ETV Bharat / state

ಏಕಾಏಕಿ ಮನೆಗೆ ನುಗ್ಗಿ ಮಹಿಳೆ ಕೊಲೆಗೆ ಯತ್ನ... ಆರೋಪಿಗೆ ಹಿಗ್ಗಾಮುಗ್ಗಾ ಥಳಿತ!

author img

By

Published : Jan 25, 2020, 12:01 AM IST

ಯುವಕನೊಬ್ಬ ಏಕಾಏಕಿ ಮನೆಗೆ ನುಗ್ಗಿ ಮಹಿಳೆಯನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ಹಾಸನ ನಗರದ ಅರಳೇಪೇಟೆ ರಸ್ತೆಯಲ್ಲಿ ನಡೆದಿದೆ.

a bihari man tried to murder  women
ಮಹಿಳೆಯ ಕೊಲೆಗೆ ಯತ್ನ

ಹಾಸನ:ಯುವಕನೊಬ್ಬ ಏಕಾಏಕಿ ಮನೆಗೆ ನುಗ್ಗಿ ಮಹಿಳೆಯನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ಹಾಸನ ನಗರದ ಅರಳೇಪೇಟೆ ರಸ್ತೆಯಲ್ಲಿ ನಡೆದಿದೆ.

ಬಿಹಾರ ಮೂಲದವನು ಎನ್ನಲಾದ ಯುವಕನೊಬ್ಬ ಮನೆಗೆ ನುಗ್ಗಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಕೊಲೆಗೆ ಯತ್ನಿಸಿದ್ದು, ಸಾರ್ವಜನಿಕರು ಹಿಗ್ಗಾಮುಗ್ಗಾ ಗೂಸಾ ಕೊಟ್ಟು ಪೊಲೀಸರಿಗೊಪ್ಪಿಸಿದ್ದಾರೆ.

ಮಹಿಳೆಯ ಕೊಲೆಗೆ ಯತ್ನ

ಅರಳೇಪೇಟೆ ರಸ್ತೆಯ ನಿವಾಸಿ ಮಂಜುಳಾ ಬಾಯಿ ಎಂಬುವರ ಮನೆಗೆ ಹಿಂಬಾಗಿಲಿನಿಂದ ಬಂದ ಆರೋಪಿ ಮನೆಯ ಬೀರು ತೆಗೆದು ಅಲ್ಲಿದ್ದ ವಸ್ತುಗಳನ್ನ ಚಲ್ಲಾಪಿಲ್ಲಿ ಮಾಡಿದ್ದಾನೆ. ಒಳಗಿನಿಂದ ಬಂದ ಶಬ್ದ ಏನೆಂಬುದನ್ನು ಗಮನಿಸಲು ಮುಂದಾದಾಗ ಆತ ಮಂಜುಳಾ ಬಾಯಿ, ಕುತ್ತಿಗೆಗೆ ಕೈ ಹಾಕಿ ಕೊಲೆ ಮಾಡಲು ಪ್ರಯತ್ನಪಟ್ಟಿದ್ದಾನೆ. ಈ ವೇಳೆ ಪ್ರತಿರೋಧ ಒಡ್ಡಿ ಆಕೆ ಕಿರುಚಿಕೊಂಡಾಗ ಶಬ್ದ ಕೇಳಿ ಅಕ್ಕಪಕ್ಕದ ಮನೆಯವರು ಓಡಿ ಬಂದು ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಹಾಸನ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಹಾಸನ:ಯುವಕನೊಬ್ಬ ಏಕಾಏಕಿ ಮನೆಗೆ ನುಗ್ಗಿ ಮಹಿಳೆಯನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ಹಾಸನ ನಗರದ ಅರಳೇಪೇಟೆ ರಸ್ತೆಯಲ್ಲಿ ನಡೆದಿದೆ.

ಬಿಹಾರ ಮೂಲದವನು ಎನ್ನಲಾದ ಯುವಕನೊಬ್ಬ ಮನೆಗೆ ನುಗ್ಗಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಕೊಲೆಗೆ ಯತ್ನಿಸಿದ್ದು, ಸಾರ್ವಜನಿಕರು ಹಿಗ್ಗಾಮುಗ್ಗಾ ಗೂಸಾ ಕೊಟ್ಟು ಪೊಲೀಸರಿಗೊಪ್ಪಿಸಿದ್ದಾರೆ.

ಮಹಿಳೆಯ ಕೊಲೆಗೆ ಯತ್ನ

ಅರಳೇಪೇಟೆ ರಸ್ತೆಯ ನಿವಾಸಿ ಮಂಜುಳಾ ಬಾಯಿ ಎಂಬುವರ ಮನೆಗೆ ಹಿಂಬಾಗಿಲಿನಿಂದ ಬಂದ ಆರೋಪಿ ಮನೆಯ ಬೀರು ತೆಗೆದು ಅಲ್ಲಿದ್ದ ವಸ್ತುಗಳನ್ನ ಚಲ್ಲಾಪಿಲ್ಲಿ ಮಾಡಿದ್ದಾನೆ. ಒಳಗಿನಿಂದ ಬಂದ ಶಬ್ದ ಏನೆಂಬುದನ್ನು ಗಮನಿಸಲು ಮುಂದಾದಾಗ ಆತ ಮಂಜುಳಾ ಬಾಯಿ, ಕುತ್ತಿಗೆಗೆ ಕೈ ಹಾಕಿ ಕೊಲೆ ಮಾಡಲು ಪ್ರಯತ್ನಪಟ್ಟಿದ್ದಾನೆ. ಈ ವೇಳೆ ಪ್ರತಿರೋಧ ಒಡ್ಡಿ ಆಕೆ ಕಿರುಚಿಕೊಂಡಾಗ ಶಬ್ದ ಕೇಳಿ ಅಕ್ಕಪಕ್ಕದ ಮನೆಯವರು ಓಡಿ ಬಂದು ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಹಾಸನ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Intro:ಹಾಸನ: ಬಿಹಾರ್ ಮೂಲದವನು ಎನ್ನಲಾದ ವ್ಯಕ್ತಿಯೋರ್ವ ಏಕಾಏಕಿ ಮನೆಗೆ ನುಗ್ಗಿ ಮಹಿಳೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡು ಕೊಲೆ ಪ್ರಯತ್ನ ಮಾಡಲು ಯತ್ನಿಸಿದ ವ್ಯಕ್ತಿಯೋರ್ವನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಗೂಸಾ ಕೊಟ್ಟು ಪೊಲೀಸರಿಗೆ ಒಪ್ಪಿಸಿದ ಘಟನೆ ಹಾಸನ ನಗರದ ಅರಳೇಪೇಟೆ ರಸ್ತೆಯಲ್ಲಿ ನಡೆದಿದೆ.

ಅರಳೇಪೇಟೆ ರಸ್ತೆಯ ನಿವಾಸಿ ಮಂಜುಳಾ ಬಾಯಿ ಎಂಬುವರ ಮನೆಗೆ ಏಕಾಏಕಿ ನುಗ್ಗಿದ ದುಷ್ಕರ್ಮಿ ಆಕೆಯ ಮೈಕೈ ಮುಟ್ಟಿ ಕತ್ತಿನಲ್ಲಿದ್ದ ಆಭರಣಗಳನ್ನು ಕಿತ್ತುಕೊಳ್ಳಲು ನೋಡಿದ್ದಾನೆ. ಇನ್ನು ಇದಕ್ಕೂ ಮುನ್ನ ಮನೆಯ ಹಿಂಬಾಗಿಲಿನಿಂದ ಬಂದ ಆತ ಮನೆಯ ಬೀರುವಿನ ತೆಗೆದು ಅಲ್ಲಿದ್ದ ಎಲ್ಲಾ ವಸ್ತುಗಳನ್ನೂ ಚಲ್ಲಾಪಿಲ್ಲಿ ಮಾಡಿದ್ದಾನೆ. ಒಳಗಿನಿಂದ ಬಂದ ಶಬ್ದ ಏನೆಂಬುದನ್ನು ಗಮನಿಸಲು ಮುಂದಾದಾಗ ಆತ ಮಂಜುಳಾ ಬಾಯಿಯ ಕುತ್ತಿಗೆಗೆ ಕೈ ಹಾಕಿ ಆಕೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡು ಕೊಲೆ ಮಾಡಲು ಪ್ರಯತ್ನಪಟ್ಟ ವೇಳೆ ಪ್ರತಿರೋಧ ಒಡ್ಡಿ ಆಕೆ ಕಿರುಚಿಕೊಂಡಾಗ ಕಿರುಚಾಟದ ಶಬ್ದ ಕೇಳಿ ಅಕ್ಕಪಕ್ಕದ ಸಾರ್ವಜನಿಕರು ಓಡಿಬಂದು ಆತನನ್ನು ಹಿಗ್ಗಾಮುಗ್ಗಾ ಥಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ತಿಳಿಸಿದ್ದಾರೆ.

ಬೈಟ್: ಮಂಜುಳಾಬಾಯಿ, ಹಲ್ಲೆಗೊಳಗಾದವರು.

ಮಂಜುಳಾ ಬಾಯಿ ಮತ್ತು ಆಕೆಯ ಸ್ನೇಹಿತೆ ಮನೆಯಲ್ಲಿ ಕೂತು ಮಾತನಾಡುತ್ತಿದ್ದರು ಈ ವೇಳೆ ಹಿಂಬಾಗಿಲಿನಿಂದ ಬಂದ ವ್ಯಕ್ತಿಯು ಆಕೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡು ಕುತ್ತಿಗೆಯನ್ನು ಬಲವಾಗಿ ಹಿಚುಕಿ ಕೊಲೆ ಮಾಡಲು ಪ್ರಯತ್ನ ಪಟ್ಟಿದ್ದಾನೆ. ಇನ್ನು ಬೀರು ಬಂದಿದ್ದ ಕೆಲವು ದಾಖಲಾತಿಗಳನ್ನು ಕದ್ದೊಯ್ದಳು ಪ್ರಯತ್ನ ಪಟ್ಟಿದ್ದು ಶಬ್ದ ಬಂದ ಹಿನ್ನೆಲೆಯಲ್ಲಿ ನನ್ನ ಸ್ನೇಹಿತರು ಮುಂದಾದಾಗ ಈ ಘಟನೆ ಸಂಭವಿಸಿತು ತಕ್ಷಣ ಸಾರ್ವಜನಿಕರು ಈ ವೇಳೆಗೆ ಬಾರದಿದ್ದರೆ ನನ್ನ ಪ್ರಾಣ ತೆಗೆಯುತ್ತಿದ್ದ ಎಂಬುದು ಮಂಜುಳಾ ಬಾಗಿ ಸ್ನೇಹಿತೆಯ ಮಾತು.

ಬೈಟ್: ಸರೋಜಮ್ಮ, ಪ್ರತ್ಯಕ್ಷದರ್ಶಿ.

ಇನ್ನು ಈತ ಬಿಹಾರಿ ಭಾಷೆಯಲ್ಲಿ ಮಾತನಾಡುತ್ತಿದ್ದು ಸಾರ್ವಜನಿಕರು ನೀಡಿದ ಗೂಸಾದಿಂದ ಮಾಡಿದ ತಪ್ಪನ್ನು ಒಪ್ಪಿಕೊಂಡು, ಕೈಮುಗಿದು ಒಡೆಯಬೇಡಿ ಎಂಬುದಾಗಿ ಅಂಗಲಾಚುತ್ತಿದ್ದ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಇನ್ನು ಈ ಸಂಬಂಧ ಹಾಸನ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ

Body:7203289Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.