ್​​ಗಳು ಅತ್ಯಂತ ಯಶಸ್ವಿಯಾಗಿವೆ. ಅಂತರ್ಜಲಮಟ್ಟ ಹೆಚ್ಚಳಕ್ಕೂ ನಾಂದಿ ಹಾಡಿವೆ. ಕರ್ನಾಟಕದಲ್ಲಿಯೂ ಈ ಪ್ರಯೋಗ ಮಾಡಿದ್ದಲ್ಲಿ ಅಂತರ್ಜಲಮಟ್ಟ ಹೆಚ್ಚಳವಾಗುವುದು ನಿಶ್ಚಿತ ಎಂದರು.

ಪ್ರಕಾಶ್​ ರಾವ್​, ತೆಲಂಗಾಣ ರಾಜ್ಯ ನೀರಾವರಿ ಹಾಗೂ ಅಂತರ್ಜಲ ಮಂಡಳಿ ಅಧ್ಯಕ್ಷ

ತೆಲಂಗಾಣದಲ್ಲಿ 1,600 ಹಳ್ಳಿಗಳಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ರೀಫಿಲ್ಲಿಂಗ್ ಶಾಪ್ ಮಾಡಲಾಗುತ್ತಿದೆ. ಚೆಕ್ ಡ್ಯಾಂಗಳ ನಿರ್ಮಾಣಕ್ಕೆ 4 ಸಾವಿರ ಕೋಟಿ ರೂ. ವ್ಯಯಿಸಲಾಗುತ್ತಿದೆ. ಕರ್ನಾಟಕದಲ್ಲಿಯೂ ಜಾಗೃತಿ ಮೂಡಿಸಲು ಪ್ರಯತ್ನ ನಡೆಸಿರುವುದಾಗಿ ಅವರು ತಿಳಿಸಿದ್ದಾರೆ.

ಇನ್ನು ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ಬಿ.ಆರ್.ಪಾಟೀಲ್, ದೇಶದಲ್ಲಿ ನೀರು ಮಾರಾಟದ ದೊಡ್ಡ ಲಾಬಿ ನಡೆದಿದೆ. ದೇಶದಲ್ಲಿ 50 ಸಾವಿರ ಕೋಟಿ ರೂ. ನೀರಿನ ವ್ಯವಹಾರ ನಡೀತಿದೆ. ಮಾನ್ಯತೆ ಇಲ್ಲದ ಅದೆಷ್ಟೋ ಕಂಪನಿಗಳು ಕಾನೂನು ಬಾಹಿರವಾಗಿ ನೀರು ಮಾರಾಟ ಮಾಡುತ್ತಿವೆ. ನೀರಿನ ಹಾಹಾಕಾರ ಸೃಷ್ಟಿಯಾಗಿದೆ. ಇದಕ್ಕೆ ಕಡಿವಾಣ ಹಾಕಲು ನೀರು ಭದ್ರತಾ ಕಾಯ್ದೆ ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

Intro:ಕಲಬುರಗಿ:ಕೊಳವೆ ಬಾವಿಗಳ ಮೂಲಕ ಭೂಮಿಯಿಂದ ಹೊರತೆಗೆದ ರೀತಿಯಲ್ಲಿಯೇ ಭೂಮಿಗೆ ರೀಫಿಲ್ ಮಾಡುವ ಅವಶ್ಯಕತೆ ಇದೆ ಎಂದು ತೆಲಂಗಾಣ ರಾಜ್ಯದ ನೀಕಾವರಿ ಹಾಗೂ ಅಂತರ್ಜಲ ಮಂಡಳಿ ಅಧ್ಯಕ್ಷ ಪ್ರಕಾಶ್ ರಾವ್ ಅಭಿಪ್ರಾಯಪಟ್ಟಿದ್ದಾರೆ.

ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು,ತೀವ್ರ ಬರದಿಂದಾಗಿ ಎಲ್ಲೆಡೆ ನೀರಿನ ತತ್ವಾರ ಉಂಟಾಗಿದೆ. ನಾವು ಕೊಳವೆ ಬಾವಿ ಹಾಕಿ ನೀರು ಹೊರ ತೆಗೆಯುವುದರ ಕಡೆಗಷ್ಟೇ ಗಮನ ಹರಿಸುತ್ತಿದ್ದೇವೆ. ಆದರೆ ತೆಗೆದ ಮಾದರಿಯಲ್ಲಿಯೂ ಭೂಮಿಗೆ ನೀರುಣ್ಣಿಸುವ ಕೆಲಸ ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ತೆಲಂಗಾಣ ರಾಜ್ಯದಲ್ಲಿ ಕೊಳವೆ ಬಾವಿ ಕೊರೆದು ರೀ ಫಿಲ್ಲಿಂಗ್ ಶಾಪ್ ಗಳನ್ನು ಮಾಡುತ್ತಿದ್ದೇವೆ. ರೀಫಿಲ್ಲಿಂಗ್ ಶಾಪ್ ಗಳು ಅತ್ಯಂತ ಯಶಸ್ವಿಯಾಗಿದ್ದು, ಅಂತರ್ಜಲ ಮಟ್ಟ ಹೆಚ್ಚಳಕ್ಕೂ ನಾಂದಿಹಾಡಿದೆ. ಕರ್ನಾಟಕದಲ್ಲಿಯೂ ಈ ಪ್ರಯೋಗ ಮಾಡಿದಲ್ಲಿ ಅಂತರ್ಜಲ ಮಟ್ಟಳ ಹೆಚ್ಚಳವಾಗೋದು ನಿಶ್ಚಿತ ಎಂದರು. ತೆಲಂಗಾಣದಲ್ಲಿ 1600 ಹಳ್ಳಿಗಳಲ್ಲಿ 70 ಕೋಟಿ ರೂಪಾಯಿ ವೆಚ್ಚದಲ್ಲಿ ರೀಫಿಲ್ಲಿಂಗ್ ಶಾಪ್ ಮಾಡಲಾಗುತ್ತಿದೆ. ಚೆಕ್ ಡ್ಯಾಂಗಳ ನಿರ್ಮಾಣಕ್ಕೆ 4 ಸಾವಿರ ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ ಎಂದರು. ಕರ್ನಾಟಕದಲ್ಲಿಯೂ ಜಾಗೃತಿ ಮೂಡಿಸಲು ಪ್ರಯತ್ನ ನಡೆಸಿರುವುದಾಗಿ ಅವರು ತಿಳಿಸಿದ್ದಾರೆ.

ಇನ್ನು ಇದೆ ವೇಳೆ ಮಾತನಾಡಿದ ಮಾಜಿ ಶಾಸಕ ಬಿ.ಆರ್.ಪಾಟೀಲ್,ದೇಶದಲ್ಲಿ ನೀರು ಮಾರಾಟದ ದೊಡ್ಡ ಲಾಬಿ ನಡೆದಿದ್ದು, ಇದಕ್ಕೆ ಕಡಿವಾಣ ಹಾಕಲು ನೀರು ಭದ್ರತಾ ಕಾಯ್ದೆ ಜಾರಿಗೆ ತರಬೇಕೆಂದು ಮಾಜಿ ಶಾಸಕ ಬಿ.ಆರ್.ಪಾಟೀಲ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಖಾಸಗಿ ವ್ಯಕ್ತಿಗಳ ಕೈವಾಡದಿಂದ ನೀರು ಖರೀದಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿಯೂ ಪ್ಯಾಕೇಜ್ ನೀರು ಪೂರೈಕೆಯಾಗುತ್ತಿದೆ. ದೇಶದಲ್ಲಿ 50 ಸಾವಿರ ಕೋಟಿ ರೂಪಾಯಿ ನೀರಿನ ವ್ಯವಹಾರ ನಡೀತಿದೆ. ಮಾನ್ಯತೆ ಇಲ್ಲದ ಅದೆಷ್ಟೋ ಕಂಪನಿಗಳೂ ಕಾನೂನು ಬಾಹಿರವಾಗಿ ನೀರು ಮಾರಾಟ ಮಾಡುತ್ತಿವೆ. ನೀರಿನ ಹಾಹಾಕಾರ ಸೃಷ್ಟಿಸಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ನೀರಿನ ಭದ್ರತಾ ಕಾಯ್ದೆ ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.Body:ಕಲಬುರಗಿ:ಕೊಳವೆ ಬಾವಿಗಳ ಮೂಲಕ ಭೂಮಿಯಿಂದ ಹೊರತೆಗೆದ ರೀತಿಯಲ್ಲಿಯೇ ಭೂಮಿಗೆ ರೀಫಿಲ್ ಮಾಡುವ ಅವಶ್ಯಕತೆ ಇದೆ ಎಂದು ತೆಲಂಗಾಣ ರಾಜ್ಯದ ನೀಕಾವರಿ ಹಾಗೂ ಅಂತರ್ಜಲ ಮಂಡಳಿ ಅಧ್ಯಕ್ಷ ಪ್ರಕಾಶ್ ರಾವ್ ಅಭಿಪ್ರಾಯಪಟ್ಟಿದ್ದಾರೆ.

ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು,ತೀವ್ರ ಬರದಿಂದಾಗಿ ಎಲ್ಲೆಡೆ ನೀರಿನ ತತ್ವಾರ ಉಂಟಾಗಿದೆ. ನಾವು ಕೊಳವೆ ಬಾವಿ ಹಾಕಿ ನೀರು ಹೊರ ತೆಗೆಯುವುದರ ಕಡೆಗಷ್ಟೇ ಗಮನ ಹರಿಸುತ್ತಿದ್ದೇವೆ. ಆದರೆ ತೆಗೆದ ಮಾದರಿಯಲ್ಲಿಯೂ ಭೂಮಿಗೆ ನೀರುಣ್ಣಿಸುವ ಕೆಲಸ ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ತೆಲಂಗಾಣ ರಾಜ್ಯದಲ್ಲಿ ಕೊಳವೆ ಬಾವಿ ಕೊರೆದು ರೀ ಫಿಲ್ಲಿಂಗ್ ಶಾಪ್ ಗಳನ್ನು ಮಾಡುತ್ತಿದ್ದೇವೆ. ರೀಫಿಲ್ಲಿಂಗ್ ಶಾಪ್ ಗಳು ಅತ್ಯಂತ ಯಶಸ್ವಿಯಾಗಿದ್ದು, ಅಂತರ್ಜಲ ಮಟ್ಟ ಹೆಚ್ಚಳಕ್ಕೂ ನಾಂದಿಹಾಡಿದೆ. ಕರ್ನಾಟಕದಲ್ಲಿಯೂ ಈ ಪ್ರಯೋಗ ಮಾಡಿದಲ್ಲಿ ಅಂತರ್ಜಲ ಮಟ್ಟಳ ಹೆಚ್ಚಳವಾಗೋದು ನಿಶ್ಚಿತ ಎಂದರು. ತೆಲಂಗಾಣದಲ್ಲಿ 1600 ಹಳ್ಳಿಗಳಲ್ಲಿ 70 ಕೋಟಿ ರೂಪಾಯಿ ವೆಚ್ಚದಲ್ಲಿ ರೀಫಿಲ್ಲಿಂಗ್ ಶಾಪ್ ಮಾಡಲಾಗುತ್ತಿದೆ. ಚೆಕ್ ಡ್ಯಾಂಗಳ ನಿರ್ಮಾಣಕ್ಕೆ 4 ಸಾವಿರ ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ ಎಂದರು. ಕರ್ನಾಟಕದಲ್ಲಿಯೂ ಜಾಗೃತಿ ಮೂಡಿಸಲು ಪ್ರಯತ್ನ ನಡೆಸಿರುವುದಾಗಿ ಅವರು ತಿಳಿಸಿದ್ದಾರೆ.

ಇನ್ನು ಇದೆ ವೇಳೆ ಮಾತನಾಡಿದ ಮಾಜಿ ಶಾಸಕ ಬಿ.ಆರ್.ಪಾಟೀಲ್,ದೇಶದಲ್ಲಿ ನೀರು ಮಾರಾಟದ ದೊಡ್ಡ ಲಾಬಿ ನಡೆದಿದ್ದು, ಇದಕ್ಕೆ ಕಡಿವಾಣ ಹಾಕಲು ನೀರು ಭದ್ರತಾ ಕಾಯ್ದೆ ಜಾರಿಗೆ ತರಬೇಕೆಂದು ಮಾಜಿ ಶಾಸಕ ಬಿ.ಆರ್.ಪಾಟೀಲ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಖಾಸಗಿ ವ್ಯಕ್ತಿಗಳ ಕೈವಾಡದಿಂದ ನೀರು ಖರೀದಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿಯೂ ಪ್ಯಾಕೇಜ್ ನೀರು ಪೂರೈಕೆಯಾಗುತ್ತಿದೆ. ದೇಶದಲ್ಲಿ 50 ಸಾವಿರ ಕೋಟಿ ರೂಪಾಯಿ ನೀರಿನ ವ್ಯವಹಾರ ನಡೀತಿದೆ. ಮಾನ್ಯತೆ ಇಲ್ಲದ ಅದೆಷ್ಟೋ ಕಂಪನಿಗಳೂ ಕಾನೂನು ಬಾಹಿರವಾಗಿ ನೀರು ಮಾರಾಟ ಮಾಡುತ್ತಿವೆ. ನೀರಿನ ಹಾಹಾಕಾರ ಸೃಷ್ಟಿಸಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ನೀರಿನ ಭದ್ರತಾ ಕಾಯ್ದೆ ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.