ಹಾವೇರಿ: ಯೂರಿಯಾ ಗೊಬ್ಬರಕ್ಕಾಗಿ ರೈತರು ಪರದಾಡಿದ ಘಟನೆ ಹಾವೇರಿ ತಾಲೂಕಿನ ನೆಗಳೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದ ಕಚೇರಿ ಮುಂದೆ ರೈತರು ಮುಂಜಾನೆಯಿಂದಲೆ ಕಾಯುತ್ತಿದ್ದರು. ಆದರೆ ನಿರೀಕ್ಷಿತ ಪ್ರಮಾಣದ ಗೊಬ್ಬರ ಸಿಗದ ಕಾರಣ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗೊಬ್ಬರ ವಿತರಣೆ ಬಂದ್ ಮಾಡಿಸಿದರು. ಗ್ರಾಮದ ಎಲ್ಲ ರೈತರಿಗೆ ಸಿಗುವಷ್ಟು ಗೊಬ್ಬರ ಸ್ಟಾಕ್ ಮಾಡಿದ ನಂತರ ಗೊಬ್ಬರ ವಿತರಿಸುವಂತೆ ಆಗ್ರಹಿಸಿದರು. ಗೊಬ್ಬರ ಪಡೆಯುವ ಭರಾಟೆಯಲ್ಲಿ ರೈತರು ಸಾಮಾಜಿಕ ಅಂತರ ಮರೆತು ಮಾಸ್ಕ್ ಇಲ್ಲದೆ ಸರತಿಯಲ್ಲಿ ನಿಂತ ದೃಶ್ಯ ಕಂಡುಬಂತು.