ETV Bharat / state

ಬೇಕಾದ್ರೆ ತಗೊಳ್ರಿ ಸಾಕಾದ್ರೆ ಬಿಡ್ರಿ : ರೈತರ ವಿರುದ್ಧ ಗರಂ ಆದ ಶಾಸಕ ರೇವಣ್ಣ

author img

By

Published : Sep 14, 2019, 3:39 PM IST

ಹೊಳೆನರಸೀಪುರ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಟಾರ್ಪಾಲ್‌ಗಳನ್ನು ವಿತರಣೆ ಮಾಡುವ ವೇಳೆ ಟಾರ್ಪಲ್‌ಗಳ ಗುಣಮಟ್ಟ ಚನ್ನಾಗಿಲ್ಲ ಅಂದಿದಕ್ಕೆ ರೈತರ ವಿರುದ್ಧವೇ ಸಿಡಿಮಿಡಿಗೊಂಡ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಬೇಕಾದ್ರೆ ತಗೊಳ್ರಿ ಸಾಕಾದ್ರೆ ಬಿಡ್ರಿ ಅಂತಾ ಗದರಿದರು.

ರೈತ ಸಂಪರ್ಕ ಕೇಂದ್ರ

ಹೊಳೆನರಸೀಪುರ: ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಟಾರ್ಪಾಲ್‌ಗಳನ್ನು ವಿತರಣೆ ಮಾಡುವ ವೇಳೆ ಟಾರ್ಪಲ್‌ಗಳ ಗುಣಮಟ್ಟ ಚನ್ನಾಗಿಲ್ಲ ಅಂದಿದಕ್ಕೆ ರೈತರ ವಿರುದ್ಧವೇ ಸಿಡಿಮಿಡಿಗೊಂಡ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಬೇಕಾದ್ರೆ ತಗೊಳ್ರಿ ಸಾಕಾದ್ರೆ ಬಿಡ್ರಿ ಅಂತಾ ಗದರಿದರು.

ಹೊಳೆನರಸೀಪುರ ರೈತ ಸಂಪರ್ಕ ಕೇಂದ್ರ

ಹೌದು, ಸದಾ ಒಂದಿಲ್ಲೊಂದು ಯಡವಟ್ಟುಗಳನ್ನು ಮೈಮೇಲೆಳೆದುಕೊಳ್ಳೋ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಇಂದು ಸಮಸ್ಯೆ ಹೇಳಿಕೊಳ್ಳಲು ಬಂದ ರೈತರ ವಿರುದ್ಧವೇ ಗರಂ ಆದರಲ್ಲದೇ ಗದರಿಸಿ ರೈತರ ಬಾಯಿ ಮುಚ್ಚಿಸಿದರು. ಶಾಸಕ ಹೆಚ್.ಡಿ.ರೇವಣ್ಣ ತಾಲೂಕಿನ ಹಳೇಕೋಟೆಯ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಟಾರ್ಪಲ್‌ಗಳನ್ನು ವಿತರಿಸೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ವೇಳೆ, ಕಳೆದ ಬಾರಿ ಟಾರ್ಪಲ್ ಪಡೆದಿದ್ದ ಕೆಲವರು ಸಾರ್ ಕಳೆದ ಬಾರಿ ನೀಡಿದ ಟಾರ್ಪಲ್‌ಗಳ ಕ್ವಾಲಿಟಿ ಚೆನ್ನಾಗಿಲ್ಲ. ಮಾರ್ಕೆಟ್‌ನಲ್ಲೇ 900-1000 ರೂ.ಗೆ ಒಳ್ಳೆಯ ಟಾರ್ಪಲ್ ಸಿಕ್ತವೆ ಅಂತ ಪ್ರಶ್ನಿಸಿದರು. ಆದ್ರೆ ಇಷ್ಟಕ್ಕೆ ಸಿಟ್ಟಿಗೆದ್ದ ರೇವಣ್ಣ, ಬೇಕಾದ್ರೆ ತಗೊಳ್ರಿ ಸಾಕಾದ್ರೆ ಬಿಡ್ರಿ ಅಂತಾ ಗದರಿದರು.

ಇದರಿಂದ ತಮ್ಮ ಶಾಸಕರಿಗೆ ಸಮಸ್ಯೆ ಹೇಳಿಕೊಳ್ಳಲು ಬಂದ ರೈತರು ಸುಮ್ಮನಾದರು. ಆದ್ರೂ ತಮ್ಮ ಸಿಟ್ಟು ಕಮ್ಮಿಯಾಗಲಿಲ್ಲ, ಅಧಿಕಾರಿಗಳ ವಿರುದ್ಧವೂ ಶಾಸಕ ರೇವಣ್ಣ ಸಿಡಿದೆದ್ದರು.

ಹೊಳೆನರಸೀಪುರ: ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಟಾರ್ಪಾಲ್‌ಗಳನ್ನು ವಿತರಣೆ ಮಾಡುವ ವೇಳೆ ಟಾರ್ಪಲ್‌ಗಳ ಗುಣಮಟ್ಟ ಚನ್ನಾಗಿಲ್ಲ ಅಂದಿದಕ್ಕೆ ರೈತರ ವಿರುದ್ಧವೇ ಸಿಡಿಮಿಡಿಗೊಂಡ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಬೇಕಾದ್ರೆ ತಗೊಳ್ರಿ ಸಾಕಾದ್ರೆ ಬಿಡ್ರಿ ಅಂತಾ ಗದರಿದರು.

ಹೊಳೆನರಸೀಪುರ ರೈತ ಸಂಪರ್ಕ ಕೇಂದ್ರ

ಹೌದು, ಸದಾ ಒಂದಿಲ್ಲೊಂದು ಯಡವಟ್ಟುಗಳನ್ನು ಮೈಮೇಲೆಳೆದುಕೊಳ್ಳೋ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಇಂದು ಸಮಸ್ಯೆ ಹೇಳಿಕೊಳ್ಳಲು ಬಂದ ರೈತರ ವಿರುದ್ಧವೇ ಗರಂ ಆದರಲ್ಲದೇ ಗದರಿಸಿ ರೈತರ ಬಾಯಿ ಮುಚ್ಚಿಸಿದರು. ಶಾಸಕ ಹೆಚ್.ಡಿ.ರೇವಣ್ಣ ತಾಲೂಕಿನ ಹಳೇಕೋಟೆಯ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಟಾರ್ಪಲ್‌ಗಳನ್ನು ವಿತರಿಸೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ವೇಳೆ, ಕಳೆದ ಬಾರಿ ಟಾರ್ಪಲ್ ಪಡೆದಿದ್ದ ಕೆಲವರು ಸಾರ್ ಕಳೆದ ಬಾರಿ ನೀಡಿದ ಟಾರ್ಪಲ್‌ಗಳ ಕ್ವಾಲಿಟಿ ಚೆನ್ನಾಗಿಲ್ಲ. ಮಾರ್ಕೆಟ್‌ನಲ್ಲೇ 900-1000 ರೂ.ಗೆ ಒಳ್ಳೆಯ ಟಾರ್ಪಲ್ ಸಿಕ್ತವೆ ಅಂತ ಪ್ರಶ್ನಿಸಿದರು. ಆದ್ರೆ ಇಷ್ಟಕ್ಕೆ ಸಿಟ್ಟಿಗೆದ್ದ ರೇವಣ್ಣ, ಬೇಕಾದ್ರೆ ತಗೊಳ್ರಿ ಸಾಕಾದ್ರೆ ಬಿಡ್ರಿ ಅಂತಾ ಗದರಿದರು.

ಇದರಿಂದ ತಮ್ಮ ಶಾಸಕರಿಗೆ ಸಮಸ್ಯೆ ಹೇಳಿಕೊಳ್ಳಲು ಬಂದ ರೈತರು ಸುಮ್ಮನಾದರು. ಆದ್ರೂ ತಮ್ಮ ಸಿಟ್ಟು ಕಮ್ಮಿಯಾಗಲಿಲ್ಲ, ಅಧಿಕಾರಿಗಳ ವಿರುದ್ಧವೂ ಶಾಸಕ ರೇವಣ್ಣ ಸಿಡಿದೆದ್ದರು.

Intro:ಹೊಳೆನಸೀಪುರ: ಹೊಳೆನರಸೀಪುರದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಟಾರ್ಪಾಲ್‌ಗಳನ್ನ ವಿತರಣೆ ಮಾಡುವ ವೇಳೆ ಟಾರ್ಪಲ್‌ಗಳ ಗುಣಮಟ್ಟ ಚನ್ನಾಗಿಲ್ಲ ಅಂದಿದಕ್ಕೆ ರೈತರ ವಿರುದ್ದೇವೇ ಸಿಡಿಮಿಡಿಗೊಂಡ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಬೇಕಾದ್ರೆ ತಗೊಳ್ರಿ ಸಾಕಾದ್ರೆ ಬಿಡ್ರಿ ಅಂತಾ ಗದರಿದ್ರು.
ಹೌದು, ಸದಾ ಒಂದಿಲ್ಲೊಂದು ಯಡವಟ್ಟುಗಳನ್ನ ಮೈಮೇಲೆಳಡದುಕೊಳ್ಳೋ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಇಂದು ಸಮಸ್ಯೆ ಹೇಳಿಕೊಳ್ಳಲು ಬಂದ ರೈತರ ವಿರುದ್ಧವೇ ಗರಂ ಆದರಲ್ಲದೇ ಗಧರಿಸಿ ರೈತರ ಬಾಯಿ ಮುಚ್ಚಿಸಿದ್ರು. ಅಭಿವೃದ್ಧಿ ಹರಿಹಾರ ಎಂದ ಕರೆಯೋ ಶಾಸಕ ಹೆಚ್.ಡಿ.ರೇವಣ್ಣ ಅವರಿಂದು ತಾಲ್ಲೂಕಿನ ಹಳೇಕೋಟೆಯ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಟಾರ್ಪಲ್‌ಗಳನ್ನ ವಿತರಿಸೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು, ಈ ವೇಳೆ ಕಳೆದ ಭಾರಿ ಟಾರ್ಪಲ್ ಪಡೆದಿದ್ದ ಕೆಲವರು ಸಾರ್, ಕಳೆದ ಭಾರಿ ನೀಡಿದ ಟಾರ್ಪಲ್‌ಗಳ ಕ್ವಾಲಿಟಿ ಚೆನ್ನಾಗಿಲ್ಲ, ಮಾರ್ಕೆಟ್‌ನಲ್ಲೇ ೯೦೦-೧೦೦೦ರೂಗೆ ಒಳ್ಳಡ ಟಾರ್ಪಲ್ ಸಿಕ್ತವೆ ಅಂತ ಪ್ರಶ್ನಿಸಿದ್ರು, ಆದ್ರೆ ಇಷ್ಟಕ್ಕೆ ಸಿಟ್ಟಿಗೆದ್ದ ರೇವಣ್ಣ, ಯಾವನ್ರಿ ಅವ್ನು, ಬೇಕಾದ್ರೆ ತಗೊಳಿ ಸಾಕಾದ್ರೆ ಬಿಡ್ರಿ ಅಂತಾ ಸಿಡಿದೆದ್ರು, ಇದರಿಂದ ತಮ್ಮ ಶಾಸಕರಿಗೆ ಸಮಸ್ಯೆ ಹೇಳಿಕೊಳ್ಳಲು ಬಂದ ರೈತರು ಸೈಲೆಂಟಾದ್ರು, ಆದ್ರೂ ತಮ್ಮ ಸಿಟ್ಟು ಕಮ್ಮಿಯಾಗಲಿಲ್ಲ, ಅಧಿಕಾರಿಗಳ ವಿರುದ್ಧ ಸಿಡಿದೆದ್ದ ರೇವಣ್ಣ ಅವರು, ಆ ನನ್ ಮಕ್ಳು ಮೇಲಿನವ್ರು ದುಡ್ ಹೊಡಿತರೆ ಇವು ಬಂದ್ ಇಲ್ ನಮ್ ಕೇಳ್ತವೆ ಅಂತಾ ಗ್ರಾಮೀಣ ಭಾಷೆಯಲ್ಲಿ ಅವಾಷ್ಯ ಶಬ್ದ ಬಳಸಿ ನಿಂದಿಸಿದ್ರು. ಈ ಹಿಂದೆ ನೆರೆ ಸಂತ್ರಸ್ತರಿಗೆ ಬಿಸ್ಕೆಟ್ ಎಸೆದು ಸುದ್ದಿಯಾಗಿದ್ದ ರೇವಣ್ಣ ಅವರು ಈ ಭಾರಿ ನಿರಾಶ್ರಿತರು ಸಮಸ್ಯೆ ಹೇಳಿಕೊಳ್ಳುವ ಅದನ್ನು ಆಲಿಸದೇ ಬೆಲ್ ಹೊಡೆಯುತ್ತಾ ಕುಳಿತುಕೊಳ್ಳುವ ಮೂಲಕ ಜನರ ಆಕ್ರೋಶಕ್ಕೀಡಾಗಿದ್ರು.

ಬೈಟ್ 1 : ಸಚಿವ ಎಚ್.ಡಿ. ರೇವಣ್ಣ, Body:೦Conclusion:೦
ETV Bharat Logo

Copyright © 2024 Ushodaya Enterprises Pvt. Ltd., All Rights Reserved.