ETV Bharat / state

ಕಲಬುರಗಿಯ ಆರಾಧ್ಯ ದೈವ ಶರಣಬಸವೇಶ್ವರ ದೇವಸ್ಥಾನ ಬಂದ್​ - ಶರಣಬಸವೇಶ್ವರ ದೇವಸ್ಥಾನ ಬಂದ್​

ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಈಗಾಗಲೇ ಬೆಂಗಳೂರು ಸೇರಿದಂತೆ ಇತರ ನಗರಗಳನ್ನು ಲಾಕ್​ಡೌನ್​ ಮಾಡುವಂತೆ ಸರ್ಕಾರ ಘೋಷಿಸಿದೆ. ಈ ಹಿನ್ನೆಲೆ, ಅತೀ ಹೆಚ್ಚು ಭಕ್ತರು ಬರುವ ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನನ್ನೂ ಸಹ ಬಂದ್​ ಮಾಡಲಾಗಿದೆ.

Sharanabasaveshwara Temple
ಶರಣಬಸವೇಶ್ವರ ದೇವಸ್ಥಾನ
author img

By

Published : Jul 13, 2020, 10:06 PM IST

ಕಲಬುರಗಿ : ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆ ಕಲಬುರಗಿ ನಗರವನ್ನು ಲಾಕ್​​ಡೌನ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಈ ಹಿನ್ನೆಲೆ ಕಲಬುರ್ಗಿಯ ಆರಾಧ್ಯ ದೈವ ಎನ್ನಲಾಗಿರುವ ಶರಣಬಸವೇಶ್ವರ ದೇವಸ್ಥಾನವನ್ನು ಬಂದ್ ಮಾಡಲಾಗಿದೆ.

ಶರಣಬಸವೇಶ್ವರ ದೇವಸ್ಥಾನ

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಲಬುರಗಿ ಜಿಲ್ಲಾಧಿಕಾರಿ ಶರತ್ ಪತ್ರ ಬರೆದಿದ್ದು, ಸೋಂಕು ನಿಯಂತ್ರಣದ ನಿಟ್ಟಿನಲ್ಲಿ ದೇವಸ್ಥಾನ ಬಂದ್ ಮಾಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆ, ಲಾಕ್​​ಡೌನ್ ಜಾರಿಗೆ ಮುಂಚಿತವಾಗಿಯೇ ಐತಿಹಾಸಿಕಿ ಶರಣಬಸವೇಶ್ವರ ದೇವಸ್ಥಾನವನ್ನು ಬಂದ್ ಮಾಡಲಾಗಿದೆ.

ಇನ್ನು ಈ ದೇವಾಲಯಕ್ಕೆ ಬರುವ ಭಕ್ತರು ರಸ್ತೆ ಬದಿಯಿಂದಲೇ ನಮಸ್ಕರಿಸಿ ವಾಪಸ್ ಹೋಗುತ್ತಿದ್ದಾರೆ. ಗಾಣಗಾಪುರದ ದತ್ತಾತ್ರೇಯ ಹಾಗೂ ಘತ್ತರಗಿಯ ಭಾಗಮ್ಮ ದೇವಸ್ಥಾನ ದರ್ಶನ ಇದುವರೆಗೂ ಪ್ರಾರಂಭಗೊಂಡಿಲ್ಲ. ಶರಣಬಸವೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ಮತ್ತು ಸಂಜೆಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಈಗ ಅದನ್ನೂ ಬಂದ್ ಮಾಡಲಾಗಿದೆ.

ಕಲಬುರಗಿ : ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆ ಕಲಬುರಗಿ ನಗರವನ್ನು ಲಾಕ್​​ಡೌನ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಈ ಹಿನ್ನೆಲೆ ಕಲಬುರ್ಗಿಯ ಆರಾಧ್ಯ ದೈವ ಎನ್ನಲಾಗಿರುವ ಶರಣಬಸವೇಶ್ವರ ದೇವಸ್ಥಾನವನ್ನು ಬಂದ್ ಮಾಡಲಾಗಿದೆ.

ಶರಣಬಸವೇಶ್ವರ ದೇವಸ್ಥಾನ

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಲಬುರಗಿ ಜಿಲ್ಲಾಧಿಕಾರಿ ಶರತ್ ಪತ್ರ ಬರೆದಿದ್ದು, ಸೋಂಕು ನಿಯಂತ್ರಣದ ನಿಟ್ಟಿನಲ್ಲಿ ದೇವಸ್ಥಾನ ಬಂದ್ ಮಾಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆ, ಲಾಕ್​​ಡೌನ್ ಜಾರಿಗೆ ಮುಂಚಿತವಾಗಿಯೇ ಐತಿಹಾಸಿಕಿ ಶರಣಬಸವೇಶ್ವರ ದೇವಸ್ಥಾನವನ್ನು ಬಂದ್ ಮಾಡಲಾಗಿದೆ.

ಇನ್ನು ಈ ದೇವಾಲಯಕ್ಕೆ ಬರುವ ಭಕ್ತರು ರಸ್ತೆ ಬದಿಯಿಂದಲೇ ನಮಸ್ಕರಿಸಿ ವಾಪಸ್ ಹೋಗುತ್ತಿದ್ದಾರೆ. ಗಾಣಗಾಪುರದ ದತ್ತಾತ್ರೇಯ ಹಾಗೂ ಘತ್ತರಗಿಯ ಭಾಗಮ್ಮ ದೇವಸ್ಥಾನ ದರ್ಶನ ಇದುವರೆಗೂ ಪ್ರಾರಂಭಗೊಂಡಿಲ್ಲ. ಶರಣಬಸವೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ಮತ್ತು ಸಂಜೆಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಈಗ ಅದನ್ನೂ ಬಂದ್ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.