ETV Bharat / state

ಬೆಚ್ಚಿ ಬಿದ್ದ ಅರಸೀಕೆರೆ:  ಸಾಮಾಜಿಕ ಜಾಲತಾಣದಲ್ಲಿ ಅನೈತಿಕ ಸಂಬಂಧದ ವಿಡಿಯೋ ಅಪ್ಲೋಡ್​​​.. ಡಬಲ್​ ಮರ್ಡರ್​ - ಅನೈತಿಕ ಸಂಬಂಧ ಹಿನ್ನಲೆ ಅರಸೀಕೆರೆಯಲ್ಲಿ ಜೋಡಿ ಕೊಲೆ

ಅನೈತಿಕ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಕ್ಕೆ ತಂದೆ ಮತ್ತು ಮಗನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಅರಸೀಕೆರೆಯಲ್ಲಿ ನಡೆದಿದೆ.

ಕೊಲೆ
author img

By

Published : Oct 15, 2019, 5:08 PM IST

ಹಾಸನ: ಅನೈತಿಕ ಸಂಬಂಧದ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಹಿನ್ನೆಲೆಯಲ್ಲಿ ತಂದೆ ಮತ್ತು ಮಗನನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದಿದೆ.

ಅಪ್ಪ ಮಗನ ಕೊಲೆ

ಅರಸೀಕೆರೆ ತಾಲೂಕಿನ ಹಂದ್ರಾಳು ಸಮೀಪದ ಗುಡ್ಡದ ಕೆಂಗನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು ಕೃಷ್ಣಪ್ಪ (45) ಕೊಲೆ ಮಾಡಿ ಜಾವಗಲ್ ಪೊಲೀಸರಿಗೆ ಶರಣಾಗಿರುವ ಆರೋಪಿ. ಮಂಜು (28) ಮತ್ತು ಗಂಗಪ್ಪ (70) ಕೊಲೆಯಾದ ಅಪ್ಪ ಮಕ್ಕಳು. ಆರೋಪಿಯ ಪತ್ನಿಯೊಂದಿಗೆ ಕೊಲೆಯಾದ ಮಂಜು ಅನೈತಿಕ ಸಂಬಂಧನು ಇಟ್ಟುಕೊಂಡಿದ್ದ ಅಷ್ಟೆಯಲ್ಲದೇ ಆಕೆಯೊಂದಿಗೆ ಸರಸ ಸಲ್ಲಾಪವಾಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಕೃಷ್ಣಪ್ಪನಿಗೆ ಹಣದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಈ ವಿಚಾರವಾಗಿ ಕಳೆದವಾರ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಎರಡೂ ಕುಟುಂಬದವರು ಒಮ್ಮತದ ತೀರ್ಮಾನ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ ಮಂಜು ಹಣದ ಆಸೆಗೆ ಬಿದ್ದು, ಪದೇಪದೇ ಕೃಷ್ಣಪ್ಪನಿಗೆ ಕೊಡುತ್ತಿದ್ದ ಹಿಂಸೆಯನ್ನು ತಾಳಲಾರದೇ ಹಣ ಕೊಡುವುದಾಗಿ ಹೇಳಿ ಮಂಜುನನ್ನು ತೋಟದ ಮನೆಗೆ ಕರೆಸಿಕೊಂಡು ಮರದ ಕಟ್ಟಿಗೆ ಹಾಗೂ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡುವ ವೇಳೆ ಅಡ್ಡಬಂದ ಗಂಗಪ್ಪನನ್ನ ಕೂಡ ಕೃಷ್ಣಪ್ಪ ಕೊಲೆ ಮಾಡಿದ್ದಾನೆ. ಮರ್ಡರ್​​ ಮಾಡಿದ ಬಳಿಕ ಇಬ್ಬರ ಮೃತದೇಹಗಳನ್ನು ತೆಂಗಿನ ಗರಿಯಿಂದ ಮುಚ್ಚಿ ಬಳಿಕ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಕೃಷ್ಣಪ್ಪ ಮತ್ತು ಗಂಗಪ್ಪ ಇಬ್ಬರು ಸಹೋದರ ಸಂಬಂಧಿಗಳು. ಕೊಲೆಗೆ ಕೇವಲ ಅನೈತಿಕ ಸಂಬಂಧ ಒಂದೇ ಕಾರಣವಲ್ಲ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆಯಾಗಿದೆ ಎನ್ನಲಾಗಿದೆ. ಸ್ಥಳೀಯರು ಹೇಳುವ ಪ್ರಕಾರ ಕೊಲೆಯ ಸಂದರ್ಭದಲ್ಲಿ ಕೃಷ್ಣಪ್ಪನ ಮನೆಯ ಇತರ ಮೂರು ಜನ ಸದಸ್ಯರು ಕೂಡ ಸೇರಿ ಕೊಲೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಶರಣಾಗಿರುವ ಕೃಷ್ಣಪ್ಪನನ್ನ ಪೊಲೀಸರು ವಶಕ್ಕೆ ಪಡೆದು ಕೊಲೆಯಾದ ಮಂಜು ಮತ್ತು ಗಂಗಪ್ಪ ಮೃತದೇಹಗಳ ಮರಣೋತ್ತರ ಪರೀಕ್ಷೆಗಾಗಿ ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಈ ಸಂಬಂಧ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಹಾಸನ: ಅನೈತಿಕ ಸಂಬಂಧದ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಹಿನ್ನೆಲೆಯಲ್ಲಿ ತಂದೆ ಮತ್ತು ಮಗನನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದಿದೆ.

ಅಪ್ಪ ಮಗನ ಕೊಲೆ

ಅರಸೀಕೆರೆ ತಾಲೂಕಿನ ಹಂದ್ರಾಳು ಸಮೀಪದ ಗುಡ್ಡದ ಕೆಂಗನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು ಕೃಷ್ಣಪ್ಪ (45) ಕೊಲೆ ಮಾಡಿ ಜಾವಗಲ್ ಪೊಲೀಸರಿಗೆ ಶರಣಾಗಿರುವ ಆರೋಪಿ. ಮಂಜು (28) ಮತ್ತು ಗಂಗಪ್ಪ (70) ಕೊಲೆಯಾದ ಅಪ್ಪ ಮಕ್ಕಳು. ಆರೋಪಿಯ ಪತ್ನಿಯೊಂದಿಗೆ ಕೊಲೆಯಾದ ಮಂಜು ಅನೈತಿಕ ಸಂಬಂಧನು ಇಟ್ಟುಕೊಂಡಿದ್ದ ಅಷ್ಟೆಯಲ್ಲದೇ ಆಕೆಯೊಂದಿಗೆ ಸರಸ ಸಲ್ಲಾಪವಾಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಕೃಷ್ಣಪ್ಪನಿಗೆ ಹಣದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಈ ವಿಚಾರವಾಗಿ ಕಳೆದವಾರ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಎರಡೂ ಕುಟುಂಬದವರು ಒಮ್ಮತದ ತೀರ್ಮಾನ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ ಮಂಜು ಹಣದ ಆಸೆಗೆ ಬಿದ್ದು, ಪದೇಪದೇ ಕೃಷ್ಣಪ್ಪನಿಗೆ ಕೊಡುತ್ತಿದ್ದ ಹಿಂಸೆಯನ್ನು ತಾಳಲಾರದೇ ಹಣ ಕೊಡುವುದಾಗಿ ಹೇಳಿ ಮಂಜುನನ್ನು ತೋಟದ ಮನೆಗೆ ಕರೆಸಿಕೊಂಡು ಮರದ ಕಟ್ಟಿಗೆ ಹಾಗೂ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡುವ ವೇಳೆ ಅಡ್ಡಬಂದ ಗಂಗಪ್ಪನನ್ನ ಕೂಡ ಕೃಷ್ಣಪ್ಪ ಕೊಲೆ ಮಾಡಿದ್ದಾನೆ. ಮರ್ಡರ್​​ ಮಾಡಿದ ಬಳಿಕ ಇಬ್ಬರ ಮೃತದೇಹಗಳನ್ನು ತೆಂಗಿನ ಗರಿಯಿಂದ ಮುಚ್ಚಿ ಬಳಿಕ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಕೃಷ್ಣಪ್ಪ ಮತ್ತು ಗಂಗಪ್ಪ ಇಬ್ಬರು ಸಹೋದರ ಸಂಬಂಧಿಗಳು. ಕೊಲೆಗೆ ಕೇವಲ ಅನೈತಿಕ ಸಂಬಂಧ ಒಂದೇ ಕಾರಣವಲ್ಲ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆಯಾಗಿದೆ ಎನ್ನಲಾಗಿದೆ. ಸ್ಥಳೀಯರು ಹೇಳುವ ಪ್ರಕಾರ ಕೊಲೆಯ ಸಂದರ್ಭದಲ್ಲಿ ಕೃಷ್ಣಪ್ಪನ ಮನೆಯ ಇತರ ಮೂರು ಜನ ಸದಸ್ಯರು ಕೂಡ ಸೇರಿ ಕೊಲೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಶರಣಾಗಿರುವ ಕೃಷ್ಣಪ್ಪನನ್ನ ಪೊಲೀಸರು ವಶಕ್ಕೆ ಪಡೆದು ಕೊಲೆಯಾದ ಮಂಜು ಮತ್ತು ಗಂಗಪ್ಪ ಮೃತದೇಹಗಳ ಮರಣೋತ್ತರ ಪರೀಕ್ಷೆಗಾಗಿ ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಈ ಸಂಬಂಧ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Intro:ಹಾಸನ: ಅನೈತಿಕ ಸಂಬಂಧದ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಹಿನ್ನೆಲೆಯಲ್ಲಿ ತಂದೆ ಮತ್ತು ಮಗನನ್ನ ಬರ್ಬರವಾಗಿ ಕೊಲೆಗೈದಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೕರೆಯಲ್ಲಿ ನಡೆದಿದೆ.

ಅರಸೀಕೆರೆ ತಾಲೂಕಿನ ಹಂದ್ರಾಳು ಸಮೀಪದ ಗುಡ್ಡದ ಕೆಂಗನಹಳ್ಳಿಯಲ್ಲಿ ಘಟನೆ ನಡೆದಿದ್ದು ಕೃಷ್ಣಪ್ಪ (45) ಕೊಲೆ ಮಾಡಿ ಜಾವಗಲ್ ಪೊಲೀಸರಿಗೆ ಶರಣಾಗಿರುವ ಆರೋಪಿ. ಮಂಜು (28) ಮತ್ತು ಗಂಗಪ್ಪ (70) ಕೊಲೆಯಾದ ಅಪ್ಪ ಮಕ್ಕಳು. ಆರೋಪಿಯ ಪತ್ನಿಯೊಂದಿಗೆ ಕೊಲೆಯಾದ ಮಂಜು ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದಷ್ಟೆಯಲ್ಲದೇ ಆಕೆಯೊಂದಿಗೆ ಸರಸ ಸಲ್ಲಾಪವಾಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಕೃಷ್ಣಪ್ಪನಿಗೆ ಹಣದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಈ ವಿಚಾರವಾಗಿ ಕಳೆದವಾರ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಎರಡೂ ಕುಟುಂಬದವರು ಒಮ್ಮತಕ್ಕೆ ಬಂದು ತೀರ್ಮಾನ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ ಮಂಜು ಹಣದ ಆಸೆಗೆ ಬಿದ್ದು ಪದೇಪದೇ ಕೃಷ್ಣಪ್ಪನಿಗೆ ಕೊಡುತ್ತಿದ್ದ ಹಿಂಸೆಯನ್ನು ತಾಳಲಾರದೆ ಹಣ ಕೊಡುವುದಾಗಿ ಹೇಳಿ ಮಂಜುವನ್ನ ತೋಟದ ಮನೆಗೆ ಕರೆಸಿಕೊಂಡು ಮರದ ಕಟ್ಟಿಗೆ ಹಾಗೂ ಮಾರಕಾಸ್ತ್ರಗಳಿಂದ ಹೊಡೆದು ಕೊಲೆಗೈಯ್ಯುವ ವೇಳೆ ಅಡ್ಡಬಂದ ಗಂಗಪ್ಪನನ್ನ ಕೂಡ ಕೃಷ್ಣಪ್ಪ ಕೊಲೆಗೈದಿದ್ದು, ಕೊಲೆ ಮಾಡಿದ ಬಳಿಕ ಇಬ್ಬರ ಮೃತದೇಹಗಳನ್ನು ತೆಂಗಿನ ಗರಿಯಿಂದ ಮುಚ್ಚಿ ಬಳಿಕ ಪೊಲೀಸ್ ಠಾಣೆ ಹೋಗಿ ಶರಣಾಗಿದ್ದಾನೆ.

ಕೃಷ್ಣಪ್ಪ ಮತ್ತು ಗಂಗಪ್ಪ ಇಬ್ಬರು ಸಹೋದರ ಸಂಬಂಧಿಗಳು.
ಕೊಲೆಗೆ ಕೇವಲ ಅನೈತಿಕ ಸಂಬಂಧ ಒಂದೇ ಕಾರಣವಲ್ಲ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆಯಾಗಿದೆ ಎನ್ನಲಾಗಿದೆ. ಸ್ಥಳೀಯರು ಹೇಳುವ ಪ್ರಕಾರ ಕೊಲೆಯ ಸಂದರ್ಭದಲ್ಲಿ ಕೃಷ್ಣಪ್ಪನ ಮನೆಯ ಇತರ ಮೂರು ಜನ ಸದಸ್ಯರು ಕೂಡ ಸೇರಿ ಕೊಲೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಶರಣಾಗಿರುವ ಕೃಷ್ಣಪ್ಪನನ್ನ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಕೊಲೆಯಾದ ಮಂಜು ಮತ್ತು ಗಂಗಪ್ಪ ಮೃತದೇಹಗಳ ಮರಣೋತ್ತರ ಪರೀಕ್ಷೆಗಾಗಿ ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅದ್ಯಾಕೋ ಗೊತ್ತಿಲ್ಲ ಒಟ್ಟಾರೆ ಹಾಸನದಲ್ಲಿ ಅನೈತಿಕ ಸಂಬಂಧಗಳಿಗೆ ಕೊಲೆ ಆಗುತ್ತಿದ್ದು, ನೆನ್ನೆ ಕೂಡ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೃಷ್ಣೇಗೌಡ ಕೊಲೆಯಾಗಿದ್ದ. ಇನ್ನೂ 24ಗಂಟೆಯಲ್ಲಿ ಮತ್ತೆ ಜಿಲ್ಲೆಯಲ್ಲಿ ಡಬಲ್ ಮರ್ಡರ್ ಆಗಿರುವುದು ಅನೈತಿಕ ಸಂಬಂಧ ವಿಚಾರವಾಗಿಯೇ. ಅಲ್ಲದೇ ಅರಸಿಕೆರೆಯಲ್ಲಿ ಹಿಂದೆ ಆಲೂಗಡ್ಡೆ ವ್ಯಾಪಾರಿಯನ್ನ ತನ್ನ ಪತ್ನಿಯೇ ಸುಫಾರಿಕೊಟ್ಟು ಪತಿ ಚಂದ್ರೇಗೌಡನನ್ನ ಕೊಲೆ ಮಾಡಿಸಿದ್ಲು. ಅಷ್ಟೇ ಅಲ್ಲ ಹಾಸನದ ಗ್ರಾನೈಟ್ ಮಾಲೀಕ ಅಣ್ಣಪ್ಪಗೌಡನನ್ನ ಅನೈತಿಕ ಸಂಬಂಧ ಹೊಂದಿದ್ದ ಪತ್ನಿಯೇ 15 ಲಕ್ಷಕ್ಕೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಳು.

ಈ ಸಂಬಂಧ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ


Body:0


Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.