ಗದಗ: ಎಮ್ಮೆಯ ಮೈ ತೊಳೆಯಲು ಹೋಗಿದ್ದ ಸಹೋದರರಿಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಳಸಾಪುರದಲ್ಲಿ ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮಣ್(18), ಹಾಗೂ ವಿಕಾಸ್(11) ಮೃತ ಸಹೋದರರು. ಎಮ್ಮೆಗಳ ಮೈ ತೊಳೆಯಲೆಂದು ಗ್ರಾಮದ ಹೊಲವೊಂದರ ಕೃಷಿ ಹೊಂಡಕ್ಕೆ ಹೋಗಿದ್ದಾಗ ಈ ಅಪಘಾತ ಸಂಭವಿಸಿದೆ. ಈ ಸಂದರ್ಭದಲ್ಲಿ ಮೊದಲು ನೀರಿಗಿಳಿದಿದ್ದ ಸಹೋದರ ಮುಳುಗುತ್ತಿದ್ದುದನ್ನು ಕಂಡು ಇನ್ನೋರ್ವ ಬಾಲಕ ಕಾಪಾಡಲು ಮುಂದಾಗಿದ್ದ. ಈ ವೇಳೇ ಇಬ್ಬರು ಸಾವನ್ನಪ್ಪಿದ್ದಾರೆ.
ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.