ETV Bharat / state

ಸಾಹಿತ್ಯಕ್ಕೆ ಹಾಸನ ಜಿಲ್ಲೆಯ ಕೊಡುಗೆ ಅಪಾರ: ಲೇಖಕಿ ಲೀಲಾವತಿ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಭವನದಲ್ಲಿ ಹಾಸನ ಜಿಲ್ಲಾ ಲೇಖಕಿಯರ ಬಳಗದ ವಾರ್ಷಿಕೋತ್ಸವ ಹಾಗೂ ರಾಜ್ಯ ಮಟ್ಟದ ಲೇಖಕಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಲೇಖಕಿ ಲೀಲಾವತಿ ಉದ್ಘಾಟಿಸಿದರು.

author img

By

Published : Oct 13, 2019, 11:58 AM IST

ಸಾಹಿತ್ಯಕ್ಕೆ ಹಾಸನ ಜಿಲ್ಲೆಯ ಕೊಡುಗೆ ಅಪಾರವಿದೆ : ಲೇಖಕಿ ಲೀಲಾವತಿ

ಹಾಸನ : ಹಾಸನ ಜಿಲ್ಲೆ ಮಹಿಳಾ ಲೇಖಕಿಯರ ಗಟ್ಟಿತನ ಸಂದೇಶವುಳ್ಳ ಸಾಹಿತ್ಯದ ಕೊಡುಗೆ ಅಪಾರವಾಗಿರುವ ಜಿಲ್ಲೆಯೆಂದು ಲೇಖಕಿ ಲೀಲಾವತಿ ತಿಳಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಭವನದಲ್ಲಿ ಹಾಸನ ಜಿಲ್ಲಾ ಲೇಖಕಿಯರ ಬಳಗದ ವಾರ್ಷಿಕೋತ್ಸವ ಹಾಗೂ ರಾಜ್ಯ ಮಟ್ಟದ ಲೇಖಕಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಲೇಖಕಿ ಲೀಲಾವತಿ, ಎಲ್ಲಾ ಪ್ರತಿಕೂಲ ಮಾತ್ರವಲ್ಲದೇ ಪ್ರವಾಹದ ವಿರುದ್ಧ ಈಜುವ ಪ್ರಕ್ರಿಯೆಯನ್ನು ಸಾಹಿತ್ಯ ಲೋಕದಲ್ಲಿ ನಡೆಯುತ್ತದೆಯೆಂದು ಅಭಿಪ್ರಾಯಪಟ್ಟರು. ಮನೆಯಲ್ಲಿ ಸಂಸಾರದ ಜವಾಬ್ದಾರಿ ಮಾತ್ರವಲ್ಲದೇ, ಸಮಯವಿಲ್ಲದಿದ್ದರೂ ಹಾಸನ ಜಿಲ್ಲೆಯ ಲೇಖಕಿಯರು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ತಮ್ಮ ಛಾಪನ್ನು ಮೂಡಿಸಿದ್ದಾರೆಂದರು.

ಸಾಹಿತ್ಯಕ್ಕೆ ಹಾಸನ ಜಿಲ್ಲೆಯ ಕೊಡುಗೆ ಅಪಾರವಿದೆ : ಲೇಖಕಿ ಲೀಲಾವತಿ

ಒಮ್ಮೆ ಹೆಣ್ಣಾಗು ಪ್ರಭುವೇ ಎಂಬ ನಾಟಕವನ್ನು ಹಿರಿಯ ಸಾಹಿತಿ ಭಾನು ಮುಷ್ತಾಕ್ ಬರೆದಿದ್ದು, ಆಕಾಶವಾಣಿಯಲ್ಲಿ ನಾಟಕ ರೂಪದಲ್ಲಿ ಅತ್ಯುತ್ತಮವಾಗಿ ಮೂಡಿ ಬಂದಿತು. ಹಾಗೂ ಬೆಂಕಿನ ಮಳೆ ಕಥೆ ಕೂಡ ಪ್ರಸಿದ್ಧವಾಯಿತು. ಶೈಲಜ ಹಾಸನರವರ ಕಾದಂಬರಿ ಕೂಡ ಜೀವಂತ ಘಟನೆಯನ್ನು ಪುಸ್ತಕ ರೂಪದಲ್ಲಿ ಹೊರ ತರಲಾಯಿತು. ಹಾಸನದ ಲೇಖಕಿಯರಿಂದ ರಚಿತವಾದ ಅನೇಕ ಕಥೆ, ಸಾಹಿತ್ಯಕ್ಕೆ ವಿವಿಧ ಪ್ರಶಸ್ತಿಗಳು ಲಭಿಸಿದ್ದು, ಇಂತಹ ಗಟ್ಟಿತನದ ಸಾಹಿತ್ಯದ ಸೃಷ್ಠಿಗಳು ಹಾಸನ ಜಿಲ್ಲೆಯ ಲೇಖಕಿಯರಿಂದ ಹೊರ ಬಂದಿದೆಯೆನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಹಾಗೂ ಇಲ್ಲಿ ಮಹಿಳಾ ಸಾಹಿತ್ಯದ ಕೊಡುಗೆ ಅಪಾರವಾಗಿದೆಯೆಂದು ಸಂತೋಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆ ಸುಕನ್ಯ ಮುಕುಂದರವರ ಕೃತಿ ಬಾಲಸೌರಭ ಮಕ್ಕಳ ಕವನ ಸಂಕಲವನ್ನು ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚ.ನಾ. ಅಶೋಕ್ ಬಿಡುಗಡೆ ಮಾಡಿದರು. ರಾಜ್ಯ ಮಟ್ಟದ ಲೇಖಕಿ ಪ್ರಶಸ್ತಿಯನ್ನು ದೀಪ್ತಿ ಭದ್ರಾವತಿಯವರಿಗೆ, ಲೀಲಾವತಿ ಪ್ರಧಾನ ಮಾಡಿದರು. ದಿ. ಬಂದಮ್ಮ ಸಿದ್ದರಾಮಯ್ಯ ದತ್ತಿ ಪ್ರಶಸ್ತಿಯನ್ನು ಸಾಹಿತಿ ಸುಶೀಲಾ ಸೋಮಶೇಖರ್, ಶೈಲಾಜಾ ಹಾಸನ್, ಭಾರತಿ ಹಾದಿಗೆರವರಿಗೆ ಸಮಾಜ ಸೇವಕ ಡಾ. ವೈ.ಎಸ್. ವೀರಭದ್ರಪ್ಪ ಅವರಿಗೆ ನೀಡಿ ಗೌರವಿಸಿದರು.

ಹಾಸನ : ಹಾಸನ ಜಿಲ್ಲೆ ಮಹಿಳಾ ಲೇಖಕಿಯರ ಗಟ್ಟಿತನ ಸಂದೇಶವುಳ್ಳ ಸಾಹಿತ್ಯದ ಕೊಡುಗೆ ಅಪಾರವಾಗಿರುವ ಜಿಲ್ಲೆಯೆಂದು ಲೇಖಕಿ ಲೀಲಾವತಿ ತಿಳಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಭವನದಲ್ಲಿ ಹಾಸನ ಜಿಲ್ಲಾ ಲೇಖಕಿಯರ ಬಳಗದ ವಾರ್ಷಿಕೋತ್ಸವ ಹಾಗೂ ರಾಜ್ಯ ಮಟ್ಟದ ಲೇಖಕಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಲೇಖಕಿ ಲೀಲಾವತಿ, ಎಲ್ಲಾ ಪ್ರತಿಕೂಲ ಮಾತ್ರವಲ್ಲದೇ ಪ್ರವಾಹದ ವಿರುದ್ಧ ಈಜುವ ಪ್ರಕ್ರಿಯೆಯನ್ನು ಸಾಹಿತ್ಯ ಲೋಕದಲ್ಲಿ ನಡೆಯುತ್ತದೆಯೆಂದು ಅಭಿಪ್ರಾಯಪಟ್ಟರು. ಮನೆಯಲ್ಲಿ ಸಂಸಾರದ ಜವಾಬ್ದಾರಿ ಮಾತ್ರವಲ್ಲದೇ, ಸಮಯವಿಲ್ಲದಿದ್ದರೂ ಹಾಸನ ಜಿಲ್ಲೆಯ ಲೇಖಕಿಯರು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ತಮ್ಮ ಛಾಪನ್ನು ಮೂಡಿಸಿದ್ದಾರೆಂದರು.

ಸಾಹಿತ್ಯಕ್ಕೆ ಹಾಸನ ಜಿಲ್ಲೆಯ ಕೊಡುಗೆ ಅಪಾರವಿದೆ : ಲೇಖಕಿ ಲೀಲಾವತಿ

ಒಮ್ಮೆ ಹೆಣ್ಣಾಗು ಪ್ರಭುವೇ ಎಂಬ ನಾಟಕವನ್ನು ಹಿರಿಯ ಸಾಹಿತಿ ಭಾನು ಮುಷ್ತಾಕ್ ಬರೆದಿದ್ದು, ಆಕಾಶವಾಣಿಯಲ್ಲಿ ನಾಟಕ ರೂಪದಲ್ಲಿ ಅತ್ಯುತ್ತಮವಾಗಿ ಮೂಡಿ ಬಂದಿತು. ಹಾಗೂ ಬೆಂಕಿನ ಮಳೆ ಕಥೆ ಕೂಡ ಪ್ರಸಿದ್ಧವಾಯಿತು. ಶೈಲಜ ಹಾಸನರವರ ಕಾದಂಬರಿ ಕೂಡ ಜೀವಂತ ಘಟನೆಯನ್ನು ಪುಸ್ತಕ ರೂಪದಲ್ಲಿ ಹೊರ ತರಲಾಯಿತು. ಹಾಸನದ ಲೇಖಕಿಯರಿಂದ ರಚಿತವಾದ ಅನೇಕ ಕಥೆ, ಸಾಹಿತ್ಯಕ್ಕೆ ವಿವಿಧ ಪ್ರಶಸ್ತಿಗಳು ಲಭಿಸಿದ್ದು, ಇಂತಹ ಗಟ್ಟಿತನದ ಸಾಹಿತ್ಯದ ಸೃಷ್ಠಿಗಳು ಹಾಸನ ಜಿಲ್ಲೆಯ ಲೇಖಕಿಯರಿಂದ ಹೊರ ಬಂದಿದೆಯೆನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಹಾಗೂ ಇಲ್ಲಿ ಮಹಿಳಾ ಸಾಹಿತ್ಯದ ಕೊಡುಗೆ ಅಪಾರವಾಗಿದೆಯೆಂದು ಸಂತೋಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆ ಸುಕನ್ಯ ಮುಕುಂದರವರ ಕೃತಿ ಬಾಲಸೌರಭ ಮಕ್ಕಳ ಕವನ ಸಂಕಲವನ್ನು ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚ.ನಾ. ಅಶೋಕ್ ಬಿಡುಗಡೆ ಮಾಡಿದರು. ರಾಜ್ಯ ಮಟ್ಟದ ಲೇಖಕಿ ಪ್ರಶಸ್ತಿಯನ್ನು ದೀಪ್ತಿ ಭದ್ರಾವತಿಯವರಿಗೆ, ಲೀಲಾವತಿ ಪ್ರಧಾನ ಮಾಡಿದರು. ದಿ. ಬಂದಮ್ಮ ಸಿದ್ದರಾಮಯ್ಯ ದತ್ತಿ ಪ್ರಶಸ್ತಿಯನ್ನು ಸಾಹಿತಿ ಸುಶೀಲಾ ಸೋಮಶೇಖರ್, ಶೈಲಾಜಾ ಹಾಸನ್, ಭಾರತಿ ಹಾದಿಗೆರವರಿಗೆ ಸಮಾಜ ಸೇವಕ ಡಾ. ವೈ.ಎಸ್. ವೀರಭದ್ರಪ್ಪ ಅವರಿಗೆ ನೀಡಿ ಗೌರವಿಸಿದರು.

Intro:ಹಾಸನ: ಜಿಲ್ಲೆ ಎಂದರೇ ಮಹಿಳಾ ಲೇಖಕಿಯರ ಗಟ್ಟಿತನ ಸಂದೇಶವುಳ್ಳ ಸಾಹಿತ್ಯದ ಕೊಡುಗೆ ಅಪಾರವಾಗಿದೆ ಎಂದು ಲೇಖಕಿ ಲೀಲಾವತಿ ತಿಳಿಸಿದರು.
​ ​ ​ ​ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಹಾಸನ ಜಿಲ್ಲಾ ಲೇಖಕಿಯರ ಬಳಗದ ವಾರ್ಷಿಕೋತ್ಸವ ಹಾಗೂ ರಾಜ್ಯ ಮಟ್ಟದ ಲೇಖಕಿ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು,
ಹಾಸನ ಜಿಲ್ಲೆಯ ಲೇಖಕಿಯರು ಎಂದರೇ ಅವರ ಬದುಕಿನ ಜೀವಂತಿಕೆಯ ಒಂದು ಗಟ್ಟಿಯಾದ ಸಂದೇಶವಾಗಿದೆ. ಎಲ್ಲಾ ಪ್ರತಿಕೂಲ ಮಾತ್ರವಲ್ಲದೇ ಪ್ರವಾಹದ ವಿರುದ್ಧ ಈಜುವ ಪ್ರಕ್ರಿಯೆಯನ್ನು ಸಾಹಿತ್ಯ ಲೋಕದಲ್ಲಿ ನಡೆಯುತ್ತದೆ ಎಂದು ಅಭಿಪ್ರಾಯಪಟ್ಟರು. ಮನೆಯಲ್ಲಿ ಸಂಸಾರದ ಜವಬ್ಧಾರಿ ಸೇರಿ ಸಮಯವಿಲ್ಲದಿದ್ದರೂ ಹಾಸನ ಜಿಲ್ಲೆಯ ಲೇಖಕಿಯರು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ತಮ್ಮ ಛಾಪನ್ನು ಮೂಡಿಸಿದ್ದಾರೆ. ಒಮ್ಮೆ ಹೆಣ್ಣಾಗು ಪ್ರಭುವೇ ಎಂಬ ನಾಟಕವನ್ನು ಹಿರಿಯ ಸಾಹಿತಿ ಭಾನು ಮುಷ್ತಾಕ್ ಬರೆದಿದ್ದು, ಇದು ಆಕಾಶವಾಣಿಯಲ್ಲಿ ನಾಟಕ ರೂಪದಲ್ಲಿ ಅತ್ಯುತ್ತಮವಾಗಿ ಮೂಡಿ ಬಂದಿತು. ಹಾಗೂ ಬೆಂಕಿನ ಮಳೆ ಕಥೆ ಕೂಡ ಪ್ರಸಿದ್ಧವಾಯಿತು. ಶೈಲಜ ಹಾಸನರವರ ಕಾದಾಂಬರಿ ಕೂಡ ಜೀವಂತ ಘಟನೆಯನ್ನು ಪುಸ್ತಕ ರೂಪದಲ್ಲಿ ಹೊರ ತರಲಾಯಿತು. ಹಾಸನದ ಲೇಖಕಿಯರಿಂದ ರಚಿತವಾದ ಅನೇಕ ಕಥೆ, ಸಾಹಿತ್ಯಕ್ಕೆ ವಿವಿಧ ಪ್ರಶಸ್ತಿಗಳು ಲಭಿಸಿದ್ದು, ಇಂತಹ ಗಟ್ಟಿತನದ ಸಾಹಿತ್ಯದ ಸೃಷ್ಠಿಗಳು ಹಾಸನ ಜಿಲ್ಲೆಯ ಲೇಖಕಿಯರಿಂದ ಹೊರ ಬಂದಿದೆ ಎನ್ನುವುದು ನಮ್ಮೆಲ್ಲಾರಿಗೂ ಹೆಮ್ಮೆಯ ವಿಷಯವಾಗಿದೆ ಹಾಗೂ ಇಲ್ಲಿ ಮಹಿಳಾ ಸಾಹಿತ್ಯದ ಕೊಡುಗೆ ಅಪಾರವಾಗಿದೆ ಎಂದು ಸಂತೋಷವ್ಯಕ್ತಪಡಿಸಿದರು. ಜಾನ ತೇಜಸ್ವಿ ಕೂಡ ಉತ್ತಮ ಲೇಖಕಿಯಾಗಿದ್ದು, ಅವರ ಬೆಂಬಲವಾಗಿ ನಿಂತಿದವರು ಜ.ಹೋ. ನಾರಾಯಣಸ್ವಾಮಿಯಂತಹ ದೊಡ್ಡ ಹಿಮಾಲಯ ಪರ್ವತದಂತಹ ವ್ಯಕ್ತಿತ್ವ ಉಳ್ಳವರು. ಭಾನುಮುಷ್ತಾಕ್ ರಂತಹ ಅನೇಕರು ತಮ್ಮ ಸಾಹಿತ್ಯದ ಮೂಲಕ ಅವರೇ ಬದುಕು ಕಟ್ಟಿಕೊಂಡವರು ಎಂದು ಇದೆ ವೇಳೆ ಅನೇಕ ಜನ ಹಿರಿಯ ಸಾಹಿತಿಗಳನ್ನು ನೆನಪಿಸಿಕೊಂಡರು.
​ ​ ​ ​ ಕಾರ್ಯಕ್ರಮದಲ್ಲಿ ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆ ಸುಕನ್ಯ ಮುಕುಂದರವರ ಕೃತಿ ಬಾಲಸೌರಭ ಮಕ್ಕಳ ಕವನ ಸಂಕಲವನ್ನು ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚ.ನಾ. ಅಶೋಕ್ ಬಿಡುಗಡೆ ಮಾಡಿದರು. ರಾಜ್ಯ ಮಟ್ಟದ ಲೇಖಕಿ ಪ್ರಶಸ್ತಿಯನ್ನು ದೀಪ್ತಿ ಭದ್ರಾವತಿಯವರಿಗೆ ಲೀಲಾವತಿ ಪ್ರಧಾನ ಮಾಡಿದರು. ದಿ||ಬಂದಮ್ಮ ಸಿದ್ದರಾಮಯ್ಯ ದತ್ತಿ ಪ್ರಶಸ್ತಿಯನ್ನು ಸಾಹಿತಿ ಸುಶೀಲಾ ಸೋಮಶೇಖರ್, ಶೈಲಾಜಾ ಹಾಸನ್, ಭಾರತಿ ಹಾದಿಗೆರವರಿಗೆ ಪ್ರಶಸ್ತಿಯನ್ನು ಸಮಾಜ ಸೇವಕ ಡಾ|| ವೈ.ಎಸ್. ವೀರಭದ್ರಪ್ಪ ಇತರರಿಗೆ ನೀಡಿ ಗೌರವಿಸಿದರು.

ಬೈಟ್ ೧ : ಲೀಲಾವತಿ, ಲೇಖಕಿ.

​ ​ ​ ​ ​ ಈಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆ ಸುಕನ್ಯ ಮುಕುಂದ, ಕಾರ್ಯದರ್ಶಿ ಶಾಂತ ಅತ್ನಿ, ಸಹ ಕಾರ್ಯದರ್ಶಿ ಜಯರಮೇಶ್, ಮಂಗಳ ವೆಂಕಟೇಶ್, ಜಾವಗಲ್ ಪ್ರಸನ್ನ, ಉದಯರವಿ ಇತರರು ಪಾಲ್ಗೊಂಡಿದ್ದರು.Body:-ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.Conclusion:೦
ETV Bharat Logo

Copyright © 2024 Ushodaya Enterprises Pvt. Ltd., All Rights Reserved.