ETV Bharat / state

ಕೋವಿಡ್​​ 3ನೇ ಅಲೆ: ಹುಕ್ಕೇರಿ ಮಠದ ಜಾತ್ರಾ ಮಹೋತ್ಸವ ರದ್ದು

author img

By

Published : Jan 7, 2022, 9:06 AM IST

ಕೊರೊನಾ 3ನೇ ಅಲೆ ಮತ್ತು ಒಮಿಕ್ರಾನ್ ಆತಂಕದ ಹಿನ್ನೆಲೆ ಹಾವೇರಿಯ ಹುಕ್ಕೇರಿ ಮಠದ ಜಾತ್ರಾ ಮಹೋತ್ಸವ ರದ್ದುಪಡಿಸುತ್ತಿರುವುದಾಗಿ ಹುಕ್ಕೇರಿ ಮಠದ ಸದಾಶಿವ ಶ್ರೀಗಳು ತಿಳಿಸಿದ್ದಾರೆ.

Haveri Hukkeri math
ಹಾವೇರಿ ಹುಕ್ಕೇರಿ ಮಠ

ಹಾವೇರಿ: ಉತ್ತರ ಕರ್ನಾಟಕದ ಪ್ರಮುಖ ಮತ್ತು 'ಆರಂಭಿಕ ಜಾತ್ರೆ' ಎಂದೇ ಕರೆಯಲ್ಪಡುವ ಹಾವೇರಿಯ ಹುಕ್ಕೇರಿ ಮಠದ ಜಾತ್ರಾ ಮಹೋತ್ಸವ ರದ್ದಾಗಿದೆ. ಈ ಕುರಿತಂತೆ ಹುಕ್ಕೇರಿ ಮಠದ ಸದಾಶಿವ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.

ಹುಕ್ಕೇರಿ ಮಠದ ಜಾತ್ರಾ ಮಹೋತ್ಸವ ರದ್ದು: ಸದಾಶಿವ ಶ್ರೀ ಸ್ಪಷ್ಟನೆ

ಕೊರೊನಾ 3ನೇ ಅಲೆ ಮತ್ತು ಒಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾತ್ರೆ, ಉತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳನ್ನ ರದ್ದುಪಡಿಸಿ ಆದೇಶಿಸಿದೆ. ಈ ಹಿನ್ನೆಲೆ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಜಾತ್ರೆ ರದ್ದುಪಡಿಸುತ್ತಿರುವದಾಗಿ ಶ್ರೀಗಳು ತಿಳಿಸಿದ್ದಾರೆ.

ಜ. 8 ರಿಂದ 12 ರವರೆಗೆ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನ ಮಠದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಆದರೆ, ಸರ್ಕಾರ ಮತ್ತು ಜಿಲ್ಲಾಡಳಿತದ ಆದೇಶಾನುಸಾರ ಈ ಕಾರ್ಯಕ್ರಮಗಳನ್ನ ರದ್ದುಪಡಿಸಲಾಗಿದೆ. ಹಾಗಾಗಿ ಸಮಸ್ತ ಭಕ್ತವೃಂದ ಸಹಕರಿಸುವಂತೆ ಶ್ರೀಗಳು ಮನವಿ ಮಾಡಿದ್ದಾರೆ.

ಜ.13 ರಂದು ಹುಕ್ಕೇರಿ ಮಠದ ಲಿಂಗೈಕ್ಯ ಶ್ರೀಗಳಾದ ಶಿವಬಸವೇಶ್ವರ ಮತ್ತು ಶಿವಲಿಂಗ ಶ್ರೀಗಳ ಭಾವಚಿತ್ರದ ಮೆರವಣಿಗೆ ಸಹ ರದ್ದುಪಡಿಸಲಾಗಿದೆ. ಆದರೆ ಆ ದಿನ ಭಕ್ತರಿಗೆ ಉಭಯ ಶ್ರೀಗಳ ಗದ್ದುಗೆ ದರ್ಶನ ಮತ್ತು ಪ್ರಸಾದ ವ್ಯವಸ್ಷೆ ಇರುತ್ತದೆ. ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ಸರತಿಯಲ್ಲಿ ನಿಂತು ಶ್ರೀಗಳ ಗದ್ದುಗೆ ದರ್ಶನ ಪಡೆಯುವಂತೆ ಶ್ರೀಗಳು ತಿಳಿಸಿದ್ದಾರೆ.

ಕ್ರೀಡಾ ಸಲಕರಣೆ ಮಾಲೀಕರಿಗೆ ಸಂಕಷ್ಟ:

ಇತ್ತ ಜಾತ್ರೆ ರದ್ದಾಗಿರುವುದು ಕ್ರೀಡಾ ಸಲಕರಣೆ ಮಾಲೀಕರಿಗೆ ಇನ್ನಿಲ್ಲದ ಬೇಸರ ತರಿಸಿದೆ. ಕಳೆದ ವರ್ಷ ಕಡಿಮೆ ಲಾಭದಿಂದ ಕಂಗೆಟ್ಟು, ಈ ವರ್ಷವಾದರೂ ಅಧಿಕ ಲಾಭ ಸಿಗಬಹುದು ಎನ್ನುವ ಆಸೆಯಿಂದ ದೂರದ ವಿಜಾಪುರದಿಂದ ಲಕ್ಷಾಂತರ ರೂ.ಖರ್ಚು ಮಾಡಿ ಕ್ರೀಡಾ ಸಲಕರಣಿಗಳನ್ನು ತಂದಿದ್ದೇವೆ. ಜಾತ್ರೆ 5 ದಿನಗಳು ಬಾಕಿ ಇರುವಾದ ಕ್ರೀಡಾ ಸಲಕರಣಿಗಳನ್ನು ಜೋಡಿಸಲು ಆರಂಭಿಸಿದ್ದೇವೆ. ಆದರೆ, ಈಗ ಸರ್ಕಾರ ಏಕಾಏಕಿ ಜಾತ್ರೆ ರದ್ದುಪಡಿಸಿದ್ದು ತಮಗೆ ಇನ್ನಿಲ್ಲದ ಸಂಕಷ್ಟ ತಂದಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಪ್ರತಿ ವರ್ಷ ನಾವು ಹುಕ್ಕೇರಿ ಮಠದ ಜಾತ್ರೆಯಿಂದಲೇ ನಮ್ಮ ಜೀವನೋಪಾಯ ಕಂಡುಕೊಳ್ಳುತ್ತಿದ್ದೇವೆ. ಆದರೆ, ಈ ವರ್ಷದ ಆರಂಭಿಕ ಜಾತ್ರೆ ರದ್ದಾಗಿರುವದು ತಮ್ಮನ್ನ ಸಂಕಷ್ಟಕ್ಕೆ ಸಿಲುಕಿಸಿದೆ. ಹತ್ತಾರು ಕೂಲಿ ಕಾರ್ಮಿಕರು, ಚಿಕ್ಕಮಕ್ಕಳನ್ನ ಕಟ್ಟಿಕೊಂಡು ಜಾತ್ರೆಗೆ ಬಂದಿದ್ದೇವೆ. ಸರ್ಕಾರದ ಈ ನಿರ್ಧಾರ ತಮಗೆ ನೋವು ತಂದಿದೆ. ಸರ್ಕಾರ ನಮ್ಮಂತಹವರಿಗೆ ಈ ಸಂದರ್ಭದಲ್ಲಿ ನೆರವು ನೀಡಬೇಕು ಎಂದು ಮಾಲೀಕರು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಪೊಲೀಸರ ದೌರ್ಜನ್ಯ ಆರೋಪ: ಆತ್ಮಹತ್ಯೆಗೆ ಶರಣಾದ ದಲಿತ ಯುವಕ

ಹಾವೇರಿ: ಉತ್ತರ ಕರ್ನಾಟಕದ ಪ್ರಮುಖ ಮತ್ತು 'ಆರಂಭಿಕ ಜಾತ್ರೆ' ಎಂದೇ ಕರೆಯಲ್ಪಡುವ ಹಾವೇರಿಯ ಹುಕ್ಕೇರಿ ಮಠದ ಜಾತ್ರಾ ಮಹೋತ್ಸವ ರದ್ದಾಗಿದೆ. ಈ ಕುರಿತಂತೆ ಹುಕ್ಕೇರಿ ಮಠದ ಸದಾಶಿವ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.

ಹುಕ್ಕೇರಿ ಮಠದ ಜಾತ್ರಾ ಮಹೋತ್ಸವ ರದ್ದು: ಸದಾಶಿವ ಶ್ರೀ ಸ್ಪಷ್ಟನೆ

ಕೊರೊನಾ 3ನೇ ಅಲೆ ಮತ್ತು ಒಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾತ್ರೆ, ಉತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳನ್ನ ರದ್ದುಪಡಿಸಿ ಆದೇಶಿಸಿದೆ. ಈ ಹಿನ್ನೆಲೆ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಜಾತ್ರೆ ರದ್ದುಪಡಿಸುತ್ತಿರುವದಾಗಿ ಶ್ರೀಗಳು ತಿಳಿಸಿದ್ದಾರೆ.

ಜ. 8 ರಿಂದ 12 ರವರೆಗೆ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನ ಮಠದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಆದರೆ, ಸರ್ಕಾರ ಮತ್ತು ಜಿಲ್ಲಾಡಳಿತದ ಆದೇಶಾನುಸಾರ ಈ ಕಾರ್ಯಕ್ರಮಗಳನ್ನ ರದ್ದುಪಡಿಸಲಾಗಿದೆ. ಹಾಗಾಗಿ ಸಮಸ್ತ ಭಕ್ತವೃಂದ ಸಹಕರಿಸುವಂತೆ ಶ್ರೀಗಳು ಮನವಿ ಮಾಡಿದ್ದಾರೆ.

ಜ.13 ರಂದು ಹುಕ್ಕೇರಿ ಮಠದ ಲಿಂಗೈಕ್ಯ ಶ್ರೀಗಳಾದ ಶಿವಬಸವೇಶ್ವರ ಮತ್ತು ಶಿವಲಿಂಗ ಶ್ರೀಗಳ ಭಾವಚಿತ್ರದ ಮೆರವಣಿಗೆ ಸಹ ರದ್ದುಪಡಿಸಲಾಗಿದೆ. ಆದರೆ ಆ ದಿನ ಭಕ್ತರಿಗೆ ಉಭಯ ಶ್ರೀಗಳ ಗದ್ದುಗೆ ದರ್ಶನ ಮತ್ತು ಪ್ರಸಾದ ವ್ಯವಸ್ಷೆ ಇರುತ್ತದೆ. ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ಸರತಿಯಲ್ಲಿ ನಿಂತು ಶ್ರೀಗಳ ಗದ್ದುಗೆ ದರ್ಶನ ಪಡೆಯುವಂತೆ ಶ್ರೀಗಳು ತಿಳಿಸಿದ್ದಾರೆ.

ಕ್ರೀಡಾ ಸಲಕರಣೆ ಮಾಲೀಕರಿಗೆ ಸಂಕಷ್ಟ:

ಇತ್ತ ಜಾತ್ರೆ ರದ್ದಾಗಿರುವುದು ಕ್ರೀಡಾ ಸಲಕರಣೆ ಮಾಲೀಕರಿಗೆ ಇನ್ನಿಲ್ಲದ ಬೇಸರ ತರಿಸಿದೆ. ಕಳೆದ ವರ್ಷ ಕಡಿಮೆ ಲಾಭದಿಂದ ಕಂಗೆಟ್ಟು, ಈ ವರ್ಷವಾದರೂ ಅಧಿಕ ಲಾಭ ಸಿಗಬಹುದು ಎನ್ನುವ ಆಸೆಯಿಂದ ದೂರದ ವಿಜಾಪುರದಿಂದ ಲಕ್ಷಾಂತರ ರೂ.ಖರ್ಚು ಮಾಡಿ ಕ್ರೀಡಾ ಸಲಕರಣಿಗಳನ್ನು ತಂದಿದ್ದೇವೆ. ಜಾತ್ರೆ 5 ದಿನಗಳು ಬಾಕಿ ಇರುವಾದ ಕ್ರೀಡಾ ಸಲಕರಣಿಗಳನ್ನು ಜೋಡಿಸಲು ಆರಂಭಿಸಿದ್ದೇವೆ. ಆದರೆ, ಈಗ ಸರ್ಕಾರ ಏಕಾಏಕಿ ಜಾತ್ರೆ ರದ್ದುಪಡಿಸಿದ್ದು ತಮಗೆ ಇನ್ನಿಲ್ಲದ ಸಂಕಷ್ಟ ತಂದಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಪ್ರತಿ ವರ್ಷ ನಾವು ಹುಕ್ಕೇರಿ ಮಠದ ಜಾತ್ರೆಯಿಂದಲೇ ನಮ್ಮ ಜೀವನೋಪಾಯ ಕಂಡುಕೊಳ್ಳುತ್ತಿದ್ದೇವೆ. ಆದರೆ, ಈ ವರ್ಷದ ಆರಂಭಿಕ ಜಾತ್ರೆ ರದ್ದಾಗಿರುವದು ತಮ್ಮನ್ನ ಸಂಕಷ್ಟಕ್ಕೆ ಸಿಲುಕಿಸಿದೆ. ಹತ್ತಾರು ಕೂಲಿ ಕಾರ್ಮಿಕರು, ಚಿಕ್ಕಮಕ್ಕಳನ್ನ ಕಟ್ಟಿಕೊಂಡು ಜಾತ್ರೆಗೆ ಬಂದಿದ್ದೇವೆ. ಸರ್ಕಾರದ ಈ ನಿರ್ಧಾರ ತಮಗೆ ನೋವು ತಂದಿದೆ. ಸರ್ಕಾರ ನಮ್ಮಂತಹವರಿಗೆ ಈ ಸಂದರ್ಭದಲ್ಲಿ ನೆರವು ನೀಡಬೇಕು ಎಂದು ಮಾಲೀಕರು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಪೊಲೀಸರ ದೌರ್ಜನ್ಯ ಆರೋಪ: ಆತ್ಮಹತ್ಯೆಗೆ ಶರಣಾದ ದಲಿತ ಯುವಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.