ETV Bharat / state

ಗುಲ್ಬರ್ಗಾ ವಿ.ವಿ. ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ನವೆಂಬರ್ 13ಕ್ಕೆ ಪ್ರಶಸ್ತಿ ಪ್ರದಾನ

author img

By

Published : Nov 8, 2019, 7:12 PM IST

ಗುಲ್ಬರ್ಗಾ ವಿಶ್ವವಿದ್ಯಾಲಯ ವಿವಿಧ ಕ್ಷೇತ್ರಗಳ ಸಾಧಕರಿಗೆ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ.

ಗುಲ್ಬರ್ಗಾ ವಿ.ವಿ. ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ವಿವಿಧ ಕ್ಷೇತ್ರಗಳಿಗೆ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ. ದಿ. ಜಯತೀರ್ಥ ರಾಜಪುರೋಹಿತ ರಾಜ್ಯಮಟ್ಟದ ಕಥಾ ಸ್ಪರ್ಧೆಯ ಪ್ರಶಸ್ತಿ ಮತ್ತು ವಿವಿಧ ವಿಭಾಗಗಳ ಪ್ರಶಸ್ತಿಯನ್ನು ಪ್ರಸಾರಾಂಗದ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಪ್ರಕಟಿಸಿದ್ದಾರೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ಪ್ರೊ.ಎಚ್.ಟಿ.ಪೋತೆ, ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದ ನಂತರ ದಿ. ಹಾ.ಮ.ನಾಯಕ್ ಕುಲಪತಿಗಳಿದ್ದ ವೇಳೆ ಹಿಂದುಳಿದ ಭಾಗದ ಲೇಖಕರನ್ನು ಪ್ರೋತ್ಸಾಹಿಸಲೆಂದು ರಾಜ್ಯೋತ್ಸವ ಪ್ರಶಸ್ತಿ ಆರಂಭಿಸಲಾಯಿತು ಎಂದು ತಿಳಿಸಿದ್ರು.

ದಿ. ಜಯತೀರ್ಥ ರಾಜಪುರೋಹಿತ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಶಿವರಾಮ ಅಸುಂಡಿ ಅವರ 'ಹೆಣದ ಮೇವು' ಮತ್ತು ಪ್ರಭುಲಿಂಗ ನೀಲೂರೆ ಅವರ 'ಒಳಿತು ಮಾಡು ಮನುಜ' ಕಥೆಗಳಿಗೆ ಪ್ರಥಮ ಬಹುಮಾನ ಸಿಕ್ಕಿದೆ. ಪ್ರಶಸ್ತಿಯ ಚಿನ್ನದ ಪದಕ ಮತ್ತು 5 ಸಾವಿರ ರೂಪಾಯಿ ನಗದು ಒಳಗೊಂಡಿದೆ.

ಪ್ರೊ.ಎಚ್.ಟಿ.ಪೋತೆ

ಗಾಯತ್ರಿ ಸುಂದರೇಶ್ ಅವರ 'ಸೊಪ್ಪೀರಮ್ಮನ ಸಮಾಧಿ ಸುತ್ತ' ದ್ವಿತೀಯ ಬಹುಮಾನ ಪಡೆದುಕೊಂಡಿದ್ದು, ಬೆಳ್ಳಿ ಪದಕ 3 ಸಾವಿರ ರೂಪಾಯಿ ನಗದನ್ನೊಳಗೊಂಡಿದೆ. ಮುದಿರಾಜ್ ಬಾಣದ್ ಅವರ 'ಹೇನು ಕಥೆ' ತೃತೀಯ ಸ್ಥಾನ ಪಡೆದುಕೊಂಡಿದ್ದು, ಕಂಚಿನ ಪದಕ ಹಾಗೂ 2 ಸಾವಿರ ರೂಪಾಯಿ ನಗದನ್ನು ಒಳಗೊಂಡಿದೆ.

ಭಾಷಾಂತರ, ವಚನ ಸಾಹಿತ್ಯ, ಜಾನಪದ, ಕಲಾಕೃತಿಗಳ, ಜಾನಪದ ಕಲಾವಿದ ಸೇರಿ ವಿವಿಧ ವಿಭಾಗಗಳಲ್ಲಿ 25 ಜನರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ನವೆಂಬರ್ 13 ರಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಾಗಾಂಧಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಭಾರತೀಯ ಭಾಷಾ ಸಂಸ್ಥೆಯ ಯೋಜನಾ ನಿರ್ದೇಶಕ ಪ್ರೊ.ಕೆ.ಆರ್.ದುರ್ಗಾದಾಸ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಕುಲಪತಿ ಪ್ರೊ.ಪರಿಮಳ ಅಂಬೇಕರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಸೃಜನ ವಿಭಾಗದಲ್ಲಿ ಚಿದಾನಂದ ಸಾಲಿ ಅವರ ಮೂರನೇ ಕಣ್ಣು, ಜಯದೇವಿ ಗಾಯಕವಾಡರ ಬೋಧಿ ವೃಕ್ಷದ ಹಾಯಿಕುಗಳು, ಬಸವರಾಜ ಡೋಣೂರು ಅವರ ಕಂಗಳ ಬರ, ಹನುಮಂತರಾವ್ ದೊಡ್ಡಮನಿ ಅವರ ಬಿಸಿಲು ಬೆಳದಿಂಗಳು ಕೃತಿಗಳು ಆಯ್ಕೆಯಾಗಿವೆ.

gulbarga university rajyotsava award
ಗುಲ್ಬರ್ಗಾ ವಿ.ವಿ. ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಚಿನ್ನ,ಬೆಳ್ಳಿ ಮತ್ತು ಕಂಚಿನ ಪದಕ ವಿಜೇತರು:

೧.ಹೆಣದ ಮೇವು- ಡಾ.ಶಿವರಾಮ ಅಸುಂಡಿ (ಚಿನ್ನದ ಪದಕ)
೨.ಒಳಿತು ಮಾಡು ಮನುಜ- ಪ್ರಭುಲಿಂಗ್ ನೀಲೂರೆ (ಚಿನ್ನದ ಪದಕ)
೩.ಸೋಪ್ಪಿರಮ್ಮನ ಸಮಾಧಿ ಸುತ್ತ- ಗಾಯತ್ರಿ ಸುಂದರೇಶ್ (ಬೆಳ್ಳಿ‌ ಪದಕ)
೪.ಹೇನು-ಮುದಿರಾಜ್ ಬಾಣದ್ (ಕಂಚಿನ ಪದಕ)

ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ವಿವಿಧ ಕ್ಷೇತ್ರಗಳಿಗೆ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ. ದಿ. ಜಯತೀರ್ಥ ರಾಜಪುರೋಹಿತ ರಾಜ್ಯಮಟ್ಟದ ಕಥಾ ಸ್ಪರ್ಧೆಯ ಪ್ರಶಸ್ತಿ ಮತ್ತು ವಿವಿಧ ವಿಭಾಗಗಳ ಪ್ರಶಸ್ತಿಯನ್ನು ಪ್ರಸಾರಾಂಗದ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಪ್ರಕಟಿಸಿದ್ದಾರೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ಪ್ರೊ.ಎಚ್.ಟಿ.ಪೋತೆ, ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದ ನಂತರ ದಿ. ಹಾ.ಮ.ನಾಯಕ್ ಕುಲಪತಿಗಳಿದ್ದ ವೇಳೆ ಹಿಂದುಳಿದ ಭಾಗದ ಲೇಖಕರನ್ನು ಪ್ರೋತ್ಸಾಹಿಸಲೆಂದು ರಾಜ್ಯೋತ್ಸವ ಪ್ರಶಸ್ತಿ ಆರಂಭಿಸಲಾಯಿತು ಎಂದು ತಿಳಿಸಿದ್ರು.

ದಿ. ಜಯತೀರ್ಥ ರಾಜಪುರೋಹಿತ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಶಿವರಾಮ ಅಸುಂಡಿ ಅವರ 'ಹೆಣದ ಮೇವು' ಮತ್ತು ಪ್ರಭುಲಿಂಗ ನೀಲೂರೆ ಅವರ 'ಒಳಿತು ಮಾಡು ಮನುಜ' ಕಥೆಗಳಿಗೆ ಪ್ರಥಮ ಬಹುಮಾನ ಸಿಕ್ಕಿದೆ. ಪ್ರಶಸ್ತಿಯ ಚಿನ್ನದ ಪದಕ ಮತ್ತು 5 ಸಾವಿರ ರೂಪಾಯಿ ನಗದು ಒಳಗೊಂಡಿದೆ.

ಪ್ರೊ.ಎಚ್.ಟಿ.ಪೋತೆ

ಗಾಯತ್ರಿ ಸುಂದರೇಶ್ ಅವರ 'ಸೊಪ್ಪೀರಮ್ಮನ ಸಮಾಧಿ ಸುತ್ತ' ದ್ವಿತೀಯ ಬಹುಮಾನ ಪಡೆದುಕೊಂಡಿದ್ದು, ಬೆಳ್ಳಿ ಪದಕ 3 ಸಾವಿರ ರೂಪಾಯಿ ನಗದನ್ನೊಳಗೊಂಡಿದೆ. ಮುದಿರಾಜ್ ಬಾಣದ್ ಅವರ 'ಹೇನು ಕಥೆ' ತೃತೀಯ ಸ್ಥಾನ ಪಡೆದುಕೊಂಡಿದ್ದು, ಕಂಚಿನ ಪದಕ ಹಾಗೂ 2 ಸಾವಿರ ರೂಪಾಯಿ ನಗದನ್ನು ಒಳಗೊಂಡಿದೆ.

ಭಾಷಾಂತರ, ವಚನ ಸಾಹಿತ್ಯ, ಜಾನಪದ, ಕಲಾಕೃತಿಗಳ, ಜಾನಪದ ಕಲಾವಿದ ಸೇರಿ ವಿವಿಧ ವಿಭಾಗಗಳಲ್ಲಿ 25 ಜನರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ನವೆಂಬರ್ 13 ರಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಾಗಾಂಧಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಭಾರತೀಯ ಭಾಷಾ ಸಂಸ್ಥೆಯ ಯೋಜನಾ ನಿರ್ದೇಶಕ ಪ್ರೊ.ಕೆ.ಆರ್.ದುರ್ಗಾದಾಸ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಕುಲಪತಿ ಪ್ರೊ.ಪರಿಮಳ ಅಂಬೇಕರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಸೃಜನ ವಿಭಾಗದಲ್ಲಿ ಚಿದಾನಂದ ಸಾಲಿ ಅವರ ಮೂರನೇ ಕಣ್ಣು, ಜಯದೇವಿ ಗಾಯಕವಾಡರ ಬೋಧಿ ವೃಕ್ಷದ ಹಾಯಿಕುಗಳು, ಬಸವರಾಜ ಡೋಣೂರು ಅವರ ಕಂಗಳ ಬರ, ಹನುಮಂತರಾವ್ ದೊಡ್ಡಮನಿ ಅವರ ಬಿಸಿಲು ಬೆಳದಿಂಗಳು ಕೃತಿಗಳು ಆಯ್ಕೆಯಾಗಿವೆ.

gulbarga university rajyotsava award
ಗುಲ್ಬರ್ಗಾ ವಿ.ವಿ. ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಚಿನ್ನ,ಬೆಳ್ಳಿ ಮತ್ತು ಕಂಚಿನ ಪದಕ ವಿಜೇತರು:

೧.ಹೆಣದ ಮೇವು- ಡಾ.ಶಿವರಾಮ ಅಸುಂಡಿ (ಚಿನ್ನದ ಪದಕ)
೨.ಒಳಿತು ಮಾಡು ಮನುಜ- ಪ್ರಭುಲಿಂಗ್ ನೀಲೂರೆ (ಚಿನ್ನದ ಪದಕ)
೩.ಸೋಪ್ಪಿರಮ್ಮನ ಸಮಾಧಿ ಸುತ್ತ- ಗಾಯತ್ರಿ ಸುಂದರೇಶ್ (ಬೆಳ್ಳಿ‌ ಪದಕ)
೪.ಹೇನು-ಮುದಿರಾಜ್ ಬಾಣದ್ (ಕಂಚಿನ ಪದಕ)

Intro:ಗುಲ್ಬರ್ಗಾ ವಿ.ವಿ. ರಾಜ್ಯೋತ್ಸವ ಪ್ರಶಸ್ತಿ ಪ್ರಕಟ - ನವೆಂಬರ್ 13ಕ್ಕೆ ಪ್ರಶಸ್ತಿ ಪ್ರದಾನ.

ಕಲಬುರಗಿ:ಗುಲ್ಬರ್ಗಾ ವಿಶ್ವವಿದ್ಯಾಲಯ ವಿವಿಧ ಕ್ಷೇತ್ರಗಳಲ್ಲಿ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿವೆ. ದಿವಂಗತ ಜಯತೀರ್ಥ ರಾಜಪುರೋಹಿತ ರಾಜ್ಯಮಟ್ಟದ ಕಥಾ ಸ್ಪರ್ಧೆಯ ಪ್ರಶಸ್ತಿ ಮತ್ತು ವಿವಿಧ ವಿಭಾಗಗಳ ಪ್ರಶಸ್ತಿಯನ್ನು ಪ್ರಸಾರಾಂಗದ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಪ್ರಕಟಿಸಿದ್ದಾರೆ.

ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು.ಗುಲ್ಬರ್ಗಾ ವಿಶ್ವವಿದ್ಯಾಲಯ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿವೆ. ಗುಲ್ಬರ್ಗಾ ವಿಶ್ವವಿದ್ಯಾಲ ಅಸ್ತಿತ್ವಕ್ಕೆ ಬಂದ ನಂತರ ದಿವಂಗತ ಹಾ.ಮ.ನಾಯಕ್ ಕುಲಪತಿಗಳಿದ್ದ ವೇಳೆ ಹಿಂದುಳಿದ ಭಾಗದ ಲೇಖಕರನ್ನು ಪ್ರೋತ್ಸಾಹಿಸಲೆಂದು ರಾಜ್ಯೋತ್ಸವ ಪ್ರಶಸ್ತಿ ಆರಂಭಿಸಲಾಗಿತ್ತು.ದಿವಂಗತ ಜಯತೀರ್ಥ ರಾಜಪುರೋಹಿತ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಶಿವರಾಮ ಅಸುಂಡಿ ಅವರ ಹೆಣದ ಮೇವು ಮತ್ತು ಪ್ರಭುಲಿಂಗ ನೀಲೂರೆ ಅವರ ಒಳಿತು ಮಾಡು ಮನುಜ ಕಥೆಗಳಿಗೆ ಪ್ರಥಮ ಬಹುಮಾನ ಸಿಕ್ಕಿದೆ. ಪ್ರಶಸ್ತಿಯ ಚಿನ್ನದ ಪದಕ ಮತ್ತು 5 ಸಾವಿರ ರೂಪಾಯಿ ನಗದನ್ನು ಒಳಗೊಂಡಿದೆ.ಗಾಯತ್ರಿ ಸುಂದರೇಶ್ ಅವರ ಸೊಪ್ಪೀರಮ್ಮನ ಸಮಾಧಿ ಸುತ್ತ ದ್ವಿತೀಯ ಬಹುಮಾನ ಪಡೆದುಕೊಂಡಿದ್ದು,ಬೆಳ್ಳಿ ಪದಕ 3 ಸಾವಿರ ರೂಪಾಯಿ ನಗದನ್ನೊಳಗೊಂಡಿದೆ. ಮುದಿರಾಜ್ ಬಾಣದ್ ಅವರ ಹೇನು ಕಥೆ ತೃತೀಯ ಸ್ಥಾನ ಪಡೆದುಕೊಂಡಿದ್ದು, ಕಂಚಿನ ಪದಕ ಹಾಗೂ 2 ಸಾವಿರ ರೂಪಾಯಿ ನಗದನ್ನು ಒಳಗೊಂಡಿದೆ. ಸೃಜನ, ಸೃಜನೇತರ, ಭಾಷಾಂತರ, ವಚನ ಸಾಹಿತ್ಯ, ಜಾನಪದ, ಕಲಾಕೃತಿಗಳ, ಜಾನಪದ ಕಲಾವಿದ ಸೇರಿ ವಿವಿಧ ವಿಭಾಗಗಳಲ್ಲಿ 25 ಜನರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ನವೆಂಬರ್ 13 ರಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಾಗಾಂಧಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಭಾರತೀಯ ಭಾಷಾ ಸಂಸ್ಥೆಯ ಯೋಜನಾ ನಿರ್ದೇಶಕ ಪ್ರೊ.ಕೆ.ಆರ್.ದುರ್ಗಾದಾಸ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಕುಲಪತಿ ಪ್ರೊ.ಪರಿಮಳ ಅಂಬೇಕರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಸಾರಾಂಗದ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ತಿಳಿಸಿದ್ದಾರೆ.

ಸೃಜನ ವಿಭಾಗದಲ್ಲಿ ಚಿದಾನಂದ ಸಾಲಿ ಅವರ ಮೂರನೇ ಕಣ್ಣು, ಜಯದೇವಿ ಗಾಯಕವಾಡರ ಬೋಧಿ ವೃಕ್ಷದ ಹಾಯಿಕುಗಳು, ಬಸವರಾಜ ಡೋಣೂರು ಅವರ ಕಂಗಳ ಬರ, ಹನುಮಂತರಾವ್ ದೊಡ್ಡಮನಿ ಅವರ ಬಿಸಿಲು ಬೆಳದಿಂಗಳು ಕೃತಿಗಳು ಆಯ್ಕೆಯಾಗಿವೆ. ಅನುವಾದ ವಿಭಾಗದಲ್ಲಿ ಸೂರ್ಯಕಾಂತ ಸುಜ್ಯಾತ್ ಅವರ ದೀಕ್ಷೆ, ವಚನ ಸಾಹಿತ್ಯದಲ್ಲಿ ನಾಗಪ್ಪ ಗೋಗಿ ಅವರ ಅಂಬಿಗರ ಚೌಡಯ್ಯ ಮತ್ತು ಸೃಜನೇತರ ವಿಭಾಗದಲ್ಲಿ ನಾಲ್ಕು ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಮುವ್ವರು ಕಲಾವಿದರ ಚಿತ್ರ ಕಲಾಕೃತಿಗಳೂ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿವೆ.ಪ್ರಶಸ್ತಿಯ ತಲಾ 5 ಸಾವಿರ ರೂಪಾಯಿ ನಗದು ಮತ್ತು ಫಲಕವನ್ನೊಳಗೊಂಡಿದೆ.

ಚಿನ್ನ,ಬೆಳ್ಳಿ ಮತ್ತು ಕಂಚಿನ ಪದಕ ವಿಜೇತರು.

೧.ಹೆಣದ ಮೇವು-ಡಾ.ಶಿವರಾಮ ಅಸುಂಡಿ(ಚಿನ್ನದ ಪದಕ)
೨.ಒಳಿತು ಮಾಡು ಮನುಜ-ಪ್ರಭುಲಿಂಗ್ ನೀಲೂರೆ(ಚಿನ್ನದ ಪದಕ)
೩.ಸೋಪ್ಪಿರಮ್ಮನ ಸಮಾಧಿ ಸುತ್ತ-ಗಾಯತ್ರಿ ಸುಂದರೇಶ್(ಬೆಳ್ಳಿ‌ ಪದಕ)
೪.ಹೇನು-ಮುದಿರಾಜ್ ಬಾಣದ್(ಕಂಚಿನ ಪದಕ)


ಬೈಟ್-ಪ್ರೊ.ಎಚ್.ಟಿ.ಪೋತೆ, ನಿರ್ದೇಶಕ, ಪ್ರಸಾರಾಂಗ, ಗುಲ್ಬರ್ಗಾ ವಿ.ವಿ.
Body:ಗುಲ್ಬರ್ಗಾ ವಿ.ವಿ. ರಾಜ್ಯೋತ್ಸವ ಪ್ರಶಸ್ತಿ ಪ್ರಕಟ - ನವೆಂಬರ್ 13ಕ್ಕೆ ಪ್ರಶಸ್ತಿ ಪ್ರದಾನ.

ಕಲಬುರಗಿ:ಗುಲ್ಬರ್ಗಾ ವಿಶ್ವವಿದ್ಯಾಲಯ ವಿವಿಧ ಕ್ಷೇತ್ರಗಳಲ್ಲಿ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿವೆ. ದಿವಂಗತ ಜಯತೀರ್ಥ ರಾಜಪುರೋಹಿತ ರಾಜ್ಯಮಟ್ಟದ ಕಥಾ ಸ್ಪರ್ಧೆಯ ಪ್ರಶಸ್ತಿ ಮತ್ತು ವಿವಿಧ ವಿಭಾಗಗಳ ಪ್ರಶಸ್ತಿಯನ್ನು ಪ್ರಸಾರಾಂಗದ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಪ್ರಕಟಿಸಿದ್ದಾರೆ.

ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು.ಗುಲ್ಬರ್ಗಾ ವಿಶ್ವವಿದ್ಯಾಲಯ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿವೆ. ಗುಲ್ಬರ್ಗಾ ವಿಶ್ವವಿದ್ಯಾಲ ಅಸ್ತಿತ್ವಕ್ಕೆ ಬಂದ ನಂತರ ದಿವಂಗತ ಹಾ.ಮ.ನಾಯಕ್ ಕುಲಪತಿಗಳಿದ್ದ ವೇಳೆ ಹಿಂದುಳಿದ ಭಾಗದ ಲೇಖಕರನ್ನು ಪ್ರೋತ್ಸಾಹಿಸಲೆಂದು ರಾಜ್ಯೋತ್ಸವ ಪ್ರಶಸ್ತಿ ಆರಂಭಿಸಲಾಗಿತ್ತು.ದಿವಂಗತ ಜಯತೀರ್ಥ ರಾಜಪುರೋಹಿತ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಶಿವರಾಮ ಅಸುಂಡಿ ಅವರ ಹೆಣದ ಮೇವು ಮತ್ತು ಪ್ರಭುಲಿಂಗ ನೀಲೂರೆ ಅವರ ಒಳಿತು ಮಾಡು ಮನುಜ ಕಥೆಗಳಿಗೆ ಪ್ರಥಮ ಬಹುಮಾನ ಸಿಕ್ಕಿದೆ. ಪ್ರಶಸ್ತಿಯ ಚಿನ್ನದ ಪದಕ ಮತ್ತು 5 ಸಾವಿರ ರೂಪಾಯಿ ನಗದನ್ನು ಒಳಗೊಂಡಿದೆ.ಗಾಯತ್ರಿ ಸುಂದರೇಶ್ ಅವರ ಸೊಪ್ಪೀರಮ್ಮನ ಸಮಾಧಿ ಸುತ್ತ ದ್ವಿತೀಯ ಬಹುಮಾನ ಪಡೆದುಕೊಂಡಿದ್ದು,ಬೆಳ್ಳಿ ಪದಕ 3 ಸಾವಿರ ರೂಪಾಯಿ ನಗದನ್ನೊಳಗೊಂಡಿದೆ. ಮುದಿರಾಜ್ ಬಾಣದ್ ಅವರ ಹೇನು ಕಥೆ ತೃತೀಯ ಸ್ಥಾನ ಪಡೆದುಕೊಂಡಿದ್ದು, ಕಂಚಿನ ಪದಕ ಹಾಗೂ 2 ಸಾವಿರ ರೂಪಾಯಿ ನಗದನ್ನು ಒಳಗೊಂಡಿದೆ. ಸೃಜನ, ಸೃಜನೇತರ, ಭಾಷಾಂತರ, ವಚನ ಸಾಹಿತ್ಯ, ಜಾನಪದ, ಕಲಾಕೃತಿಗಳ, ಜಾನಪದ ಕಲಾವಿದ ಸೇರಿ ವಿವಿಧ ವಿಭಾಗಗಳಲ್ಲಿ 25 ಜನರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ನವೆಂಬರ್ 13 ರಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಾಗಾಂಧಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಭಾರತೀಯ ಭಾಷಾ ಸಂಸ್ಥೆಯ ಯೋಜನಾ ನಿರ್ದೇಶಕ ಪ್ರೊ.ಕೆ.ಆರ್.ದುರ್ಗಾದಾಸ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಕುಲಪತಿ ಪ್ರೊ.ಪರಿಮಳ ಅಂಬೇಕರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಸಾರಾಂಗದ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ತಿಳಿಸಿದ್ದಾರೆ.

ಸೃಜನ ವಿಭಾಗದಲ್ಲಿ ಚಿದಾನಂದ ಸಾಲಿ ಅವರ ಮೂರನೇ ಕಣ್ಣು, ಜಯದೇವಿ ಗಾಯಕವಾಡರ ಬೋಧಿ ವೃಕ್ಷದ ಹಾಯಿಕುಗಳು, ಬಸವರಾಜ ಡೋಣೂರು ಅವರ ಕಂಗಳ ಬರ, ಹನುಮಂತರಾವ್ ದೊಡ್ಡಮನಿ ಅವರ ಬಿಸಿಲು ಬೆಳದಿಂಗಳು ಕೃತಿಗಳು ಆಯ್ಕೆಯಾಗಿವೆ. ಅನುವಾದ ವಿಭಾಗದಲ್ಲಿ ಸೂರ್ಯಕಾಂತ ಸುಜ್ಯಾತ್ ಅವರ ದೀಕ್ಷೆ, ವಚನ ಸಾಹಿತ್ಯದಲ್ಲಿ ನಾಗಪ್ಪ ಗೋಗಿ ಅವರ ಅಂಬಿಗರ ಚೌಡಯ್ಯ ಮತ್ತು ಸೃಜನೇತರ ವಿಭಾಗದಲ್ಲಿ ನಾಲ್ಕು ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಮುವ್ವರು ಕಲಾವಿದರ ಚಿತ್ರ ಕಲಾಕೃತಿಗಳೂ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿವೆ.ಪ್ರಶಸ್ತಿಯ ತಲಾ 5 ಸಾವಿರ ರೂಪಾಯಿ ನಗದು ಮತ್ತು ಫಲಕವನ್ನೊಳಗೊಂಡಿದೆ.

ಚಿನ್ನ,ಬೆಳ್ಳಿ ಮತ್ತು ಕಂಚಿನ ಪದಕ ವಿಜೇತರು.

೧.ಹೆಣದ ಮೇವು-ಡಾ.ಶಿವರಾಮ ಅಸುಂಡಿ(ಚಿನ್ನದ ಪದಕ)
೨.ಒಳಿತು ಮಾಡು ಮನುಜ-ಪ್ರಭುಲಿಂಗ್ ನೀಲೂರೆ(ಚಿನ್ನದ ಪದಕ)
೩.ಸೋಪ್ಪಿರಮ್ಮನ ಸಮಾಧಿ ಸುತ್ತ-ಗಾಯತ್ರಿ ಸುಂದರೇಶ್(ಬೆಳ್ಳಿ‌ ಪದಕ)
೪.ಹೇನು-ಮುದಿರಾಜ್ ಬಾಣದ್(ಕಂಚಿನ ಪದಕ)


ಬೈಟ್-ಪ್ರೊ.ಎಚ್.ಟಿ.ಪೋತೆ, ನಿರ್ದೇಶಕ, ಪ್ರಸಾರಾಂಗ, ಗುಲ್ಬರ್ಗಾ ವಿ.ವಿ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.