ETV Bharat / state

ಶಾಲೆಗೆ ಹೊರಟ ಬಾಲಕ ಬೆಳಗ್ಗೆ ಅಪಹರಣ, ಸಂಜೆಯೊಳಗೆ ಪೊಲೀಸರಿಂದ ರಕ್ಷಣೆ.. ಹೇಗಿತ್ತು ಗೊತ್ತಾ ಖಾಕಿ ಪಡೆ ಕಾರ್ಯಾಚರಣೆ!?

ಶಾಲೆಗೆ ಹೊರಟಿದ್ದ ಬಾಲಕನನ್ನು ಅಪಹರಿಸಿದ ದುಷ್ಕರ್ಮಿಗಳು.. ಹಣಕ್ಕಾಗಿ ಅಪಹರಣಕಾರರಿಂದ ಬಾಲಕನ ತಂದೆಗೆ ಕರೆ.. ಪೊಲೀಸರಿಂದ ಬಾಲಕನ ರಕ್ಷಣೆ, ಜನರಿಂದ ಮೆಚ್ಚುಗೆ..

author img

By

Published : Jan 5, 2023, 1:06 PM IST

Updated : Jan 5, 2023, 2:14 PM IST

Kalaburagi police rescued to Kidnap boy  police rescued to Kidnap boy within few hours  Kalaburagi police rescue operation  Kidnap case in Kalaburagi  ಶಾಲೆಗೆ ಹೊರಟ ಬಾಲಕ ಬೆಳಗ್ಗೆ ಅಪಹರಣ  ಸಂಜೆಯೊಳಗೆ ಪೊಲೀಸರಿಂದ ರಕ್ಷಣೆ  ಖಾಕಿ ಪಡೆ ಕಾರ್ಯಾಚರಣೆ  ಶಾಲೆಗೆ ಹೊರಟಿದ್ದ ಬಾಲಕನನ್ನು ಅಪಹರಿಸಿದ ದುಷ್ಕರ್ಮಿಗಳು  ಹಣಕ್ಕಾಗಿ ಅಪಹರಣಕಾರರಿಂದ ಬಾಲಕ ತಂದೆಗೆ ಕರೆ  ಪೊಲೀಸರಿಂದ ಬಾಲಕನ ರಕ್ಷಣೆ  ಶಾಲೆಗೆ ಹೋಗುತ್ತಿದ್ದ ಬಾಲಕ ಅಪಹರಣ  ದೊಡ್ಡ ಮೊತ್ತಕ್ಕೆ ಬೇಡಿಕೆಯಿಟ್ಟ ಅಪಹರಣಕಾರರು  ಪೊಲೀಸರಿಗೆ ಮೊರೆಹೋದ ಬಾಲಕನ ತಂದೆ  ಪೊಲೀಸರ ಕಾರ್ಯಾಚರಣೆ ಅರಿತ ದುಷ್ಕರ್ಮಿಗಳು  ಪೊಲೀಸರ ಕಾರ್ಯಕ್ಕೆ ಜನರಿಂದ ಮೆಚ್ಚುಗೆ
ಶಾಲೆಗೆ ಹೊರಟ ಬಾಲಕ ಬೆಳಗ್ಗೆ ಅಪಹರಣ
ಅಪಹರಣದ ಬಗ್ಗೆ ಮಾಹಿತಿ ನೀಡಿದ ಬಾಲಕನ ತಂದೆ

ಕಲಬುರಗಿ: ಶಾಲೆಗೆ ಹೊರಟ ಬಾಲಕನನ್ನು ಮನೆ ಎದುರಿನಿಂದಲೇ ಕಿಡ್ನಾಪ್​ ಮಾಡಿದ ಪ್ರಕರಣವೊಂದನ್ನು ಪೊಲೀಸರು ಸಿನಿಮಾ ಸ್ಟೈಲ್‌ಲ್ಲಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬೆಳಗ್ಗೆ 8 ಗಂಟೆಗೆ ಅಪಹರಣವಾಗಿದ್ದ ಬಾಲಕನನ್ನು ಪೊಲೀಸರು ಸಂಜೆ 4 ಗಂಟೆ ವೇಳೆಯೊಳಗೆ ರಕ್ಷಣೆ ಮಾಡಿದ್ದಾರೆ. ಅಪಹರಣವಾಗಿರುವ ವಿಷಯ ತಿಳಿಯುತ್ತಲೇ ಕಾರ್ಯಾಚರಣೆಗೆ ಇಳಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ರಕ್ಷಣೆ ಮಾಡಿರುವುದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಶಾಲೆಗೆ ಹೋಗುತ್ತಿದ್ದ ಬಾಲಕ ಅಪಹರಣ: ಕಲಬುರಗಿ ನಗರದ ಸಿದ್ದೇಶ್ವರ ಕಾಲೋನಿ ನಿವಾಸಿ ಗುರುನಾಥ್ ರಾಠೋಡ್ ಎಂಬುವರ ಹತ್ತು ವರ್ಷದ ಮಗ ಎಂದಿನಂತೆ 8 ಗಂಟೆ ಸುಮಾರಿಗೆ ಶಾಲೆಗೆ ಹೋಗಲು ಬಸ್​ಗಾಗಿ ಮನೆಯ ಗೇಟ್ ಬಳಿ ಕಾಯುತ್ತಿದ್ದ. ಈ ವೇಳೆ ದುಷ್ಕರ್ಮಿಗಳು ಇಎಸ್ಐ ಆಸ್ಪತ್ರೆಯ ವಿಳಾಸ ಕೇಳುವ ನೇಪದಲ್ಲಿ ಮಾತನಾಡಿಸಿ ಆಟೋದಲ್ಲಿ ಅಪಹರಿಸಿಕೊಂಡು ಹೋಗಿದ್ದರು.

ದೊಡ್ಡ ಮೊತ್ತಕ್ಕೆ ಬೇಡಿಕೆಯಿಟ್ಟ ಅಪಹರಣಕಾರರು​: ಕಮಲಾಪುರ ತಾಲೂಕಿನ ನಾಗೂರು ಗ್ರಾಮದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಗುರುನಾಥ ಆರ್ಥಿಕವಾಗಿ ಸದೃಡವಾಗಿದ್ದಾರೆ. ಇವರಿಗೆ ಮೂರು ಜನ ಮಕ್ಕಳಿದ್ದು, ಹಿರಿಯ ಮಗ ಸುದರ್ಶನ ನಗರದ ಖಾಸಗಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾನೆ. ಗುರುನಾಥ ಕುಟುಂಬದವರ ಬಗ್ಗೆ ಮಾಹಿತಿ ತಿಳಿದುಕೊಂಡೇ ದುಷ್ಕರ್ಮಿಗಳು ಅಪಹರಿಸಿದ್ದಾರೆ. ಗುರುನಾಥಗೆ ಕರೆ ಮಾಡಿ ಹತ್ತು ಲಕ್ಷ ಹಣ ತಯಾರಿ ಮಾಡಿಕೋ.. ಒಂದು ಗಂಟೆ ನಂತರ ಮತ್ತೆ ಕರೆ ಮಾಡ್ತಿನಿ.. ಪೊಲೀಸರಿಗೆ ಹೇಳಿದರೆ ನಿನ್ನ ಮಗನ ಹೆಣ ನೋಡಬೇಕಾಗುತ್ತೆ ಎಂದು ಸಿನಿಮೀಯ ರೀತಿಯಲ್ಲಿ ಬೆದರಿಕೆ ಹಾಕಿದ್ದಾರೆ.

ಪೊಲೀಸರಿಗೆ ಮೊರೆ ಹೋದ ಬಾಲಕನ ತಂದೆ: ಮಗನ ಅಪಹರಣದಿಂದ ಗೊಂದಲಕ್ಕೆ ಸಿಲುಕಿದ ಗುರುನಾಥ ಹಾಗೂ ಕುಟುಂಬಸ್ಥರು ದಿಕ್ಕು ತೋಚದೇ ಕೊನೆಗೆ ವಿಶ್ವವಿದ್ಯಾಲಯ ಠಾಣೆಯ ಇನ್ಸ್​​ಪೆಕ್ಟರ್​​​ ಅರುಣ್​ಕುಮಾರ್​ ಮುರಗುಡಿ ಅವರ ಗಮನಕ್ಕೆ ತಂದಿದ್ದಾರೆ. ಅರುಣ ಕುಮಾರ್​ ತಡಮಾಡದೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತಮ್ಮ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಗೆ ಇಳಿದಿದ್ದರು. ಸಿವಿಲ್ ಡ್ರೆಸ್​ನಲ್ಲಿ ಅರುಣಕುಮಾರ ಮತ್ತು ಪೊಲೀಸ್​ ಸಿಬ್ಬಂದಿ ಖಾಸಗಿ ವಾಹನಗಳಲ್ಲಿ ಇಡೀ ಕಲಬುರಗಿ ನಗರವನ್ನು ಒಂದು ರೌಂಡ್​ ಹಾಕಿದರು.

ಪದೇ ಪದೆ ಸ್ಥಳ ಬದಲಿಸುತ್ತಿದ್ದ ಕಿಡ್ನ್ಯಾಪರ್ಸ್: ಬಾಲಕನ ತಂದೆಯ ಜೊತೆ ಸಂಪರ್ಕದಲ್ಲಿದ್ದ ಖಾಕಿ ಪಡೆ ಕಿಡ್ನಾಪರ್ಸ್ ಕರೆಗಾಗಿ ಕಾಯುತ್ತಿದ್ದರು.‌ ಕರೆ ಬರುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ಗುರುನಾಥ ಅವರನ್ನು ಮುಂದೆ ಬಿಟ್ಟು ಕಾರ್ಯಾಚರಣೆ ಆರಂಭಿಸಿದ್ದರು. ಮೊದಲಿಗೆ ಬುದ್ದವಿಹಾರ ಕ್ರಾಸ್ ಬರುವಂತೆ ಹೇಳಿದಾಗ ಗುರುನಾಥ ಅಲ್ಲಿಗೆ ಹೋಗಿದ್ದಾರೆ. ನಂತರ ಅಲ್ಲಿ ಬೇಡ, ಮುಂದೆ ಬ್ರಹ್ಮಕುಮಾರಿ ಆಶ್ರಮ ಗೇಟ್ ಬಳಿ ಬಾ ಎಂದು ಕರೆದಿದ್ದಾರೆ. ಅಲ್ಲಿಗೆ ಹೋದಾಗ ಮತ್ತೆ ಕರೆಮಾಡಿ ನಿನ್ನ ಜೊತೆ ಯಾರನ್ನು ಕರೆ ತಂದಿದ್ದಿಯಾ ಎಂದು ಪ್ರಶ್ನೆ‌ ಮಾಡಿದ್ದಾರೆ. ನನ್ನ ಜೊತೆ ಯಾರೂ ಇಲ್ಲ ಎಂದು ಹೇಳಿದಾಗ, ಅಲ್ಲಿ ಬೇಡಾ ಮುಂದೆ ಇರುವ ತಾಂಡಾ ಕ್ರಾಸ್‌ಗೆ ಬರುವಂತೆ ಸೂಚಿಸಿದ್ದಾರೆ.

ಪೊಲೀಸರ ಕಾರ್ಯಾಚರಣೆ ಅರಿತ ದುಷ್ಕರ್ಮಿಗಳು: ಪೊಲೀಸರು ಕಾರ್ಯಾಚರಣೆಗೆ ಇಳಿದಿರುವುದು ದುಷ್ಕರ್ಮಿಗಳಿಗೆ ಗೊತ್ತಾಗಿದೆ. ತಮ್ಮ ಹಿಂದೆ ಬಿದ್ದಿರುವ ಸುಳಿವು ಅರಿತ ಅಪಹರಣಕಾರರು ಪಾಳಾ ಗ್ರಾಮದ ಹೊರವಲಯದಲ್ಲಿರುವ ನಿರ್ಜನ ಪ್ರದೇಶದಲ್ಲಿಟ್ಟಿದ್ದ ಬಾಲಕನನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.‌ ಇತ್ತ ಬಾಲಕ ಹೊಲದಲ್ಲಿ ಶಾಲಾ ಡ್ರೇಸ್ ಮೇಲೆ ನಡೆದುಕೊಂಡು ಹೋಗುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಬಳಿಕ ಬಾಲಕನನ್ನು ವಿಚಾರಿಸಿ ಆತನ ತಂದೆ ನಂಬರ್​ ಪಡೆದು ಗುರುನಾಥಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಹೋದ ಪೊಲೀಸರು, ಬಾಲಕನನ್ನು ರಕ್ಷಿಸಿ ಹೆತ್ತವರಿಗೆ ಹಸ್ತಾಂತರಿಸಿದ್ದಾರೆ.

ವೃದ್ಧನ ನಂಬರ್​ನಿಂದ ಕರೆ: ಅಪಹರಣಕಾರರು ಬಳಸಿದ ಮೊಬೈಲ್ ಸಂಖ್ಯೆ ವಿವರಣೆ ಪರಿಶೀಲಿಸಿದ ಪೊಲೀಸರಿಗೆ ಈ ನಂಬರ್​ ವೃದ್ಧರೊಬ್ಬರಿಗೆ ಸೇರಿದ್ದು ಎಂಬುದು ಗೊತ್ತಾಗಿದೆ. ಇತ್ತೀಚಿಗೆ ವೃದ್ಧರೊಬ್ಬರು ಒಂದು ನಂಬರ್‌ಗೆ ಡೈಲ್ ಮಾಡಿಕೊಡುವಂತೆ ಹೇಳಿದಾಗ, ಕದೀಮರು ಅವರ ಮೊಬೈಲ್​ನಿಂದ ಸಿಮ್ ತೆಗೆದುಕೊಂಡಿರುವುದೂ ಇದೇ ವೇಳೆ ಪತ್ತೆಯಾಗಿದೆ. ಸದ್ಯ ಬಾಲಕ ಕ್ಷೇಮವಾಗಿ ಮನೆಗೆ ತಲುಪಿದ್ದಾನೆ. ಆದರೆ, ಆರೋಪಿಗಳು ಯಾರು ಅನ್ನೋದು ಇನ್ನೂ ಪತ್ತೆಯಾಗಿಲ್ಲ.

ಪೊಲೀಸರ ಕಾರ್ಯಕ್ಕೆ ಜನರಿಂದ ಮೆಚ್ಚುಗೆ: ಮೇಲ್ನೋಟಕ್ಕೆ ಗುರುನಾಥ ಕುಟುಂಬದ ಬಗ್ಗೆ ಸಂಪೂರ್ಣ ಮಾಹಿತಿ ಇರುವವರೇ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೊಬೈಲ್ ಕರೆ ಮಾಡಿದಾಗ ಒಂದು ಬಾರಿ ಕನ್ನಡ ಮತ್ತೊಮ್ಮೆ ಲಂಬಾಣಿ ಭಾಷೆಯಲ್ಲಿ ಮಾತನಾಡಿದ್ದಾರೆ. ಆರೋಪಿಗಳ ಹೆಡೆಮೂರಿ ಕಟ್ಟಲು ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಪೊಲೀಸರ ಸಿನಿಮಿಯ ರೀತಿಯ ತ್ವರಿತ ಕಾರ್ಯಾಚರಣೆಯಿಂದಾಗಿ ಬಾಲಕ ಮನೆ ಸೇರಿದ್ದಾನೆ.

ಪೊಲೀಸ್​ ಇಲಾಖೆಗೆ ನನ್ನ ಧನ್ಯವಾದಗಳು: ನನ್ನ ಮಗನ ಕಿಡ್ನ್ಯಾಪ್​ ಬಳಿಕ ಅವನಿಂದ ನನ್ನ ನಂಬರ್​ ಪಡೆದು ದುಷ್ಕರ್ಮಿಗಳು ನನಗೆ ದೂರವಾಣಿ ಕರೆ ಮಾಡಿದರು. ದುಷ್ಕರ್ಮಿಗಳಿಬ್ಬರು ನನ್ನ ಮಗನನ್ನು ಕಾಡಿನಲ್ಲಿಟ್ಟಿದ್ದರು. ಪೊಲೀಸರು ಬಹಳ ಶ್ರಮವಹಿಸಿ ನನ್ನ ಮಗನನ್ನು ಹುಡುಕಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ನನ್ನ ಮಗನನ್ನು ಕಂಡ ಕೂಡಲೇ ನಾನು ಕಮಿಷನರ್​ ಸರ್​ಗೆ ಫೋನ್​ ಮಾಡಿ ಮಾಹಿತಿ ನೀಡಿದೆ. ಬಳಿಕ ಡಿಸಿಪಿ ಸರ್​ಗೂ ಕರೆ ಮಾಡಿ ಹುಡುಗ ದೊರೆತಿರುವುದರ ಬಗ್ಗೆ ಹೇಳಿದೆ. ಮಾಹಿತಿ ತಿಳಿದ ಕೂಡಲೇ ಡಿಸಿಪಿ ಘಟನಾಸ್ಥಳಕ್ಕೆ ದೌಡಾಯಿಸಿದರು. ಸರ್ಕಲ್​ ಇನ್ಸ್​ಪೆಕ್ಟರ್​ ಬೆಳಗ್ಗೆಯಿಂದ ಸಂಜೆಯವರೆಗೆ ನಮ್ಮ ಜೊತೆನೇ ಇದ್ದು ನಮಗೆ ಧೈರ್ಯ ತುಂಬಿದರು. ಇಡೀ ಪೊಲೀಸ್​ ಇಲಾಖೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಬಾಲಕ ತಂದೆ ಗುರುನಾಥ ಪೊಲೀಸರ ಕಾರ್ಯಾಚರಣೆಗೆ ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಂಡರು.

ನಗರದಲ್ಲಿ ಪೊಲೀಸರ ಕಾರ್ಯಕ್ಕೆ ಜನರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ಘಟನೆ ಕುರಿತು ವಿಶ್ವವಿದ್ಯಾಲಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಓದಿ: ಬೆಂಗಳೂರು ಯುವಕನ ಶವಕ್ಕಾಗಿ ಪೊಲೀಸರಿಂದ ಚಾರ್ಮಾಡಿ ಘಾಟಿಯಲ್ಲಿ ಶೋಧ ಕಾರ್ಯ

ಅಪಹರಣದ ಬಗ್ಗೆ ಮಾಹಿತಿ ನೀಡಿದ ಬಾಲಕನ ತಂದೆ

ಕಲಬುರಗಿ: ಶಾಲೆಗೆ ಹೊರಟ ಬಾಲಕನನ್ನು ಮನೆ ಎದುರಿನಿಂದಲೇ ಕಿಡ್ನಾಪ್​ ಮಾಡಿದ ಪ್ರಕರಣವೊಂದನ್ನು ಪೊಲೀಸರು ಸಿನಿಮಾ ಸ್ಟೈಲ್‌ಲ್ಲಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬೆಳಗ್ಗೆ 8 ಗಂಟೆಗೆ ಅಪಹರಣವಾಗಿದ್ದ ಬಾಲಕನನ್ನು ಪೊಲೀಸರು ಸಂಜೆ 4 ಗಂಟೆ ವೇಳೆಯೊಳಗೆ ರಕ್ಷಣೆ ಮಾಡಿದ್ದಾರೆ. ಅಪಹರಣವಾಗಿರುವ ವಿಷಯ ತಿಳಿಯುತ್ತಲೇ ಕಾರ್ಯಾಚರಣೆಗೆ ಇಳಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ರಕ್ಷಣೆ ಮಾಡಿರುವುದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಶಾಲೆಗೆ ಹೋಗುತ್ತಿದ್ದ ಬಾಲಕ ಅಪಹರಣ: ಕಲಬುರಗಿ ನಗರದ ಸಿದ್ದೇಶ್ವರ ಕಾಲೋನಿ ನಿವಾಸಿ ಗುರುನಾಥ್ ರಾಠೋಡ್ ಎಂಬುವರ ಹತ್ತು ವರ್ಷದ ಮಗ ಎಂದಿನಂತೆ 8 ಗಂಟೆ ಸುಮಾರಿಗೆ ಶಾಲೆಗೆ ಹೋಗಲು ಬಸ್​ಗಾಗಿ ಮನೆಯ ಗೇಟ್ ಬಳಿ ಕಾಯುತ್ತಿದ್ದ. ಈ ವೇಳೆ ದುಷ್ಕರ್ಮಿಗಳು ಇಎಸ್ಐ ಆಸ್ಪತ್ರೆಯ ವಿಳಾಸ ಕೇಳುವ ನೇಪದಲ್ಲಿ ಮಾತನಾಡಿಸಿ ಆಟೋದಲ್ಲಿ ಅಪಹರಿಸಿಕೊಂಡು ಹೋಗಿದ್ದರು.

ದೊಡ್ಡ ಮೊತ್ತಕ್ಕೆ ಬೇಡಿಕೆಯಿಟ್ಟ ಅಪಹರಣಕಾರರು​: ಕಮಲಾಪುರ ತಾಲೂಕಿನ ನಾಗೂರು ಗ್ರಾಮದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಗುರುನಾಥ ಆರ್ಥಿಕವಾಗಿ ಸದೃಡವಾಗಿದ್ದಾರೆ. ಇವರಿಗೆ ಮೂರು ಜನ ಮಕ್ಕಳಿದ್ದು, ಹಿರಿಯ ಮಗ ಸುದರ್ಶನ ನಗರದ ಖಾಸಗಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾನೆ. ಗುರುನಾಥ ಕುಟುಂಬದವರ ಬಗ್ಗೆ ಮಾಹಿತಿ ತಿಳಿದುಕೊಂಡೇ ದುಷ್ಕರ್ಮಿಗಳು ಅಪಹರಿಸಿದ್ದಾರೆ. ಗುರುನಾಥಗೆ ಕರೆ ಮಾಡಿ ಹತ್ತು ಲಕ್ಷ ಹಣ ತಯಾರಿ ಮಾಡಿಕೋ.. ಒಂದು ಗಂಟೆ ನಂತರ ಮತ್ತೆ ಕರೆ ಮಾಡ್ತಿನಿ.. ಪೊಲೀಸರಿಗೆ ಹೇಳಿದರೆ ನಿನ್ನ ಮಗನ ಹೆಣ ನೋಡಬೇಕಾಗುತ್ತೆ ಎಂದು ಸಿನಿಮೀಯ ರೀತಿಯಲ್ಲಿ ಬೆದರಿಕೆ ಹಾಕಿದ್ದಾರೆ.

ಪೊಲೀಸರಿಗೆ ಮೊರೆ ಹೋದ ಬಾಲಕನ ತಂದೆ: ಮಗನ ಅಪಹರಣದಿಂದ ಗೊಂದಲಕ್ಕೆ ಸಿಲುಕಿದ ಗುರುನಾಥ ಹಾಗೂ ಕುಟುಂಬಸ್ಥರು ದಿಕ್ಕು ತೋಚದೇ ಕೊನೆಗೆ ವಿಶ್ವವಿದ್ಯಾಲಯ ಠಾಣೆಯ ಇನ್ಸ್​​ಪೆಕ್ಟರ್​​​ ಅರುಣ್​ಕುಮಾರ್​ ಮುರಗುಡಿ ಅವರ ಗಮನಕ್ಕೆ ತಂದಿದ್ದಾರೆ. ಅರುಣ ಕುಮಾರ್​ ತಡಮಾಡದೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತಮ್ಮ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಗೆ ಇಳಿದಿದ್ದರು. ಸಿವಿಲ್ ಡ್ರೆಸ್​ನಲ್ಲಿ ಅರುಣಕುಮಾರ ಮತ್ತು ಪೊಲೀಸ್​ ಸಿಬ್ಬಂದಿ ಖಾಸಗಿ ವಾಹನಗಳಲ್ಲಿ ಇಡೀ ಕಲಬುರಗಿ ನಗರವನ್ನು ಒಂದು ರೌಂಡ್​ ಹಾಕಿದರು.

ಪದೇ ಪದೆ ಸ್ಥಳ ಬದಲಿಸುತ್ತಿದ್ದ ಕಿಡ್ನ್ಯಾಪರ್ಸ್: ಬಾಲಕನ ತಂದೆಯ ಜೊತೆ ಸಂಪರ್ಕದಲ್ಲಿದ್ದ ಖಾಕಿ ಪಡೆ ಕಿಡ್ನಾಪರ್ಸ್ ಕರೆಗಾಗಿ ಕಾಯುತ್ತಿದ್ದರು.‌ ಕರೆ ಬರುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ಗುರುನಾಥ ಅವರನ್ನು ಮುಂದೆ ಬಿಟ್ಟು ಕಾರ್ಯಾಚರಣೆ ಆರಂಭಿಸಿದ್ದರು. ಮೊದಲಿಗೆ ಬುದ್ದವಿಹಾರ ಕ್ರಾಸ್ ಬರುವಂತೆ ಹೇಳಿದಾಗ ಗುರುನಾಥ ಅಲ್ಲಿಗೆ ಹೋಗಿದ್ದಾರೆ. ನಂತರ ಅಲ್ಲಿ ಬೇಡ, ಮುಂದೆ ಬ್ರಹ್ಮಕುಮಾರಿ ಆಶ್ರಮ ಗೇಟ್ ಬಳಿ ಬಾ ಎಂದು ಕರೆದಿದ್ದಾರೆ. ಅಲ್ಲಿಗೆ ಹೋದಾಗ ಮತ್ತೆ ಕರೆಮಾಡಿ ನಿನ್ನ ಜೊತೆ ಯಾರನ್ನು ಕರೆ ತಂದಿದ್ದಿಯಾ ಎಂದು ಪ್ರಶ್ನೆ‌ ಮಾಡಿದ್ದಾರೆ. ನನ್ನ ಜೊತೆ ಯಾರೂ ಇಲ್ಲ ಎಂದು ಹೇಳಿದಾಗ, ಅಲ್ಲಿ ಬೇಡಾ ಮುಂದೆ ಇರುವ ತಾಂಡಾ ಕ್ರಾಸ್‌ಗೆ ಬರುವಂತೆ ಸೂಚಿಸಿದ್ದಾರೆ.

ಪೊಲೀಸರ ಕಾರ್ಯಾಚರಣೆ ಅರಿತ ದುಷ್ಕರ್ಮಿಗಳು: ಪೊಲೀಸರು ಕಾರ್ಯಾಚರಣೆಗೆ ಇಳಿದಿರುವುದು ದುಷ್ಕರ್ಮಿಗಳಿಗೆ ಗೊತ್ತಾಗಿದೆ. ತಮ್ಮ ಹಿಂದೆ ಬಿದ್ದಿರುವ ಸುಳಿವು ಅರಿತ ಅಪಹರಣಕಾರರು ಪಾಳಾ ಗ್ರಾಮದ ಹೊರವಲಯದಲ್ಲಿರುವ ನಿರ್ಜನ ಪ್ರದೇಶದಲ್ಲಿಟ್ಟಿದ್ದ ಬಾಲಕನನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.‌ ಇತ್ತ ಬಾಲಕ ಹೊಲದಲ್ಲಿ ಶಾಲಾ ಡ್ರೇಸ್ ಮೇಲೆ ನಡೆದುಕೊಂಡು ಹೋಗುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಬಳಿಕ ಬಾಲಕನನ್ನು ವಿಚಾರಿಸಿ ಆತನ ತಂದೆ ನಂಬರ್​ ಪಡೆದು ಗುರುನಾಥಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಹೋದ ಪೊಲೀಸರು, ಬಾಲಕನನ್ನು ರಕ್ಷಿಸಿ ಹೆತ್ತವರಿಗೆ ಹಸ್ತಾಂತರಿಸಿದ್ದಾರೆ.

ವೃದ್ಧನ ನಂಬರ್​ನಿಂದ ಕರೆ: ಅಪಹರಣಕಾರರು ಬಳಸಿದ ಮೊಬೈಲ್ ಸಂಖ್ಯೆ ವಿವರಣೆ ಪರಿಶೀಲಿಸಿದ ಪೊಲೀಸರಿಗೆ ಈ ನಂಬರ್​ ವೃದ್ಧರೊಬ್ಬರಿಗೆ ಸೇರಿದ್ದು ಎಂಬುದು ಗೊತ್ತಾಗಿದೆ. ಇತ್ತೀಚಿಗೆ ವೃದ್ಧರೊಬ್ಬರು ಒಂದು ನಂಬರ್‌ಗೆ ಡೈಲ್ ಮಾಡಿಕೊಡುವಂತೆ ಹೇಳಿದಾಗ, ಕದೀಮರು ಅವರ ಮೊಬೈಲ್​ನಿಂದ ಸಿಮ್ ತೆಗೆದುಕೊಂಡಿರುವುದೂ ಇದೇ ವೇಳೆ ಪತ್ತೆಯಾಗಿದೆ. ಸದ್ಯ ಬಾಲಕ ಕ್ಷೇಮವಾಗಿ ಮನೆಗೆ ತಲುಪಿದ್ದಾನೆ. ಆದರೆ, ಆರೋಪಿಗಳು ಯಾರು ಅನ್ನೋದು ಇನ್ನೂ ಪತ್ತೆಯಾಗಿಲ್ಲ.

ಪೊಲೀಸರ ಕಾರ್ಯಕ್ಕೆ ಜನರಿಂದ ಮೆಚ್ಚುಗೆ: ಮೇಲ್ನೋಟಕ್ಕೆ ಗುರುನಾಥ ಕುಟುಂಬದ ಬಗ್ಗೆ ಸಂಪೂರ್ಣ ಮಾಹಿತಿ ಇರುವವರೇ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೊಬೈಲ್ ಕರೆ ಮಾಡಿದಾಗ ಒಂದು ಬಾರಿ ಕನ್ನಡ ಮತ್ತೊಮ್ಮೆ ಲಂಬಾಣಿ ಭಾಷೆಯಲ್ಲಿ ಮಾತನಾಡಿದ್ದಾರೆ. ಆರೋಪಿಗಳ ಹೆಡೆಮೂರಿ ಕಟ್ಟಲು ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಪೊಲೀಸರ ಸಿನಿಮಿಯ ರೀತಿಯ ತ್ವರಿತ ಕಾರ್ಯಾಚರಣೆಯಿಂದಾಗಿ ಬಾಲಕ ಮನೆ ಸೇರಿದ್ದಾನೆ.

ಪೊಲೀಸ್​ ಇಲಾಖೆಗೆ ನನ್ನ ಧನ್ಯವಾದಗಳು: ನನ್ನ ಮಗನ ಕಿಡ್ನ್ಯಾಪ್​ ಬಳಿಕ ಅವನಿಂದ ನನ್ನ ನಂಬರ್​ ಪಡೆದು ದುಷ್ಕರ್ಮಿಗಳು ನನಗೆ ದೂರವಾಣಿ ಕರೆ ಮಾಡಿದರು. ದುಷ್ಕರ್ಮಿಗಳಿಬ್ಬರು ನನ್ನ ಮಗನನ್ನು ಕಾಡಿನಲ್ಲಿಟ್ಟಿದ್ದರು. ಪೊಲೀಸರು ಬಹಳ ಶ್ರಮವಹಿಸಿ ನನ್ನ ಮಗನನ್ನು ಹುಡುಕಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ನನ್ನ ಮಗನನ್ನು ಕಂಡ ಕೂಡಲೇ ನಾನು ಕಮಿಷನರ್​ ಸರ್​ಗೆ ಫೋನ್​ ಮಾಡಿ ಮಾಹಿತಿ ನೀಡಿದೆ. ಬಳಿಕ ಡಿಸಿಪಿ ಸರ್​ಗೂ ಕರೆ ಮಾಡಿ ಹುಡುಗ ದೊರೆತಿರುವುದರ ಬಗ್ಗೆ ಹೇಳಿದೆ. ಮಾಹಿತಿ ತಿಳಿದ ಕೂಡಲೇ ಡಿಸಿಪಿ ಘಟನಾಸ್ಥಳಕ್ಕೆ ದೌಡಾಯಿಸಿದರು. ಸರ್ಕಲ್​ ಇನ್ಸ್​ಪೆಕ್ಟರ್​ ಬೆಳಗ್ಗೆಯಿಂದ ಸಂಜೆಯವರೆಗೆ ನಮ್ಮ ಜೊತೆನೇ ಇದ್ದು ನಮಗೆ ಧೈರ್ಯ ತುಂಬಿದರು. ಇಡೀ ಪೊಲೀಸ್​ ಇಲಾಖೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಬಾಲಕ ತಂದೆ ಗುರುನಾಥ ಪೊಲೀಸರ ಕಾರ್ಯಾಚರಣೆಗೆ ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಂಡರು.

ನಗರದಲ್ಲಿ ಪೊಲೀಸರ ಕಾರ್ಯಕ್ಕೆ ಜನರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ಘಟನೆ ಕುರಿತು ವಿಶ್ವವಿದ್ಯಾಲಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಓದಿ: ಬೆಂಗಳೂರು ಯುವಕನ ಶವಕ್ಕಾಗಿ ಪೊಲೀಸರಿಂದ ಚಾರ್ಮಾಡಿ ಘಾಟಿಯಲ್ಲಿ ಶೋಧ ಕಾರ್ಯ

Last Updated : Jan 5, 2023, 2:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.