ETV Bharat / state

ಉಡುಪಿಯಿಂದ ಹಾಸನಕ್ಕೆ ಬ್ಯಾನ್ ಆಗಿರುವ ಔಷಧಿ ಬಾಟಲ್​​ಗಳ ಸಾಗಾಟ: ಆರೋಪಿ ಅಂದರ್​

author img

By

Published : Sep 8, 2020, 7:03 AM IST

Updated : Sep 8, 2020, 9:46 AM IST

ಸಚಿನ್ ಎಂಬ ವ್ಯಕ್ತಿ ಕೆಎಸ್​​ಆರ್​ಟಿಸಿ ಬಸ್ ಮೂಲಕ ಉಡುಪಿಯಿಂದ ಹಾಸನಕ್ಕೆ ಬ್ಯಾನ್ ಆಗಿರುವ ಔಷಧಿ ಬಾಟಲ್​​​ಗಳನ್ನು ಸಾಗಿಸುವ ಕೆಲಸದಲ್ಲಿ ತೊಡಗಿದ್ದ. ಮಾಹಿತಿ ಮೇರೆಗೆ ಹಾಸನ ನಗರ ವೃತ್ತ ನಿರೀಕ್ಷಕ ಕೃಷ್ಣರಾಜ ಮತ್ತು ಅವರ ತಂಡ ಬಸ್ ನಿಲ್ದಾಣದಲ್ಲಿ ಮಾದಕ ವಸ್ತು ಸಹಿತ ಆತನನ್ನು ವಶಕ್ಕೆ ಪಡೆದೆ.

Drug transportation from Udupi to Hassan : one arrested
ಉಡುಪಿಯಿಂದ ಹಾಸನಕ್ಕೆ ಬ್ಯಾನ್ ಆಗಿರುವ ಔಷಧಿ ಬಾಟಲ್​​ಗಳ ಸಾಗಾಟ: ಆರೋಪಿ ಅಂದರ್​

ಹಾಸನ: ಅಕ್ರಮವಾಗಿ ಉಡುಪಿಯಿಂದ ಹಾಸನಕ್ಕೆ ಮಾದಕ ವಸ್ತು ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಓರ್ವನ ಬಂಧನ

ಬಂಧಿತನು ಕೆಎಸ್​​ಆರ್​ಟಿಸಿ ಬಸ್ ಮೂಲಕ ಉಡುಪಿಯಿಂದ ಹಾಸನಕ್ಕೆ ಸುಮಾರು ಎರಡು ಬಾಕ್ಸ್​​​ಗಳಲ್ಲಿ ತಲಾ ನೂರು ಬಾಟಲ್​​ಗಳಂತೆ ಬ್ಯಾನ್ ಆಗಿರುವ ಔಷಧಿ ಬಾಟಲ್​​ಗಳನ್ನು ನೇರವಾಗಿ ಸ್ಥಳೀಯ ಮಾದಕ ವ್ಯಸನಿಗಳಿಗೆ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಹಾಸನ ನಗರ ವೃತ್ತ ನಿರೀಕ್ಷಕ ಕೃಷ್ಣರಾಜ ಮತ್ತು ಅವರ ತಂಡ ಬಸ್ ನಿಲ್ದಾಣದಲ್ಲಿ ಆರೋಪಿ ಸಚಿನ್ ಎಂಬುವನನ್ನು ವಶಕ್ಕೆ ಪಡೆದು ಮಾರಾಟ ಮಾಡಲು ತಂದಿದ್ದ ಔಷಧಿ ಬಾಟಲಿ (ನಿಷೇಧವಾಗಿರುವ)ಗಳನ್ನು ವಶಪಡಿಸಿಕೊಂಡಿದ್ದಾರೆ.

ಸಾರಿಗೆ ಬಸ್​ನಲ್ಲಿ ನಿಷೇಧಿತ 2 ಬಾಕ್ಸ್ ಔಷಧಿ ಬಾಕ್ಸ್ ಪತ್ತೆ

ಹಾಸನ ಬಡಾವಣೆ ಪೊಲೀಸರು ಆತನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಯಾವುದೇ ಕಾರಣಕ್ಕೂ ಇಂತಹ ಆಘಾತಕಾರಿ ಸಂಗತಿಗಳನ್ನು ಮುಂದಿನ ದಿನಗಳಲ್ಲಿ ಮರುಕಳಿಸಲು ನಾವು ಬಿಡುವುದಿಲ್ಲ. ಡ್ರಗ್ಸ್​​ ಪೆಡ್ಲರ್​​ಗಳನ್ನು ಮಟ್ಟಹಾಕಲು ಸಾರ್ವಜನಿಕರು ನಮಗೆ ಸಹಕಾರ ನೀಡಬೇಕು. ಇಂತಹ ಪ್ರಕರಣಗಳಲ್ಲಿ ಯಾವುದೇ ಮುಲಾಜಿಲ್ಲದೆ ಅವರಿಗೆ ತಕ್ಕ ಶಿಕ್ಷೆ ನೀಡಲಾಗುವುದು ಎಂದು ಎಸ್ಪಿ ಆರ್​ ಶ್ರೀನಿವಾಸ್ ಗೌಡ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಹಾಸನ: ಅಕ್ರಮವಾಗಿ ಉಡುಪಿಯಿಂದ ಹಾಸನಕ್ಕೆ ಮಾದಕ ವಸ್ತು ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಓರ್ವನ ಬಂಧನ

ಬಂಧಿತನು ಕೆಎಸ್​​ಆರ್​ಟಿಸಿ ಬಸ್ ಮೂಲಕ ಉಡುಪಿಯಿಂದ ಹಾಸನಕ್ಕೆ ಸುಮಾರು ಎರಡು ಬಾಕ್ಸ್​​​ಗಳಲ್ಲಿ ತಲಾ ನೂರು ಬಾಟಲ್​​ಗಳಂತೆ ಬ್ಯಾನ್ ಆಗಿರುವ ಔಷಧಿ ಬಾಟಲ್​​ಗಳನ್ನು ನೇರವಾಗಿ ಸ್ಥಳೀಯ ಮಾದಕ ವ್ಯಸನಿಗಳಿಗೆ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಹಾಸನ ನಗರ ವೃತ್ತ ನಿರೀಕ್ಷಕ ಕೃಷ್ಣರಾಜ ಮತ್ತು ಅವರ ತಂಡ ಬಸ್ ನಿಲ್ದಾಣದಲ್ಲಿ ಆರೋಪಿ ಸಚಿನ್ ಎಂಬುವನನ್ನು ವಶಕ್ಕೆ ಪಡೆದು ಮಾರಾಟ ಮಾಡಲು ತಂದಿದ್ದ ಔಷಧಿ ಬಾಟಲಿ (ನಿಷೇಧವಾಗಿರುವ)ಗಳನ್ನು ವಶಪಡಿಸಿಕೊಂಡಿದ್ದಾರೆ.

ಸಾರಿಗೆ ಬಸ್​ನಲ್ಲಿ ನಿಷೇಧಿತ 2 ಬಾಕ್ಸ್ ಔಷಧಿ ಬಾಕ್ಸ್ ಪತ್ತೆ

ಹಾಸನ ಬಡಾವಣೆ ಪೊಲೀಸರು ಆತನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಯಾವುದೇ ಕಾರಣಕ್ಕೂ ಇಂತಹ ಆಘಾತಕಾರಿ ಸಂಗತಿಗಳನ್ನು ಮುಂದಿನ ದಿನಗಳಲ್ಲಿ ಮರುಕಳಿಸಲು ನಾವು ಬಿಡುವುದಿಲ್ಲ. ಡ್ರಗ್ಸ್​​ ಪೆಡ್ಲರ್​​ಗಳನ್ನು ಮಟ್ಟಹಾಕಲು ಸಾರ್ವಜನಿಕರು ನಮಗೆ ಸಹಕಾರ ನೀಡಬೇಕು. ಇಂತಹ ಪ್ರಕರಣಗಳಲ್ಲಿ ಯಾವುದೇ ಮುಲಾಜಿಲ್ಲದೆ ಅವರಿಗೆ ತಕ್ಕ ಶಿಕ್ಷೆ ನೀಡಲಾಗುವುದು ಎಂದು ಎಸ್ಪಿ ಆರ್​ ಶ್ರೀನಿವಾಸ್ ಗೌಡ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

Last Updated : Sep 8, 2020, 9:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.