ETV Bharat / state

ಯಡಿಯೂರಪ್ಪನವರೇ ನೀವು ವೀರಶೈವರು ವೀರತ್ವ ತೋರಿಸಿ: ಸಿ‌.ಎಂ. ಇಬ್ರಾಹಿಂ - CM Ibrahim talking about Amit shah

ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಜೋಡಿ ದೇಶದ ಸ್ಥಿತಿಯನ್ನ ಅದೋಗತಿಗೆ ತಂದಿದ್ದಾರೆ. ನಿರುದ್ಯೋಗ ಕಾಡುತ್ತಿದೆ. ದೇಶದ ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗಲಿಲ್ಲ. ಪಾರ್ಲಿಮೆಂಟ್​ನಲ್ಲಿ ಇದರ ಬಗ್ಗೆ ಚರ್ಚೆ ಆಗುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಚಿವ ಸಿ‌.ಎಂ. ಇಬ್ರಾಹಿಂ ಹರಿಹಾಯ್ದಿದ್ದಾರೆ. ಇದೇ ವೇಳೆ ವೀರಶೈವರಾದ ಸಿಎಂ ಯಡಿಯೂರಪ್ಪ ಸಂಕಷ್ದಲ್ಲಿದ್ದು, ವೀರತ್ವ ತೋರಿಸಿ ಎಂದು ಕಾಲೆಳೆದಿದ್ದಾರೆ.

ಸಿ‌.ಎಂ.ಇಬ್ರಾಹಿಂ,  CM Ibrahim
ಸಿ‌.ಎಂ.ಇಬ್ರಾಹಿಂ
author img

By

Published : Jan 5, 2020, 5:08 PM IST

Updated : Jan 5, 2020, 5:20 PM IST

ಹಾವೇರಿ: ಪ್ರಧಾನಿ ಮೋದಿ ಮತ್ತು ಗೃಹ ಸಚುವ ಅಮಿತ್ ಶಾ ಜೋಡಿ ದೇಶದ ಸ್ಥಿತಿಯನ್ನ ಅದೋಗತಿಗೆ ತಂದಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಸಿಎಂ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ, ಪಾರ್ಲಿಮೆಂಟ್​ನಲ್ಲಿ ಇದರ ಬಗ್ಗೆ ಚರ್ಚೆ ಆಗುತ್ತಿಲ್ಲ. ಆರು ವರ್ಷಗಳಿಂದ ಮೂರು ತಲಾಕ್, 371, ಸಿಎಎ, ಎನ್ಆರ್ ಸಿ ಇಂಥಹದ್ದನ್ನೇ ಮಾಡಿಕೊಂಡು ಬರಲಾಗಿದೆ ಎಂದು ಕಿಡಿಕಾರಿದರು..

1947 ರಿಂದಲೂ ನಾಗರಿಕತ್ವ ಕೊಡುತ್ತಲೇ ಬಂದಿದ್ದೇವೆ. ಸಂವಿಧಾನ ತಿದ್ದುಪಡಿ ಮಾಡೋದರ ಅಗತ್ಯವಿತ್ತೆ.? ಟೂರಿಸಂ, ವಿದ್ಯುತ್ ಶಕ್ತಿ ಉತ್ಪಾದನೆ ಎಲ್ಲವೂ ಹಾಳಾಗಿದೆ. ಈ ಬಗ್ಗೆ ಬಿಜೆಪಿ ಹಿರಿಯ ನಾಯಕ ಅಡ್ವಾಣಿಯವರು ಮೌನ ಮುರಿಬೇಕಿದೆ. ಅಡ್ವಾಣಿಯವರೇ ನೀವು ಬಿಜೆಪಿ ಕಟ್ಟಿದ್ದೀರಿ. ನೀವು ಮೋದಿ, ಶಾಗೆ ಬುದ್ಧಿ ಹೇಳಿ ಎಂದು ಮನವಿ ಮಾಡಿದರು.

ಸಿ‌.ಎಂ.ಇಬ್ರಾಹಿಂ

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದಂತೆ ಎಲ್ಲರೂ ಈ ಕಾಯ್ದೆಗಳ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ನೋಟ್​ ಬಂದ್​ ಮಾಡಿದಾಗ ಜನರು ಬ್ಯಾಂಕ್ ಮುಂದೆ ನಿಂತಂತೆ ತಲಾಟಿ ಆಫೀಸ್​ ಮುಂದೆ ನಿಲ್ಲೋ ಪರಿಸ್ಥಿತಿ ಬರುತ್ತೆ. ಬಿಜೆಪಿ ರಾಜ್ಯಗಳಿದ್ದಲ್ಲಿ ಗಲಾಟೆಗಳು ಆಗ್ತಿವೆ. ರಾಜ್ಯದ ಜನರು ಶಾಂತಿ ಪ್ರಿಯರು. ಇದು ಬಸವಣ್ಣನ ನಾಡು. ಆದ್ರೂ ಮಂಗಳೂರಲ್ಲಿ ಗಲಾಟೆ ಆಯ್ತು. ಸಿಎಂ ಯಡಿಯೂರಪ್ಪ ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಯಡಿಯೂರಪ್ಪನವರೇ ನೀವು ವೀರಶೈವರು, ವೀರತ್ವ ತೋರಿಸಿ ಎಂದು ಕಾಲೆಳೆದ ಇಬ್ರಾಹಿಂ ಅವರು ಸಿಎಂ ಬಿಎಸ್​ವೈ ಡ್ರೈವಿಂಗ್ ಸೀಟ್​ಲ್ಲಿ ಕುಳಿತಿದ್ದಾರೆ. ಸ್ಟೇರಿಂಗ್, ಗೇರ್ ಬಾಕ್ಸ್ ಬಿ ಎಲ್​ ಸಂತೋಷ್​ ಕೈಯಲ್ಲಿ ಇವೆ ಎಂದು ವ್ಯಂಗ್ಯವಾಡಿದರು.

ಹಾವೇರಿ: ಪ್ರಧಾನಿ ಮೋದಿ ಮತ್ತು ಗೃಹ ಸಚುವ ಅಮಿತ್ ಶಾ ಜೋಡಿ ದೇಶದ ಸ್ಥಿತಿಯನ್ನ ಅದೋಗತಿಗೆ ತಂದಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಸಿಎಂ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ, ಪಾರ್ಲಿಮೆಂಟ್​ನಲ್ಲಿ ಇದರ ಬಗ್ಗೆ ಚರ್ಚೆ ಆಗುತ್ತಿಲ್ಲ. ಆರು ವರ್ಷಗಳಿಂದ ಮೂರು ತಲಾಕ್, 371, ಸಿಎಎ, ಎನ್ಆರ್ ಸಿ ಇಂಥಹದ್ದನ್ನೇ ಮಾಡಿಕೊಂಡು ಬರಲಾಗಿದೆ ಎಂದು ಕಿಡಿಕಾರಿದರು..

1947 ರಿಂದಲೂ ನಾಗರಿಕತ್ವ ಕೊಡುತ್ತಲೇ ಬಂದಿದ್ದೇವೆ. ಸಂವಿಧಾನ ತಿದ್ದುಪಡಿ ಮಾಡೋದರ ಅಗತ್ಯವಿತ್ತೆ.? ಟೂರಿಸಂ, ವಿದ್ಯುತ್ ಶಕ್ತಿ ಉತ್ಪಾದನೆ ಎಲ್ಲವೂ ಹಾಳಾಗಿದೆ. ಈ ಬಗ್ಗೆ ಬಿಜೆಪಿ ಹಿರಿಯ ನಾಯಕ ಅಡ್ವಾಣಿಯವರು ಮೌನ ಮುರಿಬೇಕಿದೆ. ಅಡ್ವಾಣಿಯವರೇ ನೀವು ಬಿಜೆಪಿ ಕಟ್ಟಿದ್ದೀರಿ. ನೀವು ಮೋದಿ, ಶಾಗೆ ಬುದ್ಧಿ ಹೇಳಿ ಎಂದು ಮನವಿ ಮಾಡಿದರು.

ಸಿ‌.ಎಂ.ಇಬ್ರಾಹಿಂ

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದಂತೆ ಎಲ್ಲರೂ ಈ ಕಾಯ್ದೆಗಳ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ನೋಟ್​ ಬಂದ್​ ಮಾಡಿದಾಗ ಜನರು ಬ್ಯಾಂಕ್ ಮುಂದೆ ನಿಂತಂತೆ ತಲಾಟಿ ಆಫೀಸ್​ ಮುಂದೆ ನಿಲ್ಲೋ ಪರಿಸ್ಥಿತಿ ಬರುತ್ತೆ. ಬಿಜೆಪಿ ರಾಜ್ಯಗಳಿದ್ದಲ್ಲಿ ಗಲಾಟೆಗಳು ಆಗ್ತಿವೆ. ರಾಜ್ಯದ ಜನರು ಶಾಂತಿ ಪ್ರಿಯರು. ಇದು ಬಸವಣ್ಣನ ನಾಡು. ಆದ್ರೂ ಮಂಗಳೂರಲ್ಲಿ ಗಲಾಟೆ ಆಯ್ತು. ಸಿಎಂ ಯಡಿಯೂರಪ್ಪ ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಯಡಿಯೂರಪ್ಪನವರೇ ನೀವು ವೀರಶೈವರು, ವೀರತ್ವ ತೋರಿಸಿ ಎಂದು ಕಾಲೆಳೆದ ಇಬ್ರಾಹಿಂ ಅವರು ಸಿಎಂ ಬಿಎಸ್​ವೈ ಡ್ರೈವಿಂಗ್ ಸೀಟ್​ಲ್ಲಿ ಕುಳಿತಿದ್ದಾರೆ. ಸ್ಟೇರಿಂಗ್, ಗೇರ್ ಬಾಕ್ಸ್ ಬಿ ಎಲ್​ ಸಂತೋಷ್​ ಕೈಯಲ್ಲಿ ಇವೆ ಎಂದು ವ್ಯಂಗ್ಯವಾಡಿದರು.

Intro:ಈಡಿ ಜಗತ್ತೇ ಪ್ರಕ್ಷುಬ್ಧದಲ್ಲಿದೆ ಮೂರನೇ ಮಹಾಯುದ್ಧ ಯಾವಾಗ ಬೇಕಾದ್ರು ಆಗಬಹುದು ಎಂದು ಕೇಂದ್ರ ಮಾಜಿ ಸಚಿವ ಸಿ‌.ಎಂ.ಇಬ್ರಾಹಿಂ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿ ಯಲ್ಲಿ ಮಾತನಾಡಿದ ಅವರು
ಮೋದಿ ಮತ್ತು ಅಮೀತ್ ಷಾ ಜೋಡಿ ದೇಶದ ಸ್ಥಿತಿಯನ್ನ ಅದೋಗತಿಗೆ ಒಯ್ದಿದ್ದಾರೆ ಎಂದು ಆರೋಪಿಸಿದರು.
ನಿರುದ್ಯೋಗ ಕಾಡ್ತಿದೆ, ದೇಶದ ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗ್ತಿಲ್ಲ.
ಪಾರ್ಲಿಮೆಂಟ್ ನಲ್ಲಿ ಇದರ ಬಗ್ಗೆ ಚರ್ಚೆ ಆಗ್ತಿಲ್ಲ.
ಆರು ವರ್ಷದಿಂದ ಮೂರು ತಲಾಕ್, 371, ಸಿಎಎ, ಎನ್ಆರ್ ಸಿ ಇಂಥದ್ದೆ ಮಾಡಿಕೊಂಡು ಬಂದಿದ್ದಾರೆ.
ಇದೆಲ್ಲ ದೇಶಕ್ಕೆ ಅವಶ್ಯವಿತ್ತಾ.?
1947ರಿಂದಲೂ ನಾಗರಿಕತ್ವ ಕೊಡುತ್ತಲೇ ಬಂದಿದ್ದೇವೆ.
ಸಂವಿಧಾನ ತಿದ್ದುಪಡಿ ಮಾಡೋದರ ಅಗತ್ಯವಿತ್ತೆ.?
ಟೂರಿಸಂ,ವಿದ್ಯುತ್ ಶಕ್ತಿ ಉತ್ಪಾದನೆ ಎಲ್ಲವೂ ಹಾಳಾಗಿದೆ.
ಅಡ್ವಾಣಿಯವರು ಮೌನ ಮುರಿಬೇಕಿದೆ.
ಅಡ್ವಾಣಿಯವರೆ ನೀವು ಬಿಜೆಪಿ ಕಟ್ಟಿದ್ದೀರಿ.
ನೀವು ಮೋದಿ, ಷಾಗೆ ಬುದ್ಧಿ ಹೇಳಬೇಕಿದೆ.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದಂತೆ ಎಲ್ಲರೂ ಈ ಕಾಯ್ದೆಗಳ ವಿರುದ್ಧದ ಹೋರಾಟಕ್ಕೆ ಇಳಿದಿದ್ದಾರೆ.
ನೋಟ್ ಬಂದ ಮಾಡಿದಾಗ ಜನರು ಬ್ಯಾಂಕ್ ಮುಂದೆ ನಿಂತಂತೆ ತಲಾಟಿ ಆಫೀಸ್ ಮುಂದೆ ನಿಲ್ಲೋ ಪರಿಸ್ಥಿತಿ ಬರುತ್ತೆ.
ಬಿಜೆಪಿ ರಾಜ್ಯಗಳಿದ್ದಲ್ಲಿ ಗಲಾಟೆಗಳು ಆಗ್ತಿವೆ.
ರಾಜ್ಯದ ಜನರು ಶಾಂತಿ ಪ್ರಿಯರು.
ಇದು ಬಸವಣ್ಣನ ನಾಡು.
ಆದ್ರೂ ಮಂಗಳೂರಲ್ಲಿ ಗಲಾಟೆ ಆಯ್ತು.
ಯಡಿಯೂರಪ್ಪ ಕಷ್ಟದ ಪರಿಸ್ಥಿತಿಯಲ್ಲಿದ್ದಾರೆಡ್ರೈವಿಂಗ್ ಸೀಟ್ ಲ್ಲಿ ಕುಳಿತಿದ್ದಾರೆ.
ಸ್ಟೇರಿಂಗ್, ಗೇರ್ ಬಾಕ್ಸ್ ಸಂತೋಷ ಕೈಯಲ್ಲಿ ಇದೆ.
ಕೇಶವ ಕೃಪ‌ ಮುಂದೆ ನಿಲ್ತಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಆತ್ಮ ಮುಟ್ಟಿಕೊಂಡು ಹೇಳಲಿ.
ಮಂಗಳೂರು ಘಟನೆಯಲ್ಲಿನ ಪರಿಹಾರದ ವಿಚಾರ ಸರಿನಾ ಅಂತಾ.
ಮೋದಿ, ಅಮೀತ್ ಷಾ, ಒಬ್ರಾಹಿಂ ಎಲ್ಲರೂ ಸಾಯೋರೆ.
ಯಾರೂ ಶಾಶ್ವತ ಅಲ್ಲ.
ನಿಮ್ಗೆ ವೋಟು ಕೊಡ್ದಿರೋದು ನಮ್ಮ ತಪ್ಪು.
ಕೆಲವೆಡೆ ವ್ಯಕ್ತಿ ಮೇಲೆ‌ ಜನರು ಬಿಜೆಪಿಗೆ ವೋಟು ಕೊಟ್ಟಿದ್ದಾರೆ.
ಶಾಸಕನಾಗಿ ಸೋಮಶೇಖರ ರೆಡ್ಡಿ ಕೊಡೋ ಹೇಳಿಕೆ ಸರಿಯಲ್ಲ.
ಸಿಎಎ ಪರವಾಗಿ ಭಗವಾ ಧ್ವಜ ಹಿಡ್ಕೊಂಡು ಹೋಗ್ತಿದ್ದಾರೆ.
ದೇವರ ಮೆರವಣಿಗೆ ಹೊರಟಾಗ ಭಗವಾ ಧ್ವಜ ಹಿಡಿರಿ ನಾವು ಕೈ ಮುಗೀತಿವಿ.
ಸಿಎಎ ಪರವಾಗಿ ಮೆರವಣಿಗೆ ವೇಳೆ ಭಗವಾ ಧ್ವಜ ಹಿಡಿಯೋದು ಎಷ್ಟು ಸರಿ.?
ಜನರ ಗಮನ ಬೇರೆಡೆ ಸೆಳೆಯಲು ಸಿಎಎ, ಎನ್ಆರ್ ಸಿ ತರಲು ಹೊರಟಿದ್ದಾರೆ.
ಶೃಂಗೇರಿ ಮಠದಲ್ಲಿ ಇವತ್ತಿಗೂ ಟಿಪ್ಪು ಸುಲ್ತಾನ ಹೆಸರಲ್ಲಿ ಸಲಾಮಾರತಿ ಮಾಡ್ತಾರೆ.
ಟಿಪ್ಪು ಸುಲ್ತಾನ ಹಿಂದೂ ಆಗಿದ್ದರೆ ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿಗೆ ಸಿಕ್ಕಿರೋ ಸ್ಥಾನ ಸಿಗ್ತಿತ್ತು.
ಆತ ಮುಸ್ಲಿಂ ಆಗಿ ಹುಟ್ಟಿದ್ದೇ ತಪ್ಪು.
ಜನರಲ್ಲಿ ಜಾಗೃತಿ ಮೂಡಿಸುತ್ತೇನೆ.
ರಾಜ್ಯಾದ್ಯಂತ ಹಗಲಿರುಳು ಪ್ರವಾಸ ಮಾಡ್ತೀನಿ.
ಗಾಂಧೀಜಿಯನ್ನ ಚಿತ್ರದಲ್ಲಿಟ್ಟು ಶೂಟ್ ಮಾಡೋ ವಿಡಿಯೋ ಇದೆ.
ಅವರ ಮೇಲೆ ಇವತ್ತಿಗೂ ಕೇಸ್ ಇಲ್ಲ.
ಯಡಿಯೂರಪ್ಪ ವೀರಶೈವರು ವೀರತ್ವ ತೋರಿಸಿ.
ಜನರು ನಿಮ್ಮತ್ತ ನೋಡ್ತಿದ್ದಾರೆ.
ರಾಜ್ಯದ ಜನ ಸ್ವಾಭಿಮಾನಿಗಳು.
ನಮ್ಮದು ಕೊಡುವ ನಾಡು, ಬೇಡುವ ನಾಡಲ್ಲ.
ನಮ್ಮ‌ ರೊಕ್ಕ ನಮಗೆ ಕೊಡದೆ ಇಟ್ಕೊಂಡು ಕೂತಿದ್ದಾರೆ.Body:sameConclusion:same
Last Updated : Jan 5, 2020, 5:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.