ETV Bharat / state

ಹಾಸನದಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ಮತ್ತು ಉದ್ಯೋಗ ಮೇಳ..

author img

By

Published : Sep 27, 2019, 10:22 AM IST

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಕೌಶಲ್ಯ ಅಭಿವೃದ್ಧಿ ತರಬೇತಿ ಮತ್ತು ಉದ್ಯೋಗ ಮೇಳವನ್ನು ಹಾಸನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಉದ್ಯೋಗ ಮೇಳ

ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಕೌಶಲ್ಯ ಅಭಿವೃದ್ಧಿ ತರಬೇತಿ ಮತ್ತು ಉದ್ಯೋಗ ಮೇಳ-2019 ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್, ಎಸ್ಸಿ ಮತ್ತು ಎಸ್ಟಿ ವರ್ಗಕ್ಕೆ ಸೇರಿದ ಯುವಕ-ಯುವತಿಯರು ಸಾಮಾಜಿಕವಾಗಿ, ಆರ್ಥಿಕವಾಗಿ ಸಶಕ್ತರಾಗಲು ಇದೊಂದು ಸುವರ್ಣ ಅವಕಾಶ. ನಿಮ್ಮ ಮನೆ ಬಾಗಿಲಿಗೆ ಬಂದು ಸರ್ಕಾರ ನಿಮ್ಮ ಶಿಕ್ಷಣಕ್ಕೆ ತಕ್ಕ ಉದ್ಯೋಗ ನೀಡಲು ಮುಂದಾಗಿದೆ. ಇಲ್ಲಿ ತರಬೇತಿ ನೀಡಿದ ನಂತರ ನೇಮಕಾತಿ ಮಾಡಿಕೊಳ್ಳುವ ಭರವಸೆ ಸಿಗಲಿದೆ. ಸೂಕ್ತ ವಿದ್ಯಾರ್ಹತೆ ಹೊಂದಿರುವವರು ತಕ್ಕ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

ಹಾಸನದಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ಮತ್ತು ಉದ್ಯೋಗ ಮೇಳ..

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಮಾತನಾಡಿ, ಗ್ರಾಮಾಂತರ ಪ್ರದೇಶದ ಅಭ್ಯರ್ಥಿಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರೂ ಇದರಲ್ಲಿ ಭಾಗವಹಿಸಬಹುದಾಗಿದೆ. ಈ ಸಂದರ್ಶನದಲ್ಲಿ ಆಯ್ಕೆಯಾಗದವರ ಹೆಸರನ್ನು ಪಟ್ಟಿಯಲ್ಲಿ ಇಟ್ಟಿಕೊಂಡಿರಲಾಗುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ಮುಂದೆ ಅವರಿಗೆ ಅವಕಾಶ ಸಿಗಬಹುದು ಎಂದು ಹೇಳಿದರು.

ಇನ್ನು, ಮೇಳದಲ್ಲಿ ಫಾರ್ಮಸಿ ಸಹಾಯಕ ಹುದ್ದೆ, ಹಾಸ್ಪಿಟಲ್ ಆಪರೇಷನ್ ಎಕ್ಸಿಕ್ಯೂಟಿವ್, ಟಿಯಾರಾ, ಅನಸ್ತೇಷಿಯಾ ಟೆಕ್ನಿಷಿಯನ್, ಡ್ಯೂಟಿ ಮ್ಯಾನೇಜರ್, ಹಾಸ್ಪಿಟಲ್ ನರ್ಸ್ ಫಾರ್ ಅಡ್ವಾನ್ಸಡ್ ಕೇರ್, ಕ್ರಿಟಿಕಲ್ ಕೇರ್ ಸಹಾಯಕ ಜನರಲ್ ಐಸಿಯು ಹಾಗೂ ಕಾರ್ಡಿಯಾಕ್ ಕೇರ್ ಟೆಕ್ನಿಷಿಯನ್ ಪ್ರೋಗ್ರಾಮ್ ಇತರೆ ಹುದ್ದೆಗಳಿಗೆ ತರಬೇತಿ ನೀಡುವ ಕುಶಲತೆಗಳಿಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಯಿತು.

ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಕೌಶಲ್ಯ ಅಭಿವೃದ್ಧಿ ತರಬೇತಿ ಮತ್ತು ಉದ್ಯೋಗ ಮೇಳ-2019 ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್, ಎಸ್ಸಿ ಮತ್ತು ಎಸ್ಟಿ ವರ್ಗಕ್ಕೆ ಸೇರಿದ ಯುವಕ-ಯುವತಿಯರು ಸಾಮಾಜಿಕವಾಗಿ, ಆರ್ಥಿಕವಾಗಿ ಸಶಕ್ತರಾಗಲು ಇದೊಂದು ಸುವರ್ಣ ಅವಕಾಶ. ನಿಮ್ಮ ಮನೆ ಬಾಗಿಲಿಗೆ ಬಂದು ಸರ್ಕಾರ ನಿಮ್ಮ ಶಿಕ್ಷಣಕ್ಕೆ ತಕ್ಕ ಉದ್ಯೋಗ ನೀಡಲು ಮುಂದಾಗಿದೆ. ಇಲ್ಲಿ ತರಬೇತಿ ನೀಡಿದ ನಂತರ ನೇಮಕಾತಿ ಮಾಡಿಕೊಳ್ಳುವ ಭರವಸೆ ಸಿಗಲಿದೆ. ಸೂಕ್ತ ವಿದ್ಯಾರ್ಹತೆ ಹೊಂದಿರುವವರು ತಕ್ಕ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

ಹಾಸನದಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ಮತ್ತು ಉದ್ಯೋಗ ಮೇಳ..

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಮಾತನಾಡಿ, ಗ್ರಾಮಾಂತರ ಪ್ರದೇಶದ ಅಭ್ಯರ್ಥಿಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರೂ ಇದರಲ್ಲಿ ಭಾಗವಹಿಸಬಹುದಾಗಿದೆ. ಈ ಸಂದರ್ಶನದಲ್ಲಿ ಆಯ್ಕೆಯಾಗದವರ ಹೆಸರನ್ನು ಪಟ್ಟಿಯಲ್ಲಿ ಇಟ್ಟಿಕೊಂಡಿರಲಾಗುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ಮುಂದೆ ಅವರಿಗೆ ಅವಕಾಶ ಸಿಗಬಹುದು ಎಂದು ಹೇಳಿದರು.

ಇನ್ನು, ಮೇಳದಲ್ಲಿ ಫಾರ್ಮಸಿ ಸಹಾಯಕ ಹುದ್ದೆ, ಹಾಸ್ಪಿಟಲ್ ಆಪರೇಷನ್ ಎಕ್ಸಿಕ್ಯೂಟಿವ್, ಟಿಯಾರಾ, ಅನಸ್ತೇಷಿಯಾ ಟೆಕ್ನಿಷಿಯನ್, ಡ್ಯೂಟಿ ಮ್ಯಾನೇಜರ್, ಹಾಸ್ಪಿಟಲ್ ನರ್ಸ್ ಫಾರ್ ಅಡ್ವಾನ್ಸಡ್ ಕೇರ್, ಕ್ರಿಟಿಕಲ್ ಕೇರ್ ಸಹಾಯಕ ಜನರಲ್ ಐಸಿಯು ಹಾಗೂ ಕಾರ್ಡಿಯಾಕ್ ಕೇರ್ ಟೆಕ್ನಿಷಿಯನ್ ಪ್ರೋಗ್ರಾಮ್ ಇತರೆ ಹುದ್ದೆಗಳಿಗೆ ತರಬೇತಿ ನೀಡುವ ಕುಶಲತೆಗಳಿಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಯಿತು.

Intro:ಹಾಸನ: ಪರಿಶಿಷ್ಠ ಜಾತಿ/ಪರಿಶಿಷ್ಟ ಪಂಗಡದ ಯುವಕ-ಯುವತಿಯರು ಸಾಮಾಜಿಕವಾಗಿ ಸಧೃಡ-ಆರ್ಥಿಕವಾಗಿ ಸಶಕ್ತರಾಗಲು ಕೌಶಲ್ಯ ತರಬೇತಿಯನ್ನು ನೀಡಿ ನಂತರ ಉದ್ಯೋಗ ಕಲ್ಪಿಸುವ ಕೆಲಸ ಮಾಡಲಾಗುತ್ತಿದ್ದು ಇದರ ಪ್ರಯೋಜನ ಪಡೆಯುವಂತೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್‍ಯನಿರ್ವಹಣಾಧಿಕಾರಿ ಪರಮೇಶ್ ಸಲಹೆ ನೀಡಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಪರಿಶಿಷ್ಠ ಜಾತಿ/ಪರಿಶೀಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಮತ್ತು ಉದ್ಯೋಗ ಮೇಳ೨೦೧೯ನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಶಿಷ್ಠ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಯುವಕ-ಯುವತಿಯರಿಗೆ ಇದೊಂದು ಸುವರ್ಣ ಅವಕಾಶ. ನಿಮ್ಮ ಮನೆ ಬಾಗಿಲಿಗೆ ಬಂದು ಸರಕಾರ ನಿಮ್ಮ ಶಿಕ್ಷಣಕ್ಕೆ ತಕ್ಕೆ ಉದ್ಯೋಗ ನೀಡಲು ಮುಂದಾಗಿದೆ. ಇಲ್ಲಿ ತರಬೇತಿ ನಂತರ ನೇಮಕಾತಿ ಮಾಡಿಕೊಳ್ಳುವ ಭರವಸೆ ಸಿಗಲಿದೆ. ಸೂಕ್ತ ವಿದ್ಯಾರ್ಹತೆ ಹೊಂದಿರುವವರು ತಕ್ಕ ಉದ್ಯೋಗಕ್ಕೆ ಅರ್ಜಿಸಲ್ಲಿಸಬಹುದಾಗಿದೆ ಎಂದರು. ಸರಕಾರದಿಂದ ಹೊರಗೆ ಇರುವ ಖಾಸಗಿ ಆಸ್ಪತ್ರೆಯಲ್ಲೂ ಕೂಡ ಕೆಲಸ ಮಾಡುವ ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ. ಶ್ರದ್ಧೆಯಿಂದ ಈ ಉದ್ಯೋಗ ತರಬೇತಿಯಲ್ಲಿ ಪಾಲ್ಗೊಂಡು ಎಲ್ಲಾರೂ ಉದ್ಯೋಗ ಪಡೆಯಿರಿ ಎಂದು ಹಾರೈಸಿದರು.
ಜಿಲ್ಲಾ ಸರಕಾರಿ ಆಸ್ಪತ್ರೆಯ ಕೃಷ್ಣಮೂರ್ತಿರವರು ಮಾತನಾಡಿ, ಸಾಮಾನ್ಯರು ಸದೃಢರಾಗಿ, ಆರ್ಥಿಕವಾಗಿ ಸಶಕ್ತರಾಗಲು ಅವರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಅವಕಾಶ ಕಲ್ಪಿಸಿಕೊಡಲು ಈ ನಿಟ್ಟಿನಲ್ಲಿ ಸರಕಾರ ಹಲವಾರು ಯೋಜನೆಯನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಇಲ್ಲಿ ಆಯ್ಕೆ ಮಾಡಿ ನಂತರ ತರಬೇತಿ ನೀಡುತ್ತಾರೆ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ|| ಸತೀಶ್ ಮಾತನಾಡಿ, ಇಡೀ ರಾಜ್ಯಾಧ್ಯಂತ ಪಿ.ಯು.ಸಿ (ವಿಜ್ಞಾನ), ಬಿ.ಎಸ್ಸಿ. ನರ್ಸಿಂಗ್/ಜಿ.ಎನ್.ಎಂ/ಎ.ಎನ್.ಎಂ ಉತ್ತೀರ್ಣ ಹಾಗೂ ಯಾವುದೇ ಪದವಿ ತೇರ್ಗಡೆಯಾಗಿರುವ ಪರಿಶಿಷ್ಠ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ಸಂದರ್ಶನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು. ಗ್ರಾಮಂತರ ಪ್ರದೇಶದ ಅಭ್ಯರ್ಥಿಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರು ಇದರಲ್ಲಿ ಭಾಗವಹಿಸಬಹುದಾಗಿದೆ. ಈಸಂದರ್ಶನದಲ್ಲಿ ಯಾರು ಆಯ್ಕೆಯಾಗುವುದಿಲ್ಲ ಅವರನ್ನು ಪಟ್ಟಿಯಲ್ಲಿ ಇಟ್ಟಿಕೊಂಡಿರಲಾಗುತ್ತದೆ. ಆಯ್ಕೆ ಪ್ರಕ್ರೀಯೆಯಲ್ಲಿ ಮುಂದೆ ಅವರಿಗೆ ಅವಕಾಶ ಸಿಗಬಹುದು ಎಂದು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಈ ಕೃಷ್ಣೇಗೌಡ ಮಾತನಾಡಿ, ಸಂದರ್ಶನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆಸಕ್ತ ಅರ್ಹ ೧೮ ರಿಂದ ೩೫ ವರ್ಷದೊಳಗಿನ ಅಭ್ಯರ್ಥಿಗಳು ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ವಿವರ, ಎಸ್.ಎಸ್.ಎಲ್.ಸಿ/ಪಿ.ಯು.ಸಿ (ವಿಜ್ಞಾನ), ಬಿ.ಎಸ್ಸಿ. ನರ್ಸಿಂಗ್/ಜಿ.ಎನ್.ಎಂ/ಎ.ಎನ್.ಎಂ/ಪದವಿ ಪರೀಕ್ಷೆ ದಾಖಲಾತಿಗಳ ಮೂಲ ಮತ್ತು ನಕಲು ಪತ್ರಿಗಳೊಂದಿಗೆ ಹಾಜರಾಗಿ ಉದ್ಯೋಗದ ಸದವಕಾಶವನ್ನು ಹಾಸನ ಜಿಲ್ಲಾ ಸರ್ಕಾರಿ ನೌಕರರ ಕುಟುಂಬದವರೂ ಪಡೆಯುವಂತೆ ಸಲಹೆ ನೀಡಿದರು.
ಫಾರ್‍ಮಸಿ ಸಹಾಯಕ ಹುದ್ದೆ, ಹಾಸ್ಪಿಟಲ್ ಆಪರೇಷನ್ ಎಕ್ಸಿಕ್ಯೂಟೀವ್, ಟಿಯಾರಾ, ಅನೆಸ್ತೇಷಿಯಾ ಟೆಕ್ನಿಷಿಯನ್, ಡ್ಯೂಟಿ ಮ್ಯಾನೇಜರ್, ಹಾಸ್ಪಿಟಲ್ ನರ್ಸ್ ಫಾರ್ ಅಡ್ವಾನ್ಸಡ್ ಕೇರ್, ಕ್ರಿಟಿಕಲ್ ಕೇರ್ ಸಹಾಯಕ ಜನರಲ್ ಐಸಿಯು ಹಾಗೂ ಕಾರ್ಡಿಯಾಕ್ ಕೇರ್ ಟೆಕ್ನಿಷಿಯಾನ್ ಪ್ರೋಗ್ರಾಮ್ ಇತರೆಗಳಿಗೆ ತರಬೇತಿ ನೀಡುವ ಕುಶಲತೆಗೆ ಆಯ್ಕೆ ಮಾಡಲಾಯಿತು.
Body:- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.Conclusion:೦

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.