ETV Bharat / state

ಗದಗ: ರೌಡಿಗಳಿಂದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರು ಅರೆಸ್ಟ್‌, ಓರ್ವ ಪರಾರಿ

author img

By

Published : Oct 27, 2021, 11:36 AM IST

ನೂರ್​ ಅಹ್ಮದ್ ಮಕಾಂದಾರ ಎನ್ನುವವರ ಮೇಲೆ ರೌಡಿಗಳ ಗ್ಯಾಂಗ್ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದೆ. ಪ್ರಕರಣದಲ್ಲಿ ಈಗಾಗಲೇ ಮೂವರನ್ನು ಬಂಧಿಸಿರುವ ಲಕ್ಷ್ಮೇಶ್ವರ ಪೊಲೀಸರು ಓರ್ವನ ಪತ್ತೆಗೆ ಬಲೆ ಬೀಸಿದ್ದಾರೆ.

gadaga assault case
ಗದಗ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ

ಗದಗ: ರೌಡಿಶೀಟರ್​ಗಳ ಅಟ್ಟಹಾಸಕ್ಕೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಜನರು ಬೆಚ್ಚಿದ್ದಾರೆ. ಸಿನಿಮೀಯ ರೀತಿಯಲ್ಲಿ ಕಾರ್​ನಲ್ಲಿ ಬಂದ ರೌಡಿಗಳ ಗ್ಯಾಂಗ್ ಬೈಕ್​ಗೆ ಡಿಕ್ಕಿ ಹೊಡೆದು, ನೂರ್​ ಅಹ್ಮದ್ ಮಕಾಂದಾರ ಎಂಬವರ ಮೇಲೆ ಮಾರಕಾಸ್ತ್ರಗಳಿಂದ ಮನಸೋಇಚ್ಛೆ ಹಲ್ಲೆ ಮಾಡಿದೆ.

ನಡುರಸ್ತೆಯಲ್ಲಿ ಗಾಯಗೊಂಡ ವ್ಯಕ್ತಿ ಒದ್ದಾಡುತ್ತಿದ್ದಂತೆ ರೌಡಿಶೀಟರ್​ಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ಅಬ್ದುಲ್ ಆಡೂರ್​, ಲಕ್ಷ್ಮೇಶ್ವರ ಪುರಸಭೆ ಸದಸ್ಯ ಫಿರದೋಶ್ ಆಡೂರ್​, ನಿಜಾಮ್, ಅಜರ್ ಎನ್ನುವವರು ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಗದಗ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ

ಸಿನಿಮೀಯ ರೀತಿಯಲ್ಲಿ ಹಲ್ಲೆ:

ಪಟ್ಟಣದ ಹುಲಗೇರಿಬಣದ ಪ್ರದೇಶದಲ್ಲಿ ನೂರ್ ಅಹ್ಮದ್ ಮಕಾಂದಾರ ಮನೆಗೆ ಹೋಗುತ್ತಿದ್ದ ವೇಳೆ ಎದುರಿನಿಂದ ಕಾರು ಬೈಕ್​ಗೆ ಡಿಕ್ಕಿ ಹೊಡೆದಿದೆ. ಆಗ ನೂರ್​ ಅಹ್ಮದ್ ನೆಲಕ್ಕೆ ಉರುಳಿದ್ದಾರೆ. ಈ ವೇಳೆ ಕಾರ್​ನಿಂದಿಳಿದು ಬಂದ ರೌಡಿಗಳ ತಂಡ ಲಾಂಗ್, ಮಚ್ಚು, ಕೊಡಲಿಯಿಂದ ದಾಳಿ ಮಾಡಿದ್ದಾರೆ. ಗಾಯಾಳುವನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಕ್ಷ್ಮೇಶ್ವರ ಪೊಲೀಸರ ನಿರ್ಲಕ್ಷ್ಯ ಆರೋಪ

ಕೊಲೆ ಮಾಡಲು ಸಂಚು ರೂಪಿಸಿಯೇ ನನ್ನ ಮೇಲೆ ದಾಳಿ ಮಾಡಿದ್ದಾರೆ. 2-3 ಬಾರಿ ನಾನು ಲಕ್ಷ್ಮೇಶ್ವರ ಪಿಎಸ್ಐ ಡಿ. ಪ್ರಕಾಶ್ ಅವರಿಗೆ ಈ ಬಗ್ಗೆ ಹೇಳಿದ್ದೆ. ಆದ್ರೆ, ಲಕ್ಷ್ಮೇಶ್ವರ ಪೊಲೀಸರು ನಿರ್ಲಕ್ಷ್ಯ ತೋರಿದ್ದೇ ಈ ದಾಳಿಗೆ ಕಾರಣ ಎಂದು ಹಲ್ಲೆಗೊಳಗಾದ ವ್ಯಕ್ತಿ ಆರೋಪಿಸಿದ್ದಾರೆ.

ಹಳೆ ದ್ವೇಷವೇ ದಾಳಿಗೆ ಕಾರಣ?

ಹಳೆ ದ್ವೇಷವೇ ಈ ದಾಳಿಗೆ ಕಾರಣ ಎನ್ನಲಾಗಿದೆ. ಮಕಾಂದಾರ ಹಾಗೂ ಆಡೂರ್​ ಕುಟುಂಬದ ನಡುವೆ ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಗಲಾಟೆ ನಡೆಯುತ್ತಿತ್ತು. ಎಂಟು ತಿಂಗಳ ಹಿಂದೆ ಪುರಸಭೆ ಸದಸ್ಯ ಫಿರದೋಶ್ ಆಡೂರ್ ಕುಟುಂಬ ನೂರ್ ಅಹ್ಮದ್​ ಹೋಟೆಲ್ ಮೇಲೆ ದಾಳಿ ಮಾಡಿ ಹಲ್ಲೆ ನಡೆಸಿದ್ದರು. ಆಗಲೂ ಲಕ್ಷ್ಮೇಶ್ವರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು.

rowdy sheeters assault on man in gadaga
ಅಬ್ದುಲ್ ಆಡೂರ್​, ನಿಜಾಮ್, ಅಜರ್ - ಬಂಧಿತ ಆರೋಪಿಗಳು

ಮೂವರು ಅರೆಸ್ಟ್‌ ​-ಓರ್ವ ಪರಾರಿ:

ಜನಸೇವೆ ಮಾಡಬೇಕಾದ ಲಕ್ಷ್ಮೇಶ್ವರ ಪುರಸಭೆ ಸದಸ್ಯ ಫಿರದೋಶ್ ಆಡೂರ್​ ಗೂಂಡಾಗಿರಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಹೋದರ ರೌಡಿ ಶೀಟರ್ ಅಬ್ದುಲ್ ಆಡೂರ್​, ನಿಜಾಮ್, ಅಜರ್ ಸೇರಿ ನಾಲ್ಕು ಜನರ ವಿರುದ್ಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರೌಡಿಶೀಟರ್ ಅಬ್ದುಲ್ ಆಡೂರ್, ನಿಜಾಮ್ ಹಾಗೂ ಅಜರ್ ನನ್ನು ಲಕ್ಷ್ಮೇಶ್ವರ ಪೊಲೀಸರು ಬಂಧಿಸಿದ್ದಾರೆ. ಪುರಸಭೆ ಸದಸ್ಯ ಫಿರದೋಶ್ ಆಡೂರ್​ ಪರಾರಿಯಾಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಎಂಇಎಸ್‌ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ ಬೆಳಗಾವಿ ಪೊಲೀಸರು

ಎಸ್ಪಿ ಯತೀಶ್.ಎನ್ ಮಾತನಾಡಿ, ನಿನ್ನೆ ಸಂಜೆ ಈ ಹಲ್ಲೆ ಕುರಿತು ನಮಗೆ ಮಾಹಿತಿ ಬಂದಿದೆ. ನಾಲ್ಕು ಮಂದಿ ವಿರುದ್ಧ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅಂಗಡಿ ವಿಚಾರವಾಗಿ ಗಲಾಟೆ ನಡೆದಿದೆ. ಈ ಮೊದಲ ಗಲಾಟೆ ಸಂಬಂಧ ಏನು ಕ್ರಮ ಕೈಗೊಳ್ಳಬೇಕಿತ್ತೋ ಅದನ್ನು ಕೈಗೊಂಡಿದ್ದೇವೆ. ಈಗಲೂ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಗದಗ: ರೌಡಿಶೀಟರ್​ಗಳ ಅಟ್ಟಹಾಸಕ್ಕೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಜನರು ಬೆಚ್ಚಿದ್ದಾರೆ. ಸಿನಿಮೀಯ ರೀತಿಯಲ್ಲಿ ಕಾರ್​ನಲ್ಲಿ ಬಂದ ರೌಡಿಗಳ ಗ್ಯಾಂಗ್ ಬೈಕ್​ಗೆ ಡಿಕ್ಕಿ ಹೊಡೆದು, ನೂರ್​ ಅಹ್ಮದ್ ಮಕಾಂದಾರ ಎಂಬವರ ಮೇಲೆ ಮಾರಕಾಸ್ತ್ರಗಳಿಂದ ಮನಸೋಇಚ್ಛೆ ಹಲ್ಲೆ ಮಾಡಿದೆ.

ನಡುರಸ್ತೆಯಲ್ಲಿ ಗಾಯಗೊಂಡ ವ್ಯಕ್ತಿ ಒದ್ದಾಡುತ್ತಿದ್ದಂತೆ ರೌಡಿಶೀಟರ್​ಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ಅಬ್ದುಲ್ ಆಡೂರ್​, ಲಕ್ಷ್ಮೇಶ್ವರ ಪುರಸಭೆ ಸದಸ್ಯ ಫಿರದೋಶ್ ಆಡೂರ್​, ನಿಜಾಮ್, ಅಜರ್ ಎನ್ನುವವರು ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಗದಗ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ

ಸಿನಿಮೀಯ ರೀತಿಯಲ್ಲಿ ಹಲ್ಲೆ:

ಪಟ್ಟಣದ ಹುಲಗೇರಿಬಣದ ಪ್ರದೇಶದಲ್ಲಿ ನೂರ್ ಅಹ್ಮದ್ ಮಕಾಂದಾರ ಮನೆಗೆ ಹೋಗುತ್ತಿದ್ದ ವೇಳೆ ಎದುರಿನಿಂದ ಕಾರು ಬೈಕ್​ಗೆ ಡಿಕ್ಕಿ ಹೊಡೆದಿದೆ. ಆಗ ನೂರ್​ ಅಹ್ಮದ್ ನೆಲಕ್ಕೆ ಉರುಳಿದ್ದಾರೆ. ಈ ವೇಳೆ ಕಾರ್​ನಿಂದಿಳಿದು ಬಂದ ರೌಡಿಗಳ ತಂಡ ಲಾಂಗ್, ಮಚ್ಚು, ಕೊಡಲಿಯಿಂದ ದಾಳಿ ಮಾಡಿದ್ದಾರೆ. ಗಾಯಾಳುವನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಕ್ಷ್ಮೇಶ್ವರ ಪೊಲೀಸರ ನಿರ್ಲಕ್ಷ್ಯ ಆರೋಪ

ಕೊಲೆ ಮಾಡಲು ಸಂಚು ರೂಪಿಸಿಯೇ ನನ್ನ ಮೇಲೆ ದಾಳಿ ಮಾಡಿದ್ದಾರೆ. 2-3 ಬಾರಿ ನಾನು ಲಕ್ಷ್ಮೇಶ್ವರ ಪಿಎಸ್ಐ ಡಿ. ಪ್ರಕಾಶ್ ಅವರಿಗೆ ಈ ಬಗ್ಗೆ ಹೇಳಿದ್ದೆ. ಆದ್ರೆ, ಲಕ್ಷ್ಮೇಶ್ವರ ಪೊಲೀಸರು ನಿರ್ಲಕ್ಷ್ಯ ತೋರಿದ್ದೇ ಈ ದಾಳಿಗೆ ಕಾರಣ ಎಂದು ಹಲ್ಲೆಗೊಳಗಾದ ವ್ಯಕ್ತಿ ಆರೋಪಿಸಿದ್ದಾರೆ.

ಹಳೆ ದ್ವೇಷವೇ ದಾಳಿಗೆ ಕಾರಣ?

ಹಳೆ ದ್ವೇಷವೇ ಈ ದಾಳಿಗೆ ಕಾರಣ ಎನ್ನಲಾಗಿದೆ. ಮಕಾಂದಾರ ಹಾಗೂ ಆಡೂರ್​ ಕುಟುಂಬದ ನಡುವೆ ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಗಲಾಟೆ ನಡೆಯುತ್ತಿತ್ತು. ಎಂಟು ತಿಂಗಳ ಹಿಂದೆ ಪುರಸಭೆ ಸದಸ್ಯ ಫಿರದೋಶ್ ಆಡೂರ್ ಕುಟುಂಬ ನೂರ್ ಅಹ್ಮದ್​ ಹೋಟೆಲ್ ಮೇಲೆ ದಾಳಿ ಮಾಡಿ ಹಲ್ಲೆ ನಡೆಸಿದ್ದರು. ಆಗಲೂ ಲಕ್ಷ್ಮೇಶ್ವರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು.

rowdy sheeters assault on man in gadaga
ಅಬ್ದುಲ್ ಆಡೂರ್​, ನಿಜಾಮ್, ಅಜರ್ - ಬಂಧಿತ ಆರೋಪಿಗಳು

ಮೂವರು ಅರೆಸ್ಟ್‌ ​-ಓರ್ವ ಪರಾರಿ:

ಜನಸೇವೆ ಮಾಡಬೇಕಾದ ಲಕ್ಷ್ಮೇಶ್ವರ ಪುರಸಭೆ ಸದಸ್ಯ ಫಿರದೋಶ್ ಆಡೂರ್​ ಗೂಂಡಾಗಿರಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಹೋದರ ರೌಡಿ ಶೀಟರ್ ಅಬ್ದುಲ್ ಆಡೂರ್​, ನಿಜಾಮ್, ಅಜರ್ ಸೇರಿ ನಾಲ್ಕು ಜನರ ವಿರುದ್ಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರೌಡಿಶೀಟರ್ ಅಬ್ದುಲ್ ಆಡೂರ್, ನಿಜಾಮ್ ಹಾಗೂ ಅಜರ್ ನನ್ನು ಲಕ್ಷ್ಮೇಶ್ವರ ಪೊಲೀಸರು ಬಂಧಿಸಿದ್ದಾರೆ. ಪುರಸಭೆ ಸದಸ್ಯ ಫಿರದೋಶ್ ಆಡೂರ್​ ಪರಾರಿಯಾಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಎಂಇಎಸ್‌ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ ಬೆಳಗಾವಿ ಪೊಲೀಸರು

ಎಸ್ಪಿ ಯತೀಶ್.ಎನ್ ಮಾತನಾಡಿ, ನಿನ್ನೆ ಸಂಜೆ ಈ ಹಲ್ಲೆ ಕುರಿತು ನಮಗೆ ಮಾಹಿತಿ ಬಂದಿದೆ. ನಾಲ್ಕು ಮಂದಿ ವಿರುದ್ಧ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅಂಗಡಿ ವಿಚಾರವಾಗಿ ಗಲಾಟೆ ನಡೆದಿದೆ. ಈ ಮೊದಲ ಗಲಾಟೆ ಸಂಬಂಧ ಏನು ಕ್ರಮ ಕೈಗೊಳ್ಳಬೇಕಿತ್ತೋ ಅದನ್ನು ಕೈಗೊಂಡಿದ್ದೇವೆ. ಈಗಲೂ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.