ETV Bharat / state

ಹಾಸನದ ಚಂದ್ರಗಿರಿ ತಪ್ಪಲಿನಲ್ಲಿ ಮತ್ತೆರೆಡು ಚಿರತೆಗಳು ಪ್ರತ್ಯಕ್ಷ... ಬೆಚ್ಚಿಬಿದ್ದ ಜನ! - hassan news

ಚಂದ್ರಗಿರಿಯ ತಪ್ಪಲಿನಲ್ಲಿ ಇಂದು ಮತ್ತೆ ಎರಡು ಚಿರತೆಗಳು ಕಾಣಿಸಿಕೊಂಡಿದ್ದು, ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ಆತಂಕಕ್ಕೊಳಗಾಗಿದ್ದಾರೆ.

Two cheeths live in the chandragiri hills of Hassan
ಹಾಸನದ ಚಂದ್ರಗಿರಿಯ ತಪ್ಪಲಿನಲ್ಲಿ ಮತ್ತೆರೆಡು ಚಿರತೆಗಳು ಪ್ರತ್ಯಕ್ಷ!
author img

By

Published : Jan 24, 2020, 4:22 PM IST

Updated : Jan 24, 2020, 7:42 PM IST

ಹಾಸನ: ಚಂದ್ರಗಿರಿಯ ತಪ್ಪಲಿನಲ್ಲಿ ಇಂದು ಮತ್ತೆ ಎರಡು ಚಿರತೆಗಳು ಕಾಣಿಸಿಕೊಂಡಿದ್ದು, ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ.

ಹಾಸನದ ಚಂದ್ರಗಿರಿ ತಪ್ಪಲಿನಲ್ಲಿ ಮತ್ತೆರೆಡು ಚಿರತೆಗಳು ಪ್ರತ್ಯಕ್ಷ... ಬೆಚ್ಚಿಬಿದ್ದ ಜನ!

ಈ ಹಿಂದೆ ಕೂಡ ಬೆಟ್ಟದ ತಪ್ಪಲಿನಲ್ಲಿ ಎರಡು ಚಿರತೆಗಳು ತಮ್ಮ ಮರಿಗಳೊಂದಿಗೆ ಕಾಣಿಸಿಕೊಂಡಿದ್ದವು. ಬಳಿಕ ಮಸ್ತಕಾಭಿಷೇಕದ ಸಂದರ್ಭದಲ್ಲಿ ಆ ಎರಡು ಚಿರತೆಗಳನ್ನು ಸೆರೆ ಹಿಡಿಯಲಾಗಿತ್ತು. ಅದಾದ ಬಳಿಕ ಶ್ರವಣಬೆಳಗೊಳದ ಸುತ್ತಮುತ್ತ ಮತ್ತೆ ಮೂರು ಚಿರತೆಗಳನ್ನು ಸೆರೆಹಿಡಿದಿದ್ದ ಅರಣ್ಯ ಇಲಾಖೆಗೆ, ಇವತ್ತು ಮತ್ತೆ ಎರಡು ಚಿರತೆಗಳು ಕಾಣಿಸಿಕೊಂಡಿರುವುದು ತಲೆನೋವಾಗಿದೆ.

ಶ್ರವಣ ಬೆಳಗೊಳದ ಸುತ್ತಮುತ್ತ ಹೆಚ್ಚಾಗಿ ಕುರುಚಲು ಪ್ರದೇಶ ಇರುವುದರಿಂದ ಚಿರತೆಗಳು ಇಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, 2 ಚಿರತೆಗಳನ್ನ ಆದಷ್ಟು ಬೇಗ ಸೆರೆಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.

ಹಾಸನ: ಚಂದ್ರಗಿರಿಯ ತಪ್ಪಲಿನಲ್ಲಿ ಇಂದು ಮತ್ತೆ ಎರಡು ಚಿರತೆಗಳು ಕಾಣಿಸಿಕೊಂಡಿದ್ದು, ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ.

ಹಾಸನದ ಚಂದ್ರಗಿರಿ ತಪ್ಪಲಿನಲ್ಲಿ ಮತ್ತೆರೆಡು ಚಿರತೆಗಳು ಪ್ರತ್ಯಕ್ಷ... ಬೆಚ್ಚಿಬಿದ್ದ ಜನ!

ಈ ಹಿಂದೆ ಕೂಡ ಬೆಟ್ಟದ ತಪ್ಪಲಿನಲ್ಲಿ ಎರಡು ಚಿರತೆಗಳು ತಮ್ಮ ಮರಿಗಳೊಂದಿಗೆ ಕಾಣಿಸಿಕೊಂಡಿದ್ದವು. ಬಳಿಕ ಮಸ್ತಕಾಭಿಷೇಕದ ಸಂದರ್ಭದಲ್ಲಿ ಆ ಎರಡು ಚಿರತೆಗಳನ್ನು ಸೆರೆ ಹಿಡಿಯಲಾಗಿತ್ತು. ಅದಾದ ಬಳಿಕ ಶ್ರವಣಬೆಳಗೊಳದ ಸುತ್ತಮುತ್ತ ಮತ್ತೆ ಮೂರು ಚಿರತೆಗಳನ್ನು ಸೆರೆಹಿಡಿದಿದ್ದ ಅರಣ್ಯ ಇಲಾಖೆಗೆ, ಇವತ್ತು ಮತ್ತೆ ಎರಡು ಚಿರತೆಗಳು ಕಾಣಿಸಿಕೊಂಡಿರುವುದು ತಲೆನೋವಾಗಿದೆ.

ಶ್ರವಣ ಬೆಳಗೊಳದ ಸುತ್ತಮುತ್ತ ಹೆಚ್ಚಾಗಿ ಕುರುಚಲು ಪ್ರದೇಶ ಇರುವುದರಿಂದ ಚಿರತೆಗಳು ಇಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, 2 ಚಿರತೆಗಳನ್ನ ಆದಷ್ಟು ಬೇಗ ಸೆರೆಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.

Intro:ಹಾಸನ : ಚಂದ್ರಗಿರಿಯ ತಪ್ಪಲಿನಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡು ಸ್ಥಳೀಯರನ್ನು ಅಷ್ಟೇ ಅಲ್ಲದೆ ಪ್ರವಾಸಿಗರಿಗೂ ಕೂಡ ಭಯದ ವಾತಾವರಣವನ್ನು ಸೃಷ್ಟಿ ಮಾಡಿವೆ.

ಇವತ್ತು ಬೆಳಗ್ಗೆ ಚಂದ್ರಗಿರಿಯ ತಪ್ಪಲಿನಲ್ಲಿ 2 ಚಿರತೆಗಳು ಸ್ಥಳೀಯರಿಗೆ ಕಾಣಿಸಿಕೊಳ್ಳುವ ಮೂಲಕ ಆತಂಕ ಸೃಷ್ಟಿಸಿವೆ ಚಿರತೆಗಳನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಹಾಸನ ಶಿಲ್ಪಕಲೆಗಳ ತವರೂರು. ಅಲ್ಲದೆ ಗೊಮ್ಮಟನ ನೆಲೆಬೀಡು. ಪ್ರತಿನಿತ್ಯ ಹಾಸನ ಜಿಲ್ಲೆಗೆ ಸೇರಿದಂತೆ ಶ್ರವಣಬೆಳಗೊಳಕ್ಕೆ ಲಕ್ಷಾಂತರ ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಚಂದ್ರಗಿರಿಯ ಬೆಟ್ಟದಲ್ಲಿ ಈಗ ಚಿರತೆಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಪ್ರವಾಸಿಗರಿಗೆ ಜೀವ ಭಯ ಎದುರಾಗಿದೆ.

ಇನ್ನು ಈ ಹಿಂದೆ ಕೂಡ ಬೆಟ್ಟದ ತಪ್ಪಲಿನಲ್ಲಿ ಎರಡು ಚಿರತೆ ಹಾಗೂ ತನ್ನ ಮರಿಗಳೊಂದಿಗೆ ಕಾಣಿಸಿಕೊಂಡಿತ್ತು ಮಸ್ತಕಾಭಿಷೇಕದ ಸಂದರ್ಭದಲ್ಲಿ ಎರಡು ಚಿರತೆಗಳನ್ನು ಹಿಡಿಯಲಾಗಿತ್ತು. ಇದಾದ ಬಳಿಕ ಶ್ರವಣಬೆಳಗೊಳದ ಸುತ್ತಮುತ್ತ ಮತ್ತೆ ಮೂರು ಚಿರತೆಗಳನ್ನು ಸೆರೆಹಿಡಿದಿದ್ದ ಅರಣ್ಯ ಇಲಾಖೆಗೆ ಇವತ್ತು ಮತ್ತೆ ಎರಡು ಚಿರತೆಗಳು ಕಾಣಿಸಿಕೊಂಡಿರುವುದು ತಲೆನೋವಾಗಿದೆ.

ಶ್ರವಣಬೆಳಗೊಳದ ಸುತ್ತಮುತ್ತ ಹೆಚ್ಚಾಗಿ ಕುರುಚಲು ಪ್ರದೇಶ ಇರುವುದರಿಂದ ಚಿರತೆಗಳ ವಾಸಸ್ಥಾನವಾಗಿದೆ ಇತ್ತೀಚಿನ ದಿನಗಳಲ್ಲಿ ವಿಭಾಗದಲ್ಲಿಯೂ ಕೂಡ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ವಿವಿಧ ವ್ಯಾಪಾರ ವ್ಯವಹಾರಗಳಿಗಾಗಿ ಆ ಪ್ರದೇಶವನ್ನು ನಾಶಪಡಿಸಿದ ರಿಂದ ಅಲ್ಲಿ ವಾಸಿಸುತ್ತಿರುವ ಚಿರತೆಗಳು ಈಗ ನಾಡಿನತ್ತ ಮುಖ ಮಾಡಿದೆ.

ಹೀಗಾಗಿ ಇಂದು ಕಾಣಿಸಿಕೊಂಡಿರುವ 2 ಚಿರತೆಗಳನ್ನು ಆದಷ್ಟು ಬೇಗ ಹಿಡಿಯೋ ಮೂಲಕ ಬೇರೆಡೆಗೆ ಸ್ಥಳಾಂತರಿಸಬೇಕು ಎನ್ನುವುದು ಸ್ಥಳೀಯರ ಆಗ್ರಹ


Body:7203289


Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
Last Updated : Jan 24, 2020, 7:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.