ETV Bharat / state

ಕಾಂಗ್ರೆಸ್​ ಹೊರಗಡೆ ಗೂಂಡಾಗಿರಿ ಮಾಡುತ್ತಿತ್ತು, ಈಗ ಪರಿಷತ್​ನಲ್ಲೂ ಮಾಡುತ್ತಿದೆ: ಕಟೀಲ್​​

ಸಭಾಧ್ಯಕ್ಷರು, ಉಪ ಸಭಾಪತಿ ಪೀಠ ಆದರ್ಶ ಹಾಗೂ ಶ್ರೇಷ್ಠವಾದದ್ದು. ಪೀಠದಲ್ಲಿ ಕೂತವರನ್ನು ಎಳೆದು ಹಾಕುವುದು ಕಾಂಗ್ರೆಸ್​ನ ಮಾನಸಿಕತೆ ಎಷ್ಟಿದೆ ಎಂದು ತೋರುತ್ತದೆ. ಕಾಂಗ್ರೆಸ್​ಗೆ ಪ್ರಜಾಪ್ರಭುತ್ವದ ಮೇಲೆ, ಸಂವಿಧಾನದ ಮೇಲೆ ಗೌರವ ಇಲ್ಲ. ಅಧಿಕಾರದ ಕುರ್ಚಿ ಮೇಲೆ ಗೌರವ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್ ವ್ಯಂಗ್ಯವಾಡಿದರು.

author img

By

Published : Dec 17, 2020, 7:34 PM IST

ಕಟೀಲ್​​
ಕಟೀಲ್​​

ಗದಗ: ವಿಧಾನ ಪರಿಷತ್​ನಲ್ಲಿ ಉಪಸಭಾಪತಿಗಳ ಗಲಾಟೆ ಘಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್​​ ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​​ನವರು ಈ‌ ಮುಂಚೆ ಹೊರಗಡೆ ಗೂಂಡಾಗಿರಿ ಮಾಡುತ್ತಿದ್ರು. ಈಗ ವಿಧಾನ ಪರಿಷತ್ ಒಳಗೂ ಗೂಂಡಾಗಿರಿ ನಡೆಸಿರುವುದು ಹೇಯವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್

ವಿಧಾನ ಪರಿಷತ್​ಗೆ ಇತಿಹಾಸ, ಪರಂಪರೆ, ತನ್ನದೇಯಾದ ಗೌರವವಿದೆ. ಜ್ಞಾನಿಗಳು, ವಿದ್ವಾಂಸರು ಇರುವ ಕ್ಷೇತ್ರವದು. ಆದರೆ ಕಾಂಗ್ರೆಸ್ ಯಾವಾಗ ಅಧಿಕಾರ ಕಳೆದು ಕೊಂಡಿದೆಯೋ ಆಗಿನಿಂದ ಗೂಂಡಾಗಿರಿ ಮಾಡಿಕೊಂಡು ಬಂದಿದೆ. ಸಭಾಧ್ಯಕ್ಷರು, ಉಪ ಸಭಾಪತಿ ಪೀಠ ಆದರ್ಶ ಹಾಗೂ ಶ್ರೇಷ್ಠವಾದದ್ದು. ಪೀಠದಲ್ಲಿ ಕೂತವರನ್ನು ಎತ್ತಿ ಹಾಕೋದು, ಎಳೆಯೋದು ಕಾಂಗ್ರೆಸ್​ನ ಮಾನಸಿಕತೆ ಎಷ್ಟಿದೆ ಎಂದು ತೋರುತ್ತದೆ. ಕಾಂಗ್ರೆಸ್​ಗೆ ಪ್ರಜಾಪ್ರಭುತ್ವದ ಮೇಲೆ, ಸಂವಿಧಾನದ ಮೇಲೆ ಗೌರವ ಇಲ್ಲ. ಅಧಿಕಾರದ ಕುರ್ಚಿ ಮೇಲೆ ಗೌರವ ಇದೆ ಎಂದು ವ್ಯಂಗ್ಯವಾಡಿದರು.

ಕಲಾಪದಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಢ ವಿಧಿಸುವ ಕುರಿತು ಮಾತನಾಡಿ, ಜನಪ್ರತಿನಿಧಿಗಳಿಗೊಂದು, ಜನಸಾಮಾನ್ಯರಿಗೆ ಒಂದು ನ್ಯಾಯವಿಲ್ಲ. ಈ ಬಗ್ಗೆ ಬಿಜೆಪಿ ಕಾನೂನು ಹೋರಾಟ ನಡೆಸಿದೆ. ನಮ್ಮ ಸರ್ವಸಮ್ಮತ ನಾಯಕ ಯಡಿಯೂರಪ್ಪ ಕ್ರಮ ಕೈಗೊಳ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಹೇಳಿದರು.

ಗದಗ: ವಿಧಾನ ಪರಿಷತ್​ನಲ್ಲಿ ಉಪಸಭಾಪತಿಗಳ ಗಲಾಟೆ ಘಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್​​ ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​​ನವರು ಈ‌ ಮುಂಚೆ ಹೊರಗಡೆ ಗೂಂಡಾಗಿರಿ ಮಾಡುತ್ತಿದ್ರು. ಈಗ ವಿಧಾನ ಪರಿಷತ್ ಒಳಗೂ ಗೂಂಡಾಗಿರಿ ನಡೆಸಿರುವುದು ಹೇಯವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್

ವಿಧಾನ ಪರಿಷತ್​ಗೆ ಇತಿಹಾಸ, ಪರಂಪರೆ, ತನ್ನದೇಯಾದ ಗೌರವವಿದೆ. ಜ್ಞಾನಿಗಳು, ವಿದ್ವಾಂಸರು ಇರುವ ಕ್ಷೇತ್ರವದು. ಆದರೆ ಕಾಂಗ್ರೆಸ್ ಯಾವಾಗ ಅಧಿಕಾರ ಕಳೆದು ಕೊಂಡಿದೆಯೋ ಆಗಿನಿಂದ ಗೂಂಡಾಗಿರಿ ಮಾಡಿಕೊಂಡು ಬಂದಿದೆ. ಸಭಾಧ್ಯಕ್ಷರು, ಉಪ ಸಭಾಪತಿ ಪೀಠ ಆದರ್ಶ ಹಾಗೂ ಶ್ರೇಷ್ಠವಾದದ್ದು. ಪೀಠದಲ್ಲಿ ಕೂತವರನ್ನು ಎತ್ತಿ ಹಾಕೋದು, ಎಳೆಯೋದು ಕಾಂಗ್ರೆಸ್​ನ ಮಾನಸಿಕತೆ ಎಷ್ಟಿದೆ ಎಂದು ತೋರುತ್ತದೆ. ಕಾಂಗ್ರೆಸ್​ಗೆ ಪ್ರಜಾಪ್ರಭುತ್ವದ ಮೇಲೆ, ಸಂವಿಧಾನದ ಮೇಲೆ ಗೌರವ ಇಲ್ಲ. ಅಧಿಕಾರದ ಕುರ್ಚಿ ಮೇಲೆ ಗೌರವ ಇದೆ ಎಂದು ವ್ಯಂಗ್ಯವಾಡಿದರು.

ಕಲಾಪದಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಢ ವಿಧಿಸುವ ಕುರಿತು ಮಾತನಾಡಿ, ಜನಪ್ರತಿನಿಧಿಗಳಿಗೊಂದು, ಜನಸಾಮಾನ್ಯರಿಗೆ ಒಂದು ನ್ಯಾಯವಿಲ್ಲ. ಈ ಬಗ್ಗೆ ಬಿಜೆಪಿ ಕಾನೂನು ಹೋರಾಟ ನಡೆಸಿದೆ. ನಮ್ಮ ಸರ್ವಸಮ್ಮತ ನಾಯಕ ಯಡಿಯೂರಪ್ಪ ಕ್ರಮ ಕೈಗೊಳ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.