ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಮೊಮ್ಮಗ, ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಕಷ್ಟ ಎದುರಾಗಿದೆ. ಲೋಕಸಭಾ ಚುನಾವಣೆಯಲ್ಲಿ ತಪ್ಪು ಆಸ್ತಿ ವಿವರ ದಾಖಲೆ ನೀಡಿದ ಆರೋಪದಡಿ ತನಿಖೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.
![ವಕೀಲ ದೇವರಾಜೇಗೌಡ (ದೂರುದಾರ)](https://etvbharatimages.akamaized.net/etvbharat/prod-images/prajwalrevanna_15022022121148_1502f_1644907308_83.jpg)
ಪ್ರಜ್ವಲ್ ರೇವಣ್ಣ 23ನೇ ವಯಸ್ಸಿನಲ್ಲಿಯೇ 23 ಕೋಟಿ ಆಸ್ತಿಯನ್ನು ಹೇಗೆ ಸಂಪಾದಿಸಿದರು ಎಂದು ಪ್ರಶ್ನಿಸಿ ವಕೀಲ ದೇವರಾಜೇಗೌಡ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಅಲ್ಲದೇ ಪ್ರಜ್ವಲ್ ರೇವಣ್ಣ ವಿರುದ್ದ ಬೇನಾಮಿ ಆಸ್ತಿ ಮತ್ತು ಗೋಮಾಳ ಕಬಳಿಕೆ ಆರೋಪ ಮಾಡಿದ್ದರು. ಈ ದೂರು ದಾಖಲಾಗಿ ಮೂರು ವರ್ಷದ ನಂತರ ಈಗ ಆಸ್ತಿ ವಿವರದ ತನಿಖೆಯಾಗಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.