ETV Bharat / state

ಕೆಎಸ್​ಆರ್​​ಟಿಸಿ ನೌಕರರನ್ನ ಸರ್ಕಾರಿ ನೌಕರನ್ನಾಗಿ ಪರಿಗಣಿಸಲು ಆಗ್ರಹ: ಪತ್ರ ಚಳವಳಿ - undefined

ಕೆಎಸ್​ಆರ್​ಟಿಸಿ ನೌಕರರನ್ನ ರಾಜ್ಯ ಸರ್ಕಾರಿ ನೌಕರರಾಗಿ ಪರಿಗಣಿಸಬೇಕೆಂದು ಆಗ್ರಹಿಸಿ, ಕೆಎಸ್ಆರ್​ಟಿಸಿ ಎರಡನೇ ಡಿಪೋ ನೌಕರರು, ಚಾಲಕ, ನಿರ್ವಾಹಕ ಮತ್ತು ಸಿಬ್ಬಂದಿ ಪತ್ರ ಕೈಯಲ್ಲಿ ಹಿಡಿದು ಮುಖ್ಯಮಂತ್ರಿಗಳಿಗೆ ರವಾನೆ ಮಾಡಿದ್ರು.

ಶಾಂತಿಯುತ ಪತ್ರ ಚಳುವಳಿ
author img

By

Published : Jun 19, 2019, 10:27 PM IST

ಹಾಸನ: ಕೆಎಸ್​ಆರ್​ಟಿಸಿ ನೌಕರರನ್ನ ರಾಜ್ಯ ಸರ್ಕಾರಿ ನೌಕರರಾಗಿ ಪರಿಗಣಿಸಬೇಕೆಂದು ಆಗ್ರಹಿಸಿ ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆಯುವ ಮೂಲಕ 2ನೇ ಘಟಕದ ಚಾಲಕ ಮತ್ತು ನಿರ್ವಾಹಕರು ಸೇರಿದಂತೆ ನೂರಾರು ಸಿಬ್ಬಂದಿ ಶಾಂತಿಯುತ ಪತ್ರ ಚಳವಳಿ ನಡೆಸಿದ್ರು.

ನಗರದ ಕೆಎಸ್ಆರ್​ಟಿಸಿಯ ಎರಡನೇ ಡಿಪೋ ನೌಕರರು, ಚಾಲಕ, ನಿರ್ವಾಹಕ ಮತ್ತು ಸಿಬ್ಬಂದಿ ಪತ್ರವನ್ನ ಕೈಯಲ್ಲಿ ಹಿಡಿದು ಮುಖ್ಯಮಂತ್ರಿಗಳಿಗೆ ರವಾನೆ ಮಾಡಿದ್ರು. ಸರ್ಕಾರದ ಅಂಗ ಸಂಸ್ಥೆಯಾದ ಕೆಎಸ್ಆರ್​ಟಿಸಿ ನೌಕರರನ್ನ ಇತರ ಸರ್ಕಾರಿ ನೌಕರರಂತೆ ಕಾಣುತ್ತಿಲ್ಲ. ಜೊತೆಗೆ ವೇತನ, ಪಿಂಚಣಿ, ಭತ್ಯೆ ಹಾಗೂ ರಜೆ ಸೌಲಭ್ಯಗಳು ಸರಿಯಾದ ರೀತಿಯಲ್ಲಿ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಶಾಂತಿಯುತ ಪತ್ರ ಚಳುವಳಿ

ಆಂಧ್ರಪ್ರದೇಶದಲ್ಲಿ ಈ ಸಂಸ್ಥೆಯ ನೌಕರರನ್ನ ಸರ್ಕಾರಿ ನೌಕರರೆಂದು ಪರಿಗಣಿಸಲಾಗಿದೆ. ಅದೇ ರೀತಿ ನಮ್ಮನ್ನ ಕೂಡಾ ಪರಿಗಣಿಸಬೇಕು. ಅಲ್ಲಿರುವ ವೇತನ ರೀತಿಯಲ್ಲಿಯೇ ನಮಗೂ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇನ್ನು ರಾಜ್ಯಾದ್ಯಂತ 4 ವಿಭಾಗದ ಸಂಸ್ಥೆಯ ನೌಕರರು, ಚಾಲಕರು, ಸಿಬ್ಬಂದಿ ಸೇರಿ ಪತ್ರ ಚಳವಳಿಯನ್ನ ಆರಂಭಿಸಿದ್ದು, ನಮ್ಮ ಬೇಡಿಕೆಯನ್ನ ಈಡೇರಿಸದಿದ್ದರೇ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನ ನೀಡಿದ್ರು.

ಕಳೆದ ಒಂದೂವರೆ ದಶಕಗಳಿಂದ ವಿವಿಧ ಬೇಡಿಕೆಗಳನ್ನ ಸರ್ಕಾರದ ಮುಂದಿಡುತ್ತಾ ಬಂದಿದ್ರು. ಕಳೆದ 2008 ರಲ್ಲಿಯೂ ನಮ್ಮನ್ನ ರಾಜ್ಯ ಸರ್ಕಾರಿ ನೌಕರರನ್ನಾಗಿ ಪರಿಗಣಿಸುತ್ತೇವೆಂದು ಕುಮಾರಸ್ವಾಮಿ ಹೇಳಿದ್ರು. ಆದ್ರೆ ಈಗ ಮತ್ತೆ ಮುಖ್ಯಮಂತ್ರಿಯಾಗಿ, ಅಧಿಕಾರ ವಹಿಸಿಕೊಂಡು ವರ್ಷ ಕಳೆದಿದೆ. ಹಾಗಿದ್ರು ಕೂಡ ನಮ್ಮ ಬೇಡಿಕೆಯನ್ನ ಈಡೇರಿಸುವಲ್ಲಿ ವಿಫಲವಾಗಿದ್ದಾರೆ. ಈ ಕಾರಣ ರಾಜ್ಯಾದ್ಯಂತ ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿ ಮತ್ತು ನೌಕರ ವರ್ಗದವರು ಆಯಾ ವಿಭಾಗದ ಡಿಪೋಗಳಲ್ಲಿ ಶಾಂತಿಯುತವಾದ ಪತ್ರ ಚಳವಳಿಯನ್ನ ಮಾಡ್ತಿದ್ದಾರೆ.

ಹಾಸನ: ಕೆಎಸ್​ಆರ್​ಟಿಸಿ ನೌಕರರನ್ನ ರಾಜ್ಯ ಸರ್ಕಾರಿ ನೌಕರರಾಗಿ ಪರಿಗಣಿಸಬೇಕೆಂದು ಆಗ್ರಹಿಸಿ ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆಯುವ ಮೂಲಕ 2ನೇ ಘಟಕದ ಚಾಲಕ ಮತ್ತು ನಿರ್ವಾಹಕರು ಸೇರಿದಂತೆ ನೂರಾರು ಸಿಬ್ಬಂದಿ ಶಾಂತಿಯುತ ಪತ್ರ ಚಳವಳಿ ನಡೆಸಿದ್ರು.

ನಗರದ ಕೆಎಸ್ಆರ್​ಟಿಸಿಯ ಎರಡನೇ ಡಿಪೋ ನೌಕರರು, ಚಾಲಕ, ನಿರ್ವಾಹಕ ಮತ್ತು ಸಿಬ್ಬಂದಿ ಪತ್ರವನ್ನ ಕೈಯಲ್ಲಿ ಹಿಡಿದು ಮುಖ್ಯಮಂತ್ರಿಗಳಿಗೆ ರವಾನೆ ಮಾಡಿದ್ರು. ಸರ್ಕಾರದ ಅಂಗ ಸಂಸ್ಥೆಯಾದ ಕೆಎಸ್ಆರ್​ಟಿಸಿ ನೌಕರರನ್ನ ಇತರ ಸರ್ಕಾರಿ ನೌಕರರಂತೆ ಕಾಣುತ್ತಿಲ್ಲ. ಜೊತೆಗೆ ವೇತನ, ಪಿಂಚಣಿ, ಭತ್ಯೆ ಹಾಗೂ ರಜೆ ಸೌಲಭ್ಯಗಳು ಸರಿಯಾದ ರೀತಿಯಲ್ಲಿ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಶಾಂತಿಯುತ ಪತ್ರ ಚಳುವಳಿ

ಆಂಧ್ರಪ್ರದೇಶದಲ್ಲಿ ಈ ಸಂಸ್ಥೆಯ ನೌಕರರನ್ನ ಸರ್ಕಾರಿ ನೌಕರರೆಂದು ಪರಿಗಣಿಸಲಾಗಿದೆ. ಅದೇ ರೀತಿ ನಮ್ಮನ್ನ ಕೂಡಾ ಪರಿಗಣಿಸಬೇಕು. ಅಲ್ಲಿರುವ ವೇತನ ರೀತಿಯಲ್ಲಿಯೇ ನಮಗೂ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇನ್ನು ರಾಜ್ಯಾದ್ಯಂತ 4 ವಿಭಾಗದ ಸಂಸ್ಥೆಯ ನೌಕರರು, ಚಾಲಕರು, ಸಿಬ್ಬಂದಿ ಸೇರಿ ಪತ್ರ ಚಳವಳಿಯನ್ನ ಆರಂಭಿಸಿದ್ದು, ನಮ್ಮ ಬೇಡಿಕೆಯನ್ನ ಈಡೇರಿಸದಿದ್ದರೇ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನ ನೀಡಿದ್ರು.

ಕಳೆದ ಒಂದೂವರೆ ದಶಕಗಳಿಂದ ವಿವಿಧ ಬೇಡಿಕೆಗಳನ್ನ ಸರ್ಕಾರದ ಮುಂದಿಡುತ್ತಾ ಬಂದಿದ್ರು. ಕಳೆದ 2008 ರಲ್ಲಿಯೂ ನಮ್ಮನ್ನ ರಾಜ್ಯ ಸರ್ಕಾರಿ ನೌಕರರನ್ನಾಗಿ ಪರಿಗಣಿಸುತ್ತೇವೆಂದು ಕುಮಾರಸ್ವಾಮಿ ಹೇಳಿದ್ರು. ಆದ್ರೆ ಈಗ ಮತ್ತೆ ಮುಖ್ಯಮಂತ್ರಿಯಾಗಿ, ಅಧಿಕಾರ ವಹಿಸಿಕೊಂಡು ವರ್ಷ ಕಳೆದಿದೆ. ಹಾಗಿದ್ರು ಕೂಡ ನಮ್ಮ ಬೇಡಿಕೆಯನ್ನ ಈಡೇರಿಸುವಲ್ಲಿ ವಿಫಲವಾಗಿದ್ದಾರೆ. ಈ ಕಾರಣ ರಾಜ್ಯಾದ್ಯಂತ ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿ ಮತ್ತು ನೌಕರ ವರ್ಗದವರು ಆಯಾ ವಿಭಾಗದ ಡಿಪೋಗಳಲ್ಲಿ ಶಾಂತಿಯುತವಾದ ಪತ್ರ ಚಳವಳಿಯನ್ನ ಮಾಡ್ತಿದ್ದಾರೆ.

Intro:ಹಾಸನ: ಕೆ.ಆರ್.ಆರ್.ಟಿ.ಸಿ.ನೌಕರರನ್ನ ರಾಜ್ಯ ಸರ್ಕಾರಿ ನೌಕರರಾಗಿ ಪರಿಗಣಿಸಬೇಕೆಂದು ಆಗ್ರಹಿಸಿ ಇಂದು ಸಿಎಂ ಕುಮಾರಸ್ವಾಮಿಗೆ ಪತ್ರ ಬರೆಯುವ ಮೂಲಕ 2ನೇ ಘಟಕದ ಚಾಲಕ ಮತ್ತು ನಿರ್ವಾಹಕರು ಸೇರಿದಂತೆ ನೂರಾರು ಸಿಬ್ಬಂದಿಗಳು ಶಾಂತಿಯುತ ಪತ್ರ ಚಳುವಳಿ ನಡೆಸಿದ್ರು.

ನಗರದ ಕೆ.ಎಸ್.ಆರ್.ಟಿ.ಸಿಯ ಎರಡನೇ ಡಿಪೋ ನೌಕರರು, ಚಾಲಕ, ನಿರ್ವಾಹಕ ಮತ್ತು ಸಿಬ್ಬಂದಿಗಳು ಪತ್ರವನ್ನ ಕೈಯಲ್ಲಿಡಿದು ಮುಖ್ಯಮಂತ್ರಿಗಳಿಗೆ ರವಾನೆ ಮಾಡಿದ್ರು. ಸರ್ಕಾರದ ಅಂಗಸಂಸ್ಥೆಯಾದ ಕೆ.ಎಸ್.ಆರ.ಟಿ.ಸಿ.ನೌಕರರನ್ನ ಇತರ ಸರಕಾರಿ ನೌಕರರಂತೆ ಕಾಣುತ್ತಿಲ್ಲ. ಜೊತೆಗೆ ವೇತನ, ಪಿಂಚಣಿ, ಭತ್ಯೆ ಹಾಗೂ ರಜೆ ಸೌಲಭ್ಯಗಳು ಸರಿಯಾದ ರೀತಿಯಲ್ಲಿ ನೀಡುತ್ತಿಲ್ಲವಂತೆ.

ಆಂಧ್ರ ಪ್ರದೇಶದಲ್ಲಿ ಸಂಸ್ಥೆಯ ನೌಕರರನ್ನ ಸರ್ಕಾರಿ ನೌಕರರೆಂದು ಪರಿಗಣಿಸಿದೆ. ಅದೇ ರೀತಿ ನಮ್ಮನ್ನ ಕೂಡಾ ಪರಿಗಣಿಸಬೇಕು. ಅಲ್ಲಿರುವ ವೇತನ ರೀತಿಯಲ್ಲಿಯೇ ನಮಗೂ ನೀಡಬೇಕು. ಆಂದ್ರಪ್ರದೇಶದಲ್ಲಿ 1000ಕೋಟಿಯಷ್ಟು ಸಂಸ್ಥೆಯು ಆಸ್ತಿಯನ್ನ ಹೊಂದಿದ್ರೆ, ಕರ್ನಾಟಕದಲ್ಲಿ ಕೆ.ಎಸ್.ಆರ್.ಟಿ.ಸಿ. ಸುಮಾರು 5000ಕೋಟಿಯಷ್ಟು ಆಸ್ತಿಯನ್ನ ಹೊಂದಿದ್ದರೂ ನಮಗೆ ನೇಮಕಾತಿ ಭದ್ರತೆಯನ್ನ ನೀಡಿಲ್ಲ. ಹೀಗಾಗಿ ರಾಜ್ಯಾದ್ಯಂತ 4 ವಿಭಾಗದ ಸಂಸ್ಥೆಯ ನೌಕರರು, ಚಾಲಕರು, ಸಿಬ್ಬಂದಿಗಳು ಸೇರಿ ಪತ್ರ ಚಳುವಳಿಯನ್ನ ಆರಂಭಿಸಿದ್ದು, ನಮ್ಮ ಬೇಡಿಕೆಯನ್ನ ಈಡೇರಿಸದಿದ್ದರೇ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನ ನೀಡಿದ್ರು.

ಬೈಟ್: ಆನಂದ್, ಕೆ.ಎಸ್.ಆರ್.ಟಿ.ಸಿ.ಚಾಲಕ.

ಇತರೇ ರಾಜ್ಯಗಳಿಗೆ ಹೊಲಿಸಿದ್ರೆ ನಮ್ಮ ರಾಜ್ಯದಲ್ಲಿ ಶೇ.30ರಷ್ಟು ಕಡಿಮೆ ವೇತನವಿದ್ದು, ಕಳೆದ ಒಂದುವರೆ ದಶಕಗಳಿಂದ ವಿವಿಧ ಬೇಡಿಕೆಗಳನ್ನ ಸರ್ಕಾರದ ಮುಂದಿಡುತ್ತಾ ಬಂದಿದ್ರು, ಕಳೆದ 2008 ರಲ್ಲಿಯೂ ಕೂಡಾ ನಮ್ಮನ್ನ ರಾಜ್ಯ ಸರ್ಕಾರಿ ನೌಕರರನ್ನಾಗಿ ಪರಿಗಣಿಸುತ್ತೇವೆಂದು ಹೇಳಿದ್ದ ಕುಮಾರಸ್ವಾಮಿ ಮತ್ತೆ ಈಗ ಮುಖ್ಯಮಂತ್ರಿಯಾಗಿದ್ದು, ಅಧಿಕಾರ ವಹಿಸಿಕೊಂಡು ವರ್ಷ ಕಳೆದ್ರು ಕೂಡಾ ನಮ್ಮ ಬೇಡಿಕೆಯನ್ನ ಈಡೆರಿಸುವಲ್ಲಿ ಮೈತ್ರಿ ಸರ್ಕಾರ ಬೇಡಿಕೆಯನ್ನ ಈಡೇರಿಸುವಲ್ಲಿ ವಿಫಲವಾಗಿದ್ದರಿಂದ, ರಾಜ್ಯಾದ್ಯಂತ ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿ ಮತ್ತು ನೌಕರರ ವರ್ಗದವರು ಆಯಾ ವಿಭಾಗದ ಡಿಪೋಗಳಲ್ಲಿ ಶಾಂತಿಯುತವಾದ ಪತ್ರ ಚಳುವಳಿಯನ್ನ ಮಾಡ್ತಿದ್ದಾರೆ. ಹೀಗಾಗಿ ಇಂದು ನಾವು ಹಾಸನದಲ್ಲಿ ಶಾಂತಿಯುತ ಪತ್ರ ಚಳುವಳಿ ಮಾಡಿದ್ದೇವೆ.

ಬೈಟ್..ಯೋಗರಾಜ್ ಕೆ ಎಸ್ ಆರ್ ಟಿ ಸಿ ನೌಕರ.

ಇನ್ನು ಹಾಸನದ 2ನೇ ಘಟಕದಿಂದ ಪತ್ರ ಸಮರ ಪ್ರಾರಂಭಿಸಿದ್ದು, ಒಂದು ವೇಳೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡುವುದಾಗಿಯೂ ಕೂಡಾ ಎಚ್ಚರಿಸಿದ್ರು.


Body:0


Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.