ETV Bharat / state

ಮಲೆನಾಡಿಗರ ನಿದ್ದೆಗೆಡಿಸಿದ ಪುಂಡಾನೆಗಳು : ಕಾಫಿ, ಭತ್ತ ಹಾನಿ - ಹಾಸನದ ಕುಂದ್ರಳ್ಳಿಯ ಕಾಫಿತೋಟದಲ್ಲಿ ಆನೆಗಳು ಸುದ್ದಿ

ಆಲೂರು ತಾಲೂಕಿನ ಕುಂದ್ರಳ್ಳಿಯ ಕಾಫಿತೋಟದಲ್ಲಿ ಮರಿಗಳು ಸೇರಿ ಸುಮಾರು 18 ಕ್ಕೂ ಹೆಚ್ಚು ಆನೆಗಳು ಓಡಾಡಿದ್ದು, ಕಾಫಿ ಬೆಳೆ ನಾಶವಾಗಿದೆ.

ಮಲೆನಾಡಿಗರ ನಿದ್ದೆಗೆಡಿಸಿದ ಪುಂಡಾನೆಗಳು
author img

By

Published : Oct 27, 2019, 1:51 AM IST

ಹಾಸನ: ಪುಂಡಾನೆಗಳು ಕಾಣಿಸಿಕೊಂಡು ಮತ್ತೆ ಮಲೆನಾಡು ಜನರ ನಿದ್ದೆಗೆಡಿಸಿವೆ. ಆಲೂರು ತಾಲೂಕಿನ ಕುಂದ್ರಳ್ಳಿಯ ಕಾಫಿತೋಟದಲ್ಲಿ ಮರಿಗಳು ಸೇರಿ ಸುಮಾರು 18 ಕ್ಕೂ ಹೆಚ್ಚು ಆನೆಗಳು ಓಡಾಡಿದ್ದು, ಕಾಫಿ ಬೆಳೆ ನಾಶವಾಗಿದೆ.

ಮಲೆನಾಡಿಗರ ನಿದ್ದೆಗೆಡಿಸಿದ ಪುಂಡಾನೆಗಳು

ಆನೆಗಳು ಆಹಾರ ಮತ್ತು ನೀರನ್ನು ಅರಸಿ ನಾಡಿನೆಡೆಗೆ ಬರುತ್ತಿವೆ. ಯಸಳೂರು, ಕೆ.ಹೊಸಕೋಟೆ, ಮಗ್ಗೆ, ರಾಯರಕೊಪ್ಪಲು ಮುಂತಾದ ಕಡೆಯಲ್ಲಿ ಭತ್ತದ ಗದ್ದೆಗಳಿಗೂ ದಾಳಿ ನಡೆಸಿದ್ದು, ಬೆಳೆಹಾನಿಯಾಗಿದೆ. ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಪಟಾಕಿ ಸಿಡಿಸಿ ಆನೆಗಳನ್ನ ಓಡಿಸುವ ಯತ್ನ ಮಾಡಿದರು.

ಹಾಸನ: ಪುಂಡಾನೆಗಳು ಕಾಣಿಸಿಕೊಂಡು ಮತ್ತೆ ಮಲೆನಾಡು ಜನರ ನಿದ್ದೆಗೆಡಿಸಿವೆ. ಆಲೂರು ತಾಲೂಕಿನ ಕುಂದ್ರಳ್ಳಿಯ ಕಾಫಿತೋಟದಲ್ಲಿ ಮರಿಗಳು ಸೇರಿ ಸುಮಾರು 18 ಕ್ಕೂ ಹೆಚ್ಚು ಆನೆಗಳು ಓಡಾಡಿದ್ದು, ಕಾಫಿ ಬೆಳೆ ನಾಶವಾಗಿದೆ.

ಮಲೆನಾಡಿಗರ ನಿದ್ದೆಗೆಡಿಸಿದ ಪುಂಡಾನೆಗಳು

ಆನೆಗಳು ಆಹಾರ ಮತ್ತು ನೀರನ್ನು ಅರಸಿ ನಾಡಿನೆಡೆಗೆ ಬರುತ್ತಿವೆ. ಯಸಳೂರು, ಕೆ.ಹೊಸಕೋಟೆ, ಮಗ್ಗೆ, ರಾಯರಕೊಪ್ಪಲು ಮುಂತಾದ ಕಡೆಯಲ್ಲಿ ಭತ್ತದ ಗದ್ದೆಗಳಿಗೂ ದಾಳಿ ನಡೆಸಿದ್ದು, ಬೆಳೆಹಾನಿಯಾಗಿದೆ. ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಪಟಾಕಿ ಸಿಡಿಸಿ ಆನೆಗಳನ್ನ ಓಡಿಸುವ ಯತ್ನ ಮಾಡಿದರು.

Intro:ಹಾಸನ: ಇವತ್ತು ತಾನೇ ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ಭರವಸೆಯ ಮೇಲೆ ಬಾಳ್ಳುಪೇಟೆಯಲ್ಲಿ ನಡೆಯುತ್ತಿದ್ದ ರಸ್ತೆ ಕಾಮಗಾರಿ ಪ್ರತಿಭಟನೆ ನಿಲ್ಲುತ್ತಿದ್ದಂತೆ ಇತ್ತ ಪುಂಡಾನೆಗಳು ಕಾಣಿಸಿಕೊಂಡು ಮತ್ತೆ ಮಲೆನಾಡು ಜನರನ್ನ ನಿದ್ದೆಗೆಡಿಸಿವೆ.

ಹೌದು..! ಅದೇನೋ ಹೇಳ್ತಾರಲ್ಲ. ಆನೆ ನಡೆದಿದ್ದೇ ದಾರಿ ಅಂತ. ಹಾಗೇ ಇಂದು ಆಲೂರು ತಾಲ್ಲೂಕಿನ ಕುಂದ್ರಳ್ಳಿಯ ಕಾಫಿತೋಟದಲ್ಲಿ ಮರಿಗಳನ್ನ ಒಳಗೊಂಡಂತೆ ಸುಮಾರು 18ಕ್ಕೂ ಹೆಚ್ಚು ಆನೆ ಆನೆಗಳು ಕಾಫಿತೋಟದಲ್ಲಿ ಓಡಾಟ ನಡೆಸಿದ್ದಕ್ಕೆ ನೂರಾರು ಕಾಫಿ ಗಿಡಗಳನ್ನ ಹಾಳಾಗಿದ್ದು ಬೇಸರದ ಸಂಗತಿ.

ಕಾಡಂಚಿನ ಆನೆಗಳು ಆಹಾರವನ್ನ ಮತ್ತು ನೀರನ್ನ ಅರಸಿ ನಾಡಿನಡೆಗೆ ಬರುತ್ತಿವೆ. ಕಾಡಿನಲ್ಲಿ ಅವುಗಳಿಗೆ ಬೇಕಾದ ಬಿದಿರು, ಬೈನೇ, ಹಲಸು, ಮುಂತಾದವುಗಳು ಸಿಗುತ್ತಿಲ್ಲ. ಇರುವುದೆಲ್ಲವು ಈಗಾಗಲೇ ಮುಗಿಯುವ ಹಂತಕ್ಕೆ ಬಂದಿದೆ. ಹೀಗಾಗಿ ಕಾಡಾನೆಗಳು ಕಾಫಿಯ ಬೀಜಗಳ ರುಚಿಯನ್ನ ನೋಡಿದ್ದು, ಅವುಗಳತ್ತ ಮುಖ ಮಾಡಿ ಕಾಫಿತೋಟಕ್ಕೆ ಲಗ್ಗೆ ಹಿಟ್ಟು ತಿಂದು ಮುಗಿಸುತ್ತಿವೆ. ಇನ್ನು ಯಸಳೂರು, ಕೆ.ಹೊಸಕೋಟೆ, ಮಗ್ಗೆ, ರಾಯರಕೊಪ್ಪಲು ಮುಂತಾದ ಕಡೆಯಲ್ಲಿ ಭತ್ತದ ಗದ್ದೆಗಳಿಗೂ ದಾಳಿನಡೆಸಿ ಹಾಳು ಮಾಡಿದ್ದು, ಪ್ರವಾಹದ ನಡುವೆ ಇವರುಗಳ ಉಪಟಳದಿಂದ ರೈತನ ಜೀವನದ ಮೇಲೆ ಮತ್ತೊಂದು ಬರೆ ಎಳೆದಂತಾಗಿದೆ.

ಇನ್ನು ಇಂದು ದಾಳಿ ನಡೆಸಿದ ಹಿನ್ನಲೆಯಲ್ಲಿ ಲಕ್ಷಾಂತರ ಮೌಲ್ಯದ ಕಾಫಿ ತೋಟ ಹಾಳಾಗಿದ್ದು, ಕೆಲವು ಸ್ಥಳೀಯ ಯುವಕರು ಆನೆಯನ್ನ ಓಡಿಸಲು ಹರಸಾಹಸವನ್ನೆಪಟ್ಟಿದ್ದಾರೆ. ಅಲ್ಲದೇ ಜೀವದ ಹಂಗನ್ನ ತೊರೆದು ಅವುಗಳ ಸಮೀಪವೇ ತೆರಳಿ ವಿಡಿಯೋ ಮಾಡಿದ್ದಾರೆ. ಇನ್ನು ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಪಟಾಕಿ ಸಿಡಿಸಿ ಆನೆಗಳನ್ನ ಓಡಿಸುವ ಯತ್ನ ಮಾಡಿತ್ತಿದ್ದಾರೆ. ಇನ್ನು ಸದ್ಯ ಈ ಭಾಗದಲ್ಲಿ 50ಕ್ಕೂ ಹೆಚ್ಚು ಆನೆಗಳಿವೆ. ಅವುಗಳನ್ನ ಸ್ಥಳಾಂತರಿಸಬೇಕು ಎನ್ನುವುದು ಇವರುಗಳ ಆಗ್ರಹ. ಇನ್ನು ಆನೆ ಉಪಟಳಕ್ಕೆ ತಂತಿಬೇಲಿ ನಿರ್ಮಿಸಲು ಈಗಾಗಲೇ 100 ಕೋಟಿಯನ್ನ ಬಜೆಟ್ ನಲ್ಲಿ ಬಿಡುಗಡೆ ಮಾಡಿದ್ದು, ಯೋಜನೆ ಯಾವಾಗ ಪ್ರಾರಂಭವಾಗುತ್ತವೆ ಎಂದು ಎದುರುನೋಡುತ್ತಿದ್ದಾರೆ.

•         ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.


Body:0


Conclusion:7203289
ETV Bharat Logo

Copyright © 2025 Ushodaya Enterprises Pvt. Ltd., All Rights Reserved.