ETV Bharat / state

ಇಷ್ಟ ಇಲ್ದಿದ್ರೆ ಎದ್ದುಹೋಗಿ.. ಹಾಸನ ಜಿ.ಪಂ. ಸಭೆಯಲ್ಲಿ ಸದಸ್ಯರಿಗೆ ಖಡಚ್​ ಎಚ್ಚರಿಕೆ ಕೊಟ್ಟ ಅಧ್ಯಕ್ಷೆ

author img

By

Published : Nov 13, 2019, 9:57 PM IST

ಹಾಸನ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರ ಮತ್ತು ಜಿಪಂ ಅಧ್ಯಕ್ಷರ ನಡುವೇ ವಾಗ್ವಾದ ನಡೆದಿದ್ದು, ಆಕ್ರೋಶಗೊಂಡ ಅಧ್ಯಕ್ಷೆ ಶ್ವೇತಾ ದೇವರಾಜು ಸಭೆ ಇಷ್ಟವಿಲ್ಲದವರು ಹೊರ ಹೋಗಬಹುದು ಎಂದು ಕೆಲ ಸದಸ್ಯರಿಗೆ ತಾಕೀತು ಮಾಡಿದ ಪ್ರಸಂಗ ನಡೆಯಿತು.

ಸದಸ್ಯರು- ಜಿಪಂ ಅಧ್ಯಕ್ಷರ ನಡುವೇ ವಾಗ್ವಾದ

ಹಾಸನ: ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರ ಮತ್ತು ಜಿಪಂ ಅಧ್ಯಕ್ಷರ ನಡುವೆ ವಾಗ್ವಾದ ನಡೆದಿದ್ದು, ಆಕ್ರೋಶಗೊಂಡ ಅಧ್ಯಕ್ಷೆ ಶ್ವೇತಾ ದೇವರಾಜು ಸಭೆ ಇಷ್ಟವಿಲ್ಲದವರು ಹೊರ ಹೋಗಬಹುದು ಎಂದು ಕೆಲ ಸದಸ್ಯರಿಗೆ ತಾಕೀತು ಮಾಡಿದ ಪ್ರಸಂಗ ನಡೆಯಿತು.

ಹಾಸನ ಜಿಲ್ಲೆ ವಿಚಾರ ಬಹಳ ವಿಶೇಷವಾಗಿರುವ ವಿಚಾರವಾಗಿದೆ. ಮೂರು ಪಕ್ಷಗಳು ವಿಚಿತ್ರವಾಗಿ ವಿಚಾರವನ್ನು ಚರ್ಚೆ ಮಾಡುತ್ತದೆ. ಜಿಲ್ಲಾ ಪಂಚಾಯತ್ ಕ್ಷೇತ್ರವಾರು ಎಲ್ಲಾವನ್ನು ಕ್ರೂಢಿಕರಿಸಿ ಮಾಡಬೇಕು. ಒಬ್ಬೊಬ್ಬರೇ ವಿಷಯದ ಬಗ್ಗೆ ಗಮನಸೆಳೆದು ಮತ್ತೊಬ್ಬರಿಗೆ ಅವಕಾಶ ಕೊಡಬೇಕು ಎಂದು ಮತ್ತೋರ್ವ ಸದಸ್ಯರು ಹೇಳಿದರೆ. ಇನ್ನೋರ್ವ ಸದಸ್ಯರು ಎದ್ದು ನಿಂತು ನಾವು ಅಜೆಂಡ ಪ್ರಕಾರವಾಗಿಯೇ ವಿಷಯವನ್ನು ಚರ್ಚೆ ಮಾಡುತ್ತಿದ್ದೇವೆ. ಕೆಲ ಇಲಾಖೆ ಬಗ್ಗೆ ಮಾತನಾಡಲು ನಮಗೆ ಅವಕಾಶ ಕೊಡಲು ಅನುಮತಿಗಾಗಿ ಮೊದಲೆ ಪತ್ರವನ್ನು ನೀಡಬೇಕು, ಮೂರು ವರ್ಷದಿಂದ ನಮ್ಮ ಕ್ಷೇತ್ರದಲ್ಲಿ ಯಾವ ಕೆಲಸವಾಗಿರುವುದಿಲ್ಲ ಎಂದರು.

ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರು- ಜಿಪಂ ಅಧ್ಯಕ್ಷರ ನಡುವೇ ವಾಗ್ವಾದ

ಸದಸ್ಯರುಗಳಾದ ರತ್ನಮ್ಮ, ತೌಫಿಕ್ ಅಹಮದ್, ಪಟೇಲ್ ಶಿವಪ್ಪ, ಸೇರಿದಂತೆ ಇತರ ಸದಸ್ಯರು ಕೆಲ ವಿಷಯವನ್ನು ವಾಗ್ವಾದ ಮಾಡುವುದರ ಮೂಲಕ ಗಮನಸೆಳೆದರು.ಹಳ್ಳಿ ಮೈಸೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಚಂದ್ರಶೇಖರ್ ಅವರು ಅಧ್ಯಕ್ಷರು ಸಾರಿಗೆ ವೆಚ್ಚದಲ್ಲಿ ಹಲವಾರು ಕಡೆಗೆ ಭೇಟಿ ನೀಡಿ ಅದರ ಸಾರಿಗೆ ವೆಚ್ಚ ಪಡೆದಿದ್ದಾರೆ. ಆದರೆ ಅವರು ಯಾವ ಪ್ರದೇಶಕ್ಕೆ ಭೇಟಿ ನೀಡಿದ್ದಾರೆಯೋ ಆ ಸದಸ್ಯರಿಗೆ ಮಾಹಿತಿ ನೀಡಿಲ್ಲ. ಬದಲಿಗೆ ಅಲ್ಲಿಗೆ ಬಂದಿದ್ದಾರೋ ಇಲ್ಲವೋ ಗೊತ್ತಿಲ್ಲವೆಂದು ಅನುಮಾನ ವ್ಯಕ್ತಪಡಿಸಿದರು.

ಈ ಆರೋಪಕ್ಕೆ ಪ್ರತ್ಯುತ್ತರ ನೀಡಿದ ಜಿ.ಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ತಾವು ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿರುವ ಪ್ರದೇಶಗಳಲ್ಲಿ ಆಯಾ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಆದರೆ ನಾನು ಸಾರಿಗೆ ವೆಚ್ಚ ಪಡೆದಿಲ್ಲ. ಬೇಕಿದ್ದರೆ ಈ ಬಗ್ಗೆ ಒಂದು ತನಿಖೆ ನಡೆದು ನಿಮ್ಮ ಆರೋಪಗಳು ಸುಳ್ಳು ಎಂದು ಎಲ್ಲರಿಗೂ ಮನದಟ್ಟು ಆಗಲಿ ಎಂದು ತಿರುಗೇಟು ನೀಡಿದರು.

ಹಾಸನ: ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರ ಮತ್ತು ಜಿಪಂ ಅಧ್ಯಕ್ಷರ ನಡುವೆ ವಾಗ್ವಾದ ನಡೆದಿದ್ದು, ಆಕ್ರೋಶಗೊಂಡ ಅಧ್ಯಕ್ಷೆ ಶ್ವೇತಾ ದೇವರಾಜು ಸಭೆ ಇಷ್ಟವಿಲ್ಲದವರು ಹೊರ ಹೋಗಬಹುದು ಎಂದು ಕೆಲ ಸದಸ್ಯರಿಗೆ ತಾಕೀತು ಮಾಡಿದ ಪ್ರಸಂಗ ನಡೆಯಿತು.

ಹಾಸನ ಜಿಲ್ಲೆ ವಿಚಾರ ಬಹಳ ವಿಶೇಷವಾಗಿರುವ ವಿಚಾರವಾಗಿದೆ. ಮೂರು ಪಕ್ಷಗಳು ವಿಚಿತ್ರವಾಗಿ ವಿಚಾರವನ್ನು ಚರ್ಚೆ ಮಾಡುತ್ತದೆ. ಜಿಲ್ಲಾ ಪಂಚಾಯತ್ ಕ್ಷೇತ್ರವಾರು ಎಲ್ಲಾವನ್ನು ಕ್ರೂಢಿಕರಿಸಿ ಮಾಡಬೇಕು. ಒಬ್ಬೊಬ್ಬರೇ ವಿಷಯದ ಬಗ್ಗೆ ಗಮನಸೆಳೆದು ಮತ್ತೊಬ್ಬರಿಗೆ ಅವಕಾಶ ಕೊಡಬೇಕು ಎಂದು ಮತ್ತೋರ್ವ ಸದಸ್ಯರು ಹೇಳಿದರೆ. ಇನ್ನೋರ್ವ ಸದಸ್ಯರು ಎದ್ದು ನಿಂತು ನಾವು ಅಜೆಂಡ ಪ್ರಕಾರವಾಗಿಯೇ ವಿಷಯವನ್ನು ಚರ್ಚೆ ಮಾಡುತ್ತಿದ್ದೇವೆ. ಕೆಲ ಇಲಾಖೆ ಬಗ್ಗೆ ಮಾತನಾಡಲು ನಮಗೆ ಅವಕಾಶ ಕೊಡಲು ಅನುಮತಿಗಾಗಿ ಮೊದಲೆ ಪತ್ರವನ್ನು ನೀಡಬೇಕು, ಮೂರು ವರ್ಷದಿಂದ ನಮ್ಮ ಕ್ಷೇತ್ರದಲ್ಲಿ ಯಾವ ಕೆಲಸವಾಗಿರುವುದಿಲ್ಲ ಎಂದರು.

ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರು- ಜಿಪಂ ಅಧ್ಯಕ್ಷರ ನಡುವೇ ವಾಗ್ವಾದ

ಸದಸ್ಯರುಗಳಾದ ರತ್ನಮ್ಮ, ತೌಫಿಕ್ ಅಹಮದ್, ಪಟೇಲ್ ಶಿವಪ್ಪ, ಸೇರಿದಂತೆ ಇತರ ಸದಸ್ಯರು ಕೆಲ ವಿಷಯವನ್ನು ವಾಗ್ವಾದ ಮಾಡುವುದರ ಮೂಲಕ ಗಮನಸೆಳೆದರು.ಹಳ್ಳಿ ಮೈಸೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಚಂದ್ರಶೇಖರ್ ಅವರು ಅಧ್ಯಕ್ಷರು ಸಾರಿಗೆ ವೆಚ್ಚದಲ್ಲಿ ಹಲವಾರು ಕಡೆಗೆ ಭೇಟಿ ನೀಡಿ ಅದರ ಸಾರಿಗೆ ವೆಚ್ಚ ಪಡೆದಿದ್ದಾರೆ. ಆದರೆ ಅವರು ಯಾವ ಪ್ರದೇಶಕ್ಕೆ ಭೇಟಿ ನೀಡಿದ್ದಾರೆಯೋ ಆ ಸದಸ್ಯರಿಗೆ ಮಾಹಿತಿ ನೀಡಿಲ್ಲ. ಬದಲಿಗೆ ಅಲ್ಲಿಗೆ ಬಂದಿದ್ದಾರೋ ಇಲ್ಲವೋ ಗೊತ್ತಿಲ್ಲವೆಂದು ಅನುಮಾನ ವ್ಯಕ್ತಪಡಿಸಿದರು.

ಈ ಆರೋಪಕ್ಕೆ ಪ್ರತ್ಯುತ್ತರ ನೀಡಿದ ಜಿ.ಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ತಾವು ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿರುವ ಪ್ರದೇಶಗಳಲ್ಲಿ ಆಯಾ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಆದರೆ ನಾನು ಸಾರಿಗೆ ವೆಚ್ಚ ಪಡೆದಿಲ್ಲ. ಬೇಕಿದ್ದರೆ ಈ ಬಗ್ಗೆ ಒಂದು ತನಿಖೆ ನಡೆದು ನಿಮ್ಮ ಆರೋಪಗಳು ಸುಳ್ಳು ಎಂದು ಎಲ್ಲರಿಗೂ ಮನದಟ್ಟು ಆಗಲಿ ಎಂದು ತಿರುಗೇಟು ನೀಡಿದರು.

Intro:
ಹಾಸನ: ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರ ಮತ್ತು ಜಿಪಂ ಅಧ್ಯಕ್ಷರ ನಡುವೇ ವಾಗ್ವಾದ ನಡೆದು, ಆಕ್ರೋಶಗೊಂಡ ಅಧ್ಯಕ್ಷೆ ಶ್ವೇತಾದೇವರಾಜುರವರು ಸಭೆ ಇಷ್ಟವಿಲ್ಲದವರು ಹೊರ ಹೋಗಬಹುದು ಎಂದು ಕೆಲ ಸದಸ್ಯರಿಗೆ ತಾಕೀತು ಮಾಡಿದ ಪ್ರಸಂಗ ನಡೆಯಿತು.
ಅಜೆಂಡ ಪ್ರಕಾರ ಸಭೆ ಮಾಡಬೇಕು. ಸಭೆಯಲ್ಲಿ ಯಾರ ಪರ ಹಾಗೂ ವಿರುದ್ಧವಲ್ಲ, ವಿಷಯಗಳನ್ನು ಚರ್ಚಿಸಬೇಕು. ವಿಶೇಷವಾದ ವಿಷಯವನ್ನು ಪರಿಗಣಿಸಬೇಕು ಎಂದಾಗ ಮೊದಲೇ ಅರ್ಜಿಯನ್ನು ಕೊಟ್ಟು ಅವರ ಸಮಯವನ್ನು ಕಾಯ್ದಿರಿಸಬೇಕು. ಆದರೇ ನೀವು ಏನಾದರೂ ಮಾತನಾಡಿ ಸಭೆ ಮಧ್ಯಾಹ್ನ ಎರಡುವರೆಗೆ ಮುಗಿಯುತ್ತದೆ. ಯಾವ ವಿಷಯಗಳು ಪೂರ್ಣಗೊಳ್ಳುವುದಿಲ್ಲ. ಒಂದು ವಿಷಯ ಪೂರ್ನವಾಗಲು ಯಾರಾದರೂ ಒಬ್ಬರು ಮಾತನಾಡಿ ಎಂದು ಜಿಪಂ ಸದಸ್ಯ ಓರ್ವರು ಮನವಿ ಮಾಡಿದರು.
ಹಾಸನ ಜಿಲ್ಲೆ ವಿಚಾರ ಬಹಳ ವಿಶೇಷವಾಗಿರುವ ವಿಚಾರವಾಗಿದೆ. ಮೂರು ಪಕ್ಷಗಳು ವಿಚಿತ್ರವಾಗಿ ವಿಚಾರವನ್ನು ಚರ್ಚೆ ಮಾಡುತ್ತದೆ. ಜಿಲ್ಲಾ ಪಂಚಾಯತ್ ಕ್ಷೇತ್ರವಾರು ಎಲ್ಲಾವನ್ನು ಕ್ರೂಢಿಕರಿಸಿ ಮಾಡಬೇಕು.
ಒಬ್ಬೊಬ್ಬರೇ ವಿಷಯದ ಬಗ್ಗೆ ಗಮನಸೆಳೆದು ಮತ್ತೊಬ್ಬರಿಗೆ ಅವಕಾಶ ಕೊಡಬೇಕು ಎಂದು ಮತ್ತೋರ್ವ ಸದಸ್ಯರು ಹೇಳಿದರೇ ಇನ್ನೋರ್ವ ಸದಸ್ಯರು ಎದ್ದು ನಿಂತು ನಾವು ಅಜೆಂಡ ಪ್ರಕಾರವಾಗಿಯೇ ವಿಷಯವನ್ನು ಚರ್ಚೆ ಮಾಡಲಾಗುತ್ತಿದೆ. ಕೆಲ ಇಲಾಖೆ ಬಗ್ಗೆ ಮಾತನಾಡಲು ನಮಗೆ ಅವಕಾಶ ಕೊಡಲು ಅನುಮತಿಗಾಗಿ ಮೊದಲೆ ಪತ್ರವನ್ನು ನೀಡಿ, ಮೂರು ವರ್ಷದಿಂದ ನಮ್ಮ ಕ್ಷೇತ್ರದಲ್ಲಿ ಯಾವ ಕೆಲಸವಾಗಿರುವುದಿಲ್ಲ ಎಂದರು.
ಸದಸ್ಯರುಗಳಾದ ರತ್ನಮ್ಮ, ತೌಫಿಕ್ ಅಹಮದ್, ಪಟೇಲ್ ಶಿವಪ್ಪ, ಸೇರಿದಂತೆ ಇತರ ಸದಸ್ಯರು ಕೆಲ ವಿಷಯವನ್ನು ವಾಗ್ವಾದ ಮಾಡುವುದರ ಮೂಲಕ ಗಮನಸೆಳೆದರು.
ಹಳ್ಳಿಮೈಸೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಚಂದ್ರಶೇಖರ್ ಅವರು ಅಧ್ಯಕ್ಷರು ಸಾರಿಗೆ ವೆಚ್ಚದಲ್ಲಿ ಹಲವಾರು ಕಡೆಗೆ ಭೇಟಿ ನೀಡಿ ಅದರ ಸಾರಿಗೆ ವೆಚ್ಚ ಪಡೆದಿದ್ದಾರೆ. ಆದರೆ ಅವರು ಯಾವ ಪ್ರದೇಶಕ್ಕೆ ಭೇಟಿ ನೀಡಿದ್ದಾರೆಯೋ ಆ ಸದಸ್ಯರಿಗೆ ಮಾಹಿತಿ ನೀಡಿಲ್ಲ. ಬದಲಿಗೆ ಅಲ್ಲಿಗೆ ಬಂದಿದ್ದಾರೋ ಇಲ್ಲವೋ ಗೊತ್ತಿಲ್ಲವೆಂದು ಅನುಮಾನ ವ್ಯಕ್ತಪಡಿಸಿದರು.
ಈ ಆರೋಪಕ್ಕೆ ಪ್ರತ್ಯುತ್ತರ ನೀಡಿದ ಜಿ.ಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ತಾವು ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿರುವ ಪ್ರದೇಶಗಳಲ್ಲಿ ಆಯಾ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಆದರೆ ನಾನು ಸಾರಿಗೆ ವೆಚ್ಚ ಪಡೆದಿಲ್ಲ. ಬೇಕಿದ್ದರೆ ಈ ಬಗ್ಗೆ ಒಂದು ತನಿಖೆ ನಡೆದು ನಿಮ್ಮ ಆರೋಪಗಳು ಸುಳ್ಳು ಎಂದು ಎಲ್ಲರಿಗೂ ಮನದಟ್ಟು ಆಗಲಿ ಎಂದು ತಿರುಗೇಟು ನೀಡಿದರು.
ಈ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರ ನಡುವೆ ಗದ್ದಲ ಏರ್ಪಟ್ಟಿತ್ತು. ಬಳಿಕ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಕೃಷಿ ಇಲಾಖೆ ಅಧಿಕಾರಿಗಳು ಈ ಸಾಲಿನಲ್ಲಿ ಜಿಲ್ಲೆಯಲ್ಲಿ ಅನೇಕ ಮಂದಿ ರೈತರು ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದು ಅದರಲ್ಲಿ ೮ ಮಂದಿ ಪರಿಹಾರಕ್ಕೆ ಅರ್ಹ ರಾಗಿದ್ದು ಎರಡು ಪ್ರಕರಣಗಳನ್ನು ಪರಿಹಾರದಿಂದ ಕೈ ಬಿಡಲಾಗಿದೆ ಎಂದು ಮಾಹಿತಿ ನೀಡಿದ ಅಧಿಕಾರಿಗಳು ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶ ಹಾಗೂ ಮನೆ ಹಾನಿಯಿಂದ ಹಾನಿಗೀಡಾದ ಬೆಳೆಗಳಿಗೆ ವಿಮಾ ಕಂಪನಿಗಳು ಕಟ್ಟಿಸಿಕೊಂಡಿರುವ ಹಣಕ್ಕಿಂತ ಕಡಿಮೆ ರೈತರಿಗೆ ಪರಿಹಾರ ನೀಡಿದ್ದಾರೆಂದು ಆರೋಪ ಕೇಳಿ ಬಂದಿತು. ಈ ವೇಳೆ ಮಾಹಿತಿ ನೀಡಿದ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಜಿಲ್ಲೆಗೆ ಈವರೆಗೆ ೧೧ ಕೋಟಿ ರೂಗಳಷ್ಟು ಹಣ ವಿಮಾ ಕಂಪನಿಗಳಿಂದ ರೈತರ ಖಾತೆಗೆ ಜಮೆಯಾಗಿದೆ. ಉಳಿದ ಹಣ ಜಮಾವಣೆಯಾಗಬೇಕಿದ್ದು ಈ ನಿಟ್ಟಿನಲ್ಲಿ ಪತ್ರ ವ್ಯವಾಹರ ನಡೆಸಬೇಕಿದೆ ಎಂದರು.
ಇನ್ನು ಪ್ರವಾಹ ಪೀಡಿತ ಅಥವಾ ಅತಿವೃಷ್ಟಿಯಿಂದ, ಅನಾವೃಷ್ಠಿಯಿಂದ ಸಂಭವಿಸುವ ಬೆಳೆ ನಾಶಕ್ಕೆ ನೀಡುವ ಪರಿಹಾರವನ್ನು ವಾಸ್ತವತೆಗೆ ತಕ್ಕಂತೆ ನಿಯಮ ರೂಪಿಸಿ ಪರಿಹಾರ ವಿತರಿಸಲು ಜಿಲ್ಲಾ ಪಂಚಾಯಿತಿ ಸಭೆಯ ನಡಾವಳಿ ಮಾಡಿ ಈ ವರದಿಯನ್ನು ಸರ್ಕಾರಕ್ಕೆ ಕೊಡಿ ಜೊತೆಗೆ ಏನೆ ಸಮಸ್ಯೆ ಇದ್ದರೂ ಸರಕಾರಕ್ಕೆ ವರದಿಯನ್ನು ಸಲ್ಲಿಸಿ ಎಂದು ಸದಸ್ಯರಿಗೆ ಜಿಪಂ ಅಧ್ಯಕ್ಷೆ ಸವಾಲು ಹಾಕಿದರು.
ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸ್ವರೂಪ್, ಜಿಲ್ಲಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ ಉಪಸ್ಥಿತರಿದ್ದರು.
ಸಭೆಯಲ್ಲಿ ಸದಸ್ಯರುಗಳಾದ ರತ್ನಮ್ಮ, ತೌಫಿಕ್ ಅಹಮದ್, ಪಟೇಲ್ ಶಿವಪ್ಪ, ಸೇರಿದಂತೆ ಇನ್ನಿತರರು ಪಾಲ್ಗಂಡು ತಮ್ಮ ಸಮಸ್ಯೆಗಳ ಬಗ್ಗೆ ಸಭೆಯ ಚರ್ಚೆ ನಡೆಸಿದರು.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.

Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.