ETV Bharat / state

ಸೇಡಂ: ಕಿರಾಣಿ, ಮೆಡಿಕಲ್, ಬೇಕರಿ, ಆಸ್ಪತ್ರೆ, ಹೋಟಲ್ ವೈನ್ಸ್ ಹೊರತುಪಡಿಸಿ ಎಲ್ಲವೂ ಬಂದ್.. ಬಂದ್..! - ಕಲಬುರಗಿ ಮೇ4ರ ವರೆಗೆ ನಿಷೇದಾಜ್ಞೆ

ಪಟ್ಟಣದಲ್ಲಿ ಕಿರಾಣಿ, ಮೆಡಿಕಲ್, ಬೇಕರಿ, ಆಸ್ಪತ್ರೆ, ಹೋಟೆಲ್​​, ವೈನ್ಸ್, ತರಕಾರಿ ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ.

ಸೇಡಂ
ಸೇಡಂ
author img

By

Published : Apr 22, 2021, 7:56 PM IST

ಸೇಡಂ: ಮೇ.4 ರವರೆಗೆ ಸೂಚಿತ ಅಂಗಡಿಗಳು ಹೊರತುಪಡಿಸಿ ಉಳಿದವು ತೆರೆದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪಟ್ಟಣದಲ್ಲಿ ಪೊಲೀಸ್ ವಾಹನದ ಮೂಲಕ ಸೂಚಿಸಲಾಯಿತು.


ಪಟ್ಟಣದಲ್ಲಿ ಕಿರಾಣಿ, ಮೆಡಿಕಲ್, ಬೇಕರಿ, ಆಸ್ಪತ್ರೆ, ಹೋಟೆಲ್​, ವೈನ್ಸ್, ತರಕಾರಿ ಹೊರತುಪಡಿಸಿ ಉಳಿದೆಲ್ಲ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ.

ಸ್ವತಃ ಸಹಾಯಕ ಆಯುಕ್ತ ರಮೇಶ ಕೋಲಾರ ಅವರೇ ರಸ್ತೆಗಿಳಿದು ಬಹುತೇಕ ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆ. ಸರ್ಕಾರದ ಆದೇಶದನ್ವಯ ಮೇ.4 ರ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದ್ದು, ಅಲ್ಲಿಯವರೆಗೂ ಹೋಟೆಲ್​​ ಮತ್ತು ವೈನ್ಸ್ ಗಳಲ್ಲಿ ಕೇವಲ ಪಾರ್ಸಲ್​​​​ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದಂತೆ ಸೂಚಿತ ಅಂಗಡಿಗಳು ಹೊರತುಪಡಿಸಿ ಉಳಿದೆಲ್ಲವೂ ಸಂಪೂರ್ಣ ಬಂದ್ ಮಾಡಲು ನಿರ್ದೇಶಿಸಲಾಗಿದೆ.

ಕಟ್ಟುನಿಟ್ಟಿನ ಕಾನೂನು ಪಾಲಿಸಬೇಕು. ಈ ಮೂಲಕ ತಮ್ಮ ಮತ್ತು ಜನರ ರಕ್ಷಣೆ ಮಾಡಬೇಕಾಗಿದೆ. ಸರ್ಕಾರದ ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಿಎಸ್ಐ ನಾನಾಗೌಡ ಎಚ್ಚರಿಸಿದ್ದಾರೆ.

ಸೇಡಂ: ಮೇ.4 ರವರೆಗೆ ಸೂಚಿತ ಅಂಗಡಿಗಳು ಹೊರತುಪಡಿಸಿ ಉಳಿದವು ತೆರೆದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪಟ್ಟಣದಲ್ಲಿ ಪೊಲೀಸ್ ವಾಹನದ ಮೂಲಕ ಸೂಚಿಸಲಾಯಿತು.


ಪಟ್ಟಣದಲ್ಲಿ ಕಿರಾಣಿ, ಮೆಡಿಕಲ್, ಬೇಕರಿ, ಆಸ್ಪತ್ರೆ, ಹೋಟೆಲ್​, ವೈನ್ಸ್, ತರಕಾರಿ ಹೊರತುಪಡಿಸಿ ಉಳಿದೆಲ್ಲ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ.

ಸ್ವತಃ ಸಹಾಯಕ ಆಯುಕ್ತ ರಮೇಶ ಕೋಲಾರ ಅವರೇ ರಸ್ತೆಗಿಳಿದು ಬಹುತೇಕ ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆ. ಸರ್ಕಾರದ ಆದೇಶದನ್ವಯ ಮೇ.4 ರ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದ್ದು, ಅಲ್ಲಿಯವರೆಗೂ ಹೋಟೆಲ್​​ ಮತ್ತು ವೈನ್ಸ್ ಗಳಲ್ಲಿ ಕೇವಲ ಪಾರ್ಸಲ್​​​​ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದಂತೆ ಸೂಚಿತ ಅಂಗಡಿಗಳು ಹೊರತುಪಡಿಸಿ ಉಳಿದೆಲ್ಲವೂ ಸಂಪೂರ್ಣ ಬಂದ್ ಮಾಡಲು ನಿರ್ದೇಶಿಸಲಾಗಿದೆ.

ಕಟ್ಟುನಿಟ್ಟಿನ ಕಾನೂನು ಪಾಲಿಸಬೇಕು. ಈ ಮೂಲಕ ತಮ್ಮ ಮತ್ತು ಜನರ ರಕ್ಷಣೆ ಮಾಡಬೇಕಾಗಿದೆ. ಸರ್ಕಾರದ ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಿಎಸ್ಐ ನಾನಾಗೌಡ ಎಚ್ಚರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.