ETV Bharat / state

ಶಿಕ್ಷಕರ ಪರ ನಿಲ್ಲುವ ನಮೋಶಿಗೆ ಮೊದಲ ಆದ್ಯತೆ ನೀಡಿ: ರಾಜ್​ಕುಮಾರ್​ ಪಾಟೀಲ್​ ತೇಲ್ಕೂರ್ - MLA Raj Kumar Patil campaigns for Shashila Namoshi

ಹಲವಾರು ವರ್ಷಗಳಿಂದ ಶಿಕ್ಷಕರು ಅನುಭವಿಸುತ್ತಿರುವ ವೇತನ ಸಮಸ್ಯೆಗೆ ಬರುವ ದಿನಗಳಲ್ಲಿ ಮುಕ್ತಿ ದೊರೆಯಲಿದೆ ಎಂದು ಈಶಾನ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ, ಶಾಸಕ ರಾಜ್​ಕುಮಾರ್​ ಪಾಟೀಲ್​ ತೇಲ್ಕೂರ್​ ತಿಳಿಸಿದರು.

MLA Raj Kumar Patil appeals to vote for Shashila Namoshi
ಶಾಸಕ ರಾಜ್​ಕುಮಾರ್​ ಪಾಟೀಲ್​ ತೇಲ್ಕೂರ್​
author img

By

Published : Oct 23, 2020, 5:51 PM IST

ಸೇಡಂ: ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗಿ ಹೋರಾಡುವ ವ್ಯಕ್ತಿತ್ವದ ನಾಯಕ ಶಶಿಲ ನಮೋಶಿಯಾಗಿದ್ದು, ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯ ನೀಡಬೇಕೆಂದು ಈಶಾನ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ, ಶಾಸಕ ರಾಜ್​ಕುಮಾರ್​ ಪಾಟೀಲ್​ ತೇಲ್ಕೂರ್​ ಕೋರಿದ್ದಾರೆ‌.

ಶಾಸಕ ರಾಜ್​ಕುಮಾರ್​ ಪಾಟೀಲ್​ ತೇಲ್ಕೂರ್ ಮನವಿ

ಸೇಡಂನ ಶ್ರೀಸಾಯಿ ಶಿಕ್ಷಣ ಸಂಸ್ಥೆಯ ಶಾಲೆಯಲ್ಲಿ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶಿಲ ನಮೋಶಿ ಪರ ಮತ ಪ್ರಚಾರ ನಡೆಸಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಶಿಕ್ಷಕರು ಅನುಭವಿಸುತ್ತಿರುವ ಸಂಬಳ ಸಮಸ್ಯೆಗೆ ಬರುವ ದಿನಗಳಲ್ಲಿ ಮುಕ್ತಿ ದೊರೆಯಲಿದೆ. ಬಿಜೆಪಿ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿದ್ದಲ್ಲಿ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಮೊದಲ ಆದ್ಯತೆಯ ಪರಿಹಾರ ನೀಡಬಹುದಾಗಿದೆ. ನಮೋಶಿ ಸ್ಥಳೀಯವಾಗಿ ಲಭ್ಯವಿರುವುದರಿಂದ ಶಿಕ್ಷಕರು ಸಹ ತ್ವರಿತವಾಗಿ ತಮ್ಮ ಸಮಸ್ಯೆಗಳನ್ನು ಗಮನಕ್ಕೆ ತರಬಹುದು ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಪರ್ವತರೆಡ್ಡಿ ಪಾಟೀಲ್​ ನಾಮವಾರ, ಹಿರಿಯ ಮುಖಂಡ ಭೀಮಶಪ್ಪ‌ ಕೋಡ್ಲಾ, ಸಂಸ್ಥೆಯ ಅಧ್ಯಕ್ಷ ಮಹೇಶ ಗುತ್ತೇದಾರ ಬಟಗೇರಾ, ಪಾಪಯ್ಯ ಗುತ್ತೇದಾರ ಮದಕಲ, ವೆಂಕಟೇಶ ಪಾಟೀಲ ಹಾಗು ಇನ್ನಿತರರು ಈ ವೇಳೆ ಉಪಸ್ಥಿತರಿದ್ದರು.

ಸೇಡಂ: ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗಿ ಹೋರಾಡುವ ವ್ಯಕ್ತಿತ್ವದ ನಾಯಕ ಶಶಿಲ ನಮೋಶಿಯಾಗಿದ್ದು, ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯ ನೀಡಬೇಕೆಂದು ಈಶಾನ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ, ಶಾಸಕ ರಾಜ್​ಕುಮಾರ್​ ಪಾಟೀಲ್​ ತೇಲ್ಕೂರ್​ ಕೋರಿದ್ದಾರೆ‌.

ಶಾಸಕ ರಾಜ್​ಕುಮಾರ್​ ಪಾಟೀಲ್​ ತೇಲ್ಕೂರ್ ಮನವಿ

ಸೇಡಂನ ಶ್ರೀಸಾಯಿ ಶಿಕ್ಷಣ ಸಂಸ್ಥೆಯ ಶಾಲೆಯಲ್ಲಿ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶಿಲ ನಮೋಶಿ ಪರ ಮತ ಪ್ರಚಾರ ನಡೆಸಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಶಿಕ್ಷಕರು ಅನುಭವಿಸುತ್ತಿರುವ ಸಂಬಳ ಸಮಸ್ಯೆಗೆ ಬರುವ ದಿನಗಳಲ್ಲಿ ಮುಕ್ತಿ ದೊರೆಯಲಿದೆ. ಬಿಜೆಪಿ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿದ್ದಲ್ಲಿ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಮೊದಲ ಆದ್ಯತೆಯ ಪರಿಹಾರ ನೀಡಬಹುದಾಗಿದೆ. ನಮೋಶಿ ಸ್ಥಳೀಯವಾಗಿ ಲಭ್ಯವಿರುವುದರಿಂದ ಶಿಕ್ಷಕರು ಸಹ ತ್ವರಿತವಾಗಿ ತಮ್ಮ ಸಮಸ್ಯೆಗಳನ್ನು ಗಮನಕ್ಕೆ ತರಬಹುದು ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಪರ್ವತರೆಡ್ಡಿ ಪಾಟೀಲ್​ ನಾಮವಾರ, ಹಿರಿಯ ಮುಖಂಡ ಭೀಮಶಪ್ಪ‌ ಕೋಡ್ಲಾ, ಸಂಸ್ಥೆಯ ಅಧ್ಯಕ್ಷ ಮಹೇಶ ಗುತ್ತೇದಾರ ಬಟಗೇರಾ, ಪಾಪಯ್ಯ ಗುತ್ತೇದಾರ ಮದಕಲ, ವೆಂಕಟೇಶ ಪಾಟೀಲ ಹಾಗು ಇನ್ನಿತರರು ಈ ವೇಳೆ ಉಪಸ್ಥಿತರಿದ್ದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.