ಕಲಬುರಗಿ: ಭೀಮಾ ನದಿಯಿಂದ ಪಂಪ್ಸೆಟ್ ಮೂಲಕ ನೀರು ಪಡೆಯಲು ಅನುಮತಿ ಕೋರಿ ಅಫ್ಜಲಪುರ ರೈತರಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲೆಯ ಅಫ್ಜಲಪುರ ತಾಲೂಕಿನ ಅಳಗಿ ಗ್ರಾಮದ ರೈತರು ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿ, ಭೀಮಾ ನದಿಯಿಂದ ಪಂಪ್ಸೆಟ್ ಮೂಲಕ ನೀರು ಎತ್ತಲು ಅನುಮತಿ ಮತ್ತು ದಿನಕ್ಕೆ ಎರಡು ಗಂಟೆ ವಿದ್ಯುತ್ ಪೂರೈಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ನೀರಿಲ್ಲದೆ ಬೇಳೆ ನಾಶವಾಗುತ್ತಿದೆ. ಆದರಿಂದ ಜಿಲ್ಲಾಡಳಿತ ನೀರು ಒದಗಿಸಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.