ರಾಣೆಬೆನ್ನೂರು (ಹಾವೇರಿ): ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಹಿನ್ನೆಲೆ ನವಜೋಡಿಯೊಂದು ಸಸಿ ನೆಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಕುಂಬಾರ ಓಣಿಯ ಷಣ್ಮುಖ ಸಾಲಿಮನಿ ಹಾಗೂ ಕಾವ್ಯ ಎಂಬ ನವಜೋಡಿ ಮದುವೆ ಮಂಟಪದಿಂದ ನೇರವಾಗಿ ಉದ್ಯಾನವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಸಸಿ ನೆಡುವ ಮೂಲಕ ವಾಜಪೇಯಿ ಜನ್ಮ ದಿನಾಚರಣೆ ಮಾಡಿ ದಾಂಪತ್ಯ ಶುರು ಮಾಡಿದರು.
ಓದಿ: ಹಾವೇರಿ ಜಿಲ್ಲೆಯಾದ್ಯಂತ ಇಂದು ಕ್ರಿಸ್ಮಸ್ ಆಚರಣೆ
ನಂತರ ಮಾತನಾಡಿದ ಷಣ್ಮುಖ ಸಾಲಿಮನಿ, ನಾನು ಅಟಲ್ ಬಿಹಾರಿ ವಾಜಪೇಯಿ ಅವರ ಅಭಿಮಾನಿ. ಅವರ ವೈಚಾರಿಕತೆ, ವ್ಯಕ್ತಿತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದೇನೆ. ಆದ್ದರಿಂದ ಅವರ ಹುಟ್ಟುಹಬ್ಬದಂದು ನಾವು ಸಸಿ ನೆಡುವ ಮೂಲಕ ಅವರ ಹುಟ್ಟಿದ ದಿನವನ್ನು ಆಚರಿಸಿದ್ದೇವೆ ಎಂದು ಖುಷಿಪಟ್ಟರು.