ಅರಸೀಕೆರೆ/ಹಾಸನ: ಅಪರಿಚಿತ ವ್ಯಕ್ತಿಯನ್ನು ಮಾಂಸದ ತುಂಡುಗಳಂತೆ ಕತ್ತರಿಸಿ ಪೆಟ್ರೋಲ್ ಹಾಕಿ ಸುಟ್ಟಿರುವ ಅಮಾನುಷ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.
ಅರಸೀಕೆರೆ ತಾಲೂಕಿನ ಮಾಡಾಳು ಚಿಕ್ಕಗೊಂಡನಹಳ್ಳಿ ನಡುವಿನ ಬಾರೆಯ ಜಮೀನು ಒಂದರಲ್ಲಿ ಅಪರಿಚಿತ ವ್ಯಕ್ತಿಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನಂತರ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾರೆ. ಘಟನೆಗೆ ಹಳೇ ದ್ವೇಷ ಕಾರಣವಿರಬಹುದು ಎಂದು ಶಂಕಿಸಲಾಗಿದೆ.
![Hassan](https://etvbharatimages.akamaized.net/etvbharat/prod-images/12116699_thumb.jpg)
ಸುಮಾರು 35ರಿಂದ 40 ವರ್ಷ ವಯಸ್ಸಿನ ಗಂಡಸಿನ ಶವ ಎಂದು ಗುರುತಿಸಲಾಗಿದ್ದು, ಈ ಬರ್ಬರ ಕೊಲೆಯನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಸ್ಥಳೀಯರು ಹೇಳುವ ಪ್ರಕಾರ, ವ್ಯಕ್ತಿಯನ್ನ ಬೇರೆ ಕಡೆ ಕೊಲೆ ಮಾಡಿ ನಂತರ ಈ ನಿರ್ಜನ ಪ್ರದೇಶದಲ್ಲಿ ಆತನ ಶವವನ್ನು ತಂದು ಮಾಂಸದ ರೀತಿ ಕೈ, ಕಾಲು ಮತ್ತು ತಲೆಯನ್ನು ಕತ್ತರಿಸಿ, ಬಳಿಕ ಕೋಳಿಯನ್ನು ಸುಡುವ ರೀತಿ ಕಟ್ಟಿಗೆಯನ್ನು ಹಾಕಿ ದೇಹವನ್ನು ಸುಟ್ಟು ನಂತರ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಇದಕ್ಕೆ ಈ ನಿರ್ಜನ ಪ್ರದೇಶದಲ್ಲಿ ಅಲ್ಲಲ್ಲಿ ಕಾಣುವ ರಕ್ತದ ಕಲೆಗಳು ಸಾಕ್ಷಿಯಾಗಿವೆ.