ETV Bharat / state

ಅಕ್ರಮ ಅನ್ನಭಾಗ್ಯ ಸಾಗಣೆ: ಗದಗದಲ್ಲಿ ಅಕ್ಕಿ ಸಹಿತ ಲಾರಿ ವಶಕ್ಕೆ - undefined

ಅಕ್ರಮವಾಗಿ ಅನ್ನಭಾಗ್ಯಯೋಜನೆಯ ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಕರವೇ ಶಿವರಾಮೇಗೌಡ ಬಣದ ಕಾರ್ಯಕರ್ತರು ಪತ್ತೆ ಮಾಡಿದ್ದಾರೆ. ಗದಗ ನಗರದ ವರ್ತುಲ ರಸ್ತೆಯಲ್ಲಿ ಸಾಗುತ್ತಿದ್ದ ಲಾರಿಯನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಹಿಡಿದು, ಆಹಾರ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳಿಗಳಿಗೆ ಒಪ್ಪಿಸಲಾಗಿದೆ.

ಅನ್ನಭಾಗ್ಯ
author img

By

Published : Jul 20, 2019, 1:30 PM IST

ಗದಗ: ಹಸಿದವರ ಹೊಟ್ಟೆ ತುಂಬಿಸಲು ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯ ಅಕ್ಕಿ ಲೂಟಿಕೋರರ ಪಾಲಾಗುತ್ತಿದೆ. ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನ ಸಂಘಟನೆಯೊಂದರ ಕಾರ್ಯಕರ್ತರು ಹಿಡಿದಿರುವ ಘಟನೆ ನಗರದ ರಿಂಗ್ ರಸ್ತೆಯಲ್ಲಿ ನಡೆದಿದೆ.

ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಕರವೇ ಶಿವರಾಮೇಗೌಡ ಬಣದ ಕಾರ್ಯಕರ್ತರು ಪತ್ತೆ ಮಾಡಿದ್ದಾರೆ. ಗದಗ ನಗರದ ರಿಂಗ್ ರಸ್ತೆಯಲ್ಲಿ ಸಾಗುತ್ತಿದ್ದ ಲಾರಿಯನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಹಿಡಿದು, ಆಹಾರ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳಿಗಳಿಗೆ ಒಪ್ಪಿಸಲಾಗಿದೆ.

ಗದಗದಲ್ಲಿ ಅಕ್ರಮ ಅನ್ನಭಾಗ್ಯ ಅಕ್ಕಿ ಸಹಿತ ಲಾರಿ ವಶಕ್ಕೆ

ಕೊಪ್ಪಳದಿಂದ ಮಹಾರಾಷ್ಟ್ರ ರಾಯಗಡಕ್ಕೆ ಅಕ್ರಮ ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದ್ದು, ಯಾರಿಗೂ ಅನುಮಾನ ಬಾರದಂತೆ ಪಡಿತರ ಅಕ್ಕಿಯನ್ನ ಬೇರೆ ಬ್ಯಾಗ್​ಗಳಲ್ಲಿ ಪ್ಯಾಕಿಂಗ್ ಮಾಡಿ ಸಾಗಿಸಲಾಗುತ್ತಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಗದಗ ಗ್ರಾಮೀಣ ಠಾಣೆ ಪಿಎಸ್​​ಐ ಹಾಗೂ ಆಹಾರ ಇಲಾಖೆ ಅಧಿಕಾರಿಗಳು 50 ಕೆಜಿಯ 250 ಬ್ಯಾಗ್ ಅಕ್ಕಿ ಸಹಿತ ಲಾರಿಯನ್ನ ವಶಕ್ಕೆ ಪಡೆದಿದ್ದಾರೆ.

ಲಾರಿಯಲ್ಲಿರುವುದು ಅನ್ನಭಾಗ್ಯ ಅಕ್ಕಿ ಹೌದೋ, ಅಲ್ಲವೋ ಎಂಬ ಬಗ್ಗೆ ಬೆಳಗಾವಿಗೆ ಪರೀಕ್ಷೆ ಕಳಿಸಿ ವರದಿ ಬಂದ ಬಳಿಕ ದೂರು ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಹಾರ ಇಲಾಖೆ ಉಪನಿರ್ದೇಶಕ ಜಿ ಬಿ‌ ಮಠದ ತಿಳಿಸಿದ್ದಾರೆ.

ಗದಗ: ಹಸಿದವರ ಹೊಟ್ಟೆ ತುಂಬಿಸಲು ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯ ಅಕ್ಕಿ ಲೂಟಿಕೋರರ ಪಾಲಾಗುತ್ತಿದೆ. ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನ ಸಂಘಟನೆಯೊಂದರ ಕಾರ್ಯಕರ್ತರು ಹಿಡಿದಿರುವ ಘಟನೆ ನಗರದ ರಿಂಗ್ ರಸ್ತೆಯಲ್ಲಿ ನಡೆದಿದೆ.

ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಕರವೇ ಶಿವರಾಮೇಗೌಡ ಬಣದ ಕಾರ್ಯಕರ್ತರು ಪತ್ತೆ ಮಾಡಿದ್ದಾರೆ. ಗದಗ ನಗರದ ರಿಂಗ್ ರಸ್ತೆಯಲ್ಲಿ ಸಾಗುತ್ತಿದ್ದ ಲಾರಿಯನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಹಿಡಿದು, ಆಹಾರ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳಿಗಳಿಗೆ ಒಪ್ಪಿಸಲಾಗಿದೆ.

ಗದಗದಲ್ಲಿ ಅಕ್ರಮ ಅನ್ನಭಾಗ್ಯ ಅಕ್ಕಿ ಸಹಿತ ಲಾರಿ ವಶಕ್ಕೆ

ಕೊಪ್ಪಳದಿಂದ ಮಹಾರಾಷ್ಟ್ರ ರಾಯಗಡಕ್ಕೆ ಅಕ್ರಮ ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದ್ದು, ಯಾರಿಗೂ ಅನುಮಾನ ಬಾರದಂತೆ ಪಡಿತರ ಅಕ್ಕಿಯನ್ನ ಬೇರೆ ಬ್ಯಾಗ್​ಗಳಲ್ಲಿ ಪ್ಯಾಕಿಂಗ್ ಮಾಡಿ ಸಾಗಿಸಲಾಗುತ್ತಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಗದಗ ಗ್ರಾಮೀಣ ಠಾಣೆ ಪಿಎಸ್​​ಐ ಹಾಗೂ ಆಹಾರ ಇಲಾಖೆ ಅಧಿಕಾರಿಗಳು 50 ಕೆಜಿಯ 250 ಬ್ಯಾಗ್ ಅಕ್ಕಿ ಸಹಿತ ಲಾರಿಯನ್ನ ವಶಕ್ಕೆ ಪಡೆದಿದ್ದಾರೆ.

ಲಾರಿಯಲ್ಲಿರುವುದು ಅನ್ನಭಾಗ್ಯ ಅಕ್ಕಿ ಹೌದೋ, ಅಲ್ಲವೋ ಎಂಬ ಬಗ್ಗೆ ಬೆಳಗಾವಿಗೆ ಪರೀಕ್ಷೆ ಕಳಿಸಿ ವರದಿ ಬಂದ ಬಳಿಕ ದೂರು ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಹಾರ ಇಲಾಖೆ ಉಪನಿರ್ದೇಶಕ ಜಿ ಬಿ‌ ಮಠದ ತಿಳಿಸಿದ್ದಾರೆ.

Intro:ಆಂಕರ್: ಹಸಿದವರ ಹೊಟ್ಟೆ ತುಂಬಿಸೋಕೆ ಮಾಡಿದೆ. ಆದ್ರೆ ಅನ್ನಭಾಗ್ಯ ಅಕ್ಕಿ ಬಡವರ ಹೊಟ್ಟೆ ಸೇರುತ್ತೋ ಇಲ್ವೋ ಗೋತ್ತಿಲ್ಲ. ಲೂಟಿಕೋರರ ಹೊಟ್ಟೆ ಭರ್ತಿಯಾಗುತ್ತಿದೆ. ಹೌದು ಅಕ್ರಮವಾಗಿ ಅನ್ನಭಾಗ್ಯ ಸಾಗಿಸುತ್ತಿದ್ದ ಅಪಾರ ಅಕ್ಕಿ ಲಾರಿ ಸ್ಥಳೀಯರೇ ಹಿಡಿದಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳು ಪಡಿತರ ಅಕ್ಕಿ ಇದೆ ಅಂತಾರೆ. ಆದ್ರೆ ಪ್ರಕರಣ ದಾಖಲಿಸಲು ಮಾತ್ರ ಹಿಂದೇಟು ಹಾಕ್ತಾಯಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ..


Body:ಹೌದು. ಉತ್ತರ ಕರ್ನಾಟಕ ಭಾಗದಲ್ಲಿ ಅಕ್ರಮ ಅನ್ನಭಾಗ್ಯ ಅಕ್ಕಿ ಸಾಗಾಟ ದಂಧೆ ನಡೆಯುತ್ತಿದೆ ಅದರಲ್ಲೂ ಗದಗ ಜಿಲ್ಲೆಯಲ್ಲಿ ಅಕ್ರಮ ಅನ್ನಭಾಗ್ಯ ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿ ಕರವೇ ಶಿವರಾಮೇಗೌಡ ಬಣದ ಕಾರ್ಯಕರ್ತರು ಪತ್ತೆ ಮಾಡಿದ್ದಾರೆ. ಗದಗ ನಗರದ ರಿಂಗ್ ರಸ್ತೆಯಲ್ಲಿ ಹೋಗ್ತಾಯಿದ್ದ ಅನ್ನಭಾಗ್ಯ ಅಕ್ಕಿ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದಾರೆ. ಬಳಿಕ ಆಹಾರ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳಿಗರ ಒಪ್ಪಿಸಿದ್ದಾರೆ. ಬಡವರಿಗಾಗಿ ಅನ್ನಭಾಗ್ಯ ಯೋಜನೆ ಸರ್ಕಾರ ಜಾರಿ ಮಾಡಲಾಗಿದೆ‌. ಆದ್ರೆ ಹಸಿದ ಬಡವರ ಹೊಟ್ಟೆ ಸೇರಬೇಕಿದ್ದ ಪಡಿತರ ಅಕ್ಕಿ ಈಗ ಲೂಟಿಕೊರರ ಪಾಲಾಗುತ್ತಿದೆ. ಕೊಪ್ಪಳದಿಂದ ಮಹಾರಾಷ್ಟ್ರ ರಾಯಗಢ ಕ್ಕೆ ಅಕ್ರಮ ಸಾಗಾಟ ಮಾಡಲಾಗುತ್ತಿತ್ತು. ಯಾರಿಗೂ ಅನುಮಾನ ಬರಬಾರ್ದು ಅಂತ ಪಡಿತರ ಅಕ್ಕಿ ಬೇರೆ ಬ್ಯಾಗ್ ನಲ್ಲಿ ಪ್ಯಾಕಿಂಗ್ ಮಾಡಿ ಸಾಗಾಟ ಮಾಡಲಾಗುತ್ತಿದೆ. ಕೊಳಪ್ಪ ಜಿಲ್ಲೆಯಿಂದ ನಿರಂತರವಾಗಿ ಅನ್ನಭಾಗ್ಯ 50 ಕೆಜಿಯ 250 ಬ್ಯಾಗ್ ಅಕ್ಕಿ ಗದಗ ಮೂಲಕ ಮಹಾರಾಷ್ಟ್ರ ರಾಜ್ಯಕ್ಕೆ ಸಾಗಾಟ ಮಾಡುವಾಗ ತಗಲಾಕಿಕೊಂಡಿದ್ದಾರೆ.

ಬೈಟ್,೦೧ : ಮಂಜುನಾಥ್ ಪರ್ತಗೌಡ, ಅಕ್ರಮ ಸಾಗಾಟ ಪತ್ತೆ ಮಾಡಿದವರು.

ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ಪಾರ್ವತಿ ಟ್ರೇಡರ್ಸ್ ನಿಂದ ಸಾಗಾಟ ಮಾಡಲಾಗುತ್ತಿದೆ. ಬಡವರ ಅನ್ನಭಾಗ್ಯಕ್ಕೆ ನಿರಂತರವಾಗಿ ಕನ್ನ ಹಾಕುವ ಕೆಲಸ ನಡೆಯುತ್ತಿದೆ. ಆದ್ರೆ ಇದೆಲ್ಲಾ ಕೇಳಬೇಕಾದ ಸರ್ಕಾರ ಮಾತ್ರ ಗುದ್ದಾಟದಲ್ಲಿ ತೊಡಗಿದೆ‌. ಹೀಗಾಗಿ ಅಧಿಕಾರಿಗಳಿಗೆ ಹೇಳೋರೋ ಕೇಳೋರೋ ಯಾರೂ ಇಲ್ಲದಂತಾಗಿದೆ. ಇನ್ನೂ ಅಕ್ರಮ ಅಕ್ಕಿ ಸಾಗಾಟ ಮಾಹಿತಿ ಬಂದ್ ತಕ್ಷಣ ಸ್ಥಳಕ್ಕೆ ಆಗಮಿಸಿದ ಗದಗ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ ಐ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿ ಅಕ್ಕಿ ಸಮೇತ ಲಾರಿ ವಶಪಡಿಸಿಕೊಂಡಿದ್ದಾರೆ. ಆದ್ರೆ ಆಹಾರ ಇಲಾಖೆ ಅಧಿಕಾರಿಗಳು ಮಾತ್ರ ಅನ್ನಭಾಗ್ಯ ಅಕ್ಕಿ ಅಂತ ಒಪ್ಪಿಕೊಂಡಿದ್ದಾರೆ. ಆದ್ರೆ ಪ್ರಕರಣ ದಾಖಲು ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ. ಅನ್ನಭಾಗ್ಯ ಅಕ್ಕಿ ಹೌದೋ ಅಲ್ವೋ ಅಂತ ಬೆಳಗಾವಿಗೆ ಪರೀಕ್ಷೆ ಕಳಿಸಿ ವರದಿ ಬಂದ್ ಬಳಿಕ ದೂರು ದಾಖಲು ಮಾಡ್ತಾರಂತೆ.

ಬೈಟ್-2 : ಜಿ ಬಿ‌ ಮಠದ, ಉಪನಿರ್ದೇಶಕ, ಆಹಾರ ಇಲಾಖೆ.

Conclusion:ಸರ್ಕಾರ ಏನೋ ಬಡವರ ಹೊಟ್ಟೆ ತಂಪು ಮಾಡಡಲು ಹೊರಟ್ರೆ ಅಧಿಕಾರಿಗಳು ಬಡವರ ಅಕ್ಕಿ ಮಾರಾಟ ಮಾಡಿಕೊಂಡು ಹಣ ಮಾಡುತ್ತಿದ್ದಾರೆ.‌ ಲೂಟಿಕೋರರಿಗೆ, ಅಧಿಕಾರಿಗಳಿಗೆ ಕಡಿವಾಣ ಹಾಕಬೇಕಿದ್ದ ಸರ್ಕಾರ ಮಾತ್ರ ದೊಂಬರಾಟದಲ್ಲಿ‌ ಮುಳಗಿದೆ‌.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.