ಕಲಬುರಗಿ: ಕಳೆದವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಚಿತ್ತಾಪುರ ಪಟ್ಟಣದ ಮೃತ ಯುವಕರ ಮನೆಗೆ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

ಇತ್ತೀಚೆಗೆ ಸಿಂದಗಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತ ಪಟ್ಟ 9 ಜನ ಮೃತ ಯುವಕರ ಮನೆಗೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ, ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿದರು.

ಇದೆ ವೇಳೆ ಮೃತ ಕುಟುಂಬದವರ ಕಷ್ಟ ಆಲಿಸಿದ ಸಚಿವರು ಸರ್ಕಾರದಿಂದ ಪರಿಹಾರ ಒದಗಿಸಿವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.