ETV Bharat / state

ಏನೇ ಆದರೂ ಉಪ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲೋದು.. ಸಚಿವ ಈಶ್ವರಪ್ಪ ಕಾನ್ಫಿಡೆಂಟ್ - Minister K S Eshwarappa

ಸಿದ್ದರಾಮಯ್ಯನವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಕೋಮುವಾದಿ ಪಕ್ಷ ಅಂತಾ ಬೈಯ್ಯುತ್ತಿದ್ದರು. ಆ ಬೈಗುಳವೇ ಅವರ ಪಕ್ಷಕ್ಕೆ ಮುಳುವಾಯಿತು. ಅಲ್ಲದೆ ಕಾಂಗ್ರೆಸ್ ಸೋಲಿಗೆ ಅವರೇ ನೇರ ಹೊಣೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.

ಈಶ್ವರಪ್ಪ
author img

By

Published : Sep 22, 2019, 8:46 PM IST

ಹಾಸನ: ಮೈತ್ರಿ ಮಾಡ್ಕೊಂಡು ಅಖಾಡಕ್ಕಿಳಿದರೂ ಅಷ್ಟೇ, ಒಬ್ಬೊಬ್ಬರೇ ಅಖಾಡಕ್ಕೆ ಇಳಿದರೂ ಅಷ್ಟೇ. ಉಪ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲೋದು. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ಕೆ ಎಸ್ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನಿಂದ ಶಿವಮೊಗ್ಗಕ್ಕೆ ತೆರಳುವ ಮಾರ್ಗ ಮಧ್ಯೆ ಚನ್ನರಾಯಪಟ್ಟಣದ ಹೊರವಲಯದಲ್ಲಿರುವ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮುಳುಗುವ ಹಡಗಿನಂತೆ. ಜೊತೆಗೆ ವಿಶ್ವಾಸವನ್ನು ಕಳೆದುಕೊಂಡು ಬಿರುಕುಬಿಟ್ಟ ಮನೆಯಂತಾಗಿವೆ. ಇದರ ಮಧ್ಯೆ ಮೈತ್ರಿ ಮಾಡಿಕೊಂಡು ಉಪ ಚುನಾವಣೆಯ ಅಖಾಡಕ್ಕೆ ನಿಂತರೂ ಜನ ಬಿಜೆಪಿಯನ್ನು ಗೆಲ್ಲಿಸುತ್ತಾರೆ ಎಂದರು.

ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿದ್ದ ಈಶ್ವರಪ್ಪ

ಸಿದ್ದರಾಮಯ್ಯನವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಕೋಮುವಾದಿ ಪಕ್ಷ ಅಂತಾ ಬೈಯ್ಯುತ್ತಿದ್ದರು. ಆ ಬೈಗುಳವೇ ಅವರ ಪಕ್ಷಕ್ಕೆ ಮುಳುವಾಯಿತು. ಅಲ್ಲದೆ ಕಾಂಗ್ರೆಸ್ ಸೋಲಿಗೆ ಅವರೇ ನೇರ ಹೊಣೆ ಎಂದು ಹೇಳಿದರು.

ಇನ್ನು, ಈ ಉಪಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. 15 ಜನ ಅನರ್ಹ ಶಾಸಕರು ಅವರ ಕ್ಷೇತ್ರದಲ್ಲಿ ಯಾರನ್ನ ಸೂಚಿಸುತ್ತಾರೋ ಅವರನ್ನೇ ಪಕ್ಷದಿಂದ ಕಣಕ್ಕಿಳಿಸುತ್ತೇವೆ. ನಮಗೆ 8 ಸ್ಥಾನಗಳು ಕಡಿಮೆ ಇತ್ತು, ಹಾಗಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು 14 ತಿಂಗಳು ಅಧಿಕಾರವನ್ನು ಅನುಭವಿಸಿದರು. ಆದರೆ, ಈ ಉಪ ಚುನಾವಣೆಯಲ್ಲಿ ನಾವು ಸ್ಥಾನವನ್ನು ಗೆದ್ದು ಉಳಿದಿರುವ ಅವಧಿಯನ್ನು ಪೂರ್ಣಗೊಳಿಸುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

ಹಾಸನ: ಮೈತ್ರಿ ಮಾಡ್ಕೊಂಡು ಅಖಾಡಕ್ಕಿಳಿದರೂ ಅಷ್ಟೇ, ಒಬ್ಬೊಬ್ಬರೇ ಅಖಾಡಕ್ಕೆ ಇಳಿದರೂ ಅಷ್ಟೇ. ಉಪ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲೋದು. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ಕೆ ಎಸ್ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನಿಂದ ಶಿವಮೊಗ್ಗಕ್ಕೆ ತೆರಳುವ ಮಾರ್ಗ ಮಧ್ಯೆ ಚನ್ನರಾಯಪಟ್ಟಣದ ಹೊರವಲಯದಲ್ಲಿರುವ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮುಳುಗುವ ಹಡಗಿನಂತೆ. ಜೊತೆಗೆ ವಿಶ್ವಾಸವನ್ನು ಕಳೆದುಕೊಂಡು ಬಿರುಕುಬಿಟ್ಟ ಮನೆಯಂತಾಗಿವೆ. ಇದರ ಮಧ್ಯೆ ಮೈತ್ರಿ ಮಾಡಿಕೊಂಡು ಉಪ ಚುನಾವಣೆಯ ಅಖಾಡಕ್ಕೆ ನಿಂತರೂ ಜನ ಬಿಜೆಪಿಯನ್ನು ಗೆಲ್ಲಿಸುತ್ತಾರೆ ಎಂದರು.

ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿದ್ದ ಈಶ್ವರಪ್ಪ

ಸಿದ್ದರಾಮಯ್ಯನವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಕೋಮುವಾದಿ ಪಕ್ಷ ಅಂತಾ ಬೈಯ್ಯುತ್ತಿದ್ದರು. ಆ ಬೈಗುಳವೇ ಅವರ ಪಕ್ಷಕ್ಕೆ ಮುಳುವಾಯಿತು. ಅಲ್ಲದೆ ಕಾಂಗ್ರೆಸ್ ಸೋಲಿಗೆ ಅವರೇ ನೇರ ಹೊಣೆ ಎಂದು ಹೇಳಿದರು.

ಇನ್ನು, ಈ ಉಪಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. 15 ಜನ ಅನರ್ಹ ಶಾಸಕರು ಅವರ ಕ್ಷೇತ್ರದಲ್ಲಿ ಯಾರನ್ನ ಸೂಚಿಸುತ್ತಾರೋ ಅವರನ್ನೇ ಪಕ್ಷದಿಂದ ಕಣಕ್ಕಿಳಿಸುತ್ತೇವೆ. ನಮಗೆ 8 ಸ್ಥಾನಗಳು ಕಡಿಮೆ ಇತ್ತು, ಹಾಗಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು 14 ತಿಂಗಳು ಅಧಿಕಾರವನ್ನು ಅನುಭವಿಸಿದರು. ಆದರೆ, ಈ ಉಪ ಚುನಾವಣೆಯಲ್ಲಿ ನಾವು ಸ್ಥಾನವನ್ನು ಗೆದ್ದು ಉಳಿದಿರುವ ಅವಧಿಯನ್ನು ಪೂರ್ಣಗೊಳಿಸುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

Intro:ಮೈತ್ರಿ ಮಾಡ್ಕೊಂಡು ಅಖಾಡಕ್ಕಿಳಿದ್ರು ಅಷ್ಟೇ. ಒಬ್ಬೊಬ್ಬರೇ ಅಖಾಡಕ್ಕೆ ಇಳಿದ್ರು ಅಷ್ಟೇ. ಉಪ ಚುನಾವಣೆಯಲ್ಲಿ ಗೆಲ್ಲೋದು ಬಿಜೆಪಿನೇ. . ಇದರಲ್ಲಿ ಯಾವುದೇ ಅನುಮಾನ ಬೇಡ ಅಂತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವ ಕೆಎಸ್ ಈಶ್ವರಪ್ಪ ಆತ್ಮವಿಶ್ವಾಸದಿಂದಲೇ ಹೇಳಿದರು.

ಮೈಸೂರಿನಿಂದ ಶಿವಮೊಗ್ಗಕ್ಕೆ ತೆರಳುವ ಮಾರ್ಗ ಮಧ್ಯೆ ಚನ್ನರಾಯಪಟ್ಟಣದ ಹೊರವಲಯದಲ್ಲಿರುವ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಮುಳುಗೋ ಅಡಗಿದ್ದ ಹಾಗೆ ಜೊತೆಗೆ ವಿಶ್ವಾಸವನ್ನು ಕಳೆದುಕೊಂಡು ಬಿರುಕುಬಿಟ್ಟ ಮನೆಯಂತಾಗಿವೆ. ಇದರ ಮಧ್ಯೆ ಮೈತ್ರಿ ಮಾಡಿಕೊಂಡು ಉಪ ಚುನಾವಣೆಯ ಅಖಾಡಕ್ಕೆ ನಿಂತರು ಜನ ಬಿಜೆಪಿಯನ್ನು ಗೆಲ್ಲಿಸುತ್ತಾರೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.

ಏನೋ ಸಿದ್ದರಾಮಯ್ಯನಿಗಿಂತ ಹೆಚ್ಚು ಮಾತಾಡೋಕೂ ಗೊತ್ತು ಅವರಿಗಿಂತ ಹೆಚ್ಚು ಗೊತ್ತು ನಂಗೆ ಅಂತ ಕಲ್ಚರ್ ಅಲ್ಲದ ಮನುಷ್ಯ ಅಂದ ಮಾತಿಗೆ ಈಶ್ವರಪ್ಪ ಎದುರುತ್ತರ ನೀಡಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿಯವರನ್ನು ಮತ್ತು ಪಕ್ಷವನ್ನು ಕೋಮುವಾದಿ ಅಂತ ಬಯ್ಯುತ್ತಿದ್ದರು ಆ ಆ ಬೈಗುಳವೇ ಪಕ್ಷಕ್ಕೆ ಮುಳುವಾಯಿತು. ಅಲ್ಲದೆ ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯನವರೇ ನೇರ ಹೊಣೆ ಅಂತ ಆರೋಪ ಮಾಡಿದ್ರು.

ಇನ್ನು ಈ ಉಪಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ 15 ಜನ ಅನರ್ಹ ಶಾಸಕರು ಅವರ ಕ್ಷೇತ್ರದಲ್ಲಿ ಯಾರನ್ನ ಸೂಚಿಸುತ್ತಾರೋ ಅವರನ್ನೇ ಪಕ್ಷದಿಂದ ಕಣಕ್ಕಿಳಿಸುತ್ತೇವೆ ನಮಗೆ ಎಂಟು ಸ್ಥಾನಗಳು ಕಡಿಮೆ ಇತ್ತು ಹಾಗಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು 14 ತಿಂಗಳು ಅಧಿಕಾರವನ್ನು ಅನುಭವಿಸಿದರು ಆದರೆ ಈ ಉಪ ಚುನಾವಣೆಯಲ್ಲಿ ನಾವು ಸ್ಥಾನವನ್ನು ಗೆದ್ದು ಉಳಿದಿರುವ ಅವಧಿಯನ್ನು ಪೂರ್ಣಗೊಳಿಸುತ್ತೇವೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

ಇನ್ನು ಉಪ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಅಭ್ಯರ್ಥಿಗಳನ್ನು ನಿಲ್ಲಿಸಬೇಕು ಅಥವಾ ಬೇಡವೇ ಎಂಬ ಗೊಂದಲ ಕಾಂಗ್ರೆಸ್ನಲ್ಲಿ ಉಂಟಾಗಿದ್ದು ಖರ್ಗೆಯವರು ಮೈತ್ರಿಯಲ್ಲಿ ಮುಂದುವರೆದು ಚುನಾವಣೆ ಎದುರಿಸೋಣ ಅಂದ್ರೆ, ಕೆಪಿಸಿಸಿ ಅಧ್ಯಕ್ಷರು ಮೈತ್ರಿ ಬೇಡ ಅಂತ ಹೇಳಿಕೆ ಕೊಡುವ ಮೂಲಕ ಅವರಲ್ಲೇ ಗೊಂದಲವಿದೆ. ಇನ್ನು ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಬಿಜೆಪಿ ರಾಜ್ಯಧ್ಯಕ್ಷ ನಡೆದು ಕುಮಾರ್ ಕಟೀಲ್ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದ್ದು, ಚುನಾವಣೆಯ ಜವಾಬ್ದಾರಿಯನ್ನು ಅವರೇ ಹೊರಲಿದ್ದಾರೆ ಅಂದ್ರು.

ಯಡಿಯೂರಪ್ಪನವರಿಗೆ ತಾಕತ್ತಿಲ್ಲ ಎಂಬ ಪ್ರಶ್ನೆಗೆ ನಾನು ಈ ಬಗ್ಗೆ ಮಾತನಾಡುವುದಿಲ್ಲ ಚುನಾವಣೆಯಲ್ಲಿ 15 ಸ್ಥಾನ ಗೆಲ್ಲಿಸುವ ಮೂಲಕ ಬಿಜೆಪಿ ಏನು ಎಂಬುದನ್ನು ಜನರೇ ತೋರಿಸುತ್ತಾರೆ. ಅಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತೊಮ್ಮೆ ಕೊಟ್ರು. ಅಲ್ಲದೆ ನೆರೆ ಪರಿಹಾರ ಹಣ ತರಲಿಲ್ಲ ಎಂಬ ಮಾತಿಗೆ ಉತ್ತರಿಸಿದ ಈಶ್ವರಪ್ಪ ಪ್ರವಾಹ ಕೇವಲ ಕರ್ನಾಟಕದಲ್ಲಿ ಮಾತ್ರ ಆಗಿಲ್ಲ 10 ರಾಜ್ಯಗಳಲ್ಲಿ ಪ್ರವಾಹ ಉಂಟಾಗಿದ್ದು ಎಲ್ಲಾ ರಾಜ್ಯಗಳಿಗೂ ಏಕಕಾಲಕ್ಕೆ ಕೇಂದ್ರ ಸರ್ಕಾರ ಪರಿಹಾರದ ಹಣವನ್ನ ಬಿಡುಗಡೆ ಮಾಡಲಿದೆ ಎಂದ್ರು.

*ಬೈಟ್: ಕೆ ಎಸ್ ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವ*Body:0Conclusion:ಸುನಿಲ್ , ಈಟಿವಿ ನ್ಯೂಸ್ ಹಾಸನ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.