ETV Bharat / state

ಹಾಸನ: ಕೆಎಸ್ಆರ್​ಪಿ ಕಾನ್​ಸ್ಟೇಬಲ್​ ಆತ್ಮಹತ್ಯೆ

author img

By

Published : Aug 15, 2023, 9:48 PM IST

Updated : Aug 15, 2023, 10:50 PM IST

ಹಾಸನ ನಗರದಲ್ಲಿರುವ ಪ್ರವಾಸಿ ಮಂದಿರ ಕಟ್ಟಡದ ಹಿಂಭಾಗದಲ್ಲಿ ಪೊಲೀಸ್ ಕಾನ್​ಸ್ಟೇಬಲ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರವಾಸಿ ಮಂದಿರದಲ್ಲಿ ಕೆಎಸ್ಆರ್​ಪಿ ಕಾನ್​ಸ್ಟೇಬಲ್​ ಆತ್ಮಹತ್ಯೆ
ಪ್ರವಾಸಿ ಮಂದಿರದಲ್ಲಿ ಕೆಎಸ್ಆರ್​ಪಿ ಕಾನ್​ಸ್ಟೇಬಲ್​ ಆತ್ಮಹತ್ಯೆ

ಹಾಸನ : ನಗರದ ಪ್ರವಾಸಿ ಮಂದಿರದ ಕಟ್ಟಡದ ಹಿಂಭಾಗ ಕೆಎಸ್ಆರ್​ಪಿ ಚೀಫ್‌ ಕಾನ್​ಸ್ಟೇಬಲ್​ವೊಬ್ಬರು ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಬೆಳಗ್ಗೆ ಘಟನೆ ನಡೆದಿದೆ.

ರಾಜೇಂದ್ರ (56) ಮೃತರು. ಹಾಸನ 11ನೇ ಕೆಎಸ್‌ಆರ್‌ಪಿ ಘಟಕದಲ್ಲಿ ಕಾನ್​ಸ್ಟೇಬಲ್​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ. ನಗರದ ಪ್ರವಾಸಿ ಮಂದಿರದ ಕಟ್ಟಡದ ಹಿಂಭಾಗದಲ್ಲಿ ಹಾದು ಹೋಗಿರುವ ಟೆಲಿಪೋನ್ ಕೇಬಲ್​ನಿಂದ ಕುತ್ತಿಗೆಗೆ ಬಿಗಿದುಕೊಂಡು, ಸಾವಿಗೆ ಶರಣಾಗಿದ್ದಾರೆ.

ಕೇಬಲ್ ತಂತಿಯಿಂದ ಕುತ್ತಿಗೆ ಬಿಗಿದುಕೊಳ್ಳಲು ಹೋಗಿದ್ದು, ಕೇಬಲ್ ತುಂಡಾಗಿ ಕೆಳಗೆ ಸಿಮೆಂಟ್ ಕಟ್ಟೆಯ ಮೇಲೆ ಬಿದ್ದಿದ್ದಾರೆ. ಹೀಗಾಗಿ, ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ತದನಂತರ ರಕ್ತ ಸೋರಿಕೆಯಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು 2 ವರ್ಷಗಳಿಂದ ಹಾಸನ ಕೆಎಸ್‌ಆರ್‌ಪಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರು, ಈ ಹಿಂದೆ ರಾಜ್ಯ ಗುಪ್ತಚರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಹಾಸನ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲಾಡ್ಜ್​​​​ನಲ್ಲಿ ನೇಣಿಗೆ ಶರಣಾದ ಪೊಲೀಸ್ ಕಾನ್​​​​ಸ್ಟೇಬಲ್: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಲಾಡ್ಜ್​​​​ನಲ್ಲಿ ಪೊಲೀಸ್ ಕಾನ್​​ಸ್ಟೇಬಲ್ ನೇಣು ಬಿಗಿದುಕೊಂಡು (ನವೆಂಬರ್ 16-2021) ಆತ್ಮಹತ್ಯೆ ಮಾಡಿಕೊಂಡಿದ್ದರು. ರಂಗನಾಥ್​ ಕುಮಾರ್ ಆರ್ ಆತ್ಮಹತ್ಯೆಗೆ ಶರಣಾದವರು ಎಂದು ತಿಳಿದುಬಂದಿತ್ತು.

ಬೆಂಗಳೂರಿನ ಉಪ್ಪಾರಪೇಟೆ ಸನ್ಮಾನ್ ಲಾಡ್ಜ್‌ನಲ್ಲಿ ರಾತ್ರಿ ಫ್ಯಾನ್​​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಷಯ ತಿಳಿದು ಉಪ್ಪಾರಪೇಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹ ರವಾನಿಸಿದ್ದರು.

ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಈ ಹಿಂದೆ ಸೇವೆ ಸಲ್ಲಿಸುತ್ತಿದ್ದ ಕಾನ್​​ಸ್ಟೇಬಲ್‌, ಒಒಡಿ ಮೇರೆಗೆ ಬೆಂಗಳೂರಿನ‌ ಐಜಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕೌಟುಂಬಿಕ ಕಲಹದಿಂದ ಬೇಸತ್ತು ಲಾಡ್ಜ್‌ನಲ್ಲಿ ಯಾರೂ ಇಲ್ಲದಿರುವಾಗ ನೇಣಿಗೆ ಕೊರಳೊಡ್ಡಿದ್ದರು. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ಡೆತ್​ನೋಟ್ ಬರೆದಿಟ್ಟು, ಗುಂಡು ಹಾರಿಸಿಕೊಂಡು ಕಾನ್​ಸ್ಟೇಬಲ್​ ಆತ್ಮಹತ್ಯೆ : ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಹೆಡ್ ಕಾನ್ಸ್​​ಟೇಬಲ್​​ ಡೆತ್​ನೋಟ್ ಬರೆದಿಟ್ಟು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗದಲ್ಲಿ (ಜೂನ್ 16-2020) ನಡೆದಿತ್ತು. ಗದಗದಲ್ಲಿ ಡಿಎಆರ್ ಹೆಡ್ ಕಾನ್​​ಸ್ಟೇಬಲ್​ ಆಗಿದ್ದ ಕೆ.ಎಸ್.ಕೊಪ್ಪದ ಕರ್ತವ್ಯದಲ್ಲಿರುವಾಗಲೇ ಭದ್ರತೆಗೆ ನೀಡಲಾಗಿದ್ದ 303 ರೈಫಲ್​ನಿಂದ ಕುತ್ತಿಗೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಕಾನ್​ಸ್ಟೇಬಲ್​ ಗದಗ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಖಜಾನೆ ಕಚೇರಿಯ ಭದ್ರತಾ ಕೊಠಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಂದು ಮಧ್ಯಾಹ್ನದಿಂದ ಸಂಜೆ 9 ಗಂಟೆಗೆ ಡ್ಯೂಟಿ ಇತ್ತು. ಆದರೆ, ಇನ್ನೊಬ್ಬ ಪೇದೆ ಬಂದು ಇವರನ್ನು ರಿಲೀವ್ ಮಾಡುವ ಹೊತ್ತಿಗೆ ಅಂದರೆ ಸುಮಾರು 8.30ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಾನ್​ಸ್ಟೇಬಲ್​ ಕಾಣಿಸಿಕೊಂಡಿದ್ದರು. ಬಳಿಕ ವಿಷಯ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ಕೊರೊನಾಗೆ ಹೆದರಿ ಬಸ್​​​​​ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಕಾನ್​ಸ್ಟೇಬಲ್

ಹಾಸನ : ನಗರದ ಪ್ರವಾಸಿ ಮಂದಿರದ ಕಟ್ಟಡದ ಹಿಂಭಾಗ ಕೆಎಸ್ಆರ್​ಪಿ ಚೀಫ್‌ ಕಾನ್​ಸ್ಟೇಬಲ್​ವೊಬ್ಬರು ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಬೆಳಗ್ಗೆ ಘಟನೆ ನಡೆದಿದೆ.

ರಾಜೇಂದ್ರ (56) ಮೃತರು. ಹಾಸನ 11ನೇ ಕೆಎಸ್‌ಆರ್‌ಪಿ ಘಟಕದಲ್ಲಿ ಕಾನ್​ಸ್ಟೇಬಲ್​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ. ನಗರದ ಪ್ರವಾಸಿ ಮಂದಿರದ ಕಟ್ಟಡದ ಹಿಂಭಾಗದಲ್ಲಿ ಹಾದು ಹೋಗಿರುವ ಟೆಲಿಪೋನ್ ಕೇಬಲ್​ನಿಂದ ಕುತ್ತಿಗೆಗೆ ಬಿಗಿದುಕೊಂಡು, ಸಾವಿಗೆ ಶರಣಾಗಿದ್ದಾರೆ.

ಕೇಬಲ್ ತಂತಿಯಿಂದ ಕುತ್ತಿಗೆ ಬಿಗಿದುಕೊಳ್ಳಲು ಹೋಗಿದ್ದು, ಕೇಬಲ್ ತುಂಡಾಗಿ ಕೆಳಗೆ ಸಿಮೆಂಟ್ ಕಟ್ಟೆಯ ಮೇಲೆ ಬಿದ್ದಿದ್ದಾರೆ. ಹೀಗಾಗಿ, ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ತದನಂತರ ರಕ್ತ ಸೋರಿಕೆಯಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು 2 ವರ್ಷಗಳಿಂದ ಹಾಸನ ಕೆಎಸ್‌ಆರ್‌ಪಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರು, ಈ ಹಿಂದೆ ರಾಜ್ಯ ಗುಪ್ತಚರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಹಾಸನ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲಾಡ್ಜ್​​​​ನಲ್ಲಿ ನೇಣಿಗೆ ಶರಣಾದ ಪೊಲೀಸ್ ಕಾನ್​​​​ಸ್ಟೇಬಲ್: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಲಾಡ್ಜ್​​​​ನಲ್ಲಿ ಪೊಲೀಸ್ ಕಾನ್​​ಸ್ಟೇಬಲ್ ನೇಣು ಬಿಗಿದುಕೊಂಡು (ನವೆಂಬರ್ 16-2021) ಆತ್ಮಹತ್ಯೆ ಮಾಡಿಕೊಂಡಿದ್ದರು. ರಂಗನಾಥ್​ ಕುಮಾರ್ ಆರ್ ಆತ್ಮಹತ್ಯೆಗೆ ಶರಣಾದವರು ಎಂದು ತಿಳಿದುಬಂದಿತ್ತು.

ಬೆಂಗಳೂರಿನ ಉಪ್ಪಾರಪೇಟೆ ಸನ್ಮಾನ್ ಲಾಡ್ಜ್‌ನಲ್ಲಿ ರಾತ್ರಿ ಫ್ಯಾನ್​​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಷಯ ತಿಳಿದು ಉಪ್ಪಾರಪೇಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹ ರವಾನಿಸಿದ್ದರು.

ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಈ ಹಿಂದೆ ಸೇವೆ ಸಲ್ಲಿಸುತ್ತಿದ್ದ ಕಾನ್​​ಸ್ಟೇಬಲ್‌, ಒಒಡಿ ಮೇರೆಗೆ ಬೆಂಗಳೂರಿನ‌ ಐಜಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕೌಟುಂಬಿಕ ಕಲಹದಿಂದ ಬೇಸತ್ತು ಲಾಡ್ಜ್‌ನಲ್ಲಿ ಯಾರೂ ಇಲ್ಲದಿರುವಾಗ ನೇಣಿಗೆ ಕೊರಳೊಡ್ಡಿದ್ದರು. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ಡೆತ್​ನೋಟ್ ಬರೆದಿಟ್ಟು, ಗುಂಡು ಹಾರಿಸಿಕೊಂಡು ಕಾನ್​ಸ್ಟೇಬಲ್​ ಆತ್ಮಹತ್ಯೆ : ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಹೆಡ್ ಕಾನ್ಸ್​​ಟೇಬಲ್​​ ಡೆತ್​ನೋಟ್ ಬರೆದಿಟ್ಟು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗದಲ್ಲಿ (ಜೂನ್ 16-2020) ನಡೆದಿತ್ತು. ಗದಗದಲ್ಲಿ ಡಿಎಆರ್ ಹೆಡ್ ಕಾನ್​​ಸ್ಟೇಬಲ್​ ಆಗಿದ್ದ ಕೆ.ಎಸ್.ಕೊಪ್ಪದ ಕರ್ತವ್ಯದಲ್ಲಿರುವಾಗಲೇ ಭದ್ರತೆಗೆ ನೀಡಲಾಗಿದ್ದ 303 ರೈಫಲ್​ನಿಂದ ಕುತ್ತಿಗೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಕಾನ್​ಸ್ಟೇಬಲ್​ ಗದಗ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಖಜಾನೆ ಕಚೇರಿಯ ಭದ್ರತಾ ಕೊಠಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಂದು ಮಧ್ಯಾಹ್ನದಿಂದ ಸಂಜೆ 9 ಗಂಟೆಗೆ ಡ್ಯೂಟಿ ಇತ್ತು. ಆದರೆ, ಇನ್ನೊಬ್ಬ ಪೇದೆ ಬಂದು ಇವರನ್ನು ರಿಲೀವ್ ಮಾಡುವ ಹೊತ್ತಿಗೆ ಅಂದರೆ ಸುಮಾರು 8.30ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಾನ್​ಸ್ಟೇಬಲ್​ ಕಾಣಿಸಿಕೊಂಡಿದ್ದರು. ಬಳಿಕ ವಿಷಯ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ಕೊರೊನಾಗೆ ಹೆದರಿ ಬಸ್​​​​​ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಕಾನ್​ಸ್ಟೇಬಲ್

Last Updated : Aug 15, 2023, 10:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.