ETV Bharat / state

ಸಿಎಎ ವಿರುದ್ಧ ಹಾಸನದಲ್ಲಿ ಜೆಡಿಎಸ್​​​​ನಿಂದ​​ ಬೃಹತ್​​​​​ ಪ್ರತಿಭಟನೆ

author img

By

Published : Dec 28, 2019, 8:42 PM IST

ಕೇಂದ್ರ ಸರ್ಕಾರ ಕೂಡಲೇ ಪೌರತ್ವ ತಿದ್ದುಪಡಿ ಕಾಯ್ದೆ ವಾಪಸ್​​ ಪಡೆಯುವಂತೆ ಆಗ್ರಹಿಸಿ ಹಾಸನದಲ್ಲಿ ಜೆಡಿಎಸ್​​ ವತಿಯಿಂದ ಬೃಹತ್​​ ಪ್ರತಿಭಟನೆ ನಡೆಸಲಾಯ್ತು.

hassan
ಜೆಡಿಎಸ್​​ ಬೃಹತ್​​ ಪ್ರತಿಭಟನೆ

ಹಾಸನ: ಕೇಂದ್ರ ಸರ್ಕಾರ ಕೂಡಲೇ ಪೌರತ್ವ ತಿದ್ದುಪಡಿ ಕಾಯ್ದೆ ವಾಪಸ್​​ ಪಡೆಯುವಂತೆ ಆಗ್ರಹಿಸಿ ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಪ್ರತಿಭಟನಾ ಮೆರವಣಿಗೆಯು ಎನ್.ಆರ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಬಿಜಿಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತ ಎನ್​​ಆರ್​​ಸಿ ಹಾಗೂ ಸಿಎಎ ಜಾರಿ ಹಿಂಪಡೆಯುವಂತೆ ಒತ್ತಾಯಿಸಲಾಯಿತು. ಪ್ರತಿಭಟನೆ ವೇಳೆ ಮಾತನಾಡಿದ ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ದೇಶದಲ್ಲಿ ಕಾಯ್ದೆ ವಿರುದ್ಧ ಅಸಮಾಧಾನ ಎದ್ದಿರುವ ಕಾರಣ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ರಾಮ ಮಂದಿರ ತೀರ್ಪು ಬಂದ ನಂತರ ಮುಸ್ಲಿಂ ಸಮುದಾಯ ಧರ್ಮ ಮರೆತು ಒಟ್ಟಾಗಿ ನಿಂತಿದೆ. ಕಾಶ್ಮೀರ ವಿಷಯದಲ್ಲಿ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಮುಸ್ಲಿಂರಿಗೆ ತೊಂದರೆಯೊಡ್ಡುವ ಕಾಯ್ದೆ ತಂದಿದ್ದಾರೆ. ಅಂಬೇಡ್ಕರ್ ಸಂವಿಧಾನದ ಆಶಯದ ವಿರುದ್ಧ ಈ ಕಾಯ್ದೆ ತರಲಾಗಿದೆ. ಎಲ್ಲಾ ಧರ್ಮ ಸಮುದಾಯಗಳ ಐಕ್ಯತೆಗೆ ಹೆಸರಾಗಿರುವ ಭಾರತದಲ್ಲಿ ಧರ್ಮಗಳ ವಿರುದ್ಧ ಕಾಯ್ದೆ ತಂದಿರುವುದು ಸರಿಯಲ್ಲ. ಇದನ್ನು ಖಂಡಿಸುತ್ತೇವೆ ಎಂದರು.

ಜೆಡಿಎಸ್​​ ಬೃಹತ್​​ ಪ್ರತಿಭಟನೆ
ಶಾಸಕ ಲಿಂಗೇಶ್ ಮಾತನಾಡಿ, ದೇಶದ ಮುಸ್ಲಿಂ ಸಮುದಾಯದವರು ಹಲವು ದಶಕದಿಂದ ವಾಸಿಸುತ್ತಿದ್ದಾರೆ. ಏಕಾಏಕಿ ದಾಖಲೆ ಒದಗಿಸಿ ಎಂದರೆ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದರು. ಅಲ್ಲದೆ ಕೋಮು ದಳ್ಳುರಿಯಲ್ಲಿ ಉರಿಯುವ ದೇಶ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ ಎಂದರು. ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ದೇಶದ ಆರ್ಥಿಕತೆ ಕುಸಿದಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಮುಕ್ತ ಭಾರತ ಆಗಲಿದೆ. ಸಾರ್ವಜನಿಕ ಚರ್ಚೆ, ಹಲವು ಸಮುದಾಯದ ಅಭಿಪ್ರಾಯ ಸಂಗ್ರಹಿಸಿದ ನಂತರ ಕಾಯ್ದೆ ಜಾರಿ ಸರಿ. ಕಾಯ್ದೆ ಹೇರಿಕೆಯ ರಾಜಕೀಯ ಮಾಡದೇ ದೇಶದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕಿದೆ ಎಂದರು. ಮುಸ್ಲಿಂ ಧರ್ಮಗುರು ಅಭಿವುಲ್ಲ ಮಾತನಾಡಿ, ಭಾರತ ಕೇವಲ ಹಿಂದು, ಮುಸ್ಲಿಂ, ಸಿಖ್ಖರದ್ದಲ್ಲ, ಇದು ಸರ್ವಾಜನಾಂಗದ ಶಾಂತಿಯ ತೋಟ. ಇದನ್ನ ಒಡೆಯಲು ಮುಂದಾದ್ರೆ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮವನ್ನೇ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ರು.

ಪೊಲೀಸ್ ಭದ್ರತೆ :

ಪ್ರತಿಭಟನೆ ತೀವ್ರತೆ ಅರಿತ ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. ಎಎಸ್ಪಿ ನಂದಿನಿ ಸೇರಿದಂತೆ ಹಾಸನ, ಹೊಳೆನರಸೀಪುರ ಉಪ ವಿಭಾಗದ ಡಿವೈಎಸ್ಪಿ, ಇನ್ಸ್‌ಪೆಕ್ಟರ್‌ಗಳು ಹಾಗೂ ಕೆಎಸ್ಆರ್​​​ಪಿ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟು ಹೆಚ್ಚಿನ ಬಂದೋಬಸ್ತ್ ಒದಗಿಸಿದ್ರು.

ಹಾಸನ: ಕೇಂದ್ರ ಸರ್ಕಾರ ಕೂಡಲೇ ಪೌರತ್ವ ತಿದ್ದುಪಡಿ ಕಾಯ್ದೆ ವಾಪಸ್​​ ಪಡೆಯುವಂತೆ ಆಗ್ರಹಿಸಿ ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಪ್ರತಿಭಟನಾ ಮೆರವಣಿಗೆಯು ಎನ್.ಆರ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಬಿಜಿಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತ ಎನ್​​ಆರ್​​ಸಿ ಹಾಗೂ ಸಿಎಎ ಜಾರಿ ಹಿಂಪಡೆಯುವಂತೆ ಒತ್ತಾಯಿಸಲಾಯಿತು. ಪ್ರತಿಭಟನೆ ವೇಳೆ ಮಾತನಾಡಿದ ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ದೇಶದಲ್ಲಿ ಕಾಯ್ದೆ ವಿರುದ್ಧ ಅಸಮಾಧಾನ ಎದ್ದಿರುವ ಕಾರಣ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ರಾಮ ಮಂದಿರ ತೀರ್ಪು ಬಂದ ನಂತರ ಮುಸ್ಲಿಂ ಸಮುದಾಯ ಧರ್ಮ ಮರೆತು ಒಟ್ಟಾಗಿ ನಿಂತಿದೆ. ಕಾಶ್ಮೀರ ವಿಷಯದಲ್ಲಿ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಮುಸ್ಲಿಂರಿಗೆ ತೊಂದರೆಯೊಡ್ಡುವ ಕಾಯ್ದೆ ತಂದಿದ್ದಾರೆ. ಅಂಬೇಡ್ಕರ್ ಸಂವಿಧಾನದ ಆಶಯದ ವಿರುದ್ಧ ಈ ಕಾಯ್ದೆ ತರಲಾಗಿದೆ. ಎಲ್ಲಾ ಧರ್ಮ ಸಮುದಾಯಗಳ ಐಕ್ಯತೆಗೆ ಹೆಸರಾಗಿರುವ ಭಾರತದಲ್ಲಿ ಧರ್ಮಗಳ ವಿರುದ್ಧ ಕಾಯ್ದೆ ತಂದಿರುವುದು ಸರಿಯಲ್ಲ. ಇದನ್ನು ಖಂಡಿಸುತ್ತೇವೆ ಎಂದರು.

ಜೆಡಿಎಸ್​​ ಬೃಹತ್​​ ಪ್ರತಿಭಟನೆ
ಶಾಸಕ ಲಿಂಗೇಶ್ ಮಾತನಾಡಿ, ದೇಶದ ಮುಸ್ಲಿಂ ಸಮುದಾಯದವರು ಹಲವು ದಶಕದಿಂದ ವಾಸಿಸುತ್ತಿದ್ದಾರೆ. ಏಕಾಏಕಿ ದಾಖಲೆ ಒದಗಿಸಿ ಎಂದರೆ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದರು. ಅಲ್ಲದೆ ಕೋಮು ದಳ್ಳುರಿಯಲ್ಲಿ ಉರಿಯುವ ದೇಶ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ ಎಂದರು. ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ದೇಶದ ಆರ್ಥಿಕತೆ ಕುಸಿದಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಮುಕ್ತ ಭಾರತ ಆಗಲಿದೆ. ಸಾರ್ವಜನಿಕ ಚರ್ಚೆ, ಹಲವು ಸಮುದಾಯದ ಅಭಿಪ್ರಾಯ ಸಂಗ್ರಹಿಸಿದ ನಂತರ ಕಾಯ್ದೆ ಜಾರಿ ಸರಿ. ಕಾಯ್ದೆ ಹೇರಿಕೆಯ ರಾಜಕೀಯ ಮಾಡದೇ ದೇಶದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕಿದೆ ಎಂದರು. ಮುಸ್ಲಿಂ ಧರ್ಮಗುರು ಅಭಿವುಲ್ಲ ಮಾತನಾಡಿ, ಭಾರತ ಕೇವಲ ಹಿಂದು, ಮುಸ್ಲಿಂ, ಸಿಖ್ಖರದ್ದಲ್ಲ, ಇದು ಸರ್ವಾಜನಾಂಗದ ಶಾಂತಿಯ ತೋಟ. ಇದನ್ನ ಒಡೆಯಲು ಮುಂದಾದ್ರೆ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮವನ್ನೇ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ರು.

ಪೊಲೀಸ್ ಭದ್ರತೆ :

ಪ್ರತಿಭಟನೆ ತೀವ್ರತೆ ಅರಿತ ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. ಎಎಸ್ಪಿ ನಂದಿನಿ ಸೇರಿದಂತೆ ಹಾಸನ, ಹೊಳೆನರಸೀಪುರ ಉಪ ವಿಭಾಗದ ಡಿವೈಎಸ್ಪಿ, ಇನ್ಸ್‌ಪೆಕ್ಟರ್‌ಗಳು ಹಾಗೂ ಕೆಎಸ್ಆರ್​​​ಪಿ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟು ಹೆಚ್ಚಿನ ಬಂದೋಬಸ್ತ್ ಒದಗಿಸಿದ್ರು.

Intro:ಹಾಸನ : ಕೇಂದ್ರ ಸರಕಾರ ಕೂಡಲೇ ಪೌರತ್ವ ಕಾಯಿದೆ (ಓಖಅ- ಅಂಂ)  ತಿದ್ದುಪಡಿಯನ್ನು ವಾಪಸ್ಸು ಪಡೆಯುವಂತೆ ಆಗ್ರಹಿಸಿ  ನಗರದ ಹೇಮಾವತಿ ಪ್ರತಿಮೆಯ ಎದುರು ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
 ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಪ್ರತಿಭಟನಾ ಮೆರವಣಿಗೆಯು ಎನ್ ಆರ್ ವೃತ್ತದ ಮೂಲಕ ಜಿಲ್ಲಾಧಿಕಾರಿ  ಕಚೆರಿಯಲ್ಲಿ ತಲುಪಿ ಬಿಜಿಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತ ಎನ್‌ಆರ್ಸಿ ಕಾಯಿದೆ ಜಾರಿ ಹಿಂಪಡೆಯುವಂತೆ ಒತ್ತಾಯಿಸಿದರು.

 ಪ್ರತಿಭಟನೆ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ದೇಶದಲ್ಲಿ ಕಾಯಿದೆ ವಿರುದ್ಧ ಅಸಮಾಧಾನ ಎದ್ದಿದೆ ಕಾರಣ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ, ರಾಮಮಂದಿರ ತೀರ್ಪು ಬಂದ ನಂತರ ಮುಸ್ಲಿಂ ಸಮುದಾಯ ಧರ್ಮ ಮರೆತು ಒಟ್ಟಾಗಿ ನಿಂತರು,
ಕಾಶ್ಮೀರ ವಿಷಯದಲ್ಲಿ ಒಪ್ಪಿಗೆ ಸೂಚಿಸಿದರು, ಆದರೆ ಮುಸ್ಲಿಂ ಅವರಿಗೆ ತೊಂದರೆಯೊಡ್ಡುವ ಕಾಯಿದೆ ತಂದಿದ್ದಾರೆ. ಅಂಬೇಡ್ಕರ್
ಸಂವಿಧಾನದ ಆಶಯದ ವಿರುದ್ಧ ಈ ಕಾಯಿದೆ ತರಲಾಗಿದೆ. ಎಲ್ಲಾ ಧರ್ಮ ಸಮುದಾಯಗಳ ಐಕ್ಯತೆಗೆ ಹೆಸರಾಗಿರುವ ಭಾರತದಲ್ಲಿ ಧರ್ಮ ಗಳ ವಿರುದ್ದ ಕಾಯಿದೆ ತಂದಿರುವುದು ಸರಿಯಲ್ಲ ಇದನ್ನು ಖಂಡಿಸುತ್ತೇವೆ ಎಂದರು.  
 
ಶಾಸಕ ಲಿಂಗೇಶ್ ಮಾತನಾಡಿ, ದೇಶದ ಮುಸ್ಲಿಂ ಸಮುದಾಯದವರು ಹಲವು ದಶಕದಿಂದ ವಾಸಿಸುತ್ತಿದ್ದಾರೆ ಏಕಾಏಕಿ ದಾಖಲೆ ಒದಗಿಸಿ ಎಂದರೆ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದರು.  ಎಲ್ಲರು ದಾಖಲೆ ಇಟ್ಟು ಕೊಂಡಿರುವುದಿಲ್ಲ. ನುಸುಳುಕೋರರನ್ನು ತಡೆಯಿರಿ ಅದನ್ನು ಬಿಟ್ಟು ದೇಶದ ಒಳಗಿರುವ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಕಾಯಿದೆ ಜಾರಿ ಸರಿಯಲ್ಲ. ಕೋಮು ದಳ್ಳುರಿಯಲ್ಲಿ ಉರಿಯುವ
ದೇಶ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

 ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ದೇಶದ ಆರ್ಥಿಕತೆ ಕುಸಿದಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಮುಕ್ತ ಭಾರತ ಆಗಲಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ ಎಂದರಲ್ಲದೇ ಸಾರ್ವಜನಿಕ ಚರ್ಚೆ ಹಲವು ಸಮುದಾಯದ ಅಭಿಪ್ರಾಯ ಸಂಗ್ರಹಿಸಿದ ನಂತರ ಕಾಯಿದೆ ಜಾರಿ ಸರಿ...ಇಂದು ದೇಶದಲ್ಲಿ ಹಲವು ಸಮಸ್ಯೆ ಇದೆ ರೈತರು ಸಾಯುತ್ತಿದ್ದಾರೆ ಯುವಕರು ಕೆಲಸವಿಲ್ಲದೆ ಅಲೆಯುತ್ತಿದ್ದಾರೆ. ಕಾಯ್ದೆ ಜಾರಿಯಂತಹ ಕಾಯ್ದೆ ಹೇರಿಕೆಯ ರಾಜಕೀಯ ಮಾಡದೇ ದೇಶದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕಿದೆ ಎಂದರು.

ಮುಸ್ಲಿಂ ಗುರು ಅಭಿವುಲ್ಲ ಮಾತನಾಡಿ, ಭಾರತ ಕೇವಲ ಹಿಂದು, ಮುಸ್ಲೀ, ಸಿಕ್ಕರದಲ್ಲ, ಇದು ಸರ್ವಾಜನಾಂಗದ ಶಾಂತಿಯ ತೋಟ, ಇದನ್ನ ಒಡೆಯಲು ಮುಂದಾದ್ರೆ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮವೇ ನಡೆಸಬೇಕಾಗುತ್ತದೆ. ದೇಶದಲ್ಲಿ ನಿರುದ್ಯೋಗ, ಬಡಸ್ಥನ ತಾಂಡವವಾಡುತ್ತಿದೆ ಈ ಹಿನ್ನಲೆಯಲ್ಲಿ ದೇಶದ ಅಭಿವೃದ್ಧಿಗೆ ಹೋರಾಟ ಮಾಡಿದ್ರೆ ಅದಕ್ಕೆ ನಾವು ಬೆಂಬಲ ನೀಡುತ್ತೆವೆ ಅದನ್ನ ಬಿಟ್ಟು ಇದೇ ರೀತಿ ಸಂವಿಧನ ವಿರೋಧಿ ಕಾನೂನುಗಳನ್ನ ಜಾರಿಗೊಳಿಸಲು  ಮುಂದಾದ್ರೆ ಅಂದು ಬ್ರಿಟಿಷರನ್ನ ಹೋಡಿಸಿದಂತೆ ನಿಮ್ಮನ್ನ ಓಡಿಸಬೇಕಾಗುತ್ತದೆ ಎಂದರು.

 ಪೊಲೀಸ್ ಭದ್ರತೆ : ಪ್ರತಿಭಟನೆ ತೀವ್ರತೆ ಅರಿತ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. ಎ.ಎಸ್ಪಿ, ನಂದಿನಿ ಸೇರಿದಂತೆ , ಹಾಸನ, ಹೊಳೆನರಸೀಪುರ ಉಪವಿಭಾಗದ ಡಿ.ವೈ.ಎಸ್.ಪಿ, ಇನ್ಸ್‌ಪೆಕ್ಟರ್‌ಗಳು, ಹಾಗೂ ಕೆ.ಎಸ್.ಆರ್.ಪಿ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟು ಹೆಚ್ಚಿನ ಬಂದೋ ಬಸ್ತ್ ವ್ಯವಸ್ಥೆವ ಕಲ್ಪಿಸಿದ್ದರು.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ. 





Body:0


Conclusion:0

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.