ETV Bharat / state

ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಗೆ ಹಾನಗಲ್​ನ ಆರು ಗ್ರಾಮಗಳು ಆಯ್ಕೆ: ಶಾಸಕ ಉದಾಸಿ

author img

By

Published : Sep 29, 2020, 4:29 PM IST

ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಗೆ ಹಾನಗಲ್​ ತಾಲೂಕಿನ ಆರು ಹಳ್ಳಿಗಳು ಆಯ್ಕೆಯಾಗಿವೆ ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದ್ದಾರೆ.

MLA CM Udasi
ಶಾಸಕ ಸಿ.ಎಂ.ಉದಾಸಿ

ಹಾನಗಲ್: ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಗೆ ತಾಲೂಕಿನ ಆರು ಗ್ರಾಮಗಳು ಆಯ್ಕೆ ಆಗಿವೆ ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಗೆ ಹಾನಗಲ್​ ತಾಲೂಕಿನ ಆರು ಗ್ರಾಮಗಳು ಆಯ್ಕೆಯಾಗಿರುವುದು ಸಂತಸ ತಂದಿದೆ. ಗ್ರಾಮಗಳ ಅಭಿವೃದ್ಧಿಗಾಗಿ 2.46 ಕೋಟಿ ರೂ ಮಂಜೂರಾಗಿದೆ ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದರು.

ಕರೇಕ್ಯಾತನಹಳ್ಳಿ, ಶೃಂಗೇರಿ, ಮಲ್ಲಿಗಾರ, ಇನಾಂದ್ಯಾಮನಕೊಪ್ಪ, ಕೋಣನಕೊಪ್ಪ, ಮಾವಕೋಪ್ಪ ಗ್ರಾಮಗಳು ಆಯ್ಕೆಯಾಗಿವೆ. ತಾಲೂಕಿನಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ, 23 ಗ್ರಾಮಗಳು ಪ್ರಧಾನಮಂತ್ರಿ ಆದರ್ಶ ಗ್ರಾಮಗಳ ಯೋಜನೆಗೆ ಆಯ್ಕೆಯಾಗಿವೆ.

ಹಳ್ಳಿಗಳಿಗೆ ಬೇಕಾದ ಮೂಲ ಸೌಲಭ್ಯ ಮತ್ತು ಸೇವೆ ಒಳಗೊಂಡಂತೆ ಗ್ರಾಮೀಣ ಭಾಗದ ಆರೋಗ್ಯ, ಮನೋವಿಕಾಸ, ಸಾಮಾಜಿಕ ಬೆಳವಣಿಗೆ ಮುಂತಾದ ಸೌಲಭ್ಯಗಳು ದೊರೆಯಲಿವೆ ಎಂದು ತಿಳಿಸಿದರು.

ಹಾನಗಲ್: ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಗೆ ತಾಲೂಕಿನ ಆರು ಗ್ರಾಮಗಳು ಆಯ್ಕೆ ಆಗಿವೆ ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಗೆ ಹಾನಗಲ್​ ತಾಲೂಕಿನ ಆರು ಗ್ರಾಮಗಳು ಆಯ್ಕೆಯಾಗಿರುವುದು ಸಂತಸ ತಂದಿದೆ. ಗ್ರಾಮಗಳ ಅಭಿವೃದ್ಧಿಗಾಗಿ 2.46 ಕೋಟಿ ರೂ ಮಂಜೂರಾಗಿದೆ ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದರು.

ಕರೇಕ್ಯಾತನಹಳ್ಳಿ, ಶೃಂಗೇರಿ, ಮಲ್ಲಿಗಾರ, ಇನಾಂದ್ಯಾಮನಕೊಪ್ಪ, ಕೋಣನಕೊಪ್ಪ, ಮಾವಕೋಪ್ಪ ಗ್ರಾಮಗಳು ಆಯ್ಕೆಯಾಗಿವೆ. ತಾಲೂಕಿನಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ, 23 ಗ್ರಾಮಗಳು ಪ್ರಧಾನಮಂತ್ರಿ ಆದರ್ಶ ಗ್ರಾಮಗಳ ಯೋಜನೆಗೆ ಆಯ್ಕೆಯಾಗಿವೆ.

ಹಳ್ಳಿಗಳಿಗೆ ಬೇಕಾದ ಮೂಲ ಸೌಲಭ್ಯ ಮತ್ತು ಸೇವೆ ಒಳಗೊಂಡಂತೆ ಗ್ರಾಮೀಣ ಭಾಗದ ಆರೋಗ್ಯ, ಮನೋವಿಕಾಸ, ಸಾಮಾಜಿಕ ಬೆಳವಣಿಗೆ ಮುಂತಾದ ಸೌಲಭ್ಯಗಳು ದೊರೆಯಲಿವೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.