ETV Bharat / state

ರೌಡಿ ಶೀಟರ್​​ಗೆ ಅಪಹಾಸ್ಯ.. ಬಾಲಕನ ಕೊಲೆಗೈದ ದಂಪತಿ ಸೇರಿ 9 ಮಂದಿ ಬಂಧನ - ರೌಡಿ ಶೀಟರ್​​ಗೆ ಅಪಹಾಸ್ಯ ಮಾಡಿದ್ದಕ್ಕೆ ಬಾಲಕನ ಕೊಲೆ

ಅಪಹಾಸ್ಯ ಮಾಡಿದ್ದಾನೆ ಎಂದು ಬಾಲಕನನ್ನು ಕೊಂದ ಆರೋಪದ ಮೇಲೆ 9 ಜನರನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.

ಬಾಲಕನ ಕೊಲೆ ಮಾಡಿದ್ದ ಆರೋಪಿಗಳ ಬಂಧನ
ಬಾಲಕನ ಕೊಲೆ ಮಾಡಿದ್ದ ಆರೋಪಿಗಳ ಬಂಧನ
author img

By

Published : Jul 19, 2022, 3:31 PM IST

Updated : Jul 19, 2022, 5:13 PM IST

ಹಾಸನ: ಹಳೇ ರೌಡಿಯನ್ನು ಅಪಹಾಸ್ಯ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ಬಾಲಕನೋರ್ವನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ದಂಪತಿ ಸೇರಿ 9 ಮಂದಿಯನ್ನು ಬಂಧಿಸಲಾಗಿದೆ ಎಂದು ಎಸ್​ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.

ಜು.09 ರಂದು ನಗರದ ಭಾಗ್ಯ ಎಂಬ ಮಹಿಳೆಯ ಮಗ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸ್ನೇಹಿತರ ಜೊತೆ ಹೊರಗೆ ಹೋಗಿದ್ದು, ಮನೆಗೆ ವಾಪಸ್ ಬಂದಿರಲಿಲ್ಲ. ಈ ಬಗ್ಗೆ ದೂರು ನೀಡಲಾಗಿತ್ತು. ದೂರಿನ ಅನ್ವಯ ಪೊಲೀಸರು ತನಿಖೆ ನಡೆಸಿದಾಗ ಇದು ಕೊಲೆ ಎಂದು ದೃಢಪಟ್ಟಿತ್ತು. ಮೊಬೈಲ್ ಆಧಾರದ ಮೇಲೆ ಈ ಸಂಬಂಧ ರಾಕಿ ಮತ್ತು ಪತ್ನಿ ಶೃಂಗ ಎಂಬುವರನ್ನು ವಿಚರಣೆಗೆ ಒಳಪಡಿಸಿದಾಗ ಕೊಲೆ ಪ್ರಕರಣ ಬಯಲಾಗಿದೆ.

ರೌಡಿ ಶೀಟರ್​​ಗೆ ಅಪಹಾಸ್ಯ.. ಬಾಲಕನ ಕೊಲೆಗೈದ ದಂಪತಿ ಸೇರಿ 9 ಮಂದಿ ಬಂಧನ

ಈ ಸಂಬಂಧ ರಾಕಿ, ಆತನ ಪತ್ನಿ ಶೃಂಗ ಸೇರಿ 9 ಮಂದಿಯನ್ನು ಬಂಧಿಸಲಾಗಿದೆ. ಕೊಲೆಗೂ ಮುನ್ನ ಶೃಂಗ ವಿನಯ್ ತಾಯಿಗೆ ಕರೆ ಮಾಡಿ ನಿನ್ನ ಮಗನಿಗೆ ಸರಿಯಾಗಿ ಬುದ್ಧಿ ಕಲಿಸುತ್ತೇವೆ. ಹೆಚ್ಚು ಮಾತನಾಡಿದರೆ ಸಾಯಿಸುತ್ತೇವೆ ಎಂದು ಹೇಳಿದ್ದನಂತೆ.

ತನಿಖೆ ಕೈಗೊಂಡ ಪೊಲೀಸರು ಮೊದಲು ಕೊಲೆಯಾದ ವಿನಯ್ ಸ್ನೇಹಿತರುಗಳಾದ ರಕ್ಷಿತ್ ಮತ್ತು ಧನುಷ್ ಎಂಬುವರನ್ನು ವಿಚಾರಣೆಗೆ ಒಳಪಡಿಸಿದಾಗ, ಕೊಲೆ ಪ್ರಕರಣ ಬಯಲಿಗೆ ಬಂದಿದೆ. ಈ ಸಂಬಂಧ ಆರೋಪಿಗಳಾದ ರಾಕಿ ಅಲಿಯಾಸ್ ರಾಕೇಶ್, ದಿನೇಶ್, ನಾಗೇಶ್, ರಕ್ಷಿತ್, ರಾಕಿ ಪತ್ನಿ ಶೃಂಗ, ಸಂತೋಷ್ ಆಟೋ ಚಾಲಕ ಮಂಜು ಬಂಧಿತ ಆರೋಪಿಗಳು ಎಂದು ವಿವರಿಸಿದರು.

ಇದನ್ನೂ ಓದಿ : ಅಕ್ರಮ ಗಣಿಗಾರಿಕೆ ತಡೆಯಲು ಹೋದ ಡಿಎಸ್​​ಪಿ ಮೇಲೆ ಟ್ರಕ್​ ಹರಿಸಿ ಕೊಲೆ.. ಹರಿಯಾಣದಲ್ಲಿ ಭೀಕರ ಘಟನೆ

ಹಾಸನ: ಹಳೇ ರೌಡಿಯನ್ನು ಅಪಹಾಸ್ಯ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ಬಾಲಕನೋರ್ವನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ದಂಪತಿ ಸೇರಿ 9 ಮಂದಿಯನ್ನು ಬಂಧಿಸಲಾಗಿದೆ ಎಂದು ಎಸ್​ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.

ಜು.09 ರಂದು ನಗರದ ಭಾಗ್ಯ ಎಂಬ ಮಹಿಳೆಯ ಮಗ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸ್ನೇಹಿತರ ಜೊತೆ ಹೊರಗೆ ಹೋಗಿದ್ದು, ಮನೆಗೆ ವಾಪಸ್ ಬಂದಿರಲಿಲ್ಲ. ಈ ಬಗ್ಗೆ ದೂರು ನೀಡಲಾಗಿತ್ತು. ದೂರಿನ ಅನ್ವಯ ಪೊಲೀಸರು ತನಿಖೆ ನಡೆಸಿದಾಗ ಇದು ಕೊಲೆ ಎಂದು ದೃಢಪಟ್ಟಿತ್ತು. ಮೊಬೈಲ್ ಆಧಾರದ ಮೇಲೆ ಈ ಸಂಬಂಧ ರಾಕಿ ಮತ್ತು ಪತ್ನಿ ಶೃಂಗ ಎಂಬುವರನ್ನು ವಿಚರಣೆಗೆ ಒಳಪಡಿಸಿದಾಗ ಕೊಲೆ ಪ್ರಕರಣ ಬಯಲಾಗಿದೆ.

ರೌಡಿ ಶೀಟರ್​​ಗೆ ಅಪಹಾಸ್ಯ.. ಬಾಲಕನ ಕೊಲೆಗೈದ ದಂಪತಿ ಸೇರಿ 9 ಮಂದಿ ಬಂಧನ

ಈ ಸಂಬಂಧ ರಾಕಿ, ಆತನ ಪತ್ನಿ ಶೃಂಗ ಸೇರಿ 9 ಮಂದಿಯನ್ನು ಬಂಧಿಸಲಾಗಿದೆ. ಕೊಲೆಗೂ ಮುನ್ನ ಶೃಂಗ ವಿನಯ್ ತಾಯಿಗೆ ಕರೆ ಮಾಡಿ ನಿನ್ನ ಮಗನಿಗೆ ಸರಿಯಾಗಿ ಬುದ್ಧಿ ಕಲಿಸುತ್ತೇವೆ. ಹೆಚ್ಚು ಮಾತನಾಡಿದರೆ ಸಾಯಿಸುತ್ತೇವೆ ಎಂದು ಹೇಳಿದ್ದನಂತೆ.

ತನಿಖೆ ಕೈಗೊಂಡ ಪೊಲೀಸರು ಮೊದಲು ಕೊಲೆಯಾದ ವಿನಯ್ ಸ್ನೇಹಿತರುಗಳಾದ ರಕ್ಷಿತ್ ಮತ್ತು ಧನುಷ್ ಎಂಬುವರನ್ನು ವಿಚಾರಣೆಗೆ ಒಳಪಡಿಸಿದಾಗ, ಕೊಲೆ ಪ್ರಕರಣ ಬಯಲಿಗೆ ಬಂದಿದೆ. ಈ ಸಂಬಂಧ ಆರೋಪಿಗಳಾದ ರಾಕಿ ಅಲಿಯಾಸ್ ರಾಕೇಶ್, ದಿನೇಶ್, ನಾಗೇಶ್, ರಕ್ಷಿತ್, ರಾಕಿ ಪತ್ನಿ ಶೃಂಗ, ಸಂತೋಷ್ ಆಟೋ ಚಾಲಕ ಮಂಜು ಬಂಧಿತ ಆರೋಪಿಗಳು ಎಂದು ವಿವರಿಸಿದರು.

ಇದನ್ನೂ ಓದಿ : ಅಕ್ರಮ ಗಣಿಗಾರಿಕೆ ತಡೆಯಲು ಹೋದ ಡಿಎಸ್​​ಪಿ ಮೇಲೆ ಟ್ರಕ್​ ಹರಿಸಿ ಕೊಲೆ.. ಹರಿಯಾಣದಲ್ಲಿ ಭೀಕರ ಘಟನೆ

Last Updated : Jul 19, 2022, 5:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.