ETV Bharat / state

ಕೋವಿಡ್-19 ತಡೆಗಟ್ಟುವಲ್ಲಿ ಬಿಜೆಪಿ ವಿಫಲ: ಶಾಸಕ ಡಾ.ರಂಗನಾಥ್ ಆರೋಪ - Hassan

ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರದ ಚುಕ್ಕಾಣಿ ಹಿಡಿದು ಕೋವಿಡ್-19 ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದು ಕುಣಿಗಲ್ ಕ್ಷೇತ್ರದ ಶಾಸಕ ಡಾ.ರಂಗನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.

MLA Dr Ranganath
ಶಾಸಕ ಡಾ.ರಂಗನಾಥ್
author img

By

Published : Jun 17, 2020, 8:33 AM IST

ಹಾಸನ: ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರದ ಚುಕ್ಕಾಣಿ ಹಿಡಿದು ಕೋವಿಡ್-19 ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದು ಕುಣಿಗಲ್ ಕ್ಷೇತ್ರದ ಶಾಸಕ ಡಾ.ರಂಗನಾಥ್ ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೋವಿಡ್-19ರ ವೇಳೆ ಜಿಲ್ಲೆಯ ಚನ್ನರಾಯಪಟ್ಟಣ ಅರಸೀಕೆರೆ ಭಾಗದಲ್ಲಿ ರೈತರ ಸುಮಾರು 15 ಲಕ್ಷ ಕೆ.ಜಿ ಯಷ್ಟು ತರಕಾರಿಗಳನ್ನು ಖರೀದಿಸಿ ಇವತ್ತು ನಾನು ನಮ್ಮ ಭಾಗದಲ್ಲಿ ವಿತರಣೆ ಮಾಡಿದ್ದೇನೆ. ಇದಕ್ಕೆ ಕಾರಣೀಕರ್ತರು ನಮ್ಮ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರಾಗಿರುವ ಡಿಕೆ ಸುರೇಶ್​ ಎಂದರು.

ಕುಣಿಗಲ್ ಕ್ಷೇತ್ರದ ಶಾಸಕ ಡಾ.ರಂಗನಾಥ್

ಇನ್ನು ಕೊರೊನಾ ಹರಡಿದ್ದ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ಅಸಂಘಟಿತ ಕಾರ್ಮಿಕರು, ರೈತರುಗಳಿಗೆ ಸರ್ಕಾರ ನೆರವಾಗಬೇಕು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಎಚ್ಚರಿಸಿದ್ದು ಡಿಕೆ ಶಿವಕುಮಾರ್ ಎಂದರು. ಸಂಸದ ಡಿ.ಕೆ. ಸುರೇಶ್​ ಮಾರ್ಗದರ್ಶನದಲ್ಲಿ ನಮ್ಮ ಕ್ಷೇತ್ರದಲ್ಲಿ ಬಡ ರೋಗಿಗಳಿಗೆ ಉಚಿತವಾಗಿ ರೋಗ ನಿರೋಧಕ ಮಾತ್ರೆಗಳನ್ನು ನೀಡಲಾಗುತ್ತಿದೆ ಎಂದು ಶಾಸಕರು ಹೇಳಿಕೊಂಡರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.