ETV Bharat / state

ಪ್ರವಾಹ ಇಳಿದರೂ ಗ್ರಾಮಸ್ಥರ ಬದುಕು ಮಾತ್ರ ಕತ್ತಲಲ್ಲೇ!

ಮಲಪ್ರಭೆಯ ಪ್ರವಾಹಕ್ಕೆ ಕೊಚ್ಚಿಹೋದ ಗ್ರಾಮದಲ್ಲೀಗ ವಿದ್ಯುತ್ ಕಂಬಗಳು, ಟಿಸಿಗಳು ಮುರಿದು ಕೆಳಗೆ ಬಿದ್ದಿವೆ. ಹೀಗಾಗಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಟ್ ಆಗಿದೆ.

author img

By

Published : Aug 25, 2019, 6:02 AM IST

ಕತ್ತಲಲ್ಲಿ ಪ್ರವಾಹ ಪೀಡಿತ ಗ್ರಾಮ..

ಗದಗ: ಜಿಲ್ಲೆಯ ನರಗುಂದ ತಾಲೂಕಿನ ಲಖಮಾಪುರ ಗ್ರಾಮ ಕಳೆದ ಒಂದು ವಾರದ ಹಿಂದೆ ಪ್ರವಾಹಕ್ಕೆ ತುತ್ತಾಗಿತ್ತು. ನವಿಲು ತೀರ್ಥ ಡ್ಯಾಂನಿಂದ ಮಲಪ್ರಭಾ ನದಿಗೆ ಅಪಾರ ಪ್ರಮಾಣ ನೀರು ಬಿಡುಗಡೆ ಮಾಡಲಾಗಿತ್ತು. ಮಲಪ್ರಭೆಯ ಪ್ರವಾಹಕ್ಕೆ ಕೊಚ್ಚಿಹೋದ ಗ್ರಾಮದಲ್ಲೀಗ ವಿದ್ಯುತ್ ಕಂಬಗಳು, ಟಿಸಿಗಳು ಮುರಿದು ಕೆಳಗೆ ಬಿದ್ದಿವೆ. ಹೀಗಾಗಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಟ್ ಆಗಿದೆ.

ಕತ್ತಲಲ್ಲಿ ಪ್ರವಾಹ ಪೀಡಿತ ಗ್ರಾಮ..

ವಿದ್ಯುತ್ ಸಂಪರ್ಕ ಇಲ್ಲದೆ ಮೇಣದಬತ್ತಿ, ದೀಪದ ಕೆಳಗೆ ಗ್ರಾಮಸ್ಥರು ಜೀವನ ಸಾಗಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ಸಹ ಭಾರಿ ಪರಿಣಾಮ ಉಂಟು ಮಾಡಿದೆ. ಇಷ್ಟೆಲ್ಲ ಅವಘಡ ಸಂಭವಿಸಿದ್ರು ಹೆಸ್ಕಾಂ ಅಧಿಕಾರಿಗಳು ಮಾತ್ರ ಇತ್ತ ತಲೆಹಾಕಿಲ್ಲ. ಅಧಿಕಾರಿಗಳು ತೋರಿದ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಮಲಪ್ರಭ ನದಿಯ ಅಟ್ಟಹಾಸಕ್ಕೆ ನಲುಗಿರುವ ಲಖಮಾಪುರ ಗ್ರಾಮಸ್ಥರು, ತಾತ್ಕಾಲಿಕವಾಗಿ ತಗಡಿನ ಶೆಡ್ ನಿರ್ಮಿಸಿಕೊಡಿ. ನಾವು ಅಲ್ಲಿ ಜೀವನ ಸಾಗಿಸುತ್ತೇವೆ. ಗ್ರಾಮದಲ್ಲಿ ಇರುವ ಮನೆಗಳು ಯಾವಾಗ ಬೀಳುತ್ತವೆ ಎಂಬ ಭಯ ಕಾಡುತ್ತಿದೆ. ಗ್ರಾಮದಲ್ಲಿ ಕರೆಂಟ್ ವ್ಯವಸ್ಥೆ ಸಹ ಇಲ್ಲ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಗದಗ: ಜಿಲ್ಲೆಯ ನರಗುಂದ ತಾಲೂಕಿನ ಲಖಮಾಪುರ ಗ್ರಾಮ ಕಳೆದ ಒಂದು ವಾರದ ಹಿಂದೆ ಪ್ರವಾಹಕ್ಕೆ ತುತ್ತಾಗಿತ್ತು. ನವಿಲು ತೀರ್ಥ ಡ್ಯಾಂನಿಂದ ಮಲಪ್ರಭಾ ನದಿಗೆ ಅಪಾರ ಪ್ರಮಾಣ ನೀರು ಬಿಡುಗಡೆ ಮಾಡಲಾಗಿತ್ತು. ಮಲಪ್ರಭೆಯ ಪ್ರವಾಹಕ್ಕೆ ಕೊಚ್ಚಿಹೋದ ಗ್ರಾಮದಲ್ಲೀಗ ವಿದ್ಯುತ್ ಕಂಬಗಳು, ಟಿಸಿಗಳು ಮುರಿದು ಕೆಳಗೆ ಬಿದ್ದಿವೆ. ಹೀಗಾಗಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಟ್ ಆಗಿದೆ.

ಕತ್ತಲಲ್ಲಿ ಪ್ರವಾಹ ಪೀಡಿತ ಗ್ರಾಮ..

ವಿದ್ಯುತ್ ಸಂಪರ್ಕ ಇಲ್ಲದೆ ಮೇಣದಬತ್ತಿ, ದೀಪದ ಕೆಳಗೆ ಗ್ರಾಮಸ್ಥರು ಜೀವನ ಸಾಗಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ಸಹ ಭಾರಿ ಪರಿಣಾಮ ಉಂಟು ಮಾಡಿದೆ. ಇಷ್ಟೆಲ್ಲ ಅವಘಡ ಸಂಭವಿಸಿದ್ರು ಹೆಸ್ಕಾಂ ಅಧಿಕಾರಿಗಳು ಮಾತ್ರ ಇತ್ತ ತಲೆಹಾಕಿಲ್ಲ. ಅಧಿಕಾರಿಗಳು ತೋರಿದ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಮಲಪ್ರಭ ನದಿಯ ಅಟ್ಟಹಾಸಕ್ಕೆ ನಲುಗಿರುವ ಲಖಮಾಪುರ ಗ್ರಾಮಸ್ಥರು, ತಾತ್ಕಾಲಿಕವಾಗಿ ತಗಡಿನ ಶೆಡ್ ನಿರ್ಮಿಸಿಕೊಡಿ. ನಾವು ಅಲ್ಲಿ ಜೀವನ ಸಾಗಿಸುತ್ತೇವೆ. ಗ್ರಾಮದಲ್ಲಿ ಇರುವ ಮನೆಗಳು ಯಾವಾಗ ಬೀಳುತ್ತವೆ ಎಂಬ ಭಯ ಕಾಡುತ್ತಿದೆ. ಗ್ರಾಮದಲ್ಲಿ ಕರೆಂಟ್ ವ್ಯವಸ್ಥೆ ಸಹ ಇಲ್ಲ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

Intro:
ಆಂಕರ್; ಅದು ಮಲಪ್ರಭ ನದಿಯ ಪ್ರವಾಹದ ಸುಳಿಗೆ ಸಿಲುಕಿ ಕೊಚ್ಚಿ ಹೋದ ಗ್ರಾಮ. ಮಲಪ್ರಭ ನದಿಯ ಅಟ್ಟಹಾಸ ಕಡಿಮೆಯಾದ ಮೇಲೆ ಸಂತ್ರಸ್ತರ ಗ್ರಾಮದ ಕಡೆ ಮುಖ ಮಾಡಿದ್ದಾರೆ. ಗ್ರಾಮದಲ್ಲಿ ವಿದ್ಯುತ ಸಂಪರ್ಕ ಇಲ್ಲದೆ ದಿನ ನಿತ್ಯ ಕತ್ತಲಲ್ಲಿ ಬದುಕು ಸಾಗಿಸುತ್ತಿದ್ದಾರೆ. ಗ್ರಾಮದಲ್ಲಿ ಇರುವ ವಿದ್ಯುತ್ ಕಂಬಗಳು ಮುರಿದು ಬಿದ್ದು ಹೊಗಿವೆ. ಇಷ್ಟೇಲ್ಲ ಘಟನೆ ನಡೆದ್ರು ಹೆಸ್ಕಾಂ ಅಧಿಕಾರಿಗಳು ಮಾತ್ರ ಭೇಟಿನೀಡಿಲ್ಲ. ಗ್ರಾಮಸ್ಥರ ನೋವಿಗೆ ಸ್ಪಂದಿಸಿಲ್ಲಾ.. ಹೀಗಾಗಿ ಗ್ರಾಮಸ್ತರು ಹೆಸ್ಕಾಂ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಅರೇ ಈ ಘಟನೆ ನಡೆದ್ದಿದಾದ್ರು ಎಲ್ಲಿ ಅಂತಿರಾ ಹಾಗಾದ್ರೆ ಈ ಸ್ಟೋರಿ ನೋಡಿ...

ಪ್ಲೋ...

ವಾ/ಓ:೦೧, ಮಲಪ್ರಭ ನದಿಯ ಅಟ್ಟಹಾಸಕ್ಕೆ ಕೊಚ್ಚಿಹೋದ ವಿದ್ಯುತ್ ಕಂಬಗಳು...! ರಸ್ತೆಯಲ್ಲಿ ಯಮರೂಪಿಯಂತೆ ಕಾಯುತ್ತಿರೋ ವಿದ್ಯುತ್ ತಂತಿಗಳು...! ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲಲ್ಲಿ ಜೀವನ ಸಾಗಿಸುತ್ತಿರೋ ಬಡ ಕುಟುಂಬಗಳು....! ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿರುವ ಗ್ರಾಮಸ್ಥರು....! ಎಸ್ .. ಈ ಎಲ್ಲಾ ದೃಶ್ಯಗಳು ಕಂಡುಬರೋದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಲಖಮಾಪೂರ ಗ್ರಾಮದಲ್ಲಿ. ಹೌದು ಕಳೆದ ಒಂದು ವಾರದ ಹಿಂದೆ ನವಿಲು ತೀರ್ಥ ಡ್ಯಾಂ ನಿಂದ ಮಲಪ್ರಭ ನದಿಗೆ ಅಪಾರ ಪ್ರಮಾಣ ನೀರು ಬಿಡುಗಡೆ ಮಾಡಲಾಗಿತು. ಮಲಪ್ರಭೆಯ ಪ್ರವಾಹಕ್ಕೆ ಕೊಚ್ಚಿಹೋದ ಗ್ರಾಮವಿದು. ಗ್ರಾಮದಲ್ಲಿದ ವಿದ್ಯುತ್ ಕಂಬಗಳು, ಟಿಸಿಗಳು ಮುರಿದು ಕೆಳಗೆ ಬಿದ್ದುಹೋಗಿವೆ. ಹೀಗಾಗಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಟ್ ಆಗಿದೆ. ವಿದ್ಯುತ್ ಸಂಪರ್ಕ ಇಲ್ಲದೆ ಮೇನದ ಬತ್ತಿ,ದೀಪದ ಕೇಳಗೆ ಜೀವನ ಸಾಗಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ವಿದ್ಯಾರ್ಥಿ ವಿದ್ಯಾಭ್ಯಾಸದ ಮೇಲೆಸಹ ಬಾರಿ ಪರಿನಾಮ ಉಂಟು ಮಾಡಿದೆ. ಇಷ್ಟು ಎಲ್ಲ ಅವಘಡ ಸಂಭವಿಸಿದ್ರು ಹೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ರು.

ಬೈಟ್;೦೧, ಫಕ್ಕೀರಪ್ಪ- ಲಖಮಾಪೂರ ಗ್ರಾಮಸ್ಥ.

ವಾ/ಓ,೦೨: ಮಲಪ್ರಭ ನದಿಯ ನೀರಿನ ರಬಸಕ್ಕೆ ವಿದ್ಯುತ್ ಕಂಬಗಳು ಕೊಚ್ಚಿಹೋದ ಪರಿನಾಮ ಲಖಮಾಪೂರ ಗ್ರಾಮಸ್ಥರು ಅಕ್ಷಶರಶಃ ನಲುಗಿ ಹೊಗಿದ್ದಾರೆ.. ಹೀಗಾಗಿ ಲಖಮಾಪೂರ ಗ್ರಾಮಸ್ಥರ ಬದುಕು ಕತ್ತಲು ಆವರಿಸಿಕೊಂಡಿದೆ. ಪ್ರವಾಹದ ಸುಳಿಗೆ ನರಕ ಅನುಭವಿಸುತ್ತಿರುವ ಸಂತ್ರಸ್ಥರ ಗೋಳು ಮಾತ್ರ ಯಾವ ಅಧಿಕಾರಿಗಳು ಕೇಳಿಲ್ಲ. ಗ್ರಾಮದಲ್ಲರುವ ವಿದ್ಯುತ್ ಕಂಬಗಳು ಸಂಪೂರ್ಣ ನೆಲಸಮವಾಗಿವೆ. ಸಂತ್ರಸ್ಥರ ಜೀವನಕ್ಕೆ ಬೆಳಕು ತರುವ ಕೆಲಸ ಹೆಸ್ಕಾಂ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಅಂತಿದ್ದಾರೆ ಗ್ರಾಮಸ್ಥರು..

ಬೈಟ್,೦೨: ರವಿ - ಲಖಮಾಪೂರ ಗ್ರಾಮಸ್ಥರು

ಒಟ್ಟನಲ್ಲಿ ಮಲಪ್ರಭ ನದಿಯ ಅಟ್ಟಹಾಸಕ್ಕೆ ನಲುಗಿರುವ ಲಖಮಾಪೂರ ಗ್ರಾಮಸ್ಥರು. ನಮ್ಮಗೆ ತಾತ್ಕಾಲಿಕವಾಗಿ ತಗಡಿನ ಶೆಡ್ ನಿರ್ಮಿಸಿಕೊಡಿ ನಾವು ಅಲ್ಲಿ ಜೀವನ ಸಾಗಿಸುತ್ತೇವೆ. ಗ್ರಾಮದಲ್ಲಿ ಇರುವ ಮನೆಗಳು ಯಾವಗ ಬಿಳುತ್ತವೆ ಅನ್ನುವ ಭಯದಲ್ಲೆ ಜೀವನ ನಡೆಸುತ್ತಿದೆವೆ. ಗ್ರಾಮದಲ್ಲಿ ಕರೆಂಟ್ ವ್ಯವಸ್ಥೆ ಸಹ ಇಲ್ಲ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಈ ವರದಿಯ ಬಳಿಕ ಸರ್ಕಾರ ಸಂತ್ರಸ್ಥರ ನೆರವಿಗೆ ಮುಂದಾಗುತ್ತಾ ಕಾದುನೋಡಬೇಕಿದೆ....
ಲBody:ಗConclusion:ಗ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.