ETV Bharat / state

ಈಜಲು ಹೋಗಿ ವಿದ್ಯಾರ್ಥಿ ನೀರುಪಾಲು... ಮತ್ತೋರ್ವ ಪ್ರಾಣಾಪಾಯದಿಂದ ಪಾರು !

author img

By

Published : Jan 4, 2020, 8:23 PM IST

ಈಜಲು ತೆರಳಿದ್ದ ವಿಶ್ವಾಸ್​ ಎಂಬ ಶಾಲಾ ವಿದ್ಯಾರ್ಥಿಯೋರ್ವ ಸಾವಿಗೀಡಾಗಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿಯಲ್ಲಿ ನಡೆದಿದ್ದು, ಮತ್ತೋರ್ವ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

One has died after going to swim in Hassan
ಈಜಲು ಹೋಗಿ ನೀರುಪಾಲು....ಮತ್ತೋರ್ವ ಪ್ರಾಣಾಪಾಯದಿಂದ ಪಾರು !

ಹಾಸನ: ಈಜಲು ತೆರಳಿದ್ದ ಶಾಲಾ ವಿದ್ಯಾರ್ಥಿಯೋರ್ವ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿಯಲ್ಲಿ ನಡೆದಿದೆ.

ಈಜಲು ಹೋಗಿ ನೀರುಪಾಲು....ಮತ್ತೋರ್ವ ಪ್ರಾಣಾಪಾಯದಿಂದ ಪಾರು !

ಬೂವನಹಳ್ಳಿಯ ವಿಶ್ವಾಸ್ (16) ಈಜಲು ತೆರಳಿ ಕೆರೆಯಲ್ಲಿ ನೀರುಪಾಲಾದ ವಿದ್ಯಾರ್ಥಿ. ಇಂದು ಮಧ್ಯಾಹ್ನ ಶಾಲೆ ಮುಗಿದ ಬಳಿಕ ಸ್ನೇಹಿತರೊಂದಿಗೆ ಕೆರೆಯ ಬಳಿ ತೆರಳಿದ್ದ. ಆಗಷ್ಟೇ ಏತ ನೀರಾವರಿ ಮೂಲಕ ನುಗ್ಗೇಹಳ್ಳಿಯ ಅಮಾನಿ ಕೆರೆಗೆ ನೀರು ತುಂಬಿಸಿದ್ದರು. ವಿಶ್ವಾಸ್ ಹಾಗೂ ಆತನ ಸ್ನೇಹಿತರು ಶಾಲಾ ಬ್ಯಾಗ್​ಗಳನ್ನು ಕೆರೆಯ ಏರಿಯ ಮೇಲೆ ಇಟ್ಟು ನೀರಿಗೆ ಧುಮುಕಿದ್ದಾರೆ.

ಆದರೆ ಅವೈಜ್ಞಾನಿಕವಾಗಿ ಕೆರೆಯ ಹೂಳು ಎತ್ತಿದ್ದರಿಂದ ಅತೀ ಆಳದ ಪ್ರದೇಶದಲ್ಲಿ ಈಜಾಡಲು ಹೋಗಿ ನೀರಿನಲ್ಲಿ ಮುಳುಗಿದ್ದಾನೆ. ಮತ್ತೊಬ್ಬ ವಿದ್ಯಾರ್ಥಿಯನ್ನು ಸ್ಥಳೀಯರು ಮೇಲೆತ್ತಿದ್ದು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಆದರೆ ವಿಶ್ವಾಸ್​ನನ್ನು ನೀರಿನಿಂದ ಮೇಲೆತ್ತಲು ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ.

ವಿಶ್ವಾಸ್​ಗಾಗಿ ಈಗಾಗಲೇ ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರ ಸಹಾಯದಿಂದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಹಾಸನ: ಈಜಲು ತೆರಳಿದ್ದ ಶಾಲಾ ವಿದ್ಯಾರ್ಥಿಯೋರ್ವ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿಯಲ್ಲಿ ನಡೆದಿದೆ.

ಈಜಲು ಹೋಗಿ ನೀರುಪಾಲು....ಮತ್ತೋರ್ವ ಪ್ರಾಣಾಪಾಯದಿಂದ ಪಾರು !

ಬೂವನಹಳ್ಳಿಯ ವಿಶ್ವಾಸ್ (16) ಈಜಲು ತೆರಳಿ ಕೆರೆಯಲ್ಲಿ ನೀರುಪಾಲಾದ ವಿದ್ಯಾರ್ಥಿ. ಇಂದು ಮಧ್ಯಾಹ್ನ ಶಾಲೆ ಮುಗಿದ ಬಳಿಕ ಸ್ನೇಹಿತರೊಂದಿಗೆ ಕೆರೆಯ ಬಳಿ ತೆರಳಿದ್ದ. ಆಗಷ್ಟೇ ಏತ ನೀರಾವರಿ ಮೂಲಕ ನುಗ್ಗೇಹಳ್ಳಿಯ ಅಮಾನಿ ಕೆರೆಗೆ ನೀರು ತುಂಬಿಸಿದ್ದರು. ವಿಶ್ವಾಸ್ ಹಾಗೂ ಆತನ ಸ್ನೇಹಿತರು ಶಾಲಾ ಬ್ಯಾಗ್​ಗಳನ್ನು ಕೆರೆಯ ಏರಿಯ ಮೇಲೆ ಇಟ್ಟು ನೀರಿಗೆ ಧುಮುಕಿದ್ದಾರೆ.

ಆದರೆ ಅವೈಜ್ಞಾನಿಕವಾಗಿ ಕೆರೆಯ ಹೂಳು ಎತ್ತಿದ್ದರಿಂದ ಅತೀ ಆಳದ ಪ್ರದೇಶದಲ್ಲಿ ಈಜಾಡಲು ಹೋಗಿ ನೀರಿನಲ್ಲಿ ಮುಳುಗಿದ್ದಾನೆ. ಮತ್ತೊಬ್ಬ ವಿದ್ಯಾರ್ಥಿಯನ್ನು ಸ್ಥಳೀಯರು ಮೇಲೆತ್ತಿದ್ದು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಆದರೆ ವಿಶ್ವಾಸ್​ನನ್ನು ನೀರಿನಿಂದ ಮೇಲೆತ್ತಲು ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ.

ವಿಶ್ವಾಸ್​ಗಾಗಿ ಈಗಾಗಲೇ ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರ ಸಹಾಯದಿಂದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Intro:ಹಾಸನ: ಈಜಲು ತೆರಳಿದ್ದ ಶಾಲಾ ವಿದ್ಯಾರ್ಥಿ ಓರ್ವ ಸಾವಿಗೀಡಾಗಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೆಹಳ್ಳಿಯಲ್ಲಿ ನಡೆದಿದೆ.

ವಿಶ್ವಾಸ್ (16) ಈಜಲು ತೆರಳಿ ಕೆರೆಯಲ್ಲಿ ಮೃತಪಟ್ಟ ಶಾಲಾ ವಿದ್ಯಾರ್ಥಿ. ಬೂವನಹಳ್ಳಿಯ ವಿಶ್ವಾಸ್ ಎಂದು ಗುರುತಿಸಲಾಗಿದ್ದು, ಇಂದು ಶನಿವಾರವಾದ್ದರಿಂದ ಶಾಲೆ ಮಧ್ಯಾಹ್ನಕ್ಕೆ ಮುಗಿದ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಕೆರೆಯ ಬಳಿ ತೆರಳಿದ್ದ.

ಈಗಷ್ಟೇ ಏತನೀರಾವರಿ ಮೂಲಕ ನುಗ್ಗೇಹಳ್ಳಿಯ ಅಮಾನಿ ಕೆರೆಗೆ ನೀರು ತುಂಬಿಸಿದ್ದು, ಇಂದು ಮಧ್ಯಾಹ್ನ ಶಾಲೆ ಬಿಟ್ಟ ಬಳಿಕ ಈಜಲು ತನ್ನ ಸ್ನೇಹಿತನೊಂದಿಗೆ ತೆರಳಿದ್ದು, ಇಬ್ಬರೂ ತಮ್ಮ ಶಾಲಾ ಭಾಗಗಳನ್ನು ಕೆರೆಯ ಏರಿಯ ಮೇಲೆ ಇಟ್ಟು ನೀರಿಗೆ ಧುಮುಕಿದ್ದಾರೆ.

ಅವೈಜ್ಞಾನಿಕವಾಗಿ ಕೆರೆಯ ಹೂಳು ಎತ್ತಿದ್ದರಿಂದ ಅತಿ ಆಳದ ಪ್ರದೇಶದಲ್ಲಿ ಈಜಾಡಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ದಿನ ಮತ್ತೊಬ್ಬ ವಿದ್ಯಾರ್ಥಿಯನ್ನು ಸ್ಥಳೀಯರು ಮೇಲೆತ್ತಿದ್ದು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಆದರೆ ಈತನನ್ನು ನೀರಿನಿಂದ ಮೇಲೆತ್ತಲು ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗದ ಹಿನ್ನಲೆಯಲ್ಲಿ ಈ ಘಟನೆ ಸಂಭವಿಸಿದೆ.

ಜನವಿಶ್ವಾಸ್ ಮೃತದೇಹಕ್ಕಾಗಿ ಈಗಾಗಲೇ ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರ ಸಹಯದಿಂದ ಪೊಲೀಸರು ಕಾರ್ಯಾಚರಣೆ ಮಾಡುತ್ತಿದ್ದು ನುಗ್ಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.




Body:7203289


Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.