ETV Bharat / state

ಸ್ವಾಮೀಜಿಗಳಿಗೆ ರಾಜಕೀಯ ಯಾಕೆ ಬೇಕು: ಹೊರಟ್ಟಿ - ಎಂಎಲ್​ಸಿ ಬಸವರಾಜ ಹೊರಟ್ಟಿ ಸುದ್ದಿಗೋಷ್ಠಿ

ವಚನಾನಂದ ಸ್ವಾಮೀಜಿ ಯಾವ ವೇದಿಕೆಯಲ್ಲಿ ಏನು ಹೇಳಬೇಕು ಎಂಬುದನ್ನು ಚರ್ಚಿಸಿ ಮಾತಾಡಿದ್ರೆ ಒಳ್ಳೆಯದು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿಕೆ ನೀಡಿದ್ದಾರೆ.

mlc basavaraj horatti
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ
author img

By

Published : Jan 17, 2020, 3:03 AM IST

Updated : Jan 17, 2020, 4:45 AM IST

ಗದಗ: ಸ್ವಾಮೀಜಿಗಳಿಗೆ ರಾಜಕೀಯ ಯಾಕೆ ಬೇಕು. ಅವರು ಸಮಾಜ ತಿದ್ದುವ, ಸಂಸ್ಕೃತಿ ಬಿತ್ತುವ ಕೆಲಸ ಮಾಡಬೇಕು. ಜಾತ್ಯಾತೀತ ರಾಷ್ಟ್ರ ಎಂದು ಹೇಳುವ ನಾವೆಲ್ಲ, ಧರ್ಮ, ಜಾತಿ ಆಧಾರದ ಮೇಲೆ ಜನರನ್ನು ಇಬ್ಭಾಗಿಸುತ್ತಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿಅವರು ವಚನಾನಂದ ಸ್ವಾಮೀಜಿಗೆ ಕುಟುಕಿದ್ದಾರೆ.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಚನಾನಂದ ಸ್ವಾಮೀಜಿಗೆ ತಿಳುವಳಿಕೆ ಕಡಿಮೆ ಇದೆ. ಚಿಕ್ಕ ವಯಸ್ಸು, ಮುಂದಿನ ದಿನಗಳಲ್ಲಿ ಯಾವ ವೇದಿಕೆಗಳಲ್ಲಿ ಹೇಗೆ ಮಾತನಾಡಬೇಕು ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

ಲಿಂಗಾಯತರಿಗೂ ಶೇಕಡಾ 16ರಷ್ಟು ಮೀಸಲಾತಿ ನೀಡುವ ಕುರಿತು ಸಿಎಂ ಬಳಿ ಚರ್ಚಿಸಿದ್ದೇನೆ. ಬೇರೆ ರಾಜ್ಯಗಳಲ್ಲಿ ಲಿಂಗಾಯತರಿಗೆ ನೀಡಲಾಗುವ ಮೀಸಲಾತಿಯನ್ನು ವಿವರಿಸಿರುವುದಾಗಿ ತಿಳಿಸಿದರು.

ಗದಗ: ಸ್ವಾಮೀಜಿಗಳಿಗೆ ರಾಜಕೀಯ ಯಾಕೆ ಬೇಕು. ಅವರು ಸಮಾಜ ತಿದ್ದುವ, ಸಂಸ್ಕೃತಿ ಬಿತ್ತುವ ಕೆಲಸ ಮಾಡಬೇಕು. ಜಾತ್ಯಾತೀತ ರಾಷ್ಟ್ರ ಎಂದು ಹೇಳುವ ನಾವೆಲ್ಲ, ಧರ್ಮ, ಜಾತಿ ಆಧಾರದ ಮೇಲೆ ಜನರನ್ನು ಇಬ್ಭಾಗಿಸುತ್ತಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿಅವರು ವಚನಾನಂದ ಸ್ವಾಮೀಜಿಗೆ ಕುಟುಕಿದ್ದಾರೆ.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಚನಾನಂದ ಸ್ವಾಮೀಜಿಗೆ ತಿಳುವಳಿಕೆ ಕಡಿಮೆ ಇದೆ. ಚಿಕ್ಕ ವಯಸ್ಸು, ಮುಂದಿನ ದಿನಗಳಲ್ಲಿ ಯಾವ ವೇದಿಕೆಗಳಲ್ಲಿ ಹೇಗೆ ಮಾತನಾಡಬೇಕು ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

ಲಿಂಗಾಯತರಿಗೂ ಶೇಕಡಾ 16ರಷ್ಟು ಮೀಸಲಾತಿ ನೀಡುವ ಕುರಿತು ಸಿಎಂ ಬಳಿ ಚರ್ಚಿಸಿದ್ದೇನೆ. ಬೇರೆ ರಾಜ್ಯಗಳಲ್ಲಿ ಲಿಂಗಾಯತರಿಗೆ ನೀಡಲಾಗುವ ಮೀಸಲಾತಿಯನ್ನು ವಿವರಿಸಿರುವುದಾಗಿ ತಿಳಿಸಿದರು.

Intro:ರಾಜ್ಯ ಸರ್ಕಾರದ ಮೇಲೆ ಹೊರಟ್ಟಿ ವಾಗ್ದಾಳಿ....ಆಡಳಿತ ವ್ಯವಸ್ಥೆ ಸರಿಯಾಗಿಲ್ಲ....ಸಚಿವರು ಸಿಗೋದೇ ಇಲ್ಲ......ಹರಿಹರ ಪೀಠದ ವಚನಾನಂದ ಶ್ರೀಗಳ ಹೇಳಿಕೆಗೂ ವಿರೋಧ....ಸ್ವಾಮಿಗಳಿಗೆ ರಾಜಕೀಯ ಏಕೆ ಬೇಕು ಎಂದು ಪ್ರಶ್ನೆ....ಈ ಬಗೆಯ ಒತ್ತಡ ಹಾಕಿದ್ರೆ ಕೆಲಸ ಹೇಗೆ ಮಾಡೋದು ಅಂತ ಪ್ರಶ್ನೆ

ಆಂಕರ್-ಹರಿಹರ ಪಂಚಮಸಾಲಿ ಪೀಠದ ಶ್ರೀಗಳ ಹೇಳಿಕೆ ವಿಚಾರವಾಗಿ ಗದಗನಲ್ಲಿ ಎಂಎಲ್ಸಿ ಬಸವರಾಜ್ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರೋ ಅವರು, ಯಾವುದೇ ಮಠಾಧೀಶರಿರಲಿ ಒಬ್ಬ ವ್ಯಕ್ತಿ ಬಗ್ಗೆ ಹೇಳಿಕೆ ನೀಡಬಾರದು. ನಿರಾಣಿ ಇವತ್ತಲ್ಲ ನಾಳೆ ಮಂತ್ರಿಯಾಗುತ್ತಿದ್ರು. ಆದರೆ ಇವಾಗ ನಿರಾಣಿ ಮಂತ್ರಿಯಾಗುವದಿಲ್ಲ. ಸ್ವಾಮೀಜಿಗಳಿಗೆ ರಾಜಕೀಯ ಯಾಕೆ ಬೇಕು ಎಂದು ಪ್ರಶ್ನೆಸಿದ್ರು. ಶ್ರೀಗಳ ಹೇಳಿಕೆಯಿಂದ ಮುರಗೇಶ್ ನಿರಾಣಿಯನ್ನು ಮಂತ್ರಿ ಮಾಡಲ್ಲ. ಎಲ್ಲಾ ಸಮಾಜದ ಸ್ವಾಮಿಗಳು ಹೀಗೇ ಮಾಡಿದ್ರೆ ಸರ್ಕಾರ ನಡೆಸುವುದು ಕಷ್ಟ. ಈ ರೀತಿ ಮಾಡೋದು ಸರಿಯಲ್ಲ ಅಂತ, ಪರೋಕ್ಷವಾಗಿ ಶ್ರೀಗಳ ಹೇಳಿಕೆ ತಪ್ಪು ಎಂದು ಬಸವರಾಜ್ ಹೊರಟ್ಟಿ ಹೇಳಿದ್ರು. ಇದೇ ಸಂದರ್ಭದಲ್ಲಿ
ಲಿಂಗಾಯತ ಸಮುದಾಯಕ್ಕೆ ಶೇಕಡಾ 16 ರಷ್ಟು ಮೀಸಲಾತಿ ನೀಡಬೇಕು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಈ ಕುರಿತು ಪತ್ರ ಬರೆದಿದ್ದೇ‌ನೆ. ಲಿಂಗಾಯತ ಸಮುದಾಯದಲ್ಲಿ ಬಡವರು ಇದ್ದಾರೆ ಅವರಿಗೆ ಆದ್ಯತೆ ನೀಡಬೇಕು. ವೀರಶೈವ ಲಿಂಗಾಯತ ಅಂತ ಪತ್ರವನ್ನು ಬರೆದಿದ್ದೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವ್ರು,ನಾನು ಕೊಟ್ಟಿದ್ದು ನನ್ನ ಫ್ಯಾಕ್ಟ್ ಪ್ರಕಾರ ಲಿಂಗಾಯತ ಅಂತ. ಲಿಂಗಾಯತ ಎಂದರೆ ಎಲ್ಲರು ಬರ್ತಾರೆ ಎನ್ನುವ ಉದ್ದೇಶದಿಂದ ಕೊಟ್ಟಿದ್ದೇನೆ‌. ನಾನು ಕೇವಲ ಲಿಂಗಾಯತಯರಿಗೆ ಮೀಸಲಾತಿ ನೀಡಿ ಅಂತಾ ಪತ್ರವನ್ನು ಬರೆದಿದ್ದೇನೆ. ಮಹಾರಾಷ್ಟ್ರ ಮಾದರಿಯಲ್ಲಿ ನಮಗೂ ನೀಡಿ ಅಂತಾ ಮನವಿ ಮಾಡಿದ್ದೇನೆ. ಇನ್ನು ವೀರಶೈವಯವರು ಬೆಂಬಲ ನೀಡ್ತಾರೆ ಇಲ್ಲ ಎನ್ನೋದು ಅವರಿಗೆ ಬಿಟ್ಟದ್ದು, ಯಾರನ್ನು ವಿರೋಧ ಮಾಡೋದನ್ನು ನಾನು ಮಾಡಿಲ್ಲ. ಸರ್ಕಾರ ಅದಕ್ಕೆ ಏನು ವಿಚಾರ ಮಾಡುತ್ತೇ ಮಾಡಲಿ. ನಾನು ವೀರಶೈವ ಹಾಗೂ ಲಿಂಗಾಯತ ಧರ್ಮವನ್ನು ಬೇರೆ ಮಾಡಿಲ್ಲ. ನನ್ನ ಬುದ್ದಿಗೆ ಅನುಗುಣವಾಗಿ ನಾ ಓದಿಕೊಂಡಿರುವ ಹಾಗೇ ನಾನು ಮೀಸಲಾತಿ ಕೇಳಿದ್ದೇನೆ. ನನಗೆ ಯಾವುದೇ ಕಾಂಟ್ರವರ್ಸಿ ಮಾಡುವ ಉದ್ದೇಶ ಇಲ್ಲ, ಎಂದು ಬಸವರಾಜ್ ಹೊರಟ್ಟಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು.

ಬೈಟ್೦೧/೦೨-೦೩ ಬಸವರಾಜ್ ಹೊರಟ್ಟಿ, ಎಮ್ಎಲ್ ಸಿ.Body:GConclusion:G
Last Updated : Jan 17, 2020, 4:45 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.