ETV Bharat / state

ಮಹಿಳಾ ರೈಲ್ವೆ ಅಧಿಕಾರಿ ಜೊತೆ ಅನುಚಿತ ವರ್ತನೆ ಆರೋಪ: ಶಾಸಕ ಶಿವಲಿಂಗೇಗೌಡರಿಗೆ ತರಾಟೆ

author img

By

Published : Jan 10, 2020, 11:00 PM IST

ಶಾಸಕ ಶಿವಲಿಂಗೇಗೌಡ ಅವರು ಅನುಚಿತವಾಗಿ ವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ರೈಲ್ವೆ ಮಹಿಳಾ ಅಧಿಕಾರಿಯೊಬ್ಬರು ಶಾಸಕನ ವಿರುದ್ಧ ಹರಿಹಾಯ್ದು ಮೇಲಧಿಕಾರಿಗಳಿಗೆ ದೂರು ನೀಡಿದ ಘಟನೆ ಜಿಲ್ಲೆಯ ಅರಸೀಕೆರೆಯ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

shivalingegowda-improper-conduct-with-female-railway-officer
ಮಹಿಳಾ ರೈಲ್ವೆ ಅಧಿಕಾರಿ ಜೊತೆ ಶಾಸಕ ಶಿವಲಿಂಗೇಗೌಡ ಅನುಚಿತ ವರ್ತನೆ ಆರೋಪ

ಹಾಸನ: ಅನುಚಿತವಾಗಿ ವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ರೈಲ್ವೆ ಮಹಿಳಾ ಅಧಿಕಾರಿಯೊಬ್ಬರು ಶಾಸಕನ ವಿರುದ್ಧ ಹರಿಹಾಯ್ದು ಮೇಲಧಿಕಾರಿಗಳಿಗೆ ದೂರು ನೀಡಿದ ಘಟನೆ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದಿದೆ.

ಅರಸೀಕೆರೆ ರೈಲು ನಿಲ್ದಾಣದ ಪರಿವೀಕ್ಷಣೆಗೆ ರೈಲ್ವೆ ಉನ್ನತಾಧಿಕಾರಿಗಳು ಮತ್ತು ಮೈಸೂರಿನ ವಿಭಾಗಿಯ ಅಧಿಕಾರಿಗಳು ಆಗಮಿಸಿದ ವೇಳೆ ರೈಲ್ವೇ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್ ರವರಿಗೆ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕುರಿತು ಶಾಸಕ ಶಿವಲಿಂಗೇಗೌಡ ಮನವಿ ಸಲ್ಲಿಸಿದ್ದರು. ಬಳಿಕ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಬೆಳೆದಿದ್ದ ಗಿಡಗಂಟೆಗಳನ್ನು ತೆರವುಗೊಳಿಸಬೇಕು ಅಂತಹ ಸಾರ್ವಜನಿಕರು ಕೂಡಾ ಮನವಿ ಮಾಡಿದರು.

ಮಹಿಳಾ ರೈಲ್ವೆ ಅಧಿಕಾರಿ ಜೊತೆ ಶಾಸಕ ಶಿವಲಿಂಗೇಗೌಡ ಅನುಚಿತ ವರ್ತನೆ ಆರೋಪ

ಈ ವೇಳೆ ಮೈಸೂರು ವೀಭಾಗಿಯ ರೈಲ್ವೆ ಮಹಿಳಾ ಅಧಿಕಾರಿ ಅಪರ್ಣ ಗರ್ಗ್ ಜೊತೆ ಇಲಾಖೆಯ ಜನರಲ್ ಮ್ಯಾನೇಜರ್ ಮಾತನಾಡುತ್ತಿರುವ ಸಂದರ್ಭದಲ್ಲಿ ಅವರ ಹಿಂಭಾಗದಲ್ಲಿ ನಿಂತಿದ್ದ ಶಾಸಕರ ಕೈ ಆಕಸ್ಮಾತ್ ಅಪರ್ಣ ಅವರ ಭುಜಕ್ಕೆ ತಗುಲಿದ್ದರಿಂದ ಸಿಟ್ಟಿಗೆದ್ದ ಅವರು ಏಕಾಏಕಿ ಶಾಸಕರ ವಿರುದ್ಧ ಹರಿಹಾಯ್ದರು.

ನೀವೊಬ್ಬರು ಶಾಸಕರಾಗಿದ್ದು ನನ್ನೊಂದಿಗೆ ಅನುಚಿತವಾಗಿ ವರ್ತನೆ ಮಾಡುವುದಕ್ಕೆ ನಾಚಿಕೆ ಆಗಲ್ವಾ ಅಂತ ಸಾರ್ವಜನಿಕರ ಎದುರು ಆಂಗ್ಲ ಭಾಷೆಯಲ್ಲಿ ಬೈಯ್ಯುವುದಕ್ಕೆ ಪ್ರಾರಂಭಿಸಿ ಶಾಸಕರನ್ನ ತರಾಟೆಗೆ ತೆಗೆದುಕೊಂಡರು.

ಇದರಿಂದ ಮುಜುಗರಕ್ಕೆ ಒಳಗಾದ ಶಾಸಕರು, ನಾನು ಬೇಕು ಅಂತ ಮಾಡಲಿಲ್ಲ. ನನ್ನ ಹಿಂಬದಿ ಇದ್ದ ಕೆಲವರು ನೂಕಾಟ ಮಾಡಿದ್ದರಿಂದ ನನಗೆ ತಿಳಿಯದಂತೆ ತಮ್ಮ ಭುಜಕ್ಕೆ ನನ್ನ ಕೈ ತಾಕಿರಬಹುದು. ನನಗೆ ತಿಳಿಯದೆ ಆಗಿದೆ. ಆದರೆ ನಾನು ನಿಮ್ಮೊಂದಿಗೆ ಅನುಚಿತವಾಗಿ ವರ್ತನೆ ಮಾಡಿಲ್ಲ. ಹಾಗೇನಾದರು ತಮ್ಮ ದೃಷ್ಟಿಯಲ್ಲಿ ನಾನು ತಪ್ಪು ಮಾಡಿದ್ದೇನೆ ಅಂತ ಅನಿಸಿದರೆ ನಾನು ಕ್ಷಮೆ ಕೇಳುತ್ತೇನೆ ಎಂದು ಸ್ಥಳದಲ್ಲಿಯೇ ಎಲ್ಲರೆದುರು ಕ್ಷಮೆ ಕೇಳಿ ಅಲ್ಲಿಂದ ಹೊರಟೇ ಬಿಟ್ಟರು.

ಒಟ್ಟಾರೆ ರೈಲ್ವೆ ಅಭಿವೃದ್ಧಿ ವಿಚಾರವಾಗಿ ಆಗಮಿಸಿದ್ದ ಅಧಿಕಾರಿಗಳು ಸಂಬಂಧಪಟ್ಟವರನ್ನು ಮಾತ್ರ ಸ್ಥಳಕ್ಕೆ ಆಹ್ವಾನಿಸದೆ ಸಾರ್ವಜನಿಕರನ್ನು ಆಹ್ವಾನಿಸಿದ್ದರಿಂದ ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿ ಇಂತಹದೊಂದು ಪ್ರಮಾದ ಜರಗಿದ್ದು, ಇದು ರೈಲ್ವೆ ಪೊಲೀಸರ ಕರ್ತವ್ಯ ಲೋಪವನ್ನು ಎತ್ತಿ ತೋರಿಸುತ್ತದೆ.

ಹಾಸನ: ಅನುಚಿತವಾಗಿ ವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ರೈಲ್ವೆ ಮಹಿಳಾ ಅಧಿಕಾರಿಯೊಬ್ಬರು ಶಾಸಕನ ವಿರುದ್ಧ ಹರಿಹಾಯ್ದು ಮೇಲಧಿಕಾರಿಗಳಿಗೆ ದೂರು ನೀಡಿದ ಘಟನೆ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದಿದೆ.

ಅರಸೀಕೆರೆ ರೈಲು ನಿಲ್ದಾಣದ ಪರಿವೀಕ್ಷಣೆಗೆ ರೈಲ್ವೆ ಉನ್ನತಾಧಿಕಾರಿಗಳು ಮತ್ತು ಮೈಸೂರಿನ ವಿಭಾಗಿಯ ಅಧಿಕಾರಿಗಳು ಆಗಮಿಸಿದ ವೇಳೆ ರೈಲ್ವೇ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್ ರವರಿಗೆ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕುರಿತು ಶಾಸಕ ಶಿವಲಿಂಗೇಗೌಡ ಮನವಿ ಸಲ್ಲಿಸಿದ್ದರು. ಬಳಿಕ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಬೆಳೆದಿದ್ದ ಗಿಡಗಂಟೆಗಳನ್ನು ತೆರವುಗೊಳಿಸಬೇಕು ಅಂತಹ ಸಾರ್ವಜನಿಕರು ಕೂಡಾ ಮನವಿ ಮಾಡಿದರು.

ಮಹಿಳಾ ರೈಲ್ವೆ ಅಧಿಕಾರಿ ಜೊತೆ ಶಾಸಕ ಶಿವಲಿಂಗೇಗೌಡ ಅನುಚಿತ ವರ್ತನೆ ಆರೋಪ

ಈ ವೇಳೆ ಮೈಸೂರು ವೀಭಾಗಿಯ ರೈಲ್ವೆ ಮಹಿಳಾ ಅಧಿಕಾರಿ ಅಪರ್ಣ ಗರ್ಗ್ ಜೊತೆ ಇಲಾಖೆಯ ಜನರಲ್ ಮ್ಯಾನೇಜರ್ ಮಾತನಾಡುತ್ತಿರುವ ಸಂದರ್ಭದಲ್ಲಿ ಅವರ ಹಿಂಭಾಗದಲ್ಲಿ ನಿಂತಿದ್ದ ಶಾಸಕರ ಕೈ ಆಕಸ್ಮಾತ್ ಅಪರ್ಣ ಅವರ ಭುಜಕ್ಕೆ ತಗುಲಿದ್ದರಿಂದ ಸಿಟ್ಟಿಗೆದ್ದ ಅವರು ಏಕಾಏಕಿ ಶಾಸಕರ ವಿರುದ್ಧ ಹರಿಹಾಯ್ದರು.

ನೀವೊಬ್ಬರು ಶಾಸಕರಾಗಿದ್ದು ನನ್ನೊಂದಿಗೆ ಅನುಚಿತವಾಗಿ ವರ್ತನೆ ಮಾಡುವುದಕ್ಕೆ ನಾಚಿಕೆ ಆಗಲ್ವಾ ಅಂತ ಸಾರ್ವಜನಿಕರ ಎದುರು ಆಂಗ್ಲ ಭಾಷೆಯಲ್ಲಿ ಬೈಯ್ಯುವುದಕ್ಕೆ ಪ್ರಾರಂಭಿಸಿ ಶಾಸಕರನ್ನ ತರಾಟೆಗೆ ತೆಗೆದುಕೊಂಡರು.

ಇದರಿಂದ ಮುಜುಗರಕ್ಕೆ ಒಳಗಾದ ಶಾಸಕರು, ನಾನು ಬೇಕು ಅಂತ ಮಾಡಲಿಲ್ಲ. ನನ್ನ ಹಿಂಬದಿ ಇದ್ದ ಕೆಲವರು ನೂಕಾಟ ಮಾಡಿದ್ದರಿಂದ ನನಗೆ ತಿಳಿಯದಂತೆ ತಮ್ಮ ಭುಜಕ್ಕೆ ನನ್ನ ಕೈ ತಾಕಿರಬಹುದು. ನನಗೆ ತಿಳಿಯದೆ ಆಗಿದೆ. ಆದರೆ ನಾನು ನಿಮ್ಮೊಂದಿಗೆ ಅನುಚಿತವಾಗಿ ವರ್ತನೆ ಮಾಡಿಲ್ಲ. ಹಾಗೇನಾದರು ತಮ್ಮ ದೃಷ್ಟಿಯಲ್ಲಿ ನಾನು ತಪ್ಪು ಮಾಡಿದ್ದೇನೆ ಅಂತ ಅನಿಸಿದರೆ ನಾನು ಕ್ಷಮೆ ಕೇಳುತ್ತೇನೆ ಎಂದು ಸ್ಥಳದಲ್ಲಿಯೇ ಎಲ್ಲರೆದುರು ಕ್ಷಮೆ ಕೇಳಿ ಅಲ್ಲಿಂದ ಹೊರಟೇ ಬಿಟ್ಟರು.

ಒಟ್ಟಾರೆ ರೈಲ್ವೆ ಅಭಿವೃದ್ಧಿ ವಿಚಾರವಾಗಿ ಆಗಮಿಸಿದ್ದ ಅಧಿಕಾರಿಗಳು ಸಂಬಂಧಪಟ್ಟವರನ್ನು ಮಾತ್ರ ಸ್ಥಳಕ್ಕೆ ಆಹ್ವಾನಿಸದೆ ಸಾರ್ವಜನಿಕರನ್ನು ಆಹ್ವಾನಿಸಿದ್ದರಿಂದ ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿ ಇಂತಹದೊಂದು ಪ್ರಮಾದ ಜರಗಿದ್ದು, ಇದು ರೈಲ್ವೆ ಪೊಲೀಸರ ಕರ್ತವ್ಯ ಲೋಪವನ್ನು ಎತ್ತಿ ತೋರಿಸುತ್ತದೆ.

Intro:File name: NUTRITION CITY CHILDREN
Location: Bangalore

Head line: ಉದ್ಯಾನನಗರೀ ಬೆಂಗಳೂರಿನಲ್ಲೂ ಬಳಲುತ್ತಿದ್ದಾರೆ ತೀವ್ರ ಅಪೌಷ್ಟಿಕತೆ ಮಕ್ಕಳು...

Weblead: ಗ್ರಾಮೀಣ ಭಾಗದ ಬಡ ಕುಟುಂಬ
ಗಳಲ್ಲಿ ಪೌಷ್ಟಿಕ ಆಹಾರದ ಕೊರತೆಯಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಕಾಣಿಸಿಕೊಳ್ಳುವುದು ಸಾಮಾನ್ಯ.. ‌ಆದರೆ ಉದ್ಯಾನನಗರೀ ಬೆಂಗಳೂರಿನಲ್ಲೂ ತೀವ್ರ ಅಪೌಷ್ಟಿಕತೆಯಿಂದ ಮಕ್ಕಳು ಬಳಲುತ್ತಿದ್ದಾರೆ.. ಇಂತಹದೊಂದು ವರದಿ ಸದ್ಯ ರಾಜ್ಯ ಆಹಾರ ಆಯೋಗ ಬಿಡುಗಡೆ ಮಾಡಿದೆ..‌ ಅದರ ಕುರಿತು ಒಂದು ಸುದ್ದಿ ಇಲ್ಲಿದೆ..

ಫ್ಲೋ...

ವಾ/ಓ: ರಾಜ್ಯದ ರಾಜಧಾನಿ ಬೆಂಗಳೂರನ್ನು ಜಗತ್ತಿನ ಮುಂದುವರೆಯುತ್ತಿರುವ ನಗರಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತಿದೆ. ವೇಗವಾಗಿ ಬೆಳೆಯುತ್ತಿರುವ ಮೆಟ್ರೋ ಸಿಟಿಯಲ್ಲಿಯೂ ಮಕ್ಕಳಿಗೆ ಪೌಷ್ಟಿಕ ಆಹಾರದ ಕೊರತೆಯಿದೆ ಅನ್ನೋ ಅಘಾತಕಾರಿ ಮಾಹಿತಿಯನ್ನು ರಾಜ್ಯ ಆಹಾರ ಆಯೋಗ ಹೊರಹಾಕಿದೆ. ಬೆಂಗಳೂರು ನಗರದ ಐದು ತಾಲ್ಲೂಕುಗಳಲ್ಲಿ ತಪಾಸಣೆ ಮಾಡಿದ ಬಳಿಕ ಈ ವರದಿಯನ್ನು ಸಿದ್ದ ಮಾಡಿದ್ದು ಸರ್ಕಾರಕ್ಕೆ ಸಲ್ಲಿಸಲು ಸಿದ್ದತೆ ಮಾಡಿಕೊಂಡಿದೆ. ಸಿಟಿಯ ಮಕ್ಕಳಿಗೆ ಸಾಧಾರಣ ಮತ್ತು ತೀವ್ರ ಪೌಷ್ಟಿಕ ಆಹಾರ ಕೊರತೆಯಿಂದ ಬಳಲುತ್ತಿದ್ದರಂತೆ. ರಾಜ್ಯ ಆಹಾರ ಆಯೋಗ ಒಂದು ವರ್ಷಗಳ ಕಾಲ ರಾಜ್ಯಾದ್ಯಂತ ಸರ್ವೇ ಮಾಡಿ ಸರ್ಕಾರಕ್ಕೆ ವಾರ್ಷಿಕ ವರದಿ ಸಲ್ಲಿಸಲಿದೆ.

ಫ್ಲೊ

ವಾ/ಓ: ಆಯೋಗವು ಮುಖ್ಯವಾಗಿ ರಾಜ್ಯದ ಸರ್ಕಾರಿ ಹಾಸ್ಟೆಲ್ ಗಳು, ಮಧ್ಯಾಹ್ನ ದ ಬಿಸಿಯೂಟ, ಅಂಗನವಾಡಿ ಕೇಂದ್ರಗಳಲ್ಲಿ ನೀಡುತ್ತಿರುವ ಆಹಾರದ ಗುಣಮಟ್ಟ ಹಾಗೂ ಕ್ವಾಲೀಟಿಯನ್ನು ಚೆಕ್ ಮಾಡಿ, ಅಲ್ಲಿನ ವಾಸ್ತವ ಸ್ಥಿತಿಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಬೆಂಗಳೂರಿನ ಶಾಲಾ ಮಕ್ಕಳಿಗೆ ನೀಡುವ ಅಕ್ಷಯ ಪಾತ್ರೆ ಊಟದ ಬಗ್ಗೆಯೂ ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ. ಮಕ್ಕಳಿಗೆ 150 ಗ್ರಾಂ ಫುಡ್ ನೀಡಬೇಕು, ಇಸ್ಕಾನ್ ನೀಡುವ ಬಿಸಿಯೂಟದಲ್ಲಿ ಈರುಳ್ಳಿ, ಬೆಳ್ಳೂಳ್ಳಿ ಬಳಕೆ ಮಾಡದೇ ಇರೋದ್ರಿಂದ ಮಕ್ಕಳು ಕಡಿಮೆ ತಿಂತಿದ್ದಾರೆ. ಸುಮಾರು ಎಂಭತ್ತು ಗ್ರಾಂ ನಷ್ಟು ಊಟ ಮಾಡ್ತಾರೆ. ಈರುಳ್ಳಿ ಬೆಳ್ಳುಳ್ಳಿ ಬಳಕೆ ಮಾಡದೇ ಇರುವದ್ರಿಂದ ಆಹಾರ ರುಚಿ ಬರುವುದಿಲ್ಲ. ಇದ್ರಿಂದಾಗಿ ಮಕ್ಕಳು ಕಡಿಮೆ ಊಟ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

ಬೈಟ್: ಅಲಿ ಮಹಮ್ಮದ್- ಸದಸ್ಯರು ರಾಜ್ಯ ಆಹಾರ ಆಯೋಗ

ವಾ/ಓ; ಇನ್ನು, ರಾಜ್ಯ ಆಹಾರ ಆಯೋಗದ ತಂಡವು ಪಡಿತರ ಅಂಗಡಿಗಳು ಹಾಗೂ ಆಹಾರ ಸಂಗ್ರಹಿಸಿರುವ ಗೋದಾಮುಗಳಿಗೆ ಭೇಟಿ ನೀಡಿ ಅಲ್ಲಿನ ವಾಸ್ತವ ಸ್ಥಿತಿ ಕಂಡು ಕೆಂಡಾಮಂಡಲ ವಾಗಿದ್ದಾರಂತೆ. ಗೋದಾಮುಗಳಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಆಹಾರ ಸಂಗ್ರಹಣೆ ಮಾಡಿರುವುದು ಗಮನಕ್ಕೆ ಬಂದಿದೆ ಅದನ್ನು ನಮ್ಮ ವರದಿಯಲ್ಲಿ ಅಳವಡಿಸಿ ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದು ಆಯೋಗದ ಅಧ್ಯಕ್ಷರು ಮಾಹಿತಿ ನೀಡಿದರು..

ಬೈಟ್: ಡಾ.ಎನ್.ಕೃಷ್ಣಮೂರ್ತಿ, ಅಧ್ಯಕ್ಷರು ರಾಜ್ಯ ಆಹಾರ ಆಯೋಗ

ವಾ/ಓ: ಪೌಷ್ಟಿಕ ಆಹಾರವನ್ನು ಪೂರೈಕೆ ಮಾಡಲು ಸರ್ಕಾರ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಅಲ್ಲದೆ ಹೊಸ ಹೊಸ ಯೋಜನೆಗಳ ಮುಖಾಂತರ ಪೌಷ್ಟಿಕ ಆಹಾರ ಪೂರೈಕೆ ಮಾಡುತ್ತಿದೆ. ಸರ್ಕಾರ ಇಷ್ಟೆಲ್ಲಾ ಪ್ರಯತ್ನ ಮಾಡಿ ಕೂಡ, ಮಕ್ಕಳಲ್ಲಿ ಪೌಷ್ಟಿಕ ಆಹಾರದ ಕೊರತೆ ಕಾಡುತ್ತಿರುವುದು ಅಘಾತಕಾರಿ ವಿಷಯವಾಗಿದೆ.

ಈಟಿವಿ ಭಾರತ, ಬೆಂಗಳೂರು..‌

KN_BNG_4_NUTRITION_CITY_CHILDREN_SCRIPT_PKG_7201801


ಗ್ರಾಫಿಕ್ಸ್: ಮಕ್ಕಳ ಪೌಷ್ಟಿಕ ಮಟ್ಟದ ಮಾಹಿತಿ..

1)ಬೆಂಗಳೂರು ಉತ್ತರ 1 ರಲ್ಲಿ ತೀವ್ರ ಅಪೌಷ್ಟಿಕತೆ ಮಕ್ಕಳ ಸಂಖ್ಯೆ= 46
2)ಬೆಂಗಳೂರು ಉತ್ತರ 2 ರಲ್ಲಿ ತೀವ್ರ ಅಪೌಷ್ಟಿಕತೆ ಮಕ್ಕಳ ಸಂಖ್ಯೆ= 11
3)ಬೆಂಗಳೂರು ಕೇಂದ್ರ= 15
4) ಬೆಂಗಳೂರು ದಕ್ಷಿಣ= 39
5) ಬೆಂಗಳೂರು ರಾಜ್ಯ= 12
6) ಆನೇಕಲ್= 41

ಒಟ್ಟು, ಸಾಧಾರಣ ಅಪೌಷ್ಟಿಕತೆ ಯಿಂದ ಒಟ್ಟು, 14,568 ಮಕ್ಕಳು ಬಳಲುತ್ತಿದ್ದರೆ,,,, ತೀವ್ರ ಅಪೌಷ್ಟಿಕತೆ ಯಿಂದ 164 ಮಕ್ಕಳು ಬಳಲುತ್ತಿದ್ದಾರೆ..

Body:.Conclusion:.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.