ಹಾಸನ: ಈಜಲು ತೆರಳಿದ್ದ ಶಾಲಾ ವಿದ್ಯಾರ್ಥಿಯೋರ್ವ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿಯಲ್ಲಿ ನಡೆದಿದೆ.
ಬೂವನಹಳ್ಳಿಯ ವಿಶ್ವಾಸ್ (16) ಈಜಲು ತೆರಳಿ ಕೆರೆಯಲ್ಲಿ ನೀರುಪಾಲಾದ ವಿದ್ಯಾರ್ಥಿ. ಇಂದು ಮಧ್ಯಾಹ್ನ ಶಾಲೆ ಮುಗಿದ ಬಳಿಕ ಸ್ನೇಹಿತರೊಂದಿಗೆ ಕೆರೆಯ ಬಳಿ ತೆರಳಿದ್ದ. ಆಗಷ್ಟೇ ಏತ ನೀರಾವರಿ ಮೂಲಕ ನುಗ್ಗೇಹಳ್ಳಿಯ ಅಮಾನಿ ಕೆರೆಗೆ ನೀರು ತುಂಬಿಸಿದ್ದರು. ವಿಶ್ವಾಸ್ ಹಾಗೂ ಆತನ ಸ್ನೇಹಿತರು ಶಾಲಾ ಬ್ಯಾಗ್ಗಳನ್ನು ಕೆರೆಯ ಏರಿಯ ಮೇಲೆ ಇಟ್ಟು ನೀರಿಗೆ ಧುಮುಕಿದ್ದಾರೆ.
ಆದರೆ ಅವೈಜ್ಞಾನಿಕವಾಗಿ ಕೆರೆಯ ಹೂಳು ಎತ್ತಿದ್ದರಿಂದ ಅತೀ ಆಳದ ಪ್ರದೇಶದಲ್ಲಿ ಈಜಾಡಲು ಹೋಗಿ ನೀರಿನಲ್ಲಿ ಮುಳುಗಿದ್ದಾನೆ. ಮತ್ತೊಬ್ಬ ವಿದ್ಯಾರ್ಥಿಯನ್ನು ಸ್ಥಳೀಯರು ಮೇಲೆತ್ತಿದ್ದು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಆದರೆ ವಿಶ್ವಾಸ್ನನ್ನು ನೀರಿನಿಂದ ಮೇಲೆತ್ತಲು ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ.
ವಿಶ್ವಾಸ್ಗಾಗಿ ಈಗಾಗಲೇ ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರ ಸಹಾಯದಿಂದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.