ETV Bharat / state

ಸುಷ್ಮಾ ಸ್ವರಾಜ್​ ವಿಧಿವಶ: ಶ್ರದ್ಧಾಂಜಲಿ ಅರ್ಪಿಸಿದ ಶಾಸಕ ಪ್ರೀತಮ್​ ಗೌಡ

ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ವಿಧಿವಶರಾದ ಹಿನ್ನೆಲೆ ಹಾಸನದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶಾಸಕ ಪ್ರೀತಮ್ ಗೌಡ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

author img

By

Published : Aug 7, 2019, 10:26 PM IST

ಸುಷ್ಮಾ ಸ್ವರಾಜ್ ಗೆ ಶ್ರದ್ಧಾಂಜಲಿ ಅರ್ಪಿಸಿದ ಶಾಸಕ ಪ್ರೀತಂ ಗೌಡ

ಹಾಸನ: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿಧನರಾದ ಹಿನ್ನೆಲೆ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶಾಸಕ ಪ್ರೀತಮ್ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ನವಿಲೆ ಅಣ್ಣಪ್ಪ, ಮುಖಂಡ ವೇಣುಗೋಪಾಲ್ ಸೇರಿದಂತೆ ಇತರರು ಸುಷ್ಮಾ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.

ಶಾಸಕ ಪ್ರೀತಮ್​ ಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ರಾಷ್ಟ್ರದ ದಿಟ್ಟ ಮಹಿಳೆಯನ್ನು ಕಳೆದುಕೊಂಡ ನೋವಿನ ದಿನ ಇದಾಗಿದೆ. ಅವರು ಕೇವಲ ಬಿಜೆಪಿಗೆ ಮಾತ್ರ ನಾಯಕಿಯಾಗಿರಲಿಲ್ಲ. ಪಾರ್ಲಿಮೆಂಟ್ ಹಾಗೂ ಇಡೀ ಮಹಿಳೆಯರ ಪ್ರೇರಣಾ ಶಕ್ತಿಯಾಗಿದ್ರು. ಎಲ್ಲಾ ಪಕ್ಷದ ಮುಖಂಡರೊಂದಿಗೆ ರಾಜಕಾರಣ ಮೀರಿದ ಒಂದು ಪ್ರೀತಿ, ವಿಶ್ವಾಸವನ್ನು ಗಳಿಸಿದ ಅಪರೂಪದ ನಾಯಕಿ ಆಗಿದ್ದರು ಎಂದು ಬಣ್ಣಿಸಿದರು.

ಸುಷ್ಮಾ ಸ್ವರಾಜ್ ಗೆ ಶ್ರದ್ಧಾಂಜಲಿ ಅರ್ಪಿಸಿದ ಶಾಸಕ ಪ್ರೀತಮ್​ ಗೌಡ

ನಾಲ್ಕಕ್ಕೂ ಹೆಚ್ಚು ದಶಕಗಳ ಕಾಲ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆಯನ್ನು ದೇಶಕ್ಕೆ ಮತ್ತು ರಾಜಕೀಯ ರಂಗಕ್ಕೆ ಕೊಟ್ಟಿದ್ದಾರೆ ಎಂದರು. ಅವರ ಈ ಸಾವು ಬಿಜೆಪಿಯ ಕಾರ್ಯಕರ್ತನಾದ ನನಗೆ ನೋವನ್ನುಂಟುಮಾಡಿದೆ ಮತ್ತು ಇದು ತಂಬಲಾರದ ನಷ್ಟವಾಗಿದೆ ಎಂದು ಕಂಬನಿ ಮಿಡಿದರು.

ಹಾಸನ: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿಧನರಾದ ಹಿನ್ನೆಲೆ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶಾಸಕ ಪ್ರೀತಮ್ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ನವಿಲೆ ಅಣ್ಣಪ್ಪ, ಮುಖಂಡ ವೇಣುಗೋಪಾಲ್ ಸೇರಿದಂತೆ ಇತರರು ಸುಷ್ಮಾ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.

ಶಾಸಕ ಪ್ರೀತಮ್​ ಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ರಾಷ್ಟ್ರದ ದಿಟ್ಟ ಮಹಿಳೆಯನ್ನು ಕಳೆದುಕೊಂಡ ನೋವಿನ ದಿನ ಇದಾಗಿದೆ. ಅವರು ಕೇವಲ ಬಿಜೆಪಿಗೆ ಮಾತ್ರ ನಾಯಕಿಯಾಗಿರಲಿಲ್ಲ. ಪಾರ್ಲಿಮೆಂಟ್ ಹಾಗೂ ಇಡೀ ಮಹಿಳೆಯರ ಪ್ರೇರಣಾ ಶಕ್ತಿಯಾಗಿದ್ರು. ಎಲ್ಲಾ ಪಕ್ಷದ ಮುಖಂಡರೊಂದಿಗೆ ರಾಜಕಾರಣ ಮೀರಿದ ಒಂದು ಪ್ರೀತಿ, ವಿಶ್ವಾಸವನ್ನು ಗಳಿಸಿದ ಅಪರೂಪದ ನಾಯಕಿ ಆಗಿದ್ದರು ಎಂದು ಬಣ್ಣಿಸಿದರು.

ಸುಷ್ಮಾ ಸ್ವರಾಜ್ ಗೆ ಶ್ರದ್ಧಾಂಜಲಿ ಅರ್ಪಿಸಿದ ಶಾಸಕ ಪ್ರೀತಮ್​ ಗೌಡ

ನಾಲ್ಕಕ್ಕೂ ಹೆಚ್ಚು ದಶಕಗಳ ಕಾಲ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆಯನ್ನು ದೇಶಕ್ಕೆ ಮತ್ತು ರಾಜಕೀಯ ರಂಗಕ್ಕೆ ಕೊಟ್ಟಿದ್ದಾರೆ ಎಂದರು. ಅವರ ಈ ಸಾವು ಬಿಜೆಪಿಯ ಕಾರ್ಯಕರ್ತನಾದ ನನಗೆ ನೋವನ್ನುಂಟುಮಾಡಿದೆ ಮತ್ತು ಇದು ತಂಬಲಾರದ ನಷ್ಟವಾಗಿದೆ ಎಂದು ಕಂಬನಿ ಮಿಡಿದರು.

Intro:ಹಾಸನ : ಕೇಂದ್ರದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೃದಯಘಾತದಿಂದ ನಿಧನರಾದ ಹಿನ್ನಲೆಯಲ್ಲಿ ನಗರದ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ನವೀಲೆ ಅಣ್ಣಪ್ಪ, ಮುಖಂಡ ವೇಣುಗೋಪಾಲ್, ಪ್ರಸನ್ನಕುಮಾರ್, ಎಚ್.ಎಂ. ಸುರೇಶ್ ಕುಮಾರ್, ಶೇಷಮ್ಮ ಇತರರು ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ನಮನ ಸಲ್ಲಿಸಿ ಶ್ರದ್ಧಾಂಜಲಿಯನ್ನು ಅರ್ಪಿಸಿದರು.
Body:ಶಾಸಕ ಪ್ರೀತಂ ಜೆ ಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ರಾಷ್ಟ್ರದ ದಿಟ್ಟ ಮಹಿಳೆಯನ್ನು ಕಳೆದುಕೊಂಡ ನೋವಿನ ದಿನವಾಗಿದೆ. ಅವರು ಕೇವಲ ಬಿಜೆಪಿ ಪಕ್ಷಕ್ಕೆ ನಾಯಕಿಯಾಗಿರಲಿಲ್ಲ, ಪಾರ್ಲಿಮೆಂಟ್ ಹಾಗೂ ಇಡೀ ಮಹಿಳೆಯರ ಪ್ರೇರಣ ಶಕ್ತಿಯಾಗಿ ಇದ್ದರು. ಎಲ್ಲಾ ಪಕ್ಷದ ಮುಖಂಡರೊಂದಿಗೆ ಉತ್ತಮ ಮಾನವ ಕುಲದ ಸಂಬಂಧವನ್ನು ಇಟ್ಟುಕೊಂಡು ರಾಜಕಾರಣ ಮೀರಿದ ಒಂದು ಪ್ರೀತಿ, ವಿಶ್ವಾಸವನ್ನುಗಳಿಸಿದ ಅಪುರೂಪದ ವ್ಯಕ್ತಿಎಂದು ಬಣ್ಣಿಸಿದರು.
ತಮ್ಮ ೨೬ನೇ ವಯಸ್ಸಿನಲ್ಲಿಯೇ ಹರಿಯಾಣದ ಸರಕಾರದಲ್ಲಿ ಶಿಕ್ಷಣ ಸಚಿವರಾಗುವ ಮೂಲಕ ತಮ್ಮ ರಾಜಕೀಯ ಮತ್ತು ಸಾಮಾಜಿಕ ಬದುಕನ್ನು ಪ್ರಾರಂಭಿಸಿದರು. ನಾಲ್ಕಕ್ಕೂ ಹೆಚ್ಚು ದಶಕಗಳ ಕಾಲ ಹಲವು ಕ್ಷೇತ್ರಗಳಲ್ಲಿ ತಮ್ಮದೆಯಾದ ಕೊಡುಗೆಯನ್ನು ದೇಶಕ್ಕೆ ಮತ್ತು ರಾಜಕೀಯ ರಂಗಕ್ಕೆ ಕೊಟ್ಟಿದ್ದಾರೆ ಎಂದರು.
ಅವರ ಈ ಸಾವು ಬಿಜೆಪಿಯ ಕಾರ್ಯಕರ್ತನಾದ ನನಗೆ ನೋವನ್ನುಂಟು ಮಾಡಿದೆ ಮತ್ತು ತಂಬಲಾರದ ನಷ್ಟವಾಗಿದೆ. ರಕ್ಷಣಾ ಸಚಿವರಿಂದ ಹಿಡಿದು ಹಲವಾರು ನಾಯಕರು ಹಾಗೂ ಕಾರ್ಯಕರ್ತರು ಆಸ್ಪತ್ರೆ ಮುಂದೆ ರಾತ್ರಿ ಇಷ್ಟು ಸಂಖ್ಯೆಯಲ್ಲಿ ಸೇರಿರುವುದನ್ನು ನೋಡಿದರೇ ಅವರ ಪ್ರೀತಿ ಮತ್ತು ವ್ಯಕ್ತಿತ್ವ ಎಷ್ಟರ ಮಟ್ಟಿಗೆ ಇತ್ತು ಎಂಬುದು ಅರಿವು ಹಾಗುತ್ತದೆ ಎಂದರು.
Conclusion:೨೦೦೮ರಲ್ಲಿ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಕಲೇಶಪುರದಿಂದ ಸ್ಪರ್ಧೆ ಮಾಡಿದ್ದ ನಿರ್ವಹಣೆಯ್ಯರ ಪರವಾಗಿ, ಪಕ್ಷದ ಪರವಾಗಿ ಚುನಾವಣೆ ಪ್ರಚಾರಕ್ಕೆ ಸುಷ್ಮಾ ಸ್ವರಾಜ್ ಆಗಮಿಸಿದ್ದ ಬಗ್ಗೆ ಇದೆ ವೇಳೆ ನೆನಪಿಸಿಕೊಂಡರು.
-ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.