ETV Bharat / state

ಕಲಬುರಗಿ.. ಹೊಟ್ಟೆತುಂಬ ಊಟ ಕೊಡಲಿಲ್ಲವೆಂದು ವೃದ್ಧನ ಹೊಡೆದು ಕೊಂದ ಮಾನಸಿಕ ಅಸ್ವಸ್ಥ!

author img

By

Published : Mar 16, 2022, 3:14 PM IST

ಅಫಜಲಪೂರ ತಾಲೂಕಿನ ಗೊಬ್ಬುರ್ ಹೊರವಲಯದಲ್ಲಿರುವ ಜಮೀನಿನಲ್ಲಿ ಸುಲೇಮಾನ್​ ಅವರು ಊಟ ಮಾಡುತ್ತಿದ್ದರು. ಈ ವೇಳೆ ಬಂದ ಮಾನಸಿಕ ಅಸ್ವಸ್ಥನೋರ್ವ ಊಟ ಕೇಳಿದ್ದಾನೆ. ಆಗ ಸುಲೇಮಾನ ಸ್ವಲ್ಪ ಊಟ ಕೊಟ್ಟಿದ್ದಾರೆ. ಆದ್ರೆ ಅಸ್ವಸ್ಥ ವ್ಯಕ್ತಿ ಹೆಚ್ಚು ಕೊಡುವಂತೆ ಕೇಳಿದ್ದಾನೆ. ಇದಕ್ಕೆ ಇಲ್ಲ ಎಂದಾಗ ಕೋಪಗೊಂಡು ಅಲ್ಲೇ ಇದ್ದ ಕಟ್ಟಿಗೆಯಿಂದ ಜೋರಾಗಿ ತಲೆಗೆ ಹೊಡೆದಿದ್ದಾನೆ. ಪರಿಣಾಮ ಸುಲೇಮಾನ್​ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Mental illness man killed an elderly person
ಕಲಬುರಗಿ

ಕಲಬುರಗಿ: ಹೊಟ್ಟೆತುಂಬ ಊಟ ಕೊಡಲಿಲ್ಲ ಎಂಬ ಕಾರಣಕ್ಕೆ ಮಾನಸಿಕ ಅಸ್ವಸ್ಥನೋರ್ವ ವೃದ್ಧನನ್ನು ಕಟ್ಟಿಗೆಯಿಂದ ಥಳಿಸಿ, ಕೊಲೆಗೈದಿರುವ ಬೆಚ್ಚಿಬೀಳಿಸುವ ಘಟನೆ ಅಫಜಲಪೂರ ತಾಲೂಕಿನ ಗೊಬ್ಬುರ್ (ಬಿ) ಗ್ರಾಮದಲ್ಲಿ ನಡೆದಿದೆ.

ವೃದ್ಧನನ್ನು ಹೊಡೆದು ಕೊಲೆಗೈದ ಮಾನಸಿಕ ಅಸ್ವಸ್ಥ
ವೃದ್ಧನನ್ನು ಹೊಡೆದು ಕೊಲೆಗೈದ ಮಾನಸಿಕ ಅಸ್ವಸ್ಥ

ಗೊಬ್ಬುರ್​​​ ಗ್ರಾಮದ ನಿವಾಸಿ ಸುಲೇಮಾನ್​ ಪಾನವಾಲೆ (65) ಮಾನಸಿಕ ಅಸ್ವಸ್ಥನಿಂದ ಥಳಿತಕ್ಕೆ ಒಳಗಾಗಿ ಕೊಲೆಯಾಗಿರುವ ವೃದ್ಧ. ಗೊಬ್ಬುರ್​​ ಹೊರವಲಯದಲ್ಲಿರುವ ಜಮೀನಿನಲ್ಲಿ ಸುಲೇಮಾನ್​ ಅವರು ಮರದಿಂದ ಹುಣಸೆ ಹಣ್ಣನ್ನು ಕಿತ್ತು, ಊಟಕ್ಕೆಂದು ಕುಳಿತಾಗ ಸ್ಥಳಕ್ಕಾಗಮಿಸಿದ ಮಾನಸಿಕ ಅಸ್ವಸ್ಥ ಊಟ ಕೇಳಿದ್ದಾನೆ. ಈ ವೇಳೆ ಒಂದಿಷ್ಟು ಊಟವನ್ನು ಸುಲೇಮಾನ್​ ನೀಡಿದ್ದಾರೆ. ಆದ್ರೆ ಅಸ್ವಸ್ಥನು ಹೆಚ್ಚಿನ ಊಟ ಕೇಳಿದಾಗ, ಸುಲೇಮಾನ್​ ಇಲ್ಲ ಅಂತ ಹೇಳಿದ್ದಾರೆ.

ಇದನ್ನೂ ಓದಿ: ಕುಡಿದ ನಶೆಯಲ್ಲಿ ಅಟ್ಟಾಡಿಸಿ ಆಟೋ ಚಾಲಕನ ಕೊಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಇದರಿಂದ ಕುಪಿತಗೊಂಡ ಮಾನಸಿಕ ಅಸ್ವಸ್ಥ ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯಿಂದ ಜೋರಾಗಿ ತೆಲೆಗೆ ಹೊಡೆದಿದ್ದಾನೆ. ತಲೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಸುಲೇಮಾನ್​ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಈ ಕುರಿತು ದೇವಲ್ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲಬುರಗಿ: ಹೊಟ್ಟೆತುಂಬ ಊಟ ಕೊಡಲಿಲ್ಲ ಎಂಬ ಕಾರಣಕ್ಕೆ ಮಾನಸಿಕ ಅಸ್ವಸ್ಥನೋರ್ವ ವೃದ್ಧನನ್ನು ಕಟ್ಟಿಗೆಯಿಂದ ಥಳಿಸಿ, ಕೊಲೆಗೈದಿರುವ ಬೆಚ್ಚಿಬೀಳಿಸುವ ಘಟನೆ ಅಫಜಲಪೂರ ತಾಲೂಕಿನ ಗೊಬ್ಬುರ್ (ಬಿ) ಗ್ರಾಮದಲ್ಲಿ ನಡೆದಿದೆ.

ವೃದ್ಧನನ್ನು ಹೊಡೆದು ಕೊಲೆಗೈದ ಮಾನಸಿಕ ಅಸ್ವಸ್ಥ
ವೃದ್ಧನನ್ನು ಹೊಡೆದು ಕೊಲೆಗೈದ ಮಾನಸಿಕ ಅಸ್ವಸ್ಥ

ಗೊಬ್ಬುರ್​​​ ಗ್ರಾಮದ ನಿವಾಸಿ ಸುಲೇಮಾನ್​ ಪಾನವಾಲೆ (65) ಮಾನಸಿಕ ಅಸ್ವಸ್ಥನಿಂದ ಥಳಿತಕ್ಕೆ ಒಳಗಾಗಿ ಕೊಲೆಯಾಗಿರುವ ವೃದ್ಧ. ಗೊಬ್ಬುರ್​​ ಹೊರವಲಯದಲ್ಲಿರುವ ಜಮೀನಿನಲ್ಲಿ ಸುಲೇಮಾನ್​ ಅವರು ಮರದಿಂದ ಹುಣಸೆ ಹಣ್ಣನ್ನು ಕಿತ್ತು, ಊಟಕ್ಕೆಂದು ಕುಳಿತಾಗ ಸ್ಥಳಕ್ಕಾಗಮಿಸಿದ ಮಾನಸಿಕ ಅಸ್ವಸ್ಥ ಊಟ ಕೇಳಿದ್ದಾನೆ. ಈ ವೇಳೆ ಒಂದಿಷ್ಟು ಊಟವನ್ನು ಸುಲೇಮಾನ್​ ನೀಡಿದ್ದಾರೆ. ಆದ್ರೆ ಅಸ್ವಸ್ಥನು ಹೆಚ್ಚಿನ ಊಟ ಕೇಳಿದಾಗ, ಸುಲೇಮಾನ್​ ಇಲ್ಲ ಅಂತ ಹೇಳಿದ್ದಾರೆ.

ಇದನ್ನೂ ಓದಿ: ಕುಡಿದ ನಶೆಯಲ್ಲಿ ಅಟ್ಟಾಡಿಸಿ ಆಟೋ ಚಾಲಕನ ಕೊಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಇದರಿಂದ ಕುಪಿತಗೊಂಡ ಮಾನಸಿಕ ಅಸ್ವಸ್ಥ ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯಿಂದ ಜೋರಾಗಿ ತೆಲೆಗೆ ಹೊಡೆದಿದ್ದಾನೆ. ತಲೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಸುಲೇಮಾನ್​ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಈ ಕುರಿತು ದೇವಲ್ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.