ETV Bharat / state

ಇಲ್ಲಿ ಕಾಸು ಕೊಟ್ರೆ ಮಾತ್ರ ಎಲ್ಲ ಕೆಲ್ಸ... ಹಾಸನ ಆರ್​ಟಿಒ ಕಚೇರಿಯಲ್ಲಿದೆಯಂತೆ ಭ್ರಷ್ಟಾಚಾರ ಕೂಪ

author img

By

Published : Nov 6, 2019, 7:47 PM IST

ವಾಹನಗಳ ನೋಂದಣಿ ಮತ್ತು ವಾಣಿಜ್ಯ ವಾಹನಗಳ ಎಫ್. ಸಿ. ಹಣಪಾವತಿ ಮಾಡಿಸಿಕೊಳ್ಳುವಾಗ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನಲೆ ಹಾಸನದ ಪ್ರಾದೇಶಿಕ ಸಾರಿಗೆ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಹಾಸನದ ಆರ್​ಟಿಓ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಹಾಸನ: ವಾಹನಗಳ ನೋಂದಣಿ ಮತ್ತು ವಾಣಿಜ್ಯ ವಾಹನಗಳ ಎಫ್. ಸಿ. ಹಣಪಾವತಿ ಮಾಡಿಸಿಕೊಳ್ಳುವಾಗ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನಲೆ ಹಾಸನದ ಪ್ರಾದೇಶಿಕ ಸಾರಿಗೆ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಹಾಸನದ ಆರ್​ಟಿಓ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಆರ್​ಟಿಓ ಕಚೇರಿಗೆ ಪ್ರತಿನಿತ್ಯ ಅಲೆದು ಅಲೆದು ಸಾಕಾಗಿದೆ, ಹಣ ಕೊಟ್ಟರೆ ಮಾತ್ರ ಎಲ್ಲಾ ಕೆಲಸ ಸಾರಾಸಗಟಾಗಿ ಆಗುತ್ತದೆ. ಚಾಲನಾ ಪರವಾನಿಗೆಯಿಂದ ಹಿಡಿದು ನೋಂದಣಿ, ಮರು ನೋಂದಣಿ ಮತ್ತು ವಾಹನಗಳ ವರ್ಗಾವಣೆ ಎಲ್ಲವನ್ನೂ ಹಣ ಕೊಟ್ಟ ಕ್ಷಣ ಮಾತ್ರದಲ್ಲಿ ಮಾಡಿಕೊಡುತ್ತಾರೆ. ಕಾನೂನು ಪ್ರಕಾರವಾಗಿ ಕೆಲಸ ಮಾಡಿಕೊಡಲು ಯಾರೊಬ್ಬರೂ ಸ್ಪಂದಿಸುವುದಿಲ್ಲ. ಕಚೇರಿ ಸಿಬ್ಬಂದಿ ದಯಾನಂದ್ ಮತ್ತು ಜಯಂತಿ ಪ್ರತಿನಿತ್ಯ ಹೆಚ್ಚುವರಿಯಾಗಿ ಹಣವನ್ನು ವಸೂಲಿ ಮಾಡುತ್ತಾರೆ ಎಂದು ನೊಂದ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಈ ಹಿನ್ನೆಲೆ ಹಾಸನದ ಲೋಕಾಯುಕ್ತ ಡಿವೈಎಸ್ಪಿ ಭಾನು ಮತ್ತು ಲೋಕಾಯುಕ್ತ ನಿರೀಕ್ಷಕ ಮಂಜುನಾಥ್ ಗೌಡ ನೇತೃತ್ವದಲ್ಲಿ ಆರ್​ಟಿಓ ಕಚೇರಿ ಮೇಲೆ ದಾಳಿ ನಡೆಸಿ ಸುಮಾರು ಎರಡು ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ದು, ಪ್ರಮುಖ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ.

ಹಾಸನ: ವಾಹನಗಳ ನೋಂದಣಿ ಮತ್ತು ವಾಣಿಜ್ಯ ವಾಹನಗಳ ಎಫ್. ಸಿ. ಹಣಪಾವತಿ ಮಾಡಿಸಿಕೊಳ್ಳುವಾಗ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನಲೆ ಹಾಸನದ ಪ್ರಾದೇಶಿಕ ಸಾರಿಗೆ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಹಾಸನದ ಆರ್​ಟಿಓ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಆರ್​ಟಿಓ ಕಚೇರಿಗೆ ಪ್ರತಿನಿತ್ಯ ಅಲೆದು ಅಲೆದು ಸಾಕಾಗಿದೆ, ಹಣ ಕೊಟ್ಟರೆ ಮಾತ್ರ ಎಲ್ಲಾ ಕೆಲಸ ಸಾರಾಸಗಟಾಗಿ ಆಗುತ್ತದೆ. ಚಾಲನಾ ಪರವಾನಿಗೆಯಿಂದ ಹಿಡಿದು ನೋಂದಣಿ, ಮರು ನೋಂದಣಿ ಮತ್ತು ವಾಹನಗಳ ವರ್ಗಾವಣೆ ಎಲ್ಲವನ್ನೂ ಹಣ ಕೊಟ್ಟ ಕ್ಷಣ ಮಾತ್ರದಲ್ಲಿ ಮಾಡಿಕೊಡುತ್ತಾರೆ. ಕಾನೂನು ಪ್ರಕಾರವಾಗಿ ಕೆಲಸ ಮಾಡಿಕೊಡಲು ಯಾರೊಬ್ಬರೂ ಸ್ಪಂದಿಸುವುದಿಲ್ಲ. ಕಚೇರಿ ಸಿಬ್ಬಂದಿ ದಯಾನಂದ್ ಮತ್ತು ಜಯಂತಿ ಪ್ರತಿನಿತ್ಯ ಹೆಚ್ಚುವರಿಯಾಗಿ ಹಣವನ್ನು ವಸೂಲಿ ಮಾಡುತ್ತಾರೆ ಎಂದು ನೊಂದ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಈ ಹಿನ್ನೆಲೆ ಹಾಸನದ ಲೋಕಾಯುಕ್ತ ಡಿವೈಎಸ್ಪಿ ಭಾನು ಮತ್ತು ಲೋಕಾಯುಕ್ತ ನಿರೀಕ್ಷಕ ಮಂಜುನಾಥ್ ಗೌಡ ನೇತೃತ್ವದಲ್ಲಿ ಆರ್​ಟಿಓ ಕಚೇರಿ ಮೇಲೆ ದಾಳಿ ನಡೆಸಿ ಸುಮಾರು ಎರಡು ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ದು, ಪ್ರಮುಖ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ.

Intro:ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಇವತ್ತು ಹಾಸನದ ಲೋಕಾಯುಕ್ತ ಅಧಿಕಾರಿಗಳು ಆರ್ಟಿಓ ಕಚೇರಿ ಮೇಲೆ ದಾಳಿ ನಡೆಸಿ ಪ್ರಮುಖ ಕಡತಗಳನ್ನು ಪರಿಶೀಲನೆ ನಡೆಸಿದರು.

ಹಾಸನದ ಲೋಕಾಯುಕ್ತ ಡಿವೈಎಸ್ಪಿ ಭಾನು ಮತ್ತು ಲೋಕಾಯುಕ್ತ ನಿರೀಕ್ಷಕ ಮಂಜುನಾಥ್ ಗೌಡ ನೇತೃತ್ವದಲ್ಲಿ ಹಾಸನದ ಸತ್ಯಮಂಗಲ ಸಮೀಪವಿರುವ ಆರ್ ಟಿ ಓ ಕಚೇರಿ ಮೇಲೆ ದಾಳಿ ನಡೆಸಿ ಬೆಳಗ್ಗೆಯಿಂದ ಪ್ರಮುಖ ದಾಖಲಾತಿಗಳನ್ನು ಪರಿಶೀಲನೆ ನಡೆಸಿದರು.

ವಾಹನಗಳ ನವೀಕರಣ, ನೊಂದಣಿ ಮತ್ತು ವಾಣಿಜ್ಯ ವಾಹನಗಳ ಎಫ್. ಸಿ. ಹಣಪಾವತಿ ಮಾಡಿಸಿಕೊಳ್ಳುವ ದಯಾನಂದ್ ಮತ್ತು ಜಯಂತಿ ರವರು ಪ್ರತಿನಿತ್ಯ ಹೆಚ್ಚುವರಿಯಾಗಿ ಹಣವನ್ನು ಸಾರ್ವಜನಿಕರಿಂದ ವಸೂಲಿ ಮಾಡುತ್ತಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದರ ಜೊತೆಗೆ ಮಧ್ಯವರ್ತಿಗಳು ಕೂಡ ಇವರ ವಿರುದ್ಧ ಆರೋಪ ಮಾಡಿದ್ದರು ಎನ್ನಲಾಗಿದ್ದು ದೂರು ಬಂದ ಹಿನ್ನೆಲೆಯಲ್ಲಿ ಹಾಸನದ ಲೋಕಾಯುಕ್ತ ಅಧಿಕಾರಿಗಳು ಇಂದು ದಾಳಿ ನಡೆಸಿ ಎರಡು ವಿಭಾಗವನ್ನು ಸುಮಾರು ಎರಡು ಗಂಟೆಗಳ ಕಾಲ ಪರಿಶೀಲನೆ ನಡೆಸಿ ಪ್ರಮುಖ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ.

ಇನ್ನೂ ಆರ್ ಟಿ ಓ ಕಚೇರಿಗೆ ನಾವು ಪ್ರತಿನಿತ್ಯ ಅಲೆದು ಅಲೆದು ಸಾಕಾಗಿದ್ದರೆ ಹಣ ಕೊಟ್ಟರೆ ಮಾತ್ರ ಎಲ್ಲಾ ಕೆಲಸವು ಸಾರಾಸಗಟಾಗಿ ಆಗುತ್ತದೆ. ಚಾಲನಾ ಪರವಾನಿಗೆ ಇಂದ ಹಿಡಿದು ನೊಂದಣಿ, ಮರು ನೊಂದಣಿ ಮತ್ತು ವಾಹನಗಳ ವರ್ಗಾವಣೆ ಎಲ್ಲವನ್ನು ಕ್ಷಣಮಾತ್ರದಲ್ಲಿ ಅಧಿಕಾರಿಗಳು ಹಣ ಕೊಟ್ಟ ಕ್ಷಣಮಾತ್ರದಲ್ಲಿ ಮಾಡಿಕೊಡುತ್ತಾರೆ. ಕಾನೂನು ಪ್ರಕಾರವಾಗಿ ಕೆಲಸ ಮಾಡಿಕೊಡಲು ಯಾರೊಬ್ಬರೂ ಕೂಡ ಸ್ಪಂದಿಸುವುದಿಲ್ಲ ಎಂಬ ಆರೋಪವನ್ನು ಪತ್ರದ ಮೂಲಕ ಲೋಕಾಯುಕ್ತ ಕಚೇರಿಗೆ ಕೆಲವು ನೊಂದ ಸಾರ್ವಜನಿಕರುಗಳು ಬರೆದಿದ್ದರು. ಈ ಹಿನ್ನೆಲೆಯಲ್ಲಿ ದಾಳಿ ಮಾಡಿ ತಪಾಸಣೆ ಮಾಡಿದ್ದೇವೆ ಎಂಬುದು ಲೋಕಾಯುಕ್ತ ಸಂಸ್ಥೆಯ ಮೂಲಗಳಿಂದ ದೊರೆತ ಮಾಹಿತಿ.

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.


Body:7203289


Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.