ETV Bharat / state

ಈಜಲು ಹೋಗಿದ್ದ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಸಾವು

ಬೇಸಿಗೆಯ ಬಿಸಿಲಿನಿಂದ ಬಸವಳಿದಿರುವ ಜನತೆ, ಕೆರೆ ನದಿಗಳಲ್ಲಿ ಸ್ನಾನಕ್ಕೆ ದಾಂಗುಡಿ ಇಡುತ್ತಾರೆ. ಈ ವೇಳೆ ಕೆಲವರು ನೀರುಪಾಲಾಗುತ್ತಿದ್ದಾರೆ. ಇಂತಹದ್ದೇ ಒಂದು ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದ್ದು, ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

author img

By

Published : Apr 4, 2021, 3:12 PM IST

Updated : Apr 4, 2021, 10:56 PM IST

Three Boys died by drowned in lake at Haveri
ಈಜಲು ಹೋಗಿದ್ದ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಸಾವು

ಹಾವೇರಿ: ಈಜಲು ಹೋಗಿದ್ದ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಮಂತಗಿ ಗ್ರಾಮದ ಕಟ್ಟಿಕೆರೆಯಲ್ಲಿ ನಡೆದಿದೆ.

ಅಖ್ತರ್ ರಜಾ ಯಳವಟ್ಟಿ (16), ಅಹ್ಮದ ರಜಾ ಅಂಚಿ (16) ಮತ್ತು ಸಾಹಿಲ್ ಡೊಂಗ್ರಿ (17) ಮೃತ ಬಾಲಕರು. ಮೂವರು ಸೇರಿಕೊಂಡು ಕೆರೆಗೆ ಈಜಲು ಹೋಗಿದ್ದ ವೇಳೆ ದುರ್ಘಟನೆ ನಡೆದಿದೆ. ಸದ್ಯ ಮೂವರು ಬಾಲಕರ ಮೃತದೇಹಗಳನ್ನು ಸ್ಥಳೀಯರು ನೀರಿನಿಂದ ಹೊರತೆಗೆದಿದ್ದಾರೆ.

ಈಜಲು ಹೋಗಿದ್ದ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಸಾವು

ನಾಲ್ವರು ಬಾಲಕರು ಈಜಲು ಮಂತಗಿ ಗ್ರಾಮದ ಕೆರೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಓರ್ವ ಬಾಲಕ ಕೆರೆಯ ದಂಡೆಯಲ್ಲಿ ಕುಳಿತಿದ್ದ. ಉಳಿದ ಮೂವರು ನೀರಿಗೆ ಇಳಿದಿದ್ದರು. ಕೆರೆಯಲ್ಲಿ ತಗೆಯಲಾಗಿದ್ದ ಗುಂಡಿಯಲ್ಲಿ ನಿಂತ ನೀರಿನಲ್ಲಿ ಮುಳುಗಿ ಬಾಲಕರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಮೂವರು ಬಾಲಕರು ಬೇರೆ ಬೇರೆ ಕುಟುಂಬಗಳಿಗೆ ಸೇರಿವದವರಾಗಿದ್ದು, ಸಂಬಂಧಿಕರ ಅಕ್ರಂದನ ಮುಗಿಲುಮುಟ್ಟಿದೆ.

ಸ್ಥಳಕ್ಕೆ ಹಾನಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಓದಿ: ನಿರ್ಮಾಣ ಹಂತದ ಸೇತುವೆಯ ತಡೆಗೋಡೆ ಕುಸಿತ : ಕಾರ್ಮಿಕ ಸಾವು

ಹಾವೇರಿ: ಈಜಲು ಹೋಗಿದ್ದ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಮಂತಗಿ ಗ್ರಾಮದ ಕಟ್ಟಿಕೆರೆಯಲ್ಲಿ ನಡೆದಿದೆ.

ಅಖ್ತರ್ ರಜಾ ಯಳವಟ್ಟಿ (16), ಅಹ್ಮದ ರಜಾ ಅಂಚಿ (16) ಮತ್ತು ಸಾಹಿಲ್ ಡೊಂಗ್ರಿ (17) ಮೃತ ಬಾಲಕರು. ಮೂವರು ಸೇರಿಕೊಂಡು ಕೆರೆಗೆ ಈಜಲು ಹೋಗಿದ್ದ ವೇಳೆ ದುರ್ಘಟನೆ ನಡೆದಿದೆ. ಸದ್ಯ ಮೂವರು ಬಾಲಕರ ಮೃತದೇಹಗಳನ್ನು ಸ್ಥಳೀಯರು ನೀರಿನಿಂದ ಹೊರತೆಗೆದಿದ್ದಾರೆ.

ಈಜಲು ಹೋಗಿದ್ದ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಸಾವು

ನಾಲ್ವರು ಬಾಲಕರು ಈಜಲು ಮಂತಗಿ ಗ್ರಾಮದ ಕೆರೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಓರ್ವ ಬಾಲಕ ಕೆರೆಯ ದಂಡೆಯಲ್ಲಿ ಕುಳಿತಿದ್ದ. ಉಳಿದ ಮೂವರು ನೀರಿಗೆ ಇಳಿದಿದ್ದರು. ಕೆರೆಯಲ್ಲಿ ತಗೆಯಲಾಗಿದ್ದ ಗುಂಡಿಯಲ್ಲಿ ನಿಂತ ನೀರಿನಲ್ಲಿ ಮುಳುಗಿ ಬಾಲಕರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಮೂವರು ಬಾಲಕರು ಬೇರೆ ಬೇರೆ ಕುಟುಂಬಗಳಿಗೆ ಸೇರಿವದವರಾಗಿದ್ದು, ಸಂಬಂಧಿಕರ ಅಕ್ರಂದನ ಮುಗಿಲುಮುಟ್ಟಿದೆ.

ಸ್ಥಳಕ್ಕೆ ಹಾನಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಓದಿ: ನಿರ್ಮಾಣ ಹಂತದ ಸೇತುವೆಯ ತಡೆಗೋಡೆ ಕುಸಿತ : ಕಾರ್ಮಿಕ ಸಾವು

Last Updated : Apr 4, 2021, 10:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.